AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗದಗದಲ್ಲಿ ಬೀದಿ ನಾಯಿಗಳ ಹಾವಳಿ: ಮಕ್ಕಳು ಸೇರಿ 10ಕ್ಕೂ ಹೆಚ್ಚು ಜನರ ಮೇಲೆ ದಾಳಿ, ಇಂಜೆಕ್ಷನ್​ಗಾಗಿ ಪರದಾಟ

ಗದಗ-ಬೆಟಗೇಟಗಿ ಅವಳಿ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದೆ. ಒಂದೇ ದಿನ 10ಕ್ಕೂ ಹೆಚ್ಚು ಜನರ ಮೇಲೆ ಬೀದಿ ನಾಯಿಗಳ ದಾಳಿ ನಡೆದಿದೆ.

ಗದಗದಲ್ಲಿ ಬೀದಿ ನಾಯಿಗಳ ಹಾವಳಿ: ಮಕ್ಕಳು ಸೇರಿ 10ಕ್ಕೂ ಹೆಚ್ಚು ಜನರ ಮೇಲೆ ದಾಳಿ, ಇಂಜೆಕ್ಷನ್​ಗಾಗಿ ಪರದಾಟ
ನಾಯಿ ದಾಳಿ
TV9 Web
| Edited By: ಆಯೇಷಾ ಬಾನು|

Updated on: Dec 06, 2022 | 10:29 AM

Share

ಗದಗ: ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದೆ. ಒಂದೇ ದಿನ 10ಕ್ಕೂ ಹೆಚ್ಚು ಜನರ ಮೇಲೆ ಬೀದಿ ನಾಯಿಗಳು ದಾಳಿ(Street Dogs Attack), ಮಾಡಿವೆ. ಓರ್ವ ಮಗುವಿನ ಗಂಟಲು ರಕ್ತ ಹರಿದಿದ್ದು ಸ್ವಲ್ಪದರಲ್ಲೇ ಮಗು ಬಚಾವ್ ಆಗಿದೆ. ಅಲ್ಲದೆ ನಾಯಿ ಕಡಿತದ ಇಂಜಕ್ಷನ್ ಸಿಗದೇ ಬಡ ಜನ್ರು ಒದ್ದಾಡುತ್ತಿದ್ದಾರೆ.

ಗದಗ-ಬೆಟಗೇಟಗಿ ಅವಳಿ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದೆ. ಗದಗ ನಗರದ ಹಮಾಲರ ಕಾಲೋನಿಯಲ್ಲಿ ನೂರಾರು ಬೀದಿ ನಾಯಿಗಳ ಹಾವಳಿಗೆ ಜನ್ರು ಗಲಿಬಿಲಿಗೊಂಡಿದ್ದಾರೆ. ನಿನ್ನೆ ಒಂದೇ ದಿನದಲ್ಲಿ ಮಕ್ಕಳು ಸೇರಿದಂತೆ 11 ಜನ್ರ ಮೇಲೆ ಬೇಕಾಬಿಟ್ಟಿ ದಾಳಿ ಮಾಡಿದ ನಾಯಿಗಳು ಮಕ್ಕಳ ಗಂಟಲಿಗೆ ಬಾಯಿ ಹಾಕಿ ರಕ್ತ ಹೀರಿವೆ. ಯುವಕರು, ಹಿರಿಯರು, ಮಹಿಳೆಯರ ಮೇಲೂ ಸರಣಿ ದಾಳಿ ಮಾಡಿವೆ. ನೂರಾರು ನಾಯಿಗಳು ಹಿಂಡಿನಲ್ಲಿ ಬಂದು ದಾಳಿ ಮಾಡುತ್ತದೆ. ಈ ದಾಳಿ ಮಾಡುವ ನಾಯಿಗಳಲ್ಲಿ ಎಷ್ಟಕ್ಕೆ ಹುಚ್ಚು ಹಿಡಿದಿದೆ ಎಂಬುವುದೂ ಸಹ ತಿಳಿದಿಲ್ಲ. ನಿನ್ನೆ ನಡೆದ ಕಂದನ ಮೇಲಿನ ದಾಳಿಯಲ್ಲಿ ಮಗುವಿನ ಕಂಟಲಿಗೆ ಗಂಭೀರ ಹಾನಿಯಾಗಿದ್ದು ಸುಮಾರು 15 ಹೊಲಿಗೆ ಹಾಕಲಾಗಿದೆ. ಮಗುವಿನ ನರಳಾಟ ಮಾತ್ರ ಕರುಳು ಹಿಂಡುವಂತಿದೆ.

ಇದನ್ನೂ ಓದಿ: ಶಿವಮೊಗ್ಗ, ಬಳ್ಳಾರಿಯಲ್ಲಿ ಬೀದಿನಾಯಿ ದಾಳಿಗೆ ಒಟ್ಟು ಮೂವರು ಮಕ್ಕಳ ಸಾವು: ಮತ್ತೆ ಗರಿಗೆದರಿದ ನಾಯಿ ನಿರ್ವಹಣೆ ಚರ್ಚೆ

ಅಷ್ಟೇ ಅಲ್ಲ ಇನ್ನೊಂದು ಮಗು ಉಮ್ಮೇ ಹಬೀಬಾ ಹೊಟ್ಟೆ ಭಾಗದಲ್ಲಿ ನಾಯಿ ಕಚ್ಚಿದ್ರೆ, ಕಸ್ತೂರಿ ಅನ್ನೋ ಮಹಿಳೆ ಕೈ ಭಾಗದಲ್ಲಿ ಕಚ್ಚಿದೆ. ವಿರೇಶ ಎಂಬ ಯುವಕನಿಗೆ ಬೆನ್ನಿಗೆ ಕಚ್ಚಿದೆ, ವೃದ್ಧ ಮಾಬುಸಾಬ್ ಹಾಗೂ ಕುಮಾರ ಅನ್ನೋ ಯುವಕನಿಗೆ ಕಾಲಿಗೆ ಕಚ್ಚಿದೆ. ಹಮಾಲರ ಕಾಲೋನಿ ಜನ್ರಿಗೆ ಈಗ ನೆಮ್ಮದಿ ಇಲ್ಲದಂತಾಗಿದೆ. ಮಕ್ಕಳು ಮನೆ ಬಿಟ್ಟು ಆಟವಾಡಲು ಭಯ ಪಡ್ತಾಯಿದ್ದಾರೆ. ಮಕ್ಕಳು ಮಾತ್ರ ಅಲ್ಲ ಯುವಕರು, ದೊಡ್ಡವರು ಮನೆ ಬಿಟ್ಟು ಹೊರ ಬರಲು ಹೆದರುತ್ತಿದ್ದಾರೆ. ಒಂದು, ಎರಡು ನಾಯಿಗಳಾದ್ರೆ ಹೊಡೆದು ಹೋಡಿಸಬಹುದು. 30-40 ಹಿಂಡುಗಳ ಸಮೇತ ದಾಂಗುಡಿ ಇಡೋ ಶ್ವಾನಗಳ ಗುಂಪುಗಳು ಜನ್ರನ್ನು ಭಯ ಹುಟ್ಟಿಸುತ್ತಿವೆ. ಬೀದಿ ನಾಯಿಗಳ ಹಾವಳಿಗೆ ಮುಕ್ತಿ ನೀಡಿ ಅಂತ ನಿವಾಸಿಗಳು ನಗರಸಭೆ ಅಧಿಕಾರಿಗಳ ಮೊರೆ ಹೋಗಿದ್ದಾರೆ. ಆದ್ರೆ ಅಧಿಕಾರಿಗಳು ಅದಕ್ಕೆ ಕ್ಯಾರೇ ಎನ್ನುತ್ತಿಲ್ಲವಂತೆ. ಇಷ್ಟೊಂದು ಜನ್ರ ಮೇಲೆ ದಾಳಿ ಮಾಡಿದ ಮೇಲಾದ್ರೂ ನಗರಸಭೆ ಎಚ್ಚೆತ್ತುಕೊಂಡು ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕಿದೆ.

ಉಚಿತ ಇಂಜೆಕ್ಷನ್ ಇಲ್ಲದೇ ಪರದಾಟ

ಹಮಾಲರ ಕಾಲನಿ ಅಂದ್ರೆ ದುಡಿದು ಜೀವನ ಮಾಡುವ ಜನ. ಹೀಗಾಗಿ ನಾಯಿಗಳ ದಾಳಿ ಬಳಿಕ ರಕ್ಷಣ ಬೆಟಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿದ್ದಾರೆ. ಅದ್ರೆ, ಅಲ್ಲಿನ ಸಿಬ್ಬಂದಿ ಇಲ್ಲಿ ನಾಯಿ ಕಚ್ಚಿದ ಇಂಜೆಕ್ಷನ್ ಇಲ್ಲ ಅಂತ ಗದಗ ಜಿಮ್ಸ್ ಆಸ್ಪತ್ರೆಗೆ ಕಳಿಸಿದ್ದಾರೆ. ಮೊದ್ಲೆ ಮಕ್ಕಳು ನರಳಾಟ ನೋಡಿ ಕಂಗಾಲಾದ ಜನ್ರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಕ್ಕಿಲ್ಲ ಅಂತ ಜನ್ರು ಕಿಡಿಕಾರಿದ್ದಾರೆ.

street dogs

ಇದನ್ನೂ ಓದಿ: ನಿಗದಿತ ಸಮಯಕ್ಕೆ ಕಬ್ಬು ಕಟಾವು ಮಾಡಿ ಸಾಗಣೆ ಮಾಡಿ: ಮೈಸೂರು ಜಿಲ್ಲಾಧಿಕಾರಿ ಆದೇಶ

ಜಿಮ್ಸ್ ಆಸ್ಪತ್ರೆಗೂ ಹೋದ್ರೂ ಸಿಗಲಿಲ್ಲ ಇಂಜೆಕ್ಷನ್

ಗದಗ ಜಿಮ್ಸ್ ಆಸ್ಪತ್ರೆಗೆ ಹೋದ್ರೂ ಇಂಜೆಕ್ಷನ್ ಇಲ್ಲ ವೈದ್ಯರು ಇಂಜೆಕ್ಷನ್ ಇಲ್ಲ ಅಂತ 2 ಸಾವಿರ ಹಣ ಕೊಟ್ರೆ ಮಾತ್ರ ಇಂಜೆಕ್ಷನ್ ಮಾಡ್ತೀವಿ ಅಂದಿದ್ದಾರೆ. ಇಲ್ಲಾಂದ್ರೆ ಹೊರಗಡೆ ತಗೊಂಡು ಬನ್ನಿ ಅಂದಿದ್ದಾರೆ ಅಂತ ಗಾಯಾಳು ಕುಟುಂಬಸ್ಥರು ಆರೋಪಿಸಿದ್ದಾರೆ. ಹಣ ಅಂದ್ರೆ ಸರ್ಕಾರಿ ಆಸ್ಪತ್ರೆ ಯಾಕೇ ಬೇಕು ಅಂತ ನಾಯಿ ಕೊಚ್ಚಿಸಿಕೊಂಡ ಬಡ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕೊನೆಗೆ ಖಾಸಗಿ ಆಸ್ಪತ್ರೆಯಲ್ಲಿ ಸಾವಿರಾರು ರೂಪಾಯಿ ಕೊಟ್ಟು ಚಿಕಿತ್ಸೆ ಪಡೆದು ಬಂದಿದ್ದೇವೆ ಅಂತ ಜನ್ರ ಗೋಳು ತೋಡಿಕೊಂಡಿದ್ದಾರೆ.

Dog Attack

ನಾಯಿ ದಾಳಿಯಿಂದ ತಮ್ಮ ಮಕ್ಕಳಿಗಾದ ಸಮಸ್ಯೆ ಹೇಳಿಕೊಳ್ಳುತ್ತಿರುವ ಜನ

11 ಬಡ ಕುಟುಂಬಗಳಿಗೆ ಸರಿಯಾಗಿ ಚಿಕಿತ್ಸೆ ಸಿಗದೇ ನರಳಾಡುತ್ತಿದ್ದಾರೆ. ಇನ್ನಾದ್ರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಬಡ ಕುಟುಂಬಗಳಿಗೆ ಉಚಿತ ಚಿಕಿತ್ಸೆ ಸಿಗುವಂತೆ ವ್ಯವಸ್ಥೆ ಮಾಡಬೇಕಿದೆ. ಯಾಕಂದ್ರೆ ದುಬಾರಿ ಇಂಜೆಕ್ಷನ್ ಮಾಡಿಸುವ ಶಕ್ತಿ ಈ ಬಡ ಕುಟುಂಬಗಳಿಗೆ ಇಲ್ಲ.

ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು