ಸ್ಥಳೀಯರು ವಾಪಸ್ ಕಳುಹಿಸಿದ್ರೂ ಮತ್ತೆ ಬಂದು ದುರಂತ ಅಂತ್ಯ ಕಂಡ ನಾಲ್ಕು ಮಕ್ಕಳು

ಇಂದು(ಮೇ.16) ಬೆಳಿಗ್ಗೆ ಹಾಸನ ಜಿಲ್ಲೆಯ ಆಲೂರು(Alur) ತಾಲೂಕಿನ ಕದಾಳು ಸಮೀಪದ ಮುತ್ತಿಗೆ ಗ್ರಾಮದಲ್ಲಿ ಈಜಲು ತೆರಳಿದ್ದ ನಾಲ್ವರು ಮಕ್ಕಳು(Four Childrens) ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ಹಿನ್ನಲೆ ಆಲೂರು ತಾಲ್ಲೂಕು ಆಸ್ಪತ್ರೆಗೆ ಮಾಜಿ ಶಾಸಕ ಎಚ್ಕೆ ಕುಮಾರಸ್ವಾಮಿ ಭೇಟಿ ನೀಡಿ, ಮೃತ ಕುಟುಂಬ ಸದಸ್ಯರ ಮಕ್ಕಳ ಪೋಷಕರಿಗೆ ಸಾಂತ್ವನ ಹೇಳಿದರು.

ಸ್ಥಳೀಯರು ವಾಪಸ್ ಕಳುಹಿಸಿದ್ರೂ ಮತ್ತೆ ಬಂದು ದುರಂತ ಅಂತ್ಯ ಕಂಡ ನಾಲ್ಕು ಮಕ್ಕಳು
ಮೃತ ಮಕ್ಕಳು
Edited By: ಕಿರಣ್ ಹನುಮಂತ್​ ಮಾದಾರ್

Updated on: May 16, 2024 | 5:09 PM

ಹಾಸನ, ಮೇ 16: ಜಿಲ್ಲೆಯ ಆಲೂರು(Alur) ತಾಲೂಕಿನ ಕದಾಳು ಸಮೀಪದ ಮುತ್ತಿಗೆ ಗ್ರಾಮದಲ್ಲಿ ಇಂದು(ಮೇ.16) ಬೆಳಿಗ್ಗೆ ದುರಂತವೊಂದು ಸಂಭವಿಸಿದೆ. ಈಜಲು ತೆರಳಿದ್ದ ನಾಲ್ವರು ಮಕ್ಕಳು(Four Childrens) ವಿಶ್ಚಾಸ್, ಪೃಥ್ಚಿ, ಜೀವನ್ ಹಾಗೂ ಬೇಲೂರು ತಾಲ್ಲೂಕು ಮೂಲದ ಸಾತ್ವಿಕ್ ನೀರುಪಾಲಾಗಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಇದೀಗ ಆಲೂರು ತಾಲ್ಲೂಕು ಆಸ್ಪತ್ರೆ ಎದುರು ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದ್ದು, ಮಕ್ಕಳ‌ನ್ನು ಕಳೆದುಕೊಂಡು ಹೆತ್ತವರು ಕಣ್ಣೀರಿಡುತ್ತಿದ್ದಾರೆ.

ಕೆರೆ ಬಳಿ ಮಕ್ಕಳನ್ನು ಕಂಡು ವಾಪಸ್ ಕಳಿಸಿದ್ದ ಸ್ಥಳೀಯರು

ಇಂದು ಬೆಳಿಗ್ಗೆ ತಿಂಡಿ ತಿಂದು ಐವರು ಬಾಲಕರು ಕೆರೆಯ ಬಳಿ ಒಟ್ಟಿಗೇ ಬಂದಿದ್ದರು. ಕೆರೆ ಬಳಿ ಮಕ್ಕಳನ್ನು ಕಂಡ ಸ್ಥಳೀಯರು ವಾಪಸ್ ಕಳಿಸಿದ್ದರು. ಆದರೆ, ಒಮ್ಮೆ ವಾಪಸ್ ಹೋಗಿದ್ದ ಬಾಲಕರು, ಮತ್ತೆ ಬಂದು ಕೆರೆಗಿಳಿದಿದ್ದಾರೆ. ಇದೀಗ ಬಿರು ಬಿಸಿಲಿಗೆ ನೀರಿಲ್ಲದೆ ಬತ್ತಿಹೋಗಿದ್ದ ಕೆಸರು ನೀರಿನಲ್ಲಿ ಸಿಲುಕಿ ನಾಲ್ವರು ಬಾಲಕರು ಧಾರುಣ ಸಾವು ಕಂಡಿದ್ದಾರೆ. ಸತತ ಒಂದು ಗಂಟೆ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಅಗ್ನಿ ಶಾಮಕ ಸಿಬ್ಬಂದಿ ಹೊರ ತೆಗೆದಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನ ಆಲೂರು ತಾಲ್ಲೂಕು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ:ಶಾಲೆಗೆ ರಜೆ ಹಿನ್ನಲೆ ಕೆರೆಯಲ್ಲಿ ಈಜಲು ತೆರಳಿದ್ದ ನಾಲ್ವರು ಮಕ್ಕಳು ನೀರುಪಾಲು

ತಾಲ್ಲೂಕು ಆಸ್ಪತ್ರೆಗೆ ಮಾಜಿ ಶಾಸಕ ಎಚ್ಕೆ ಕುಮಾರಸ್ವಾಮಿ ಬೇಟಿ

ಇನ್ನು ಕೆರೆಯಲ್ಲಿ ಈಜಲು ತೆರಳಿದ್ದ ನಾಲ್ವರು ಮಕ್ಕಳು ನೀರುಪಾಲಾದ ಹಿನ್ನಲೆ ತಾಲ್ಲೂಕು ಆಸ್ಪತ್ರೆಗೆ ಮಾಜಿ ಶಾಸಕ ಎಚ್ಕೆ ಕುಮಾರಸ್ವಾಮಿ ಭೇಟಿ ನೀಡಿ, ಮೃತ ಕುಟುಂಬ ಸದಸ್ಯರ ಮಕ್ಕಳ ಪೋಷಕರಿಗೆ ಸಾಂತ್ವನ ಹೇಳಿದ ಮಾಜಿ ಶಾಸಕ, ‘
ಸರ್ಕಾರ ಕೂಡಲೇ ಮೃತ ಮಕ್ಕಳ‌ ಕುಟುಂಬಕ್ಕೆ ಪರಿಹಾರ ನೀಡಲಿ. ಮೃತ ಮಕ್ಕಳೆಲ್ಲ ಬಡ ಕುಟುಂಬದ ಮಕ್ಕಳಾಗಿದ್ದು ಸಿಎಂ ಪರಿಹಾರ ನಿದಿಯಿಂದ ಹೆಚ್ಚಿನ ಪರಿಹಾರ ನೀಡಿ ಎಂದು ಒತ್ತಾಯಿಸಿದರು. ಜೊತೆಗೆ ಡಿಸಿ ಅವರು ಸ್ಥಳ ಕ್ಕೆ ಬಂದು ಹೋಗಿದ್ದಾರೆ.
ಮಕ್ಕಳು ಆಕಸ್ಮಿಕವಾಗಿ ಕೆರೆಗೆ ಬಿದ್ದು ದುರಂತ ಸಂಭವಿಸಿದೆ. ಈ ಪ್ರಕರಣದಲ್ಲಿ ಯಾವುದೇ ಕಾನೂನು ತೊಡಕು ಇದ್ದರೂ ಅದನ್ನ ಪರಿಗಣಿಸಬಾರದು. ಕೂಡಲೇ ಸರ್ಕಾರ ಪರಿಹಾರ ಘೋಷಣೆ ಮಾಡಲಿ, ಶಿಕ್ಷಣ ಇಲಾಖೆ ಸಮಾಜ ಕಲ್ಯಾಣ ಇಲಾಖೆ ಈ ಬಗ್ಗೆ ಕ್ರಮ ವಹಿಸಲಿ ಎಂದು ಮನವಿ ಮಾಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us