AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾವೇರಿ: ಕಿಟ್ ಕೊಡುವುದಾಗಿ ಕರೆದು ಕೊನೆಗೆ ಕಿಟ್​ ಇಲ್ಲವೆಂದ ಅಧಿಕಾರಿಗಳು, ಕಾರ್ಮಿಕರ ಆಕ್ರೋಶ

ಅವರೆಲ್ಲ ದುಡಿಯುವ ಕಾರ್ಮಿಕರು. ಅವರ ಮಕ್ಕಳಿಗೆ ಕಾರ್ಮಿಕ ಇಲಾಖೆಯಿಂದ ಕಿಟ್ ನೀಡುವುದಾಗಿ ಘೋಷಣೆ ಮಾಡಿದ್ದರು. ಅದರೆ ಹೋಗಿ ಕೇಳಿದರೆ ಕಿಟ್ ಖಾಲಿ ಆಗಿವೆ ನಾಳೆ ಬನ್ನಿ ಅಂತಿದ್ದಾರೆ. ಇದರಿಂದ ಕಾರ್ಮಿಕ ಇಲಾಖೆಯ ಸಿಬ್ಬಂದಿಯನ್ನ ಫಲಾನುಭವಿಗಳು ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.

ಹಾವೇರಿ:  ಕಿಟ್ ಕೊಡುವುದಾಗಿ ಕರೆದು ಕೊನೆಗೆ ಕಿಟ್​ ಇಲ್ಲವೆಂದ ಅಧಿಕಾರಿಗಳು, ಕಾರ್ಮಿಕರ ಆಕ್ರೋಶ
ಕಾರ್ಮಿಕ ಕಿಟ್​ಗಾಗಿ ಕಾದು ಸುಸ್ತಾದ ಕಾರ್ಮಿಕರು
ಕಿರಣ್ ಹನುಮಂತ್​ ಮಾದಾರ್
|

Updated on: Mar 30, 2023 | 9:14 AM

Share

ಹಾವೇರಿ: ಶಾಲಾ ಕಿಟ್ ಪಡೆಯಲು ಕ್ಯೂ‌ ನಿಂತಿರುವ ಜನರು. ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ ಫಲಾನುಭವಿಗಳು. ಎಪಿಎಂಸಿ ಆವರಣದಲ್ಲಿ ಸೇರಿರುವ ಸಾವಿರಾರು ಜನರು. ಇದು ಹಾವೇರಿ ಎಪಿಎಂಸಿ ಆವರಣದಲ್ಲಿ ಕಂಡುಬಂದ ದೃಶ್ಯಗಳಿವು. ಹೌದು ಕಾರ್ಮಿಕ ಇಲಾಖೆಯ ಕಾರ್ಮಿಕ ಕಾರ್ಡ್ ಹೊಂದಿದ್ದ ಕಾರ್ಮಿಕರ ಮಕ್ಕಳಿಗೆ ಶಾಲೆಯ ಕಿಟ್ ನೀಡುವುದಾಗಿ ಹೇಳಿದ್ದರು. ಹೀಗಾಗಿ ಹಾವೇರಿ, ಸವಣೂರು ಮತ್ತು ಶಿಗ್ಗಾಂವಿ ತಾಲ್ಲೂಕಿನ ಫಲಾನುಭವಿಗಳು ಹಾವೇರಿ ಎಪಿಎಂಸಿ ಆವರಣಕ್ಕೆ ಅಗಮಿಸಿದ್ದರು. ನೂರಾರು ಜನರು ಬೆಳಗ್ಗಿನಿಂದಲೇ ಕ್ಯೂ ಹಚ್ಚಿ ನಿಂತಿದ್ದರು. ಅದರೆ ಕೇವಲ 150 ಕಿಟ್​ಗಳು ಇವೆ. ನಾಳೆ ಬನ್ನಿ ಎಂದು ಹೇಳಿ ಕಳಿಸುತ್ತಿದ್ದರು. ಇದರಿಂದ ಆಕ್ರೋಶಗೊಂಡ ಫಲಾನುಭವಿಗಳು ಇಲಾಖೆಯ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ನಾವು ಯಾರು ಕಿಟ್ ಕೇಳಿರಲಿಲ್ಲ. ಶಾಲೆಯ ಕಿಟ್ ಕೊಡುವುದಾಗಿ ಕರೆಸಿ ಈಗ ಕಿಟ್​ಗಳನ್ನ ಬೇರೆ ಕಡೆ ಕಳಿಸಿ ಮಾರಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ಎರಡುವರೆ ಲಕ್ಷಕ್ಕೂ ಅಧಿಕ ಕಾರ್ಮಿಕರಿದ್ದಾರೆ. ಅದರಲ್ಲಿ 60 ಸಾವಿರಕ್ಕೂ ಅಧಿಕ ಕಾರ್ಮಿಕರ ಮಕ್ಕಳು, 9, 10 ನೇ ತರಗತಿ ಹಾಗೂ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸರ್ಕಾರದಿಂದ ಪ್ರತಿಯೊಂದು ತಾಲೂಕಿಗೆ 250 ಕಿಟ್​ಗಳು ಬಂದಿವೆ.‌ ನಿನ್ನೆ‌,‌ ಮೊನ್ನೆ ಎರಡು ತಾಲ್ಲೂಕಿನ ಫಲಾನುಭವಿಗಳಿಗೆ ಕಿಟ್ ವಿತರಣೆ ಮಾಡಲಾಗಿದೆ. ಕಿಟ್ ತೆಗೆದುಕೊಂಡು ಹೋದ ಜನರು ಕಾರ್ಮಿಕರಿಗೆ ಹೇಳಿದ್ದು, ಇವತ್ತು ಸಾವಿರಾರು ಕಾರ್ಮಿಕ ಫಲಾನುಭವಿಗಳು ಬಂದಿದ್ದಾರೆ. ಸರ್ಕಾರದ ಗಮನಕ್ಕೆ ತಂದು, ಎಲ್ಲರಿಗೂ ತಲುಪಿಸುವ ವ್ಯವಸ್ಥೆ ಮಾಡುತ್ತೇವೆ ಎನ್ನುತ್ತಾರೆ ಕಾರ್ಮಿಕ ಇಲಾಖೆಯ ಉಪನಿರ್ದೇಶಕರು.

ಒಟ್ಟಿನಲ್ಲಿ ಹಾವೇರಿ ಎಪಿಎಂಸಿ ಆವರಣದಲ್ಲಿ ಕಾರ್ಮಿಕ ಇಲಾಖೆಯಿಂದ ನೀಡುವ ಶಾಲಾ ಕಿಟ್​ಗಳಿಗೆ ಸಾವಿರಾರು ಫಲಾನುಭವಿಗಳು ಮುಗಿಬಿದ್ದರು. ಅದರೆ ಕಿಟ್​ಗಳು ಕಡಿಮೆ ಇರುವ ಹಿನ್ನಲೆಯಲ್ಲಿ ಕಾರ್ಮಿಕ ಇಲಾಖೆಯ ಸಿಬ್ಬಂದಿ ಕಂಗಾಲಾಗಿದ್ದರು. ಚುನಾವಣೆಯ ನೀತಿ ಸಂಹಿತೆ ಘೋಷಣೆ ಆಗುತ್ತಿದ್ದಂತೆ ಫಲಾನುಭವಿಗಳು ಕಾದು ಕಾದು ಸುಸ್ತಾಗಿ ಮನೆಗೆ ಹೋಗಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಧರ್ಮಸ್ಥಳದಲ್ಲಿ ಗಲಾಟೆ, ಬಿಗ್​ಬಾಸ್ ರಜತ್ ವಿವರಿಸಿದ್ದು ಹೀಗೆ
ಧರ್ಮಸ್ಥಳದಲ್ಲಿ ಗಲಾಟೆ, ಬಿಗ್​ಬಾಸ್ ರಜತ್ ವಿವರಿಸಿದ್ದು ಹೀಗೆ
ಮನೆಯಲ್ಲಿಯೇ ನೈಸರ್ಗಿಕವಾಗಿ ಎದೆ ಹಾಲು ಹೆಚ್ಚಿಸಲು ಏನು ಮಾಡಬೇಕು?
ಮನೆಯಲ್ಲಿಯೇ ನೈಸರ್ಗಿಕವಾಗಿ ಎದೆ ಹಾಲು ಹೆಚ್ಚಿಸಲು ಏನು ಮಾಡಬೇಕು?
ಮಡೆನೂರು ಮನು ಜೊತೆ ರಾಜಿ ಮಾಡಿಕೊಂಡ ಸಂತ್ರಸ್ತೆ; ಅತ್ಯಾಚಾರ ಕೇಸ್ ಅಂತ್ಯ
ಮಡೆನೂರು ಮನು ಜೊತೆ ರಾಜಿ ಮಾಡಿಕೊಂಡ ಸಂತ್ರಸ್ತೆ; ಅತ್ಯಾಚಾರ ಕೇಸ್ ಅಂತ್ಯ
ರಾಷ್ಟ್ರೀಯ ಅಧ್ಯಕ್ಷರ ನಂತರ ಬಿಜೆಪಿ ರಾಜ್ಯಾಧ್ಯಕ್ಷರ ಘೋಷಣೆಯಾಗಬಹುದು: ಅಶೋಕ
ರಾಷ್ಟ್ರೀಯ ಅಧ್ಯಕ್ಷರ ನಂತರ ಬಿಜೆಪಿ ರಾಜ್ಯಾಧ್ಯಕ್ಷರ ಘೋಷಣೆಯಾಗಬಹುದು: ಅಶೋಕ
ಮಳೆ ಸುರಿಯುವುದು ನಿಂತರೂ ನದಿಯಲ್ಲಿ ನೀರಿನ ಪ್ರಮಾಣ ಏರಿಕೆ
ಮಳೆ ಸುರಿಯುವುದು ನಿಂತರೂ ನದಿಯಲ್ಲಿ ನೀರಿನ ಪ್ರಮಾಣ ಏರಿಕೆ
ಹೇಗೆ ಹೆಣ ಎಸೆದು ಹೋದ ನೋಡಿ ಆಂಬ್ಯುಲೆನ್ಸ್​ ಚಾಲಕ
ಹೇಗೆ ಹೆಣ ಎಸೆದು ಹೋದ ನೋಡಿ ಆಂಬ್ಯುಲೆನ್ಸ್​ ಚಾಲಕ
ಮಗುವಿನ ಮೇಲೆ ನಾಯಿ ದಾಳಿ, ಹೀರೋನಂತೆ ಬಂದು ಕಾಪಾಡಿದ ತಂದೆ
ಮಗುವಿನ ಮೇಲೆ ನಾಯಿ ದಾಳಿ, ಹೀರೋನಂತೆ ಬಂದು ಕಾಪಾಡಿದ ತಂದೆ
ಜಿಪಂ ಕಚೇರಿ ಆವರಣದಲ್ಲಿ ನೇಣು ಬಿಗಿದುಕೊಂಡು ಗುತ್ತಿಗೆ ನೌಕರ ಸಾವಿಗೆ ಶರಣು
ಜಿಪಂ ಕಚೇರಿ ಆವರಣದಲ್ಲಿ ನೇಣು ಬಿಗಿದುಕೊಂಡು ಗುತ್ತಿಗೆ ನೌಕರ ಸಾವಿಗೆ ಶರಣು
ಕಿತ್ತೂರು ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಈ ಸಲ ಫ್ಲಾವರ್​ ಶೋ ಥೀಮ್
ಕಿತ್ತೂರು ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಈ ಸಲ ಫ್ಲಾವರ್​ ಶೋ ಥೀಮ್
100 ಎಸೆತಗಳ ಪಂದ್ಯ: 99ನೇ ಎಸೆತದಲ್ಲಿ 1 ವಿಕೆಟ್​ನ ರೋಚಕ ಗೆಲುವು..!
100 ಎಸೆತಗಳ ಪಂದ್ಯ: 99ನೇ ಎಸೆತದಲ್ಲಿ 1 ವಿಕೆಟ್​ನ ರೋಚಕ ಗೆಲುವು..!