Sign In

By signing in or creating an account, you agree with Associated Broadcasting Company's Terms & Conditions and Privacy Policy.

Happy Karnataka Rajyotsava 2023: ಕನ್ನಡ ರಾಜ್ಯೋತ್ಸವದಂದು ಈ ವಿಶೇಷ ಸಾಲುಗಳ ಮೂಲಕ ಶುಭಾಶಯ ತಿಳಿಸಿ

ಕನ್ನಡ ರಾಜ್ಯೋತ್ಸವದ ಸುದಿನ ನೀವು ನಿಮ್ಮ ಸ್ನೇಹಿತರಿಗೆ, ಬಂಧುಗಳಿಗೆ ಮತ್ತು ಸಮಸ್ತ ಕನ್ನಡ ನಾಡಿನ ಜನತೆಗೆ ಶುಭಾಶಯ ಹೇಗೆ ತಿಳಿಸಬೇಕು, ಫೇಸ್​ಬುಕ್​, ವಾಟ್ಸ್​​ಅಪ್​ ಮತ್ತು ಇನ್ಸ್ಟಾಗ್ರಾಮ್​​ನಲ್ಲಿ ಯಾವ ಸಾಲುಗಳನ್ನು ಬರೆದು ಫೋಸ್ಟ್​​ ಹಾಕಬೇಕು ಎಂಬ ಗೊಂದಲಕ್ಕೆ ಇಲ್ಲಿದೆ ಪರಿಹಾರ...

Happy Karnataka Rajyotsava 2023: ಕನ್ನಡ ರಾಜ್ಯೋತ್ಸವದಂದು ಈ ವಿಶೇಷ ಸಾಲುಗಳ ಮೂಲಕ ಶುಭಾಶಯ ತಿಳಿಸಿ
ಕನ್ನಡ ರಾಜ್ಯೋತ್ಸವ
Follow us
ವಿವೇಕ ಬಿರಾದಾರ
|

Updated on:Oct 31, 2023 | 8:30 AM

ಕರ್ನಾಟಕ ಕವಿಗಳ ತವರೂರು, ದಾಸರ ನಾಡು, ಶ್ರೀಗಂಧದ ಬೀಡು. ಕರುನಾಡು ಸಂಸ್ಕೃತಿ-ಸಂಸ್ಕಾರಕ್ಕೆ ಹೆಸರುವಾಸಿಯಾಗಿದೆ. ನಮ್ಮ ನೆಲದ ವಚನ ಸಾಹಿತ್ಯ ವಿಶ್ವಕ್ಕೆ ಶಾಸನ ಇದ್ದಹಾಗೆ. ಇಲ್ಲಿನ ರಾಜಮನೆತನದ ಮಹರಾಜರು ರಾಷ್ಟ್ರಕ್ಕೆ ಕಳಸಪ್ರಾಯವಾದವರು. ವಿಜಯನಗರ, ಕಿತ್ತೂರು, ಹೊಯ್ಸಳ, ಬದಾಮಿ ಚಾಲೂಕ್ಯರು ನಾಡಿಗೆ ಕೊಟ್ಟಂತಹ ಕೊಡುಗೆ ಅಪಾರ. ಕರ್ನಾಟಕದ ವಾಸ್ತುಶಿಲ್ಪ ನೋಡುಗರಿಗೆ ನಿಬ್ಬೆರಗಾಗಿಸುತ್ತದೆ. ಕನ್ನಡ ನೆಲದ ಅದೆಷ್ಟೋ ಜನರು ತಮ್ಮ ಸಾಧನೆ ಮೂಲಕ ನಾಡಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಇಂತಹ ಶ್ರೀಮಂತ, ಸಮೃದ್ಧ ನಾಡು ಕರ್ನಾಟಕ. ಇನ್ನೂ ಒಂದು ದಿನ ಕಳೆದರೇ ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವ ಬರುತ್ತದೆ.

ಈ ಬಾರಿಯ ಕನ್ನಡ ರಾಜ್ಯೋತ್ಸವ ಬಹಳ ವಿಶೇಷತೆಯಿಂದ ಕೂಡಿದೆ. ಏಕೆಂದರೆ ಮೈಸೂರು ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣ ಮಾಡಿ 50 ವರ್ಷವಾಯಿತು. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಕರ್ನಾಟಕ-50 ಎಂದು ವರ್ಷ ಪೂರ್ತಿ ಸಂಭ್ರಮಾಚರಣೆ ಮಾಡಲು ನಿರ್ಧರಿಸಿದೆ. ಈ ಸುದಿನ ನೀವು ನಿಮ್ಮ ಸ್ನೇಹಿತರಿಗೆ, ಬಂಧುಗಳಿಗೆ ಮತ್ತು ಸಮಸ್ತ ಕನ್ನಡ ನಾಡಿನ ಜನತೆಗೆ ಶುಭಾಶಯ ಹೇಗೆ ತಿಳಿಸಬೇಕು, ಫೇಸ್​ಬುಕ್​, ವಾಟ್ಸ್​​ಅಪ್​ ಮತ್ತು ಇನ್ಸ್ಟಾಗ್ರಾಮ್​​ನಲ್ಲಿ ಯಾವ ಸಾಲುಗಳನ್ನು ಬರೆದು ಫೋಸ್ಟ್​​ ಹಾಕಬೇಕು ಎಂಬ ಗೊಂದಲಕ್ಕೆ ಇಲ್ಲಿದೆ ಪರಿಹಾರ…

ಇದನ್ನೂ ಓದಿ: ಮೊಬೈಲ್ ಮತ್ತು ಕಂಪ್ಯೂಟರ್​ನಲ್ಲಿ ಸುಲಭವಾಗಿ ಕನ್ನಡ ಟೈಪ್ ಮಾಡುವುದು ಹೇಗೆ?

  1. ನಮ್ಮ ರಾಜ್ಯದ ಸುವರ್ಣ ಪರಂಪರೆಯನ್ನು ನೆನೆದು ಕರ್ನಾಟಕದ ಭಾಗವಾಗಿರುವುದಕ್ಕೆ ಹೆಮ್ಮೆ ಪಡೋಣ. ಕರ್ನಾಟಕ ರಾಜ್ಯೋತ್ಸವ ದಿನದ ಶುಭಾಶಯಗಳು.
  2. ಮನಸ್ಸಿನಲ್ಲಿ ಸ್ವಾತಂತ್ರ್ಯ, ಮಾತಿನಲ್ಲಿ ಶಕ್ತಿ, ರಕ್ತದಲ್ಲಿ ಶುದ್ಧತೆ ಮತ್ತು ನಮ್ಮ ಆತ್ಮದಲ್ಲಿ ಹೆಮ್ಮೆ, ಕರ್ನಾಟಕದ ಚೇತನಕ್ಕೆ ನಮನ ಸಲ್ಲಿಸೋಣ. ಕರ್ನಾಟಕ ರಾಜ್ಯೋತ್ಸವ 2023 ರ ಶುಭಾಶಯಗಳು.
  3. ಈ ವರ್ಷದ ಪ್ರತಿಯೊಂದು ಕ್ಷಣವೂ ಅನನ್ಯವಾಗಿರಲಿ, ಶುದ್ಧ ಆನಂದ ಮತ್ತು ನಿರ್ಣಯದಿಂದ ತುಂಬಿರಲಿ. ಕರ್ನಾಟಕ ರಾಜ್ಯೋತ್ಸವ 2023ರ ಶುಭಾಶಯಗಳು.
  4. ಕನ್ನಡಾಂಬೆಯ ಮಕ್ಕಳಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
  5. ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
  6. ಕನ್ನಡವೇ ಸತ್ಯ ಕನ್ನಡವೇ ನಿತ್ಯ
  7. ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ
  8. ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:28 am, Tue, 31 October 23

ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ