AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋತರೂ ಕೆಲಸ ಮಾಡುತ್ತೇನೆ ಎಂದಿದ್ದ ಗಂಗಮ್ಮನಿಗೆ ಬಿದ್ದಿದ್ದು ಕೇವಲ ಆರು ಮತಗಳು!

ತುಮಕೂರು ಗ್ರಾಮಾಂತರ ತಾಲೂಕಿನ ಹೆಬ್ಬೂರು ಗ್ರಾಪಂನ ಕಲ್ಕರೆ ವಾರ್ಡ್​​ನಿಂದ ಗಂಗಮ್ಮ ಸ್ಪರ್ಧಿಸಿದ್ದರು. ಗೆದ್ದರೆ, ಗ್ರಾಮದಲ್ಲಿ ಅರಳಿ ಕಟ್ಟೆ ಕಟ್ಟಿಸುತ್ತೇನೆ, ಊರಿಗೆ ರಸ್ತೆ ಮಾಡಿಸುತ್ತೇನೆ ಎಂಬಿತ್ಯಾದಿ ಭರವಸೆ ನೀಡಿದ್ದರು.

ಸೋತರೂ ಕೆಲಸ ಮಾಡುತ್ತೇನೆ ಎಂದಿದ್ದ ಗಂಗಮ್ಮನಿಗೆ ಬಿದ್ದಿದ್ದು ಕೇವಲ ಆರು ಮತಗಳು!
ಗಂಗಮ್ಮ ಹಂಚಿದ್ದ ಪಾಂಪ್ಲೆಟ್
ರಾಜೇಶ್ ದುಗ್ಗುಮನೆ
|

Updated on:Dec 30, 2020 | 7:50 PM

Share

ತುಮಕೂರು: ಗಂಗಮ್ಮ..! ಈ ಹೆಸರನ್ನು ನೀವು ವಾಟ್ಸಪ್​​-ಫೇಸ್​ಬುಕ್​ನಲ್ಲಿ ಓದಿರುತ್ತೀರಿ. ಏಕೆಂದರೆ, ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಿಂತು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದರು. ಇದಕ್ಕೆ ಕಾರಣ ಅವರು ನೀಡಿದ್ದ ಆಶ್ವಾಸನೆ. ಗೆಲುವಿನ ಜೊತೆ ಸೋತರೆ ಏನೆಲ್ಲ ಮಾಡುತ್ತೇನೆ ಎನ್ನುವ ಬಗ್ಗೆಯೂ ಗಂಗಮ್ಮ ಉಲ್ಲೇಖಿಸಿದ್ದರು. ಇದನ್ನು ಮತದಾರರು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತದೆ. ಗಂಗಮ್ಮ ಅವರನ್ನು ಸೋಲಿಸಿ ಬಿಟ್ಟಿದ್ದಾರೆ!

ತುಮಕೂರು ಗ್ರಾಮಾಂತರ ತಾಲೂಕಿನ ಹೆಬ್ಬೂರು ಗ್ರಾಪಂನ ಕಲ್ಕರೆ ವಾರ್ಡ್​​ನಿಂದ ಗಂಗಮ್ಮ ಸ್ಪರ್ಧಿಸಿದ್ದರು. ಗೆದ್ದರೆ, ಗ್ರಾಮದಲ್ಲಿ ಅರಳಿ ಕಟ್ಟೆ ಕಟ್ಟಿಸುತ್ತೇನೆ, ಊರಿಗೆ ರಸ್ತೆ ಮಾಡಿಸುತ್ತೇನೆ ಎಂಬಿತ್ಯಾದಿ ಭರವಸೆ ನೀಡಿದ್ದರು. ಇಷ್ಟೇ ಆಗಿದ್ದರೆ, ಅವರು ಹಂಚಿದ್ದ ಪಾಂಪ್ಲೆಟ್​ ವೈರಲ್​ ಆಗುತ್ತಿರಲಿಲ್ಲವೇನೋ. ಗೆಲುವಿನ ಜೊತೆ ಸೋತರೆ ಏನು ಮಾಡುತ್ತೇನೆ ಎನ್ನುವ ಬಗ್ಗೆಯೂ ಗಂಗಮ್ಮ ಉಲ್ಲೇಖಿಸಿದ್ದರು. ಅನರ್ಹವಾಗಿ ಪಡೆದಿರುವ 25 ಕುಟುಂಬಗಳ ಪಡಿತರ ಚೀಟಿ ರದ್ದು ಮಾಡುತ್ತೇನೆ, ಸರ್ವೇ ನಂಬರ್ 86ರಲ್ಲಿ ಹಳೇ ದಾಖಲೆಯಂತೆ ಸ್ಮಶಾನ ಮಾಡಿಸುವುದು ಸೇರಿ ಹಲವು ಭರವಸೆಗಳನ್ನು ನೀಡಿದ್ದರು.

ಆನೆ ಇದ್ದರೂ ಸಾವಿರ, ಸೋತರೂ ಸಾವಿರ ಎಂಬಂತಿತ್ತು ಇವರು ಕೊಟ್ಟ ಭರವಸೆಗಳು! ಹೀಗಾಗಿ, ಗಂಗಮ್ಮ ಸೋಲಲಿ-ಗೆಲ್ಲಲಿ ಅವರು ಕೆಲಸ ಮಾಡಿಯೇ ಮಾಡುತ್ತಾರೆ ಎಂದು ಜನರು ನಿರ್ಧರಿಸಿದಂತಿದೆ. ಇದೇ ಕಾರಣಕ್ಕೆ ಅವರಿಗೆ ಕೇವಲ ಆರೇ ಮತ ನೀಡಿದ್ದಾರೆ.

ಮತ್ತೊಂದು ವಿಚಿತ್ರ ಎಂದರೆ, ಮತದಾನದ ದಿನ ಗಂಗಮ್ಮ ಅವರು ವೋಟ್​ ಮಾಡಲು ಬಂದಿರಲಿಲ್ಲ! ಮತದಾನದ ದಿನ ಗಂಗಮ್ಮ ತಮಗೆ ತಾವೇ ಮತದಾನ ಮಾಡಿಕೊಳ್ಳದೆ ಮತದಾನದಿಂದ‌ ದೂರ ಉಳಿದಿದ್ದರು. ಈಗ ಸೋಲು ಕಂಡಿದ್ದಾರೆ. ಈಗ ಸೋತರೂ ಮಾಡುವುದಾಗಿ ನೀಡಿರುವ ಭರವಸೆಯನ್ನು ಅವರು ಈಡೇರಿಸುತ್ತಾರಾ ಎನ್ನುವ ಕುತೂಹಲ ಜನರದ್ದು.

ಚುನಾವಣೆಯಲ್ಲಿ ಗೆದ್ದ ತಕ್ಷಣವೇ ಮದ್ಯ ಸೇವನೆ ಮಾಡಿ.. ಚುನಾವಣಾಧಿಕಾರಿ ಎದುರು ಬಂದ ನೂತನ ಸದಸ್ಯ!

Published On - 7:48 pm, Wed, 30 December 20

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ