Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli: ಕಿಂಗ್ ಕೊಹ್ಲಿ 18ನೇ ನಂಬರ್ ಜೆರ್ಸಿ ತೊಡುವುದ್ಯಾಕೆ? ಇದರ ಹಿಂದಿದೆ ನೋವಿನ ಕಥೆ

Virat Kohli: 2008 ರಲ್ಲಿ ನಡೆದ ಅಂಡರ್-19 ವಿಶ್ವಕಪ್​ನಲ್ಲೂ ವಿರಾಟ್ ಕೊಹ್ಲಿ 18 ನೇ ನಂಬರ್ ಜರ್ಸಿ ತೊಟ್ಟು ಕಣಕ್ಕಿಳಿದಿದ್ದರು. ಅಲ್ಲದೆ ತಮ್ಮ ನಾಯಕತ್ವದಲ್ಲಿ ತಂಡವನ್ನು ಚಾಂಪಿಯನ್ ಕೂಡ ಮಾಡಿದ್ದರು.

ಪೃಥ್ವಿಶಂಕರ
|

Updated on:Mar 25, 2023 | 3:25 PM

ಜೆರ್ಸಿ ನಂಬರ್ 18 ಎಂದ ಕೂಡಲೇ ಕ್ರಿಕೆಟ್ ಜಗತ್ತಿನಲ್ಲಿ ನೆನಪಾಗುವ ಹೆಸರೆಂದರೆ ವಿರಾಟ್ ಕೊಹ್ಲಿ. ಟೀಂ ಇಂಡಿಯಾ ಹಾಗೂ ಐಪಿಎಲ್ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವಾಗ ವಿರಾಟ್ ಕೊಹ್ಲಿ ಯಾವಾಗಲೂ ನಂಬರ್ 18 ಜರ್ಸಿಯನ್ನು ಧರಿಸುತ್ತಾರೆ. ಇದಕ್ಕೆ ಕಾರಣವೂ ಇದ್ದು, ಕಿಂಗ್ ಕೊಹ್ಲಿ ಮೈದಾನಕ್ಕಿಳಿದಾಗಲೆಲ್ಲ 18ನೇ ನಂಬರ್ ಜೆರ್ಸಿ ಧರಿಸುವುದು ಏಕೆ ಎಂಬುದರ ಹಿಂದಿನ ಮರ್ಮ ಈಗ ಬಹಿರಂಗಗೊಂಡಿದೆ.

ಜೆರ್ಸಿ ನಂಬರ್ 18 ಎಂದ ಕೂಡಲೇ ಕ್ರಿಕೆಟ್ ಜಗತ್ತಿನಲ್ಲಿ ನೆನಪಾಗುವ ಹೆಸರೆಂದರೆ ವಿರಾಟ್ ಕೊಹ್ಲಿ. ಟೀಂ ಇಂಡಿಯಾ ಹಾಗೂ ಐಪಿಎಲ್ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವಾಗ ವಿರಾಟ್ ಕೊಹ್ಲಿ ಯಾವಾಗಲೂ ನಂಬರ್ 18 ಜರ್ಸಿಯನ್ನು ಧರಿಸುತ್ತಾರೆ. ಇದಕ್ಕೆ ಕಾರಣವೂ ಇದ್ದು, ಕಿಂಗ್ ಕೊಹ್ಲಿ ಮೈದಾನಕ್ಕಿಳಿದಾಗಲೆಲ್ಲ 18ನೇ ನಂಬರ್ ಜೆರ್ಸಿ ಧರಿಸುವುದು ಏಕೆ ಎಂಬುದರ ಹಿಂದಿನ ಮರ್ಮ ಈಗ ಬಹಿರಂಗಗೊಂಡಿದೆ.

1 / 6
ವಾಸ್ತವವಾಗಿ ಕೊಹ್ಲಿ ಇದೇ ಸಂಖ್ಯೆಯ ಜೆರ್ಸಿ ತೊಡುವುದರ ಹಿಂದೆ ಒಂದು ಭಾವನಾತ್ಮಕ ಕಾರಣವಿದೆ. 2008 ರಲ್ಲಿ ನಡೆದ ಅಂಡರ್-19 ವಿಶ್ವಕಪ್​ನಲ್ಲೂ ವಿರಾಟ್ ಕೊಹ್ಲಿ 18 ನೇ ನಂಬರ್ ಜರ್ಸಿ ತೊಟ್ಟು ಕಣಕ್ಕಿಳಿದಿದ್ದರು. ಅಲ್ಲದೆ ತಮ್ಮ ನಾಯಕತ್ವದಲ್ಲಿ ತಂಡವನ್ನು ಚಾಂಪಿಯನ್ ಕೂಡ ಮಾಡಿದ್ದರು.

ವಾಸ್ತವವಾಗಿ ಕೊಹ್ಲಿ ಇದೇ ಸಂಖ್ಯೆಯ ಜೆರ್ಸಿ ತೊಡುವುದರ ಹಿಂದೆ ಒಂದು ಭಾವನಾತ್ಮಕ ಕಾರಣವಿದೆ. 2008 ರಲ್ಲಿ ನಡೆದ ಅಂಡರ್-19 ವಿಶ್ವಕಪ್​ನಲ್ಲೂ ವಿರಾಟ್ ಕೊಹ್ಲಿ 18 ನೇ ನಂಬರ್ ಜರ್ಸಿ ತೊಟ್ಟು ಕಣಕ್ಕಿಳಿದಿದ್ದರು. ಅಲ್ಲದೆ ತಮ್ಮ ನಾಯಕತ್ವದಲ್ಲಿ ತಂಡವನ್ನು ಚಾಂಪಿಯನ್ ಕೂಡ ಮಾಡಿದ್ದರು.

2 / 6
ಆ ಬಳಿಕ ಕೊಹ್ಲಿ ಟೀಂ ಇಂಡಿಯಾಕ್ಕೆ ಎಂಟ್ರಿಕೊಟ್ಟಾಗ ಉಳಿದ ಯಾವ ಆಟಗಾರನೂ 18ನೇ ನಂಬರ್ ಜೆರ್ಸಿಯನ್ನು ತೊಟ್ಟು ಕಣಕ್ಕಿಳಿಯುತ್ತಿರಲಿಲ್ಲ. ಹೀಗಾಗಿ ಕೊಹ್ಲಿಗೆ ಆ ಸಂಖ್ಯೆಯ ಜೆರ್ಸಿ ಪಡೆಯವುದು ಕಷ್ಟವಾಗಲಿಲ್ಲ.

ಆ ಬಳಿಕ ಕೊಹ್ಲಿ ಟೀಂ ಇಂಡಿಯಾಕ್ಕೆ ಎಂಟ್ರಿಕೊಟ್ಟಾಗ ಉಳಿದ ಯಾವ ಆಟಗಾರನೂ 18ನೇ ನಂಬರ್ ಜೆರ್ಸಿಯನ್ನು ತೊಟ್ಟು ಕಣಕ್ಕಿಳಿಯುತ್ತಿರಲಿಲ್ಲ. ಹೀಗಾಗಿ ಕೊಹ್ಲಿಗೆ ಆ ಸಂಖ್ಯೆಯ ಜೆರ್ಸಿ ಪಡೆಯವುದು ಕಷ್ಟವಾಗಲಿಲ್ಲ.

3 / 6
ವಾಸ್ತವವಾಗಿ ವಿರಾಟ್ ಕೊಹ್ಲಿ 18ನೇ ನಂಬರ್ ಜೆರ್ಸಿ ತೊಡಲು ಇರುವ ಕಾರಣವೆಂದರೆ, ಆ ದಿನಾಂಕದಂದು ಅಂದರೆ, ಡಿಸೆಂಬರ್ 18, 2006 ರಂದು ಕೊಹ್ಲಿಯವರ ತಂದೆ ನಿಧನರಾದರು. ತಂದೆಯ ನೆನಪಿಗಾಗಿ ಕೊಹ್ಲಿ 18ನೇ ನಂಬರ್ ಜೆರ್ಸಿ ತೊಟ್ಟು ಕಣಕ್ಕಿಳಿಯುತ್ತಾರೆ.

ವಾಸ್ತವವಾಗಿ ವಿರಾಟ್ ಕೊಹ್ಲಿ 18ನೇ ನಂಬರ್ ಜೆರ್ಸಿ ತೊಡಲು ಇರುವ ಕಾರಣವೆಂದರೆ, ಆ ದಿನಾಂಕದಂದು ಅಂದರೆ, ಡಿಸೆಂಬರ್ 18, 2006 ರಂದು ಕೊಹ್ಲಿಯವರ ತಂದೆ ನಿಧನರಾದರು. ತಂದೆಯ ನೆನಪಿಗಾಗಿ ಕೊಹ್ಲಿ 18ನೇ ನಂಬರ್ ಜೆರ್ಸಿ ತೊಟ್ಟು ಕಣಕ್ಕಿಳಿಯುತ್ತಾರೆ.

4 / 6
ಆ ಸಮಯದಲ್ಲಿ 17ವರ್ಷದ ಹುಡುಗನಾಗಿದ್ದ ಕೊಹ್ಲಿ, ತಮ್ಮ ತಂದೆ ನಿಧನರಾದಾಗ ಕರ್ನಾಟಕದ ವಿರುದ್ಧ ದೆಹಲಿ ಪರ ರಣಜಿ ಆಡುತ್ತಿದ್ದರು. ತಂದೆ ನಿಧನ ಹೊರತಾಗಿಯೂ ವೃತ್ತಿಧರ್ಮ ತೋರಿದ ಕೊಹ್ಲಿ, ಮರುದಿನವೇ ರಣಜಿ ಪಂದ್ಯವನ್ನು ಆಡಲು ನಿರ್ಧರಿಸಿದರು. ತನ್ನ ತಾಯಿ ಮತ್ತು ಕೋಚ್ ಜೊತೆಗಿನ ಚರ್ಚೆಯ ನಂತರ ಪಂದ್ಯವನ್ನಾಡಲು ನಿರ್ಧರಿಸಿದ ಕೊಹ್ಲಿ, ಆ ಪಂದ್ಯದಲ್ಲಿ 90 ರನ್ ಬಾರಿಸಿದರು. ಇದು ಡೆಲ್ಲಿಗೆ ಫಾಲೋ-ಆನ್ ತಪ್ಪಿಸಲು ಸಹಾಯ ಮಾಡಿತು.

ಆ ಸಮಯದಲ್ಲಿ 17ವರ್ಷದ ಹುಡುಗನಾಗಿದ್ದ ಕೊಹ್ಲಿ, ತಮ್ಮ ತಂದೆ ನಿಧನರಾದಾಗ ಕರ್ನಾಟಕದ ವಿರುದ್ಧ ದೆಹಲಿ ಪರ ರಣಜಿ ಆಡುತ್ತಿದ್ದರು. ತಂದೆ ನಿಧನ ಹೊರತಾಗಿಯೂ ವೃತ್ತಿಧರ್ಮ ತೋರಿದ ಕೊಹ್ಲಿ, ಮರುದಿನವೇ ರಣಜಿ ಪಂದ್ಯವನ್ನು ಆಡಲು ನಿರ್ಧರಿಸಿದರು. ತನ್ನ ತಾಯಿ ಮತ್ತು ಕೋಚ್ ಜೊತೆಗಿನ ಚರ್ಚೆಯ ನಂತರ ಪಂದ್ಯವನ್ನಾಡಲು ನಿರ್ಧರಿಸಿದ ಕೊಹ್ಲಿ, ಆ ಪಂದ್ಯದಲ್ಲಿ 90 ರನ್ ಬಾರಿಸಿದರು. ಇದು ಡೆಲ್ಲಿಗೆ ಫಾಲೋ-ಆನ್ ತಪ್ಪಿಸಲು ಸಹಾಯ ಮಾಡಿತು.

5 / 6
ಅಂದಿನ ಸನ್ನಿವೇಶದ ಬಗ್ಗೆ ಮಾತನಾಡಿರುವ ಕೊಹ್ಲಿ, ನನ್ನ ತಂದೆ ರಾತ್ರಿ ತೀರಿಕೊಂಡರು. ಆದರೆ ನನ್ನ ತಂದೆಯ ಮರಣದ ನಂತರ ದಿನ ರಣಜಿ ಆಡಲು ನನಗೆ ಸಹಜವಾಗಿಯೇ ಕರೆ ಬಂದಿತು. ನಾನು ಬೆಳಿಗ್ಗೆ ನನ್ನ (ದೆಹಲಿ) ಕೋಚ್‌ಗೆ ಕರೆ ಮಾಡಿ ಇಂದಿನ ಪಂದ್ಯದಲ್ಲಿ ಆಡುವುದಾಗಿ ಹೇಳಿದ್ದೆ. ಏಕೆಂದರೆ ನನ್ನ ಜೀವನದಲ್ಲಿ ಈ ಕ್ರೀಡೆಗೆ ಇರುವ ಪ್ರಾಮುಖ್ಯತೆ ತುಂಬಾ ಹೆಚ್ಚು ಎಂದಿದ್ದರು.

ಅಂದಿನ ಸನ್ನಿವೇಶದ ಬಗ್ಗೆ ಮಾತನಾಡಿರುವ ಕೊಹ್ಲಿ, ನನ್ನ ತಂದೆ ರಾತ್ರಿ ತೀರಿಕೊಂಡರು. ಆದರೆ ನನ್ನ ತಂದೆಯ ಮರಣದ ನಂತರ ದಿನ ರಣಜಿ ಆಡಲು ನನಗೆ ಸಹಜವಾಗಿಯೇ ಕರೆ ಬಂದಿತು. ನಾನು ಬೆಳಿಗ್ಗೆ ನನ್ನ (ದೆಹಲಿ) ಕೋಚ್‌ಗೆ ಕರೆ ಮಾಡಿ ಇಂದಿನ ಪಂದ್ಯದಲ್ಲಿ ಆಡುವುದಾಗಿ ಹೇಳಿದ್ದೆ. ಏಕೆಂದರೆ ನನ್ನ ಜೀವನದಲ್ಲಿ ಈ ಕ್ರೀಡೆಗೆ ಇರುವ ಪ್ರಾಮುಖ್ಯತೆ ತುಂಬಾ ಹೆಚ್ಚು ಎಂದಿದ್ದರು.

6 / 6

Published On - 3:21 pm, Sat, 25 March 23

Follow us
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ