AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೋರಿ ಅಭಿಮಾನಿಗಳ ನೆಚ್ಚಿನ ರಾಜಾ ಇನ್ನು ನೆನಪು ಮಾತ್ರ; ಬಾರದ ಲೋಕಕ್ಕೆ ತೆರಳಿದ ಹಾವೇರಿ ಕಾ ರಾಜಾ, ಪೋಟೋಗಳು ಇಲ್ಲಿವೆ

ಆ ಹೋರಿ ಅಖಾಡಕ್ಕೆ ಇಳಿದರೆ ಮೈದಾನದಲ್ಲಿ ಅಭಿಮಾನಿಗಳ ಮಹಾಪುರ. 15 ವರ್ಷದಲ್ಲಿ ಆ ಹೋರಿಯ ಮೈ ಮುಟ್ಟವ ಸಾಹಸಕ್ಕೆ ಯಾರು ಮುಂದಾಗಿರಲಿಲ್ಲ. ಹಾವೇರಿ ಕಾ ರಾಜಾ ಅಂದರೆ ಅದೊಂದು ಹುಲಿಯಂತೆ ಗತ್ತು ಗಾಂಭೀರ್ಯವಿತ್ತು. ಈಗ ಆ ಹೋರಿ ಅಪಾರ ಅಭಿಮಾನಿಗಳನ್ನ ಬಿಟ್ಟು ಬಾರದ ಲೋಕಕ್ಕೆ ತೆರಳಿದೆ.

ಕಿರಣ್ ಹನುಮಂತ್​ ಮಾದಾರ್
|

Updated on: Mar 25, 2023 | 2:59 PM

Share
ಪುಷ್ಪಲಂಕಾರದಿಂದ ಮೃತ ಹೋರಿ ಮೆರವಣಿಗೆ. ಮೃತ ಹೋರಿ ಕಂಡು ಮಾಲೆ ಹಾಕುತ್ತಿರುವ ಜನರು.‌ ಹಾವೇರಿಯ ಯಾಲಕ್ಕಿ ಓಣಿಯ ಹಾವೇರಿ ಕಾ ರಾಜಾ ಎಂಬ ಹೋರಿಯ ಅಂತಿಮ ಮೇರವಣಿಗೆಯಲ್ಲಿ ಕಂಡು ಬಂದ ದೃಶ್ಯಗಳಿವು.

ಪುಷ್ಪಲಂಕಾರದಿಂದ ಮೃತ ಹೋರಿ ಮೆರವಣಿಗೆ. ಮೃತ ಹೋರಿ ಕಂಡು ಮಾಲೆ ಹಾಕುತ್ತಿರುವ ಜನರು.‌ ಹಾವೇರಿಯ ಯಾಲಕ್ಕಿ ಓಣಿಯ ಹಾವೇರಿ ಕಾ ರಾಜಾ ಎಂಬ ಹೋರಿಯ ಅಂತಿಮ ಮೇರವಣಿಗೆಯಲ್ಲಿ ಕಂಡು ಬಂದ ದೃಶ್ಯಗಳಿವು.

1 / 7
ಹಾವೇರಿ ಕಾ ರಾಜಾ ಅಖಾಡಕ್ಕಿಳಿದರೆ ಸ್ಪರ್ಧೆಯಲ್ಲಿ ಬಹುಮಾನ ಇಲ್ಲದೆ ಬಂದ ಉದಾಹರಣೆಯೇ ಇಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಹೋರಿ ಬೇದರಿಸುವ ಸ್ಪರ್ಧೆಗೆ ಅಭಿಮಾನಿಗಳೆ ಹೆಚ್ಚು. ಇನ್ನು ಉತ್ತರ ಕರ್ನಾಟದಲ್ಲಿ ಹೋರಿ ಮಾಲೀಕರು ಅಂದರೆ ಅದು ಎಲ್ಲಿಲ್ಲದ ಗೌರವ. ಅದರಲ್ಲೂ ಹಾವೇರಿ ಖಾ ರಾಜಾ ಜಿಲ್ಲೆಯ ಹೋರಿ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ.

ಹಾವೇರಿ ಕಾ ರಾಜಾ ಅಖಾಡಕ್ಕಿಳಿದರೆ ಸ್ಪರ್ಧೆಯಲ್ಲಿ ಬಹುಮಾನ ಇಲ್ಲದೆ ಬಂದ ಉದಾಹರಣೆಯೇ ಇಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಹೋರಿ ಬೇದರಿಸುವ ಸ್ಪರ್ಧೆಗೆ ಅಭಿಮಾನಿಗಳೆ ಹೆಚ್ಚು. ಇನ್ನು ಉತ್ತರ ಕರ್ನಾಟದಲ್ಲಿ ಹೋರಿ ಮಾಲೀಕರು ಅಂದರೆ ಅದು ಎಲ್ಲಿಲ್ಲದ ಗೌರವ. ಅದರಲ್ಲೂ ಹಾವೇರಿ ಖಾ ರಾಜಾ ಜಿಲ್ಲೆಯ ಹೋರಿ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ.

2 / 7
ಇನ್ನು ಹೋರಿ ಮಾಲೀಕ ರಾಜು ಕೊಡಳ್ಳಿ ಅವರು ಹಾವೇರಿ ಖಾ ರಾಜಾ ಎಂಬ ಹೋರಿಯನ್ನ ಮನೆ ಮಗನಂತೆ ಸಾಕಿದ್ದರು. ಈ ಹೋರಿ ರಾಜ್ಯದ ನಾನಾ ಭಾಗದಲ್ಲಿ ಬಹುಮಾನಗಳನ್ನು ಜಯಸಿತ್ತು. ಹುಲಿಯಂತೆ ಇದ್ದ ಹೋರಿ ಅಪಾರ ಅಭಿಮಾನಿಗಳನ್ನ ಬಿಟ್ಟು. ಬಾರದ ಲೋಕಕ್ಕೆ ಪಯಣ ಬೆಳಸಿದೆ.

ಇನ್ನು ಹೋರಿ ಮಾಲೀಕ ರಾಜು ಕೊಡಳ್ಳಿ ಅವರು ಹಾವೇರಿ ಖಾ ರಾಜಾ ಎಂಬ ಹೋರಿಯನ್ನ ಮನೆ ಮಗನಂತೆ ಸಾಕಿದ್ದರು. ಈ ಹೋರಿ ರಾಜ್ಯದ ನಾನಾ ಭಾಗದಲ್ಲಿ ಬಹುಮಾನಗಳನ್ನು ಜಯಸಿತ್ತು. ಹುಲಿಯಂತೆ ಇದ್ದ ಹೋರಿ ಅಪಾರ ಅಭಿಮಾನಿಗಳನ್ನ ಬಿಟ್ಟು. ಬಾರದ ಲೋಕಕ್ಕೆ ಪಯಣ ಬೆಳಸಿದೆ.

3 / 7
ಇನ್ನು ಕೊಬ್ಬರಿ ಹೋರಿಯನ್ನ ರಾಜ್ಯದ ನಾನಾ ಭಾಗದಲ್ಲಿ ನಡೆಯುವ ಹೋರಿ ಹಬ್ಬದಲ್ಲಿ ಹಾವೇರಿ ಖಾ ರಾಜಾನ ಹವಾ ಜೋರಾಗಿತ್ತು. 15 ವರ್ಷದಿಂದ ಹಬ್ಬ ಮಾಡುತ್ತ ಬಂದಿರುವ ಹೋರಿ ಇದು.

ಇನ್ನು ಕೊಬ್ಬರಿ ಹೋರಿಯನ್ನ ರಾಜ್ಯದ ನಾನಾ ಭಾಗದಲ್ಲಿ ನಡೆಯುವ ಹೋರಿ ಹಬ್ಬದಲ್ಲಿ ಹಾವೇರಿ ಖಾ ರಾಜಾನ ಹವಾ ಜೋರಾಗಿತ್ತು. 15 ವರ್ಷದಿಂದ ಹಬ್ಬ ಮಾಡುತ್ತ ಬಂದಿರುವ ಹೋರಿ ಇದು.

4 / 7
ಈ ಹೋರಿಯ ಅಂತಿಮ ದರ್ಶನವನ್ನ ಹಾವೇರಿ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಹಾವೇರಿ ಕಾ ರಾಜಾ ಲಕ್ಷಾಂತರ ಅಭಿಮಾನಿಗಳ ತೊರೆದ ಹೋರಿಯ ಕಂಡು ಅಭಿಮಾನಿಗಳು ರಸ್ತೆ ಪಕ್ಕ ನಿಂತು ದರ್ಶನ ಪಡೆದರು.

ಈ ಹೋರಿಯ ಅಂತಿಮ ದರ್ಶನವನ್ನ ಹಾವೇರಿ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಹಾವೇರಿ ಕಾ ರಾಜಾ ಲಕ್ಷಾಂತರ ಅಭಿಮಾನಿಗಳ ತೊರೆದ ಹೋರಿಯ ಕಂಡು ಅಭಿಮಾನಿಗಳು ರಸ್ತೆ ಪಕ್ಕ ನಿಂತು ದರ್ಶನ ಪಡೆದರು.

5 / 7
ಇನ್ನು ಈ ಹೋರಿಯ ಸುಮಾರು ಕಡೆಯಲ್ಲಿ ಹಬ್ಬ ಮಾಡಿ ಬಹುಮಾಗಳನ್ನ ಬಾಚಿದ್ದು, ಎಲ್ಲಾ ಹೋರಿ ಹಬ್ಬಗಳಲ್ಲಿ ತನ್ನ ಚಾಫು ಮೂಡಿಸಿದ ಹೋರಿ ಸಾವನ್ನಪ್ಪಿದ್ದು, ಹೋರಿ ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ.

ಇನ್ನು ಈ ಹೋರಿಯ ಸುಮಾರು ಕಡೆಯಲ್ಲಿ ಹಬ್ಬ ಮಾಡಿ ಬಹುಮಾಗಳನ್ನ ಬಾಚಿದ್ದು, ಎಲ್ಲಾ ಹೋರಿ ಹಬ್ಬಗಳಲ್ಲಿ ತನ್ನ ಚಾಫು ಮೂಡಿಸಿದ ಹೋರಿ ಸಾವನ್ನಪ್ಪಿದ್ದು, ಹೋರಿ ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ.

6 / 7
ಒಟ್ಟಿನಲ್ಲಿ ಅಖಾಡಕ್ಕೆ ದುಮುಕಿದ ಹಾವೇರಿ ಕಾ ರಾಜಾನ ಕಂಡು ಲಕ್ಷಾಂತರ ಅಭಿಮಾನಿಗಳು ಕೇಕೆ ಸೀಳೆ ಹಾಕುತ್ತಿದ್ದರು. ಹೋರಿ ಬೇದರಿಸುವ ಮೈದಾನಕ್ಕೆ ಹಾವೇರಿ ಕಾ ರಾಜಾ ಇಳಿದ್ರೆ, ಅಖಾಡದಲ್ಲಿ ಇರುವ ಬಹುಮಾನ ಬಾಚೋದು ಖಚಿತವಾಗಿತ್ತು. ಆದರೆ ಈಗ ಹಾವೇರಿ ಖಾ ರಾಜಾ ಮರಳಿ ಬಾರದ ಲೋಕಕ್ಕೆ ಸಾಗಿದ್ದು ಕಂಡು ಅಪಾರ ಅಭಿಮಾನಿಗಳು ಹೋರಿಗೆ ಮಾಲೆಹಾಕಿ ಕಂಬನಿ ಮೀಡಿದರು.

ಒಟ್ಟಿನಲ್ಲಿ ಅಖಾಡಕ್ಕೆ ದುಮುಕಿದ ಹಾವೇರಿ ಕಾ ರಾಜಾನ ಕಂಡು ಲಕ್ಷಾಂತರ ಅಭಿಮಾನಿಗಳು ಕೇಕೆ ಸೀಳೆ ಹಾಕುತ್ತಿದ್ದರು. ಹೋರಿ ಬೇದರಿಸುವ ಮೈದಾನಕ್ಕೆ ಹಾವೇರಿ ಕಾ ರಾಜಾ ಇಳಿದ್ರೆ, ಅಖಾಡದಲ್ಲಿ ಇರುವ ಬಹುಮಾನ ಬಾಚೋದು ಖಚಿತವಾಗಿತ್ತು. ಆದರೆ ಈಗ ಹಾವೇರಿ ಖಾ ರಾಜಾ ಮರಳಿ ಬಾರದ ಲೋಕಕ್ಕೆ ಸಾಗಿದ್ದು ಕಂಡು ಅಪಾರ ಅಭಿಮಾನಿಗಳು ಹೋರಿಗೆ ಮಾಲೆಹಾಕಿ ಕಂಬನಿ ಮೀಡಿದರು.

7 / 7
ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ