AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಣ್ಣಗಳಿಂದಲೇ ತಯಾರುಗೊಂಡಿದೆ ಗಣೇಶನ ವಿಗ್ರಹಗಳು; ಕುನ್ನೂರ ಗಣಪನ ತಯಾರಿಕೆಯಲ್ಲಿ 50ಕ್ಕೂ ಅಧಿಕ ಕುಟುಂಬ ಭಾಗಿ

ಕಲಾವಿದರ ಕುಟುಂಬದವರು ಎಂಟು ನೂರರಿಂದ ಒಂದು ಸಾವಿರ ಗಣಪತಿ ಮೂರ್ತಿಗಳನ್ನು ತಯಾರು ಮಾಡುತ್ತಾರೆ. ಹೀಗೆ ತಯಾರು ಮಾಡಿದ ಮೂರ್ತಿಗಳನ್ನು ಕಲಾವಿದರ ಕುಟುಂಬದವರು ಹಾವೇರಿ, ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಒಯ್ದು ಮಾರಾಟ ಮಾಡುತ್ತಾರೆ.

ಬಣ್ಣಗಳಿಂದಲೇ ತಯಾರುಗೊಂಡಿದೆ ಗಣೇಶನ ವಿಗ್ರಹಗಳು; ಕುನ್ನೂರ ಗಣಪನ ತಯಾರಿಕೆಯಲ್ಲಿ 50ಕ್ಕೂ ಅಧಿಕ ಕುಟುಂಬ ಭಾಗಿ
ಕುನ್ನೂರ ಗಣಪ
TV9 Web
| Updated By: ಸಾಧು ಶ್ರೀನಾಥ್​|

Updated on:Sep 07, 2021 | 5:04 PM

Share

ಹಾವೇರಿ: ಕುನ್ನೂರು ಗಣಪತಿಯ ಹೆಸರು ಬಹುಶಃ ಕೇಳದವರೆ ಇಲ್ಲ. ಗಣೇಶ ಚತುರ್ಥಿ ಬಂತೆಂದರೆ ಈ ಗಣಪನ ಮೂರ್ತಿಗೆ ಎಲ್ಲಿಲ್ಲದ ಬೇಡಿಕೆ ಬರುತ್ತದೆ. ಬಣ್ಣಗಳ ಹೊಳಪಿನಿಂದ ಕಂಗೊಳಿಸುವ ವಿಶೇಷತೆ ಹೊಂದಿರುವ ಗಣಪತಿ ಮೂರ್ತಿ ಎಲ್ಲೆಲ್ಲೂ ಜನಪ್ರೀಯತೆ ಪಡೆದಿದೆ. ಅದರಲ್ಲೂ ಗ್ರಾಮದ ನಾರಾಯಣಪ್ಪ ಪತ್ತಾರರ ಮನೆಯಲ್ಲಿ ತಯಾರಾಗುವ ಈ ಮೂರ್ತಿಗಳಿಗೆ ಅತಿ ಹೆಚ್ಚಿನ ಬೇಡಿಕೆ ಇದೆ.

ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಕುನ್ನೂರು ಅಂದರೆ ಸಾಕು ಥಟ್ಟನೆ ಗಣಪತಿ ಮೂರ್ತಿಗಳು ನೆನಪಿಗೆ ಬರುತ್ತವೆ. ಕುನ್ನೂರಿನಲ್ಲಿ ತಯಾರಾಗುವ ಮೂರ್ತಿಗಳು ಹಾವೇರಿ, ಧಾರವಾಡ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಗೂ ಹೋಗುತ್ತವೆ. ಅನೇಕ‌ ಕಡೆಗಳಿಂದ ಬಂದು ಜನರು ಗಣಪತಿ ಮೂರ್ತಿಗಳನ್ನು ಗಣೇಶ ಚತುರ್ಥಿ ಹಬ್ಬಕ್ಕೆ ಮುನ್ನವೆ ಬುಕ್ ಮಾಡಿ ಹೋಗುತ್ತಾರೆ. ಅದರಲ್ಲೂ ಗ್ರಾಮದ ನಾರಾಯಣಪ್ಪ ಪತ್ತಾರರ ಮನೆಯಲ್ಲಿ ತಯಾರಾಗುವ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆ ಇದೆ.

ಸುಮಾರು ವರ್ಷಗಳಿಂದ ನಾರಾಯಣಪ್ಪ ಪತ್ತಾರರ‌ ಮನೆಯವರು ಗಣಪತಿ ಮೂರ್ತಿಗಳನ್ನು ತಯಾರು ಮಾಡುತ್ತಿದ್ದಾರೆ. ಈಗ ಗ್ರಾಮದಲ್ಲಿನ ಸುಮಾರು ಐವತ್ತಕ್ಕೂ ಅಧಿಕ ಕುಟುಂಬಗಳು ಗಣಪತಿ ಮೂರ್ತಿ ತಯಾರು ಮಾಡುತ್ತಿವೆ. ಆದರೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಗಣಪತಿ ಮೂರ್ತಿ ತಯಾರು ಮಾಡುವ ಕಲಾವಿದರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ವರ್ಷಪೂರ್ತಿ ಕಷ್ಟಪಟ್ಟು ತಯಾರಿಸಿದ ಮೂರ್ತಿಗಳಿಗೆ ಕೊರೊನಾ ಕಾರಣಕ್ಕೆ ಉತ್ತಮ ದರ ಸಿಗದೆ ಮೂರ್ತಿ ತಯಾರಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಗಣಪತಿ ಮೂರ್ತಿ ತಯಾರಕರಾದ ಗೀತಾ ಚಿತ್ರಗಾರ ತಿಳಿಸಿದ್ದಾರೆ.

ಕಲಾವಿದರ ಕುಟುಂಬದವರು ಎಂಟು ನೂರರಿಂದ ಒಂದು ಸಾವಿರ ಗಣಪತಿ ಮೂರ್ತಿಗಳನ್ನು ತಯಾರು ಮಾಡುತ್ತಾರೆ. ಹೀಗೆ ತಯಾರು ಮಾಡಿದ ಮೂರ್ತಿಗಳನ್ನು ಕಲಾವಿದರ ಕುಟುಂಬದವರು ಹಾವೇರಿ, ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಒಯ್ದು ಮಾರಾಟ ಮಾಡುತ್ತಾರೆ. ಕೊರೊನಾಗಿಂತ ಮುಂಚೆ ಗ್ರಾಮದ ಕಲಾವಿದರು ತಯಾರಿಸಿದ ಮೂರ್ತಿಗಳಿಗೆ ಉತ್ತಮ ದರ ಸಿಗುತ್ತಿತ್ತು. ಸಾರ್ವಜನಿಕವಾಗಿ ಪ್ರತಿಷ್ಠಾಪನೆ ಮಾಡುವ ಆರು, ಏಳು ಅಡಿ ಎತ್ತರದ ಮೂರ್ತಿಗಳನ್ನು ತಯಾರು ಮಾಡುತ್ತಿದ್ದರು. ಆದರೆ ಕೊರೊನಾ ಶುರುವಾದ್ಮೇಲೆ ಎತ್ತರದ ದೊಡ್ಡ ದೊಡ್ಡ ಗಣಪತಿ ಮೂರ್ತಿಗಳ ತಯಾರಿಕೆ ಇಲ್ಲದಾಗಿದೆ. ಹೀಗಾಗಿ ಕಲಾವಿದರಿಗೆ ಸಂಕಷ್ಟ ಎದುರಾಗಿದೆ. ಇದರ ಜೊತೆಗೆ ಮನೆಗಳಲ್ಲಿ ಪ್ರತಿಷ್ಠಾಪಿಸೋ ಮೂರ್ತಿಗಳಿಗೂ ಉತ್ತಮ ದರ ಇಲ್ಲದಾಗಿದೆ.

ganesha idol

ಬಣ್ಣಗಳಿಂದಲೇ ತಯಾರುಗೊಂಡಿದೆ ಗಣೇಶನ ವಿಗ್ರಹಗಳು

ಆದರೂ ಕುನ್ನೂರು ಗಣಪತಿಗೆ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ. ಈಗ ಇನ್ನೂರರಿಂದ ಐದು, ಹತ್ತು, ಇಪ್ಪತ್ತು ಸಾವಿರ ರೂಪಾಯಿಗೆ ಗಣಪತಿ ಮೂರ್ತಿಗಳು ಮಾರಾಟ ಆಗುತ್ತಿವೆ. ಆದರೆ ಕೊರೊನಾಗಿಂತ ಮೊದಲು ಐನೂರರಿಂದ ಐವತ್ತು ಸಾವಿರ, ಒಂದು ಲಕ್ಷ ರೂಪಾಯಿವರೆಗೂ ಗಣಪತಿ ಮಾರಾಟ ಆಗುತ್ತಿದ್ದವು. ದರದಲ್ಲಿ ಸ್ವಲ್ಪ ಇಳಿಕೆ ಕಂಡಿರುವುದು, ಎತ್ತರದ ಗಣಪತಿ ಮೂರ್ತಿಗಳ ತಯಾರಿಕೆ ಇಲ್ಲದಿರುವುದನ್ನು ಹೊರತುಪಡಿಸಿದರೆ ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡುವ ಗಣಪತಿಗಳಿಗೆ ಅತಿಹೆಚ್ಚು ಬೇಡಿಕೆ ಬಂದಿದೆ. ಅದರಲ್ಲೂ ವಿಶೇಷತೆ ಹೊಂದಿರುವ ಬಣ್ಣದಿಂದಲ್ಲೇ ಕುನ್ನೂರು ಗಣಪತಿ‌ ಹೆಸರುವಾಸಿ ಆಗಿದೆ ಎಂದು ಪೇಂಟಿಂಗ್ ಕೆಲಸಗಾರ ರೆಹಮಾನಸಾಬ ತಿಳಿಸಿದ್ದಾರೆ.

ಗಣಪತಿ ತಯಾರಿಕೆಯಿಂದಲೆ ಕುನ್ನೂರು ಗ್ರಾಮದ ಹೆಸರು ಪ್ರಸಿದ್ಧವಾಗಿದೆ. ಆರಂಭದಲ್ಲಿ ಗ್ರಾಮದಲ್ಲಿನ ಕೆಲವೇ ಕೆಲವು ಕುಟುಂಬಗಳು ಗಣಪತಿ ಮೂರ್ತಿ ತಯಾರಿಕೆ‌ ಮಾಡ್ತಿದ್ದವು. ಆದರೆ ಈಗ ಗ್ರಾಮದ ಐವತ್ತಕ್ಕೂ ಅಧಿಕ‌ ಕುಟುಂಬಗಳು ಗಣಪತಿ ಮೂರ್ತಿ ತಯಾರು ಮಾಡುತ್ತಿವೆ. ಒಟ್ಟಿನಲ್ಲಿ ಗ್ರಾಮದಲ್ಲಿ ತಯಾರಾಗುವ ಮೂರ್ತಿಗಳು ಹೆಸರು ಮಾಡಿರುವುದರಿಂದ ಗ್ರಾಮಕ್ಕೂ ದೊಡ್ಡ ಹೆಸರು ಬಂದಿದೆ. ಕುನ್ನೂರು ಗಣಪತಿ ಅಂದರೆ ಎಲ್ಲರೂ ಕುನ್ನೂರಿನತ್ತ ಕಣ್ಣು ಹಾಯಿಸುವಂತಾಗಿದೆ.

ವರದಿ: ಪ್ರಭುಗೌಡ.ಎನ್.ಪಾಟೀಲ

ಇದನ್ನೂ ಓದಿ: 30 ವರ್ಷಗಳಿಂದ ಗಣೇಶ ಮೂರ್ತಿ ತಯಾರಿಕೆ; ವಸ್ತ್ರ ಕುಟುಂಬದಿಂದ ಸಿದ್ಧವಾಗಿದೆ ಪರಿಸರ ಸ್ನೇಹಿ ಗಣಪ

ಪರಿಸರ ಸ್ನೇಹಿ ಗಣೇಶ ವಿಗ್ರಹಗಳು; ಧಾರವಾಡದ ಕಲಾವಿದ ಕುಟುಂಬದ ಅದ್ಭುತ ಕಾರ್ಯ

Published On - 7:39 am, Tue, 7 September 21

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!