Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವನಾಥ್‌ರ ‘Bombay Days’ ಬಾಂಬಿಗೆ BJP ಯಲ್ಲಿ ಶಾಕ್, JDS ‌ಗೆ ಆತಂಕ ಯಾಕೆ?

ಮೈಸೂರು: ರಾಜಕಾರಣಿ ಹೆಚ್ ವಿಶ್ವನಾಥ್‌ರಿಗೂ, ವಿವಾದಗಳಿಗೂ ಬಿಡದ ನಂಟು. ಸದಾ ಒಂದಿಲ್ಲೊಂದು ವಿವಾದಗಳಲ್ಲಿ ಇರುವ ಈ ನಾಯಕ ಈಗ ಮತ್ತೊಂದು ವಿವಾದ ಮೈಮೈಲೆ ಎಳೆದುಕೊಳ್ಳೋಕೆ ರೆಡಿಯಾಗಿದ್ದಾರೆ. ಹೌದು ಮೈಸೂರಿನ ಬಿಜಿಪಿ ನಾಯಕ ಹೆಚ್ ವಿಶ್ವನಾಥ್ ಇತ್ತೀಚೆಗಷ್ಟೆ ಬಿಜಿಪಿಯಿಂದ ವಿಧಾನಪರಿಷತ್ತಿಗೆ ನಾಮಕರಣಗೊಂಡಿದ್ದಾರೆ. ಈಗ ಅವರ ಕಣ್ಣು ಮಂತ್ರಿ ಸ್ಥಾನದ ಮೇಲೆ ನೆಟ್ಟಿದೆ. ಇದಕ್ಕಾಗಿ ಅವರು ಪಕ್ಷಾಂತರ ಮಾಡಿಯೂ ಆಗಿದೆ. ಅದಕ್ಕಾಗಿ ವಿಶ್ವನಾಥ್ ಪಟ್ಟ ಪಾಡು ಮಾತ್ರ ಯಾರಿಗೂ ಹೇಳತೀರದು. ಬೆಂಗಳೂರಿನಿಂದ ಮುಂಬೈ, ಮುಂಬೈನಿಂದ ದೆಹಲಿ, ದೆಹಲಿಯಿಂದ ಮತ್ತೆ ಮುಂಬೈ […]

ವಿಶ್ವನಾಥ್‌ರ ‘Bombay Days’ ಬಾಂಬಿಗೆ BJP ಯಲ್ಲಿ ಶಾಕ್, JDS ‌ಗೆ ಆತಂಕ ಯಾಕೆ?
Follow us
Guru
| Updated By:

Updated on:Jul 30, 2020 | 3:11 PM

ಮೈಸೂರು: ರಾಜಕಾರಣಿ ಹೆಚ್ ವಿಶ್ವನಾಥ್‌ರಿಗೂ, ವಿವಾದಗಳಿಗೂ ಬಿಡದ ನಂಟು. ಸದಾ ಒಂದಿಲ್ಲೊಂದು ವಿವಾದಗಳಲ್ಲಿ ಇರುವ ಈ ನಾಯಕ ಈಗ ಮತ್ತೊಂದು ವಿವಾದ ಮೈಮೈಲೆ ಎಳೆದುಕೊಳ್ಳೋಕೆ ರೆಡಿಯಾಗಿದ್ದಾರೆ.

ಹೌದು ಮೈಸೂರಿನ ಬಿಜಿಪಿ ನಾಯಕ ಹೆಚ್ ವಿಶ್ವನಾಥ್ ಇತ್ತೀಚೆಗಷ್ಟೆ ಬಿಜಿಪಿಯಿಂದ ವಿಧಾನಪರಿಷತ್ತಿಗೆ ನಾಮಕರಣಗೊಂಡಿದ್ದಾರೆ. ಈಗ ಅವರ ಕಣ್ಣು ಮಂತ್ರಿ ಸ್ಥಾನದ ಮೇಲೆ ನೆಟ್ಟಿದೆ. ಇದಕ್ಕಾಗಿ ಅವರು ಪಕ್ಷಾಂತರ ಮಾಡಿಯೂ ಆಗಿದೆ. ಅದಕ್ಕಾಗಿ ವಿಶ್ವನಾಥ್ ಪಟ್ಟ ಪಾಡು ಮಾತ್ರ ಯಾರಿಗೂ ಹೇಳತೀರದು. ಬೆಂಗಳೂರಿನಿಂದ ಮುಂಬೈ, ಮುಂಬೈನಿಂದ ದೆಹಲಿ, ದೆಹಲಿಯಿಂದ ಮತ್ತೆ ಮುಂಬೈ ನಂತರ ಬೆಂಗಳೂರು ಹೀಗೆ ಅಲೆಯಬೇಕಾಯಿತು.

ಈ ಸಮಯದಲ್ಲಿ ಅವರು ಸಾಕಷ್ಟು ಮುಜಗರವನ್ನ ಅನುಭವಿಸಬೇಕಾಯಿತು. ಈಗ ಅದನ್ನೇ ಪುಸ್ತಕ ರೂಪದಲ್ಲಿ ಜಗತ್ತಿನ ಮುಂದೆ ತೆರೆದಿಡಲು ಮುಂದಾಗಿದ್ದಾರೆ. ಈ ಪುಸ್ತಕಕ್ಕೆ ಬಾಂಬೇ ಡೇಸ್ ಎಂದು ಹೆಸರಿಡಲು ಮುಂದಾಗಿದ್ದಾರೆಂದು ತಿಳಿದು ಬಂದಿದೆ. ಇದರಲ್ಲಿ ಜೇಡಿಎಸ್‌ನಿಂದ ಬಿಜೆಪಿಗೆ ಹೋದ ವಿವರಗಳನ್ನು ಬರೆಯಲಿದ್ದಾರಂತೆ.

ಈ ಸಂಬಂಧ ಮೈಸೂರಿನ ಸಂವಾದದಲ್ಲಿ ಮಾತನಾಡಿದ ವಿಶ್ವನಾಥ್, ಬಾಂಬೆ ಡೇಸ್ ಪುಸ್ತಕ ಬರೆಯುವುದು ಮತ್ತು ಅದನ್ನು ಬಿಡುಗಡೆ ಮಾಡುವುದು ಎರಡು ಖಚಿತ ಎಂದಿದ್ದಾರೆ. ಅಷ್ಟೆ ಅಲ್ಲ ಸರ್ಕಾರದಿಂದ ನನ್ನ ಕೈ ಮತ್ತು ಬರಹ ಕಟ್ಟಿ ಹಾಕಲು ಸಾಧ್ಯವಿಲ್ಲ ಎಂದು ಗುಟುರು ಹಾಕಿದ್ದಾರೆ.

ಹಾಗೇನೆ ಸರ್ಕಾರಕ್ಕೆ ಮುಜುಗರ ಥರವಂತಹದು ಅದರಲ್ಲಿ ಏನೂ ಇರಲ್ಲ, ಆದ್ರೆ ಯಾವ ಕಾರಣಕ್ಕೆ ನಾವು ಬಂಡೆದ್ದು ಹೋದೆವು, ಕೆಲವರು ಕಾನೂನನ್ನು ಹೇಗೆ ದುರುಪಯೋಗ ಪಡಿಸಿಕೊಂಡರು ಅನ್ನೋ ಡಿಟೇಲ್ಸ್ ಮಾಹಿತಿ ಪುಸ್ತಕದಲ್ಲಿ ಇರುತ್ತೆ ಎಂದು ವಿಶ್ವನಾಥ್ ತಿಳಿಸಿದ್ದಾರೆ.

Published On - 6:23 pm, Tue, 28 July 20

ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ನಾಸಿಕ್‌ನಲ್ಲಿ ಕುಡಿಯುವ ನೀರಿಗಾಗಿ ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಮಹಿಳೆ
ನಾಸಿಕ್‌ನಲ್ಲಿ ಕುಡಿಯುವ ನೀರಿಗಾಗಿ ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಮಹಿಳೆ
ಬೆಂಗಳೂರಿನಲ್ಲಿ ರಾಯಲ್ ಎನ್ಫೀಲ್ಡ್ ಬುಲೆಟ್ ಓಡಿಸಿದ ಪುಟ್ಟ ಬಾಲಕ!
ಬೆಂಗಳೂರಿನಲ್ಲಿ ರಾಯಲ್ ಎನ್ಫೀಲ್ಡ್ ಬುಲೆಟ್ ಓಡಿಸಿದ ಪುಟ್ಟ ಬಾಲಕ!
ಕೊಲೆಯಾದ ನಿವೃತ್ತ ಐಪಿಎಸ್​​ ಓಂಪ್ರಕಾಶ್​ ಫಾರ್ಮ್ ಹೌಸ್ ಹೇಗಿದೆ ನೋಡಿ...!
ಕೊಲೆಯಾದ ನಿವೃತ್ತ ಐಪಿಎಸ್​​ ಓಂಪ್ರಕಾಶ್​ ಫಾರ್ಮ್ ಹೌಸ್ ಹೇಗಿದೆ ನೋಡಿ...!
ಯುಎಸ್ ಉಪಾಧ್ಯಕ್ಷ ಜೆಡಿ. ವ್ಯಾನ್ಸ್ ಕುಟುಂಬಕ್ಕೆ ಶಾಸ್ತ್ರೀಯ ನೃತ್ಯದ ಸ್ವಾಗತ
ಯುಎಸ್ ಉಪಾಧ್ಯಕ್ಷ ಜೆಡಿ. ವ್ಯಾನ್ಸ್ ಕುಟುಂಬಕ್ಕೆ ಶಾಸ್ತ್ರೀಯ ನೃತ್ಯದ ಸ್ವಾಗತ
VIDEO: ಮೊದಲು ಕಿತ್ತಾಟ... ಆಮೇಲೆ ಸ್ನೇಹಹಸ್ತ: ಇದು ವಿರಾಟ್ ಕೊಹ್ಲಿ
VIDEO: ಮೊದಲು ಕಿತ್ತಾಟ... ಆಮೇಲೆ ಸ್ನೇಹಹಸ್ತ: ಇದು ವಿರಾಟ್ ಕೊಹ್ಲಿ
ಹುಲಿಯನ್ನೇ ಅಟ್ಟಾಡಿಸಿದ ಒಂಟಿ ಸಲಗ: ಅಪರೂಪದ ವಿಡಿಯೋ ವೈರಲ್​
ಹುಲಿಯನ್ನೇ ಅಟ್ಟಾಡಿಸಿದ ಒಂಟಿ ಸಲಗ: ಅಪರೂಪದ ವಿಡಿಯೋ ವೈರಲ್​
VIDEO: ಅಣ್ಣನ ಬ್ಯಾಟಿಂಗ್ ಎಂಟ್ರಿಗೆ ಬಿಕ್ಕಳಿಸಿ ಅತ್ತ ತಮ್ಮ
VIDEO: ಅಣ್ಣನ ಬ್ಯಾಟಿಂಗ್ ಎಂಟ್ರಿಗೆ ಬಿಕ್ಕಳಿಸಿ ಅತ್ತ ತಮ್ಮ
‘ನಾನು ಶಿವನ ಭಕ್ತ, ಅದಕ್ಕಾಗಿ ಇಲ್ಲಿಗೆ ಬಂದೆ’; ಮಹಾಕಾಳೇಶ್ವರ ದೇವಾಲಯ ಭೇಟಿ
‘ನಾನು ಶಿವನ ಭಕ್ತ, ಅದಕ್ಕಾಗಿ ಇಲ್ಲಿಗೆ ಬಂದೆ’; ಮಹಾಕಾಳೇಶ್ವರ ದೇವಾಲಯ ಭೇಟಿ