AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಸನದಲ್ಲಿ ಹೈವೋಲ್ಟೇಜ್ ರೇಸ್: ಶರವೇಗದಲ್ಲಿ ಮುನ್ನುಗ್ಗಿದ ರೈಡರ್ಸ್!

ಹಾಸನ: ಕೆಲವ್ರಿಗೆ ಕ್ಯೂರಿಯಾಸಿಟಿ.. ಇನ್ನೂ ಕೆಲವ್ರಿಗೆ ಖುಷಿ.. ಜೊತೆಗೆ ಗೆಲುವಿನ ನಗೆ ಬೀರೋ ತವಕ. ಹೀಗೆ ಪ್ರತಿಯೊಬ್ರು ತಮ್ದೇ ಆದ ಮೂಡ್​ನಲ್ಲಿದ್ರು. ಯಾರಾಗ್ತಾನೇ ಕಿಂಗ್ ಅನ್ನೋ ಲೆಕ್ಕಾಚಾರದಲ್ಲೇ ಬ್ಯುಸಿಯಾಗೋಗಿದ್ರು. ಯಾಕಂದ್ರೆ ಅಲ್ಲೊಂದು ಹೈವೋಲ್ಟೇಜ್ ರೇಸ್ ಶುರುವಾಗಿತ್ತು. ಕಲಿಗಳ ಖದರ್​ಗೆಂದೇ ಸಿದ್ಧವಾಗಿರುವ ಅಖಾಡ. ಸುತ್ತಮುತ್ತ ಕೇಕೆ ಶಿಳ್ಳೆಗಳ ಉದ್ಘಾರ. ಅಷ್ಟೇ.. ನೋಡ ನೋಡುತ್ತಿದ್ದಂತೆಯೇ ಶರವೇಗದ ವೀರರು ಫೀಲ್ಡಿಗಿಳ್ದಿದ್ರು. ರುಽಂಯ್ ರುಽಂಯ್ ಅಂತಾ ಮುನ್ನುಗ್ಗಿದ್ರು. ಅವ್ರ ಸಾಹಸಮಯ ಟ್ಯಾಲೆಂಟ್​ಗೆ ಟ್ರ್ಯಾಕ್ ತುಂಬಾ ಧೂಳೆದ್ದಿತ್ತು. ಮಿಂಚಿ ಮರೆಯಾಗ್ತಿದ್ದ ಬೈಕ್​ಗಳಿಗೆ ಎಲ್ರೂ ಫಿದಾ! […]

ಹಾಸನದಲ್ಲಿ ಹೈವೋಲ್ಟೇಜ್ ರೇಸ್: ಶರವೇಗದಲ್ಲಿ ಮುನ್ನುಗ್ಗಿದ ರೈಡರ್ಸ್!
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Feb 24, 2020 | 11:25 AM

Share

ಹಾಸನ: ಕೆಲವ್ರಿಗೆ ಕ್ಯೂರಿಯಾಸಿಟಿ.. ಇನ್ನೂ ಕೆಲವ್ರಿಗೆ ಖುಷಿ.. ಜೊತೆಗೆ ಗೆಲುವಿನ ನಗೆ ಬೀರೋ ತವಕ. ಹೀಗೆ ಪ್ರತಿಯೊಬ್ರು ತಮ್ದೇ ಆದ ಮೂಡ್​ನಲ್ಲಿದ್ರು. ಯಾರಾಗ್ತಾನೇ ಕಿಂಗ್ ಅನ್ನೋ ಲೆಕ್ಕಾಚಾರದಲ್ಲೇ ಬ್ಯುಸಿಯಾಗೋಗಿದ್ರು. ಯಾಕಂದ್ರೆ ಅಲ್ಲೊಂದು ಹೈವೋಲ್ಟೇಜ್ ರೇಸ್ ಶುರುವಾಗಿತ್ತು.

ಕಲಿಗಳ ಖದರ್​ಗೆಂದೇ ಸಿದ್ಧವಾಗಿರುವ ಅಖಾಡ. ಸುತ್ತಮುತ್ತ ಕೇಕೆ ಶಿಳ್ಳೆಗಳ ಉದ್ಘಾರ. ಅಷ್ಟೇ.. ನೋಡ ನೋಡುತ್ತಿದ್ದಂತೆಯೇ ಶರವೇಗದ ವೀರರು ಫೀಲ್ಡಿಗಿಳ್ದಿದ್ರು. ರುಽಂಯ್ ರುಽಂಯ್ ಅಂತಾ ಮುನ್ನುಗ್ಗಿದ್ರು. ಅವ್ರ ಸಾಹಸಮಯ ಟ್ಯಾಲೆಂಟ್​ಗೆ ಟ್ರ್ಯಾಕ್ ತುಂಬಾ ಧೂಳೆದ್ದಿತ್ತು.

ಮಿಂಚಿ ಮರೆಯಾಗ್ತಿದ್ದ ಬೈಕ್​ಗಳಿಗೆ ಎಲ್ರೂ ಫಿದಾ! ಕ್ಷಣ ಕ್ಷಣಕ್ಕೂ ರೋಮಾಂಚನ.. ನೋಡೋ ಕಂಗಳಿಗೆ ಅದೆಂಥದ್ದೋ ಪುಳಕ. ಒಮ್ಮೆ ಇಲ್ಲಿ ಮತ್ತೊಮ್ಮೆ ಅಲ್ಲಿ ಅನ್ನುವಂತೆ ಮಿಂಚಿ ಮರೆಯಾಗ್ತಿದ್ದ ಬೈಕ್​ಗಳಿಗೆ ಎಲ್ರೂ ಫಿದಾ ಆಗಿದ್ರು. ರಾಕೆಟ್ ಸ್ಪೀಡ್​ನಲ್ಲಿ ಸೌಂಡ್ ಮಾಡ್ಕೊಂಡು ಹೋಗ್ತಿದ್ದ ರೈಡರ್ಸ್​ ಪವರ್​ ಕಂಡು ಖುಷ್ ಆಗಿದ್ರು.

ಇಂಥಾದ್ದೊಂದು ಹೈವೋಲ್ಟೇಜ್ ರೇಸ್​ಗೆ ಸಾಕ್ಷಿಯಾಗಿದ್ದು ಹಾಸನ ಹೊರವಲಯದ ಬೇಲೂರು ರಸ್ತೆ. ರಾಜ್ಯ ಹಾಗೂ ಹೊರ ರಾಜ್ಯದ ವಿವಿಧ ಜಿಲ್ಲೆಗಳಿಂದ 80ಕ್ಕೂ ಹೆಚ್ಚು ಸ್ಪರ್ಧಿಗಳು ಮೈದಾನದಲ್ಲಿ ಖದರ್ ತೋರಿಸಿದ್ರು. ಸುಮಾರು 800 ಮೀಟರ್ ಟ್ರ್ಯಾಕ್​ನಲ್ಲಿ ಒಂದೊಂದು ವಿಭಾಗದಲ್ಲಿ 20ಕ್ಕೂ ಹೆಚ್ಚುಸವಾರರು ಒಂದೇಬಾರಿಗೆ ಮೈದಾನದಲ್ಲಿ ಗೆಲುವಿಗಾಗಿ ಪೈಪೋಟಿ ನಡೆಸಿದ್ರು.

ಇನ್ನು ರೇಸ್​ನಲ್ಲಿ ಬಿಗಿನಿಂಗ್ ಕ್ಲಾಸ್, ಓಪನ್ ಕ್ಲಾಸ್, 4ಸ್ಟ್ರೋಕ್ ಓಪನ್ ಕ್ಲಾಸ್, ಎಕ್ಸ್​​ಪರ್ಟ್ ಕ್ಲಾಸ್, ಇಂಡಿಯನ್ ಓಪನ್ ಕ್ಲಾಸ್, ಟಿವಿಎಸ್ ಕ್ಲಾಸ್, ಸ್ಕೂಟರ್ ಕ್ಲಾಸ್ ಹೀಗೆ ಹಲವು ವಿಭಾಗಗಳಲ್ಲಿ ಸ್ಪರ್ಧೆ ಆಯೋಜನೆ ಮಾಡ್ಲಾಗಿತ್ತು. ಹಾಸನ, ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಉಡುಪಿ, ಕೊಡಗು ಸೇರಿದಂತೆ ವಿವಿಧ ಜಿಲ್ಲೆಗಳು ಹಾಗೂ ತಮಿಳುನಾಡು ಮತ್ತು ಕೇರಳಗಳಿಂದಲೂ ಕೂಡ ರಾಜ್ಯ ಹಾಗು ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸಿದ್ದ ಹಲವು ರೇಸರ್​ಗಳು ಭಾಗಿಯಾಗಿದ್ರು.

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಸಿದ್ದರಾಮಯ್ಯ ಹಾಗೂ ವಿದೇಶಾಂಗ ಸಚಿವ ಎಸ್ ಜೈಶಂಕರ್ ಆಕಸ್ಮಿಕ ಭೇಟಿ!
ಸಿದ್ದರಾಮಯ್ಯ ಹಾಗೂ ವಿದೇಶಾಂಗ ಸಚಿವ ಎಸ್ ಜೈಶಂಕರ್ ಆಕಸ್ಮಿಕ ಭೇಟಿ!
ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್