Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರಸೀಕೆರೆ ರಾಜಕೀಯ: ನಿಗೂಢ ಸ್ಥಳದಿಂದ ವಿಡಿಯೊ ಬಿಡುಗಡೆ ಮಾಡಿದ ಮೂವರು ಜೆಡಿಎಸ್ ನಗರಸಭೆ ಸದಸ್ಯರು

ಭ್ರಷ್ಟಾಚಾರದ ಹಣದಲ್ಲಿ ಸದಸ್ಯರನ್ನು ಖರೀದಿ ಮಾಡಿದ್ದಾರೆ. ಬಿಜೆಪಿ ಬರುವವರೆಗೂ ಕುದುರೆ ವ್ಯಾಪಾರ ಪದ ಇರಲಿಲ್ಲ. ಹಣ ಕೊಟ್ಟು ಪ್ರಜಾಪ್ರಭುತ್ವ ಖರೀದಿಸಲು ಹೊರಟಿದ್ದಾರೆ. ಇವರಿಗೆ ನೈತಿಕತೆ ಇಲ್ಲ, ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹಾಸನದಲ್ಲಿ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅರಸೀಕೆರೆ ರಾಜಕೀಯ: ನಿಗೂಢ ಸ್ಥಳದಿಂದ ವಿಡಿಯೊ ಬಿಡುಗಡೆ ಮಾಡಿದ ಮೂವರು ಜೆಡಿಎಸ್ ನಗರಸಭೆ ಸದಸ್ಯರು
ವಿಡಿಯೋದ ದೃಶ್ಯ
Follow us
TV9 Web
| Updated By: guruganesh bhat

Updated on:Jun 29, 2021 | 9:03 PM

ಹಾಸನ: ಅರಸೀಕೆರೆ ನಗರಸಭೆಯ 6 ಜೆಡಿಎಸ್ ಸದಸ್ಯರ ಬಂಡಾಯ ಪ್ರಕರಣಕ್ಕೆ ರೋಚಕ ತಿರುವು ದೊರೆತಿದೆ. ನಿಗೂಢ ಸ್ಥಳದಲ್ಲಿ ಕುರಿತು ವಿಡಿಯೋ ಮಾಡಿ ಬಿಡುಗಡೆ ಮಾಡಿರುವ ಅರಸೀಕೆರೆ ನಗರಸಭೆಯ ಮೂವರು  ಜೆಡಿಎಸ್ ಸದಸ್ಯರು ನಾವು ಯಾವುದೇ ರೀತಿಯ ಹಣದ ಆಮಿಷಕ್ಕೆ ಒಳಗಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಆಮಿಷಕ್ಕೆ ಒಳಗಾಗುವಂತಹ ದುಸ್ಥಿತಿಯೂ ನಮಗೆ ಬಂದಿಲ್ಲ. ನಮ್ಮ ವಿರುದ್ಧ ಇಲ್ಲಸಲ್ಲದ ಆರೋಪ‌ಗಳನ್ನು ಮಾಡುತ್ತಿದ್ದಾರೆ. ನಾವು ಮತದಾರರಿಗೆ ಕೊಟ್ಟ ಭರವಸೆ ಈಡೇರಿಸಲು ಆಗಿಲ್ಲ. ಅರಸೀಕೆರೆ ಶಾಸಕರು ನಮ್ಮ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿದ್ದರು. ಹೀಗೆ ಆದರೆ ಅಭಿವೃದ್ಧಿ ಆಗುವುದಿಲ್ಲ, ಜನರು ನಮ್ಮನ್ನು ಬೈಯ್ಯುತ್ತಿದ್ದಾರೆ. ಹಾಗಾಗಿ ನಾವು 7 ಸದಸ್ಯರು ಒಟ್ಟಿಗೆ ಕೂತು ಮಾತನಾಡಿದೆವು. ಹಾಗಾಗಿ ಪಕ್ಷದಲ್ಲಿದ್ದೇ ಅಭಿವೃದ್ಧಿ ಪರ ಕೆಲಸಕ್ಕೆ ನಿರ್ಧಾರ ಮಾಡಿದ್ದೇವೆ. ಅದರಂತೆ ಜಿಲ್ಲಾಧಿಕಾರಿಯವರಿಗೆ ಪ್ರತ್ಯೇಕ ಆಸನಕ್ಕೆ ಮನವಿ ಮಾಡಿದೆವು ಎಂದು ವಿಡಿಯೋದಲ್ಲಿ ಮೂವರು ಜೆಡಿಎಸ್ ಸದಸ್ಯರು ಆರೋಪ ಮಾಡಿದ್ದಾರೆ.

ವಾಪಸ್ ಹೋದ‌ಬಳಿಕ ಸದಸ್ಯ ಕಲೈ ಅರಸಿ ಪತಿ ಸುಧಾಕರ್​ರನ್ನು ಶಾಸಕರ ಕಡೆಯವರು ಅಪಹರಣ ಮಾಡಿಅವರಿಗೆ ಬೆದರಿಸಿ ಮತ್ತೆ ರಾಜಿನಾಮೆ‌ ವಾಪಸ್ ಪಡೆಯೋದಾಗಿ‌ ಪತ್ರ ಕೊಡಿಸಿದ್ದಾರೆ. ಈಗಲೂ ಅವರನ್ನ ಮುಕ್ತವಾಗಿ ಬಿಡಲಿ, ಕಲೈ ಅರಸಿ ಪತಿ ಸುಧಾಕರ್ ನಡೆದ ವಿಚಾರವನ್ನು ಹೇಳುತ್ತಾರೆ. ಹೆದರಿಸಿ ಬೆದರಿಸಿ ತಮ್ಮ ಪರವಾಗಿ ಹೇಳಿಕೆ‌ ಕೊಡಿಸಿದ್ದಾರೆ. ನಮ್ಮ ಸಹೋದರಂತೆ ಇರೋ ಇಬ್ಬರ ಮೇಲೆ ಕೇಸ್ ಮಾಡಿಸಿದ್ದಾರೆ. ಹೀಗೆ ಮಾಡುತ್ತಾ ಹೋದರೆ ಜನರು ದಂಗೆ ಏಳುತ್ತಾರೆ. ಶಾಸಕರೇ ದಯವಿಟ್ಟು ಇಂತಹ ಕೆಲಸ ಮಾಡಬೇಡಿ. ಹೀಗೆ ಆದ್ರೆ ಮುಂದೆ ತಕ್ಕ ಪಾಠ ಕಲಿಸುತ್ತಾರೆ ಎಂದು ವಿಡಿಯೋದಲ್ಲಿ ಜೆಡಿಎಸ್ ಸದಸ್ಯರು ಎಂದು ಅರಸೀಕೆರೆ ಕ್ಷೇತ್ರದ ಶಾಸಕ‌ ಶಿವಲಿಂಗೇಗೌಡಗೆ ಎಚ್ಚರಿಕೆ ನೀಡಿದ್ದಾರೆ.

ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಆಕ್ರೋಶ ಅರಸೀಕೆರೆ ನಗರಸಭೆಯಲ್ಲಿ ಆಪರೇಷನ್ ಕಮಲಕ್ಕೆ ಹಾಸನದಲ್ಲಿ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭ್ರಷ್ಟಾಚಾರದ ಹಣದಲ್ಲಿ ಸದಸ್ಯರನ್ನು ಖರೀದಿ ಮಾಡಿದ್ದಾರೆ. ಬಿಜೆಪಿ ಬರುವವರೆಗೂ ಕುದುರೆ ವ್ಯಾಪಾರ ಪದ ಇರಲಿಲ್ಲ. ಹಣ ಕೊಟ್ಟು ಪ್ರಜಾಪ್ರಭುತ್ವ ಖರೀದಿಸಲು ಹೊರಟಿದ್ದಾರೆ. ಇವರಿಗೆ ನೈತಿಕತೆ ಇಲ್ಲ, ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹಾಸನದಲ್ಲಿ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 

ಅರಸೀಕೆರೆ ನಗರಸಭೆಯಲ್ಲಿ ಆಪರೇಶನ್ ಕಮಲ? ಜೆಡಿಎಸ್​ ಸದಸ್ಯರಿಂದ ಬಿಜೆಪಿಗೆ ಒಕ್ಕೊರಲ ಬೆಂಬಲ

MRPL: ಎಂಆರ್​ಪಿಎಲ್​ನಲ್ಲಿ ಕನ್ನಡಿಗರಿಗಿಲ್ಲ ಕೆಲಸ: ಮಂಗಳೂರಿನಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪ್ರತಿಭಟಿಸಿ ಎಚ್ಚರಿಕೆ

(Hassan Arsikere Municipality Operation Kamala issue Video released by 3 JDS members of Arasikere Municipality sitting in mysterious location)

Published On - 8:28 pm, Tue, 29 June 21

ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು