AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗದಗದಲ್ಲಿ ಬೀದಿ ನಾಯಿಗಳ ಹಾವಳಿ: ಮಕ್ಕಳು ಸೇರಿ 10ಕ್ಕೂ ಹೆಚ್ಚು ಜನರ ಮೇಲೆ ದಾಳಿ, ಇಂಜೆಕ್ಷನ್​ಗಾಗಿ ಪರದಾಟ

ಗದಗ-ಬೆಟಗೇಟಗಿ ಅವಳಿ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದೆ. ಒಂದೇ ದಿನ 10ಕ್ಕೂ ಹೆಚ್ಚು ಜನರ ಮೇಲೆ ಬೀದಿ ನಾಯಿಗಳ ದಾಳಿ ನಡೆದಿದೆ.

ಗದಗದಲ್ಲಿ ಬೀದಿ ನಾಯಿಗಳ ಹಾವಳಿ: ಮಕ್ಕಳು ಸೇರಿ 10ಕ್ಕೂ ಹೆಚ್ಚು ಜನರ ಮೇಲೆ ದಾಳಿ, ಇಂಜೆಕ್ಷನ್​ಗಾಗಿ ಪರದಾಟ
ನಾಯಿ ದಾಳಿ
TV9 Web
| Edited By: |

Updated on: Dec 06, 2022 | 10:29 AM

Share

ಗದಗ: ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದೆ. ಒಂದೇ ದಿನ 10ಕ್ಕೂ ಹೆಚ್ಚು ಜನರ ಮೇಲೆ ಬೀದಿ ನಾಯಿಗಳು ದಾಳಿ(Street Dogs Attack), ಮಾಡಿವೆ. ಓರ್ವ ಮಗುವಿನ ಗಂಟಲು ರಕ್ತ ಹರಿದಿದ್ದು ಸ್ವಲ್ಪದರಲ್ಲೇ ಮಗು ಬಚಾವ್ ಆಗಿದೆ. ಅಲ್ಲದೆ ನಾಯಿ ಕಡಿತದ ಇಂಜಕ್ಷನ್ ಸಿಗದೇ ಬಡ ಜನ್ರು ಒದ್ದಾಡುತ್ತಿದ್ದಾರೆ.

ಗದಗ-ಬೆಟಗೇಟಗಿ ಅವಳಿ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದೆ. ಗದಗ ನಗರದ ಹಮಾಲರ ಕಾಲೋನಿಯಲ್ಲಿ ನೂರಾರು ಬೀದಿ ನಾಯಿಗಳ ಹಾವಳಿಗೆ ಜನ್ರು ಗಲಿಬಿಲಿಗೊಂಡಿದ್ದಾರೆ. ನಿನ್ನೆ ಒಂದೇ ದಿನದಲ್ಲಿ ಮಕ್ಕಳು ಸೇರಿದಂತೆ 11 ಜನ್ರ ಮೇಲೆ ಬೇಕಾಬಿಟ್ಟಿ ದಾಳಿ ಮಾಡಿದ ನಾಯಿಗಳು ಮಕ್ಕಳ ಗಂಟಲಿಗೆ ಬಾಯಿ ಹಾಕಿ ರಕ್ತ ಹೀರಿವೆ. ಯುವಕರು, ಹಿರಿಯರು, ಮಹಿಳೆಯರ ಮೇಲೂ ಸರಣಿ ದಾಳಿ ಮಾಡಿವೆ. ನೂರಾರು ನಾಯಿಗಳು ಹಿಂಡಿನಲ್ಲಿ ಬಂದು ದಾಳಿ ಮಾಡುತ್ತದೆ. ಈ ದಾಳಿ ಮಾಡುವ ನಾಯಿಗಳಲ್ಲಿ ಎಷ್ಟಕ್ಕೆ ಹುಚ್ಚು ಹಿಡಿದಿದೆ ಎಂಬುವುದೂ ಸಹ ತಿಳಿದಿಲ್ಲ. ನಿನ್ನೆ ನಡೆದ ಕಂದನ ಮೇಲಿನ ದಾಳಿಯಲ್ಲಿ ಮಗುವಿನ ಕಂಟಲಿಗೆ ಗಂಭೀರ ಹಾನಿಯಾಗಿದ್ದು ಸುಮಾರು 15 ಹೊಲಿಗೆ ಹಾಕಲಾಗಿದೆ. ಮಗುವಿನ ನರಳಾಟ ಮಾತ್ರ ಕರುಳು ಹಿಂಡುವಂತಿದೆ.

ಇದನ್ನೂ ಓದಿ: ಶಿವಮೊಗ್ಗ, ಬಳ್ಳಾರಿಯಲ್ಲಿ ಬೀದಿನಾಯಿ ದಾಳಿಗೆ ಒಟ್ಟು ಮೂವರು ಮಕ್ಕಳ ಸಾವು: ಮತ್ತೆ ಗರಿಗೆದರಿದ ನಾಯಿ ನಿರ್ವಹಣೆ ಚರ್ಚೆ

ಅಷ್ಟೇ ಅಲ್ಲ ಇನ್ನೊಂದು ಮಗು ಉಮ್ಮೇ ಹಬೀಬಾ ಹೊಟ್ಟೆ ಭಾಗದಲ್ಲಿ ನಾಯಿ ಕಚ್ಚಿದ್ರೆ, ಕಸ್ತೂರಿ ಅನ್ನೋ ಮಹಿಳೆ ಕೈ ಭಾಗದಲ್ಲಿ ಕಚ್ಚಿದೆ. ವಿರೇಶ ಎಂಬ ಯುವಕನಿಗೆ ಬೆನ್ನಿಗೆ ಕಚ್ಚಿದೆ, ವೃದ್ಧ ಮಾಬುಸಾಬ್ ಹಾಗೂ ಕುಮಾರ ಅನ್ನೋ ಯುವಕನಿಗೆ ಕಾಲಿಗೆ ಕಚ್ಚಿದೆ. ಹಮಾಲರ ಕಾಲೋನಿ ಜನ್ರಿಗೆ ಈಗ ನೆಮ್ಮದಿ ಇಲ್ಲದಂತಾಗಿದೆ. ಮಕ್ಕಳು ಮನೆ ಬಿಟ್ಟು ಆಟವಾಡಲು ಭಯ ಪಡ್ತಾಯಿದ್ದಾರೆ. ಮಕ್ಕಳು ಮಾತ್ರ ಅಲ್ಲ ಯುವಕರು, ದೊಡ್ಡವರು ಮನೆ ಬಿಟ್ಟು ಹೊರ ಬರಲು ಹೆದರುತ್ತಿದ್ದಾರೆ. ಒಂದು, ಎರಡು ನಾಯಿಗಳಾದ್ರೆ ಹೊಡೆದು ಹೋಡಿಸಬಹುದು. 30-40 ಹಿಂಡುಗಳ ಸಮೇತ ದಾಂಗುಡಿ ಇಡೋ ಶ್ವಾನಗಳ ಗುಂಪುಗಳು ಜನ್ರನ್ನು ಭಯ ಹುಟ್ಟಿಸುತ್ತಿವೆ. ಬೀದಿ ನಾಯಿಗಳ ಹಾವಳಿಗೆ ಮುಕ್ತಿ ನೀಡಿ ಅಂತ ನಿವಾಸಿಗಳು ನಗರಸಭೆ ಅಧಿಕಾರಿಗಳ ಮೊರೆ ಹೋಗಿದ್ದಾರೆ. ಆದ್ರೆ ಅಧಿಕಾರಿಗಳು ಅದಕ್ಕೆ ಕ್ಯಾರೇ ಎನ್ನುತ್ತಿಲ್ಲವಂತೆ. ಇಷ್ಟೊಂದು ಜನ್ರ ಮೇಲೆ ದಾಳಿ ಮಾಡಿದ ಮೇಲಾದ್ರೂ ನಗರಸಭೆ ಎಚ್ಚೆತ್ತುಕೊಂಡು ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕಿದೆ.

ಉಚಿತ ಇಂಜೆಕ್ಷನ್ ಇಲ್ಲದೇ ಪರದಾಟ

ಹಮಾಲರ ಕಾಲನಿ ಅಂದ್ರೆ ದುಡಿದು ಜೀವನ ಮಾಡುವ ಜನ. ಹೀಗಾಗಿ ನಾಯಿಗಳ ದಾಳಿ ಬಳಿಕ ರಕ್ಷಣ ಬೆಟಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿದ್ದಾರೆ. ಅದ್ರೆ, ಅಲ್ಲಿನ ಸಿಬ್ಬಂದಿ ಇಲ್ಲಿ ನಾಯಿ ಕಚ್ಚಿದ ಇಂಜೆಕ್ಷನ್ ಇಲ್ಲ ಅಂತ ಗದಗ ಜಿಮ್ಸ್ ಆಸ್ಪತ್ರೆಗೆ ಕಳಿಸಿದ್ದಾರೆ. ಮೊದ್ಲೆ ಮಕ್ಕಳು ನರಳಾಟ ನೋಡಿ ಕಂಗಾಲಾದ ಜನ್ರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಕ್ಕಿಲ್ಲ ಅಂತ ಜನ್ರು ಕಿಡಿಕಾರಿದ್ದಾರೆ.

street dogs

ಇದನ್ನೂ ಓದಿ: ನಿಗದಿತ ಸಮಯಕ್ಕೆ ಕಬ್ಬು ಕಟಾವು ಮಾಡಿ ಸಾಗಣೆ ಮಾಡಿ: ಮೈಸೂರು ಜಿಲ್ಲಾಧಿಕಾರಿ ಆದೇಶ

ಜಿಮ್ಸ್ ಆಸ್ಪತ್ರೆಗೂ ಹೋದ್ರೂ ಸಿಗಲಿಲ್ಲ ಇಂಜೆಕ್ಷನ್

ಗದಗ ಜಿಮ್ಸ್ ಆಸ್ಪತ್ರೆಗೆ ಹೋದ್ರೂ ಇಂಜೆಕ್ಷನ್ ಇಲ್ಲ ವೈದ್ಯರು ಇಂಜೆಕ್ಷನ್ ಇಲ್ಲ ಅಂತ 2 ಸಾವಿರ ಹಣ ಕೊಟ್ರೆ ಮಾತ್ರ ಇಂಜೆಕ್ಷನ್ ಮಾಡ್ತೀವಿ ಅಂದಿದ್ದಾರೆ. ಇಲ್ಲಾಂದ್ರೆ ಹೊರಗಡೆ ತಗೊಂಡು ಬನ್ನಿ ಅಂದಿದ್ದಾರೆ ಅಂತ ಗಾಯಾಳು ಕುಟುಂಬಸ್ಥರು ಆರೋಪಿಸಿದ್ದಾರೆ. ಹಣ ಅಂದ್ರೆ ಸರ್ಕಾರಿ ಆಸ್ಪತ್ರೆ ಯಾಕೇ ಬೇಕು ಅಂತ ನಾಯಿ ಕೊಚ್ಚಿಸಿಕೊಂಡ ಬಡ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕೊನೆಗೆ ಖಾಸಗಿ ಆಸ್ಪತ್ರೆಯಲ್ಲಿ ಸಾವಿರಾರು ರೂಪಾಯಿ ಕೊಟ್ಟು ಚಿಕಿತ್ಸೆ ಪಡೆದು ಬಂದಿದ್ದೇವೆ ಅಂತ ಜನ್ರ ಗೋಳು ತೋಡಿಕೊಂಡಿದ್ದಾರೆ.

Dog Attack

ನಾಯಿ ದಾಳಿಯಿಂದ ತಮ್ಮ ಮಕ್ಕಳಿಗಾದ ಸಮಸ್ಯೆ ಹೇಳಿಕೊಳ್ಳುತ್ತಿರುವ ಜನ

11 ಬಡ ಕುಟುಂಬಗಳಿಗೆ ಸರಿಯಾಗಿ ಚಿಕಿತ್ಸೆ ಸಿಗದೇ ನರಳಾಡುತ್ತಿದ್ದಾರೆ. ಇನ್ನಾದ್ರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಬಡ ಕುಟುಂಬಗಳಿಗೆ ಉಚಿತ ಚಿಕಿತ್ಸೆ ಸಿಗುವಂತೆ ವ್ಯವಸ್ಥೆ ಮಾಡಬೇಕಿದೆ. ಯಾಕಂದ್ರೆ ದುಬಾರಿ ಇಂಜೆಕ್ಷನ್ ಮಾಡಿಸುವ ಶಕ್ತಿ ಈ ಬಡ ಕುಟುಂಬಗಳಿಗೆ ಇಲ್ಲ.

ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್