AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈತರು-ಸರ್ಕಾರದ ಮಧ್ಯೆ ಸಂಘರ್ಷ: ಹಾಸನದಲ್ಲಿ ರೈತರ ಖೆಡ್ಡಾಗೆ ಬಿದ್ದ ಮರಿಯಾನೆ!

ಹೊಸಕೊಪ್ಪಲು ಗ್ರಾಮದಲ್ಲಿ ನಿರಂತರವಾಗಿ ಜನರಿಗೆ ಕಾಟ ನೀಡುತ್ತಿದ್ದ ಮರಿಯಾನೆ ಜನರೇ ತೋಡಿದ್ದ ಕಂದಕಕ್ಕೆ ಬೀಳುವ ಮೂಲಕ ಸೆರೆಸಿಕ್ಕಂತಾಗಿದೆ.

ರೈತರು-ಸರ್ಕಾರದ ಮಧ್ಯೆ ಸಂಘರ್ಷ: ಹಾಸನದಲ್ಲಿ ರೈತರ ಖೆಡ್ಡಾಗೆ ಬಿದ್ದ ಮರಿಯಾನೆ!
ಹಾಸನ: ಕಂದಕಕ್ಕೆ ಬಿದ್ದ ಮರಿ ಕಾಡಾನೆ
TV9 Web
| Updated By: Rakesh Nayak Manchi|

Updated on:Jan 02, 2023 | 10:32 AM

Share

ಹಾಸನ: ನಿರಂತರವಾಗಿ ಜನರಿಗೆ ಕಾಟ ನೀಡುತ್ತಿದ್ದ ಮರಿ ಕಾಡಾನೆ (Baby Wild Elephant) ಜನರೇ ತೋಡಿದ್ದ ಕಂದಕ (Ditch)ಕ್ಕೆ ಬಿದ್ದ ಘಟನೆ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೊಸಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಕಾಡಾನೆಗಳ ಉಪಟಳದಿಂದ (Menace of wild elephants) ರೋಸಿ ಹೋಗಿದ್ದ ಮಲೆನಾಡು ಭಾಗದ ಜನರು ಶಾಶ್ವತ ಪರಿಹಾರಕ್ಕೆ ಒತ್ತಾಯಿಸುತ್ತಲೇ ಬಂದಿದ್ದರು. ಆದರೆ ಸರ್ಕಾರಗಳು ಶಾಶ್ವತ ಪರಿಹಾರ ಕಂಡುಹಿಡಿಯದ ಹಿನ್ನಲೆ ಗ್ರಾಮಸ್ಥರು ಒಟ್ಟು ಸೇರಿ ಆನೆ ಸೆರೆಗೆ ದೊಡ್ಡ ಕಂದಕ ತೋಡಿದ್ದಾರೆ. ಸದ್ಯ ಗ್ರಾಮಸ್ಥರು ತೋಡಿದ್ದ ಖೆಡ್ಡಾಕ್ಕೆ ಇಂದು ಮುಂಜಾನೆ ಮರಿಯಾನೆಯೊಂದು ಬಿದ್ದಿದೆ.

ಹೊಸಕೊಪ್ಪಲು ಗ್ರಾಮಸ್ಥರು ಕಾಡಾನೆಗಳ ಭೀತಿಯಿಂದಲೇ ಜೀವಿಸುತ್ತಿದ್ದಾರೆ. ಸರ್ಕಾರ ಶಾಶ್ವತ ಪರಿಹಾರ ನೀಡಲು ಮನಸ್ಸು ಮಾಡದ ಹಿನ್ನಲೆ ಕಾಡಾನೆ ಕೆಡವಲು ಜನರು ಕಂದಕ ತೋಡಿದ್ದರು. ಸದ್ಯ ಮರಿಯಾನೆ ಕಂದಕಕ್ಕೆ ಬಿದ್ದಿರುವ ಸುದ್ದಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳುತ್ತಿದ್ದಾರೆ.

ಇದನ್ನೂ ಓದಿ: Wild Elephants Menace: ಸರ್ಕಾರಕ್ಕೆ ಸೆಡ್ಡು ಹೊಡೆದು, ಕಾಡಾನೆಯಿಂದ ಬೆಳೆ ರಕ್ಷಣೆಗಾಗಿ ಖೆಡ್ಡಾ ತೋಡಲು ಮುಂದಾದ ಹಾಸನ ರೈತರು

ಗ್ರಾಮಸ್ಥರು ಡಿ.26 ರಂದು ಕಂದಕವನ್ನು ತೋಡಿದ್ದರು. ಅದರ ಮೇಲೆ ಬಿದಿರು, ಸೊಪ್ಪು ಹಾಕಿ ಮುಚ್ಚಿ ಆನೆ ಖೆಡ್ಡಾಕ್ಕೆ ಕೆಡವಲು ಬೇಕಾದ ಎಲ್ಲಾ ತಂತ್ರ ರೂಪಿಸಿ ಸಿದ್ಧಪಡಿಸಲಾಗಿತ್ತು. ಇಂದು ಕಾಡಾನೆಯ ಮರಿಯೊಂದು ಖೆಡ್ಡಾಕ್ಕೆ ಬಿದ್ದಿದ್ದಾರೆ. ಕಾಡಾನೆ ಹಾವಳಿಯಿಂದ ಬೇಸತ್ತ ಜನರ ಪ್ರತಿರೋದಕ್ಕೆ ಅರಣ್ಯ ಇಲಾಖೆಯೂ ಬೆಚ್ಚಿಬಿದ್ದಿದೆ.

ಈ ಹಿಂದೆ ಕಾಡಾನೆಯೊಂದು ದಿಡೀರನೆ ಎದುರಿಗೆ ಬಂದ ಪರಿಣಾಮ ಬೈಕ್ ಬಿಟ್ಟು ಸವಾರ ಓಡಿ ಪ್ರಾಣ ಉಳಿಸಿಕೊಂಡ ಭಯಾನಕ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹಲಸುಲಿಗೆ ಗ್ರಾಮದಲ್ಲಿ ನಡೆದಿತ್ತು. ರಸ್ತೆಯ ತಿರುವಿನಲ್ಲಿ ಒಂಟಿಸಲಗ ಬರುತ್ತಿತ್ತು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ವ್ಯಕ್ತಿಯೊಬ್ಬರು ತಿರುವಿನಲ್ಲೇ ಆನೆಯನ್ನು ನೋಡಿ ವಾಹನ ಬಿಟ್ಟು ಸ್ಥಳದಿಂದ ಓಡಿಹೋಗಿದ್ದಾರೆ. ಕಾಡಾನೆ-ಯುವಕನ ವಿಡಿಯೋ ವೈರಲ್ ಆಗಿದೆ.

ಬೆಳ್ಳಂಬೆಳಗ್ಗೆ ಜಮೀನಿಗೆ ಲಗ್ಗೆ ಇಟ್ಟ ಆನೆ, ರೈತನಿಗೆ ಗಾಯ

ಚಾಮರಾಜನಗರ: ಬೆಳ್ಳಂಬೆಳಗ್ಗೆ ಆನೆಯೊಂದು ಜಮೀನಿಗೆ ಲಗ್ಗೆ ಇಟ್ಟು ಕೆಲಸ ಮಾಡುತ್ತಿದ್ದ ರೈತನ ಮೇಲೆ ದಾಳಿ ನಡೆಸಿದ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೆಟ್ಟದ ಮಾದಳ್ಳಿಯಲ್ಲಿ ನಡೆದಿದೆ. ಆನೆ ದಾಳಿಯಿಂದ ಜಮೀನಿನಲ್ಲಿದ್ದ ರೈತ ದೇವರಾಜ್ ಎಂಬುವವರಿಗೆ ಗಂಭೀರ ಗಾಯಗಳಾಗಿದೆ. ಸದ್ಯ ಜಮೀನನಲ್ಲಿಯೇ ಆನೆ ಬೀಡುಬಿಟ್ಟಿದ್ದು, ವಿಚಾರ ತಿಳಿಸಿದರೂ ಅರಣ್ಯಧಿಕಾರಿಗಳು ಸ್ಥಳಕ್ಕೆ ಆಗಮಿಸಿಲ್ಲ ಎಂದು ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:59 am, Mon, 2 January 23