AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನವೀನ್ ನಿವಾಸ’ ಗೃಹಪ್ರವೇಶ: ಸದಾ ಮಗನ ನೆರಳಲ್ಲಿ ಇರುತ್ತೇವೆಂದು ಭಾವುಕರಾದರು ಉಕ್ರೇನ್ ಯುದ್ಧದಲ್ಲಿ ಬಲಿಯಾಗಿದ್ದ ವೈದ್ಯ ವಿದ್ಯಾರ್ಥಿ ನವೀನನ ಅಪ್ಪಅಮ್ಮ

ನವೀನ್ ತಂದೆ ತಾಯಿ ಬಡತನದಲ್ಲಿ ಕಷ್ಟಪಟ್ಟು ವೈದ್ಯಕೀಯ ಶಿಕ್ಷಣಕ್ಕಾಗಿ ಉಕ್ರೇನ್ ಗೆ ತಮ್ಮ ಮಗನನ್ನು ಕಳುಹಿಸಿದ್ದರು. ಅದರೆ ಯುದ್ಧ ಸಂದರ್ಭದ ನವೀನನ್ನು ಬಲಿ ಪಡೆಯಿತು. ಕುಟುಂಬದ ಕನಸು ಕಮರುವಂತೆ ಮಾಡಿತು. ಆದರೆ ಈಗ ನೂತನ ಮನೆ ನಿರ್ಮಿಸಿ, ಮಗನ ನೆರಳಿನಲ್ಲಿ ತಂದೆತಾಯಿ ಜೀವನ ಮಾಡುತ್ತಿದ್ದಾರೆ.

'ನವೀನ್ ನಿವಾಸ’ ಗೃಹಪ್ರವೇಶ: ಸದಾ ಮಗನ ನೆರಳಲ್ಲಿ ಇರುತ್ತೇವೆಂದು ಭಾವುಕರಾದರು ಉಕ್ರೇನ್ ಯುದ್ಧದಲ್ಲಿ ಬಲಿಯಾಗಿದ್ದ ವೈದ್ಯ ವಿದ್ಯಾರ್ಥಿ ನವೀನನ ಅಪ್ಪಅಮ್ಮ
'ನವೀನ್ ನಿವಾಸ’ ಗೃಹಪ್ರವೇಶ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Feb 17, 2023 | 1:22 PM

ರಷ್ಯಾ ಮತ್ತು ಉಕ್ರೇನ್ ಯುದ್ಧದಲ್ಲಿ ಎಂಬಿಬಿಎಸ್ ವಿದ್ಯಾರ್ಥಿ (Medical Student) ಕನ್ನಡಿಗ ನವೀನ ಬಲಿಯಾಗಿದ್ದ. ಈ ಘಟನೆಯಿಂದ ನಮ್ಮ ದೇಶ ಹಾಗೂ ಕರುನಾಡಿಗೆ ಬರಸಿಡಿಲು ಬಡಿದಂತಾಗಿತ್ತು. ಈಗ ನವೀನ ಕಂಡ ಒಂದು ಕನಸನ್ನ ತಂದೆ ತಾಯಿ ನನಸು ಮಾಡಿದ್ದಾರೆ. ಆತನ ಹೆಸರಿನಲ್ಲಿ ನೂತನ ಮನೆ ನಿರ್ಮಿಸಿದ್ದು, ಮಗನ ಹೆಸರನ್ನ ನಾಮಕರಣ ಮಾಡಿದ್ದಾರೆ (House Warming Ceremony). ಈ ಕುರಿತು ಒಂದು ವರದಿ ಇಲ್ಲಿದೆ. ಅದು ಮಾರ್ಚ್ 1 2022 ರಂದು ಉಕ್ರೇನ್ ಮತ್ತು ರಷ್ಯಾ ಯುದ್ದದಲ್ಲಿ ಕನ್ನಡಿಗ ನವೀನ ಬಲಿಯಾಗಿದ್ದ. ಇದರಿಂದ ಕರುನಾಡಿಗೆ ಬರಸಿಡಿಲು ಬಡಿದಂತಾಗಿತ್ತು. ಯಾಕಂದ್ರೆ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಲ್ಲಿ ಹಾವೇರಿ (Haveri) ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನಿವಾಸಿ ನವೀನ ಗ್ಯಾನಗೌಡರ ಎಂಬಾತ ಮೃತಪಟ್ಟಿದ್ದ. ಮೃತ ನವೀನ ಉಕ್ರೇನ್ ನಲ್ಲಿ ಎಂಬಿಬಿಎಸ್ ನಾಲ್ಕನೆ ಸೆಮಿಸ್ಟರ್ ನಲ್ಲಿ ಓದುತ್ತಿದ್ದ. ನವೀನ (Naveen Gyanagoudar) ಮೃತಪಟ್ಟ ಸುದ್ದಿ ಆತನ ಕುಟುಂಬದವರಿಗೆ ಬರಸಿಡಿಲು ಬಡಿದಂತಾಗಿತ್ತು.

ನವೀನ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಜ್ಯಪಾಲರು, ಸಿ.ಎಂ. ಬಸವರಾಜ ಬೊಮ್ಮಾಯಿ, ಮಾಜಿ ಸಿ.ಎಂ.ಯಡಿಯೂರಪ್ಪ, ವಿರೋಧ ಪಕ್ಷದ ನಾಯಕರು ಸೇರಿದಂತೆ ಎಲ್ಲರೂ ಆ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು. ಆದರೆ ನವೀನ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ವೇಳೆ ತಂದೆ ತಾಯಿಗೆ ಮಾತು ಕೊಟ್ಟಿದ್ದನಂತೆ. ನಾನು ವೈದ್ಯನಾದ ಬಳಿಕ ಮನೆ ಕಟ್ಟಿಸುತ್ತೇನೆ. ಈಗ ಇರುವ ಮನೆಯಲ್ಲಿ ಕ್ಲಿನಿಕ್ ನಡೆಸುತ್ತೇನೆ ಅಂತಾ ಮಾತುಕೊಟ್ಟಿದ್ದ. ಈಗ ಮಗನ ಆಸೆಯಂತೆ ತಂದೆ ತಾಯಿ ನೂತನ ಮನೆಯನ್ನ ಕಟ್ಟಿಸಿದ್ದಾರೆ. ಮಗನ ಹೆಸರನ್ನೇ ಮನೆಗೆ ನಾಮಕರಣ ಮಾಡಿದ್ದಾರೆ. ಮಗನ ನೆರಳಿನಲ್ಲಿ ಸದಾ ಇರುತ್ತೇವೆ ಅಂತಾ ಕೆಲಕಾಲ ಭಾವುಕರಾದರು ನವೀನ್ ತಂದೆ ಶೇಖರಗೌಡ ಗ್ಯಾನಗೌಡರ.

ಸುಮಾರು 27 ಲಕ್ಷ ರೂಪಾಯಿ ಖರ್ಚು ಮಾಡಿ ಮನೆಯನ್ನ ಕಟ್ಟಿಸಿದ್ದಾರೆ. ತಂದೆ ಶೇಖರಗೌಡ, ತಾಯಿ ವಿಜಯಲಕ್ಷ್ಮಿ ಮತ್ತು ಸಹೋದರ ಹರ್ಷ, ಮೃತ ನವೀನನ ಕನಸು ನನಸು ಮಾಡಿದ್ದಾರೆ. ‘ನವೀನ್ ನಿವಾಸ’ (Naveen Nivas) ಎಂದು ನಾಮಕರಣ ಮಾಡಿದ್ದು, ಮನೆಯ ಮುಂಭಾಗದಲ್ಲಿಯೇ ನವೀನನ ಭಾವಚಿತ್ರವನ್ನ ಗ್ರಾನೈಟ್ ಕಲ್ಲಿನಲ್ಲಿ ಕೆತ್ತಿಸಿ ಹಾಕಲಾಗಿದೆ. ಇಂದು ಶುಕ್ರವಾರ ಗೃಹಪ್ರವೇಶ ಮಾಡಲಿದ್ದಾರೆ. ಡಾಕ್ಟರ್ ಆಗಿ ಬರ್ತೆನಿ ಅಂತ ಹೋಗಿದ್ದ ಮಗ ಹೆಣವಾಗಿ ಮನೆಗೆ ಬಂದ ಕಹಿ ಘಳಿಗೆಯನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಆತನಿಗೆ ಎರಡು ಕನಸುಗಳಿದ್ದವು. ತಾನು ಡಾಕ್ಟರ್ ಆಗಬೇಕು… ಡಾಕ್ಟರ್ ಆಗಿ, ಆರ್ ಸಿ ಸಿ ಮನೆ ಕಟ್ಟಿಸಬೇಕು. ಆದ್ರೆ ಮಗನ ಅರ್ಧ ಆಸೆ ಅಷ್ಟೇ ಈಡೇರಿದೆ ಎಂದು ಮಗನ ತಾಯಿ ವಿಜಯಲಕ್ಷ್ಮಿ ಭಾವುಕರಾದರು.

ನವೀನ್ ತಂದೆ ತಾಯಿ ಬಡತನದಲ್ಲಿ ಕಷ್ಟಪಟ್ಟು ವೈದ್ಯಕೀಯ ಶಿಕ್ಷಣಕ್ಕಾಗಿ ಉಕ್ರೇನ್ ಗೆ ತಮ್ಮ ಮಗನನ್ನು ಕಳುಹಿಸಿದ್ದರು. ಅದರೆ ಉಕ್ರೇನ್ ಮತ್ತು ರಷ್ಯಾ ವಾರ್ ನಮ್ಮ ಕನ್ನಡದ ಕುವರ ನವೀನನ್ನು ಬಲಿ ಪಡೆಯಿತು. ಆ ಕುಟುಂಬದ ಕನಸು ಕಮರುವಂತೆ ಮಾಡಿತು. ಈಗ ಮಗನ ಕನಸು ನನಸು ಮಾಡಿ ನೂತನ ಮನೆ ನಿರ್ಮಿಸಿ, ಮನೆಗೆ ನವೀನ್ ನಿವಾಸ ನಾಮಕರಣ ಮಾಡಿ ಮಗನ ನೆರಳಿನಲ್ಲಿ ತಂದೆತಾಯಿ ಜೀವನ ಮಾಡುತ್ತಿದ್ದಾರೆ.

ವರದಿ: ಸೂರಜ್ ಉತ್ತೂರೆ, ಟಿವಿ 9, ಹಾವೇರಿ

Published On - 12:59 pm, Fri, 17 February 23

‘ಉತ್ತರಕಾಂಡ’ ಸಿನಿಮಾ ಶೂಟಿಂಗ್ ನಿಂತಿದ್ದು ಯಾಕೆ? ಕಾರಣ ನೀಡಿದ ಚಿತ್ರತಂಡ
‘ಉತ್ತರಕಾಂಡ’ ಸಿನಿಮಾ ಶೂಟಿಂಗ್ ನಿಂತಿದ್ದು ಯಾಕೆ? ಕಾರಣ ನೀಡಿದ ಚಿತ್ರತಂಡ
ಇರಾನ್​ ನಿಂದ ಇದೇ ಮೊದಲ ಬಾರಿಗೆ ಸೆಜ್ಜಿಲ್ ಮಿಸೈಲ್ ಬಳಕೆ, ಇಸ್ರೇಲ್ ತತ್ತರ!
ಇರಾನ್​ ನಿಂದ ಇದೇ ಮೊದಲ ಬಾರಿಗೆ ಸೆಜ್ಜಿಲ್ ಮಿಸೈಲ್ ಬಳಕೆ, ಇಸ್ರೇಲ್ ತತ್ತರ!
ಇಸ್ರೇಲ್​​ ನಲ್ಲಿ ಸಿಲುಕಿದ್ದ 18 ಕನ್ನಡಿಗರು ತಾಯ್ನಾಡಿಗೆ ವಾಪಸ್
ಇಸ್ರೇಲ್​​ ನಲ್ಲಿ ಸಿಲುಕಿದ್ದ 18 ಕನ್ನಡಿಗರು ತಾಯ್ನಾಡಿಗೆ ವಾಪಸ್
ಜಯಂತಿ ಬಸುರಿ ಮತ್ತು ಸೀಮಂತದ ದಿನಾಂಕ ಫಿಕ್ಸ್ ಆಗಿತ್ತು: ನೆರೆಮನೆ ಮಹಿಳೆ
ಜಯಂತಿ ಬಸುರಿ ಮತ್ತು ಸೀಮಂತದ ದಿನಾಂಕ ಫಿಕ್ಸ್ ಆಗಿತ್ತು: ನೆರೆಮನೆ ಮಹಿಳೆ
ಅಸಿಮ್ ಮುನೀರ್​​ಗೆ ಔತಣ ನೀಡಿದ ಟ್ರಂಪ್ ವಿರುದ್ಧ ಶಶಿ ತರೂರ್ ಲೇವಡಿ
ಅಸಿಮ್ ಮುನೀರ್​​ಗೆ ಔತಣ ನೀಡಿದ ಟ್ರಂಪ್ ವಿರುದ್ಧ ಶಶಿ ತರೂರ್ ಲೇವಡಿ
ಒನ್​ ವೇನಲ್ಲಿ ಬಂದು ಡಿಸಿಗೆ ಅವಾಜ್ ಹಾಕಿದ ಬೈಕ್ ಸವಾರ: ಮುಂದೇನಾಯ್ತು?
ಒನ್​ ವೇನಲ್ಲಿ ಬಂದು ಡಿಸಿಗೆ ಅವಾಜ್ ಹಾಕಿದ ಬೈಕ್ ಸವಾರ: ಮುಂದೇನಾಯ್ತು?
ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಸಾಮೂಹಿಕ ನಾಯಕತ್ವ ಬೇಕಾಗುತ್ತದೆ: ರಾಜಣ್ಣ
ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಸಾಮೂಹಿಕ ನಾಯಕತ್ವ ಬೇಕಾಗುತ್ತದೆ: ರಾಜಣ್ಣ
ಜನಪ್ರಿಯ ಗೆಟ್ಟೋ ಕಿಡ್ಸ್​ಗೆ ಪ್ರೀತಿಯ ವಿದಾಯ ಹೇಳಿದ ಅರ್ಜುನ್ ಜನ್ಯ
ಜನಪ್ರಿಯ ಗೆಟ್ಟೋ ಕಿಡ್ಸ್​ಗೆ ಪ್ರೀತಿಯ ವಿದಾಯ ಹೇಳಿದ ಅರ್ಜುನ್ ಜನ್ಯ
ಕಚೇರಿಗೆ ಗೈರುಹಾಜರಾದರೂ ಸಿಬ್ಬಂದಿಯಿಂದ ಸಿಎಲ್ ಅರ್ಜಿ ಇಲ್ಲ!
ಕಚೇರಿಗೆ ಗೈರುಹಾಜರಾದರೂ ಸಿಬ್ಬಂದಿಯಿಂದ ಸಿಎಲ್ ಅರ್ಜಿ ಇಲ್ಲ!
‘ಎಕ್ಕ’ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಅಶ್ವಿನಿ ಪುನೀತ್​ ರಾಜ್​​ಕುಮಾರ್
‘ಎಕ್ಕ’ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಅಶ್ವಿನಿ ಪುನೀತ್​ ರಾಜ್​​ಕುಮಾರ್