ನೋಡಿದವರ ಕರುಳು ಹಿಂಡಿದ ಕರುಳಿನ ಕೂಗು, ಅಂಬಾ ಅನ್ನುತ್ತಿದ್ದ ತನ್ನ ಕಂದನಿಗಾಗಿ ಬೊಲೆರೋ ವಾಹನ ಬೆನ್ನಟ್ಟಿದ ತಾಯಿ ಹಸು

ಅದಾಗತಾನೆ ಜನಿಸಿದ ಕರುವನ್ನು ವಾಹನದಲ್ಲಿ ಮನೆಗೆ ತೆಗೆದುಕೊಂಡು ಹೋಗುವ ವೇಳೆ ತನ್ನ ಕರುವಿಗಾಗಿ ಬೊಲೆರೋ ವಾಹನವನ್ನು ತಾಯಿ ಹಸು ಬೆನ್ನಟ್ಟಿದೆ/ ಅಡ್ಡಗಟ್ಟಿದೆ. ತಾಯಿ ಹಸು ಹೀಗೆ... ಸುಮಾರು 5 ಕಿಲೋ ಮೀಟರ್ ವರೆಗೆ ವಾಹನ ಹಿಂಬಾಲಿಸಿದೆ. ವಾಹನ ನಿಲ್ಲಿಸುವಂತೆ ಚಾಲಕನತ್ತ ಮುಖ ಮಾಡಿ ರೋದಿಸಿದ್ದಂತೂ ನೋಡುಗರಿಗೆ ಸಾಕುಸಾಕಾಯಿತು.

ನೋಡಿದವರ ಕರುಳು ಹಿಂಡಿದ ಕರುಳಿನ ಕೂಗು, ಅಂಬಾ ಅನ್ನುತ್ತಿದ್ದ ತನ್ನ ಕಂದನಿಗಾಗಿ ಬೊಲೆರೋ ವಾಹನ ಬೆನ್ನಟ್ಟಿದ ತಾಯಿ ಹಸು
ಅಂಬಾ ಅನ್ನುತ್ತಿದ್ದ ತನ್ನ ಕಂದನಿಗಾಗಿ ಬೊಲೆರೋ ವಾಹನ ಬೆನ್ನಟ್ಟಿದ ತಾಯಿ ಹಸು!
Edited By: ಸಾಧು ಶ್ರೀನಾಥ್​

Updated on: Sep 30, 2023 | 9:30 AM

ಬಾಗಲಕೋಟೆ, ಸೆಪ್ಟೆಂಬರ್​​ 30: ಮುಚಖಂಡಿ ಗ್ರಾಮದ ರಾಜು ಕಾಳೆ ಎಂಬುವವರ ಹಸು ಕರುವಿಗೆ ಜನ್ಮ ನೀಡಿದ ಬಳಿಕ ಅನಾರೋಗ್ಯಕ್ಕೆ ತುತ್ತಾಗಿತ್ತು. ಹೀಗಾಗಿ ಗ್ರಾಮದ ಒಂದಷ್ಟು ಯುವಕರು ಸೇರಿ ಕರುವಿನ ಜೊತೆಗೆ ಹಸುವನ್ನು ಬಾಗಲಕೋಟೆ ನಗರದ ನವನಗರದಲ್ಲಿರುವ ಪಶು ಆಸ್ಪತ್ರೆಗೆ ಕರೆದೊಯ್ದಿದ್ದರು. ಆಸ್ಪತ್ರೆಯಿಂದ ವಾಪಸ್ ಬರುವ ವೇಳೆ ಯುವಕರು ಕರುವನ್ನು ಬೊಲೆರೋ ವಾಹನದಲ್ಲಿ ವಾಪಸ್​​ ಕರೆತರುತ್ತಿದ್ದರು. ಆ ವೇಳೆ ತಾಯಿ-ಮಗುವಿನ ಅಂದರೆ ಹಸು ಮತ್ತು ಕರುವಿನ ಮನಮಿಡಿಯುವ ದೃಶ್ಯ ಕಂಡುಬಂದಿದೆ. ಆ ಕರುಳಿನ ಕೂಗು ಕಂಡು-ಕೇಳಿದವರ ಕರುಳು ಹಿಂಡುವಂತಾಗಿದೆ! ಅಂಬಾ ಅನ್ನುತ್ತಿದ್ದ ತನ್ನ ಕಂದನಿಗಾಗಿ ತಾಯಿ ಹಸು ಬೊಲೆರೋ ವಾಹನ ಬೆನ್ನಟ್ಟಿದ್ದು ಕಂಡವರ ಕರುಳು ಹಿಂಡಿದೆ.

ಅದಾಗತಾನೆ ಹುಟ್ಟಿದ ಕರುವನ್ನು ವಾಹನದಲ್ಲಿ ಮನೆಗೆ ತೆಗೆದುಕೊಂಡು ಹೋಗುವ ವೇಳೆ ತನ್ನ ಕರುವಿಗಾಗಿ ಬೊಲೆರೋ ವಾಹನವನ್ನು ತಾಯಿ ಹಸು ಬೆನ್ನಟ್ಟಿದೆ/ ಅಡ್ಡಗಟ್ಟಿದೆ. ತಾಯಿ ಹಸು ಹೀಗೆ… ಸುಮಾರು 5 ಕಿಲೋ ಮೀಟರ್ ವರೆಗೆ ವಾಹನ ಹಿಂಬಾಲಿಸಿದೆ. ವಾಹನ ನಿಲ್ಲಿಸುವಂತೆ ಚಾಲಕನತ್ತ ಮುಖ ಮಾಡಿ ರೋದಿಸಿದ್ದಂತೂ ನೋಡುಗರಿಗೆ ಸಾಕುಸಾಕಾಯಿತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:26 am, Sat, 30 September 23

Ravi H Mooki

ರವಿ ಹೆಚ್ ಮೂಕಿ. ಮೂಲತಃ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಪರಸಾಪುರ ಗ್ರಾಮದವರು.ರವಿ ಮೂಕಿ ಪ್ರಸ್ತುತ ಟಿವಿ9 ನ್ಯೂಜ್ ಚಾನಲ್‌ ನಲ್ಲಿ ಬಾಗಲಕೋಟೆ ವರದಿಗಾರರು.ಪದವಿ ಮುಗಿಸಿ ಕೆಲ ತಿಂಗಳು ರಿಲಯನ್ಸ್ ಕಂಪನಿಯಲ್ಲಿ ಕೆಲಸ, ನಂತರ ಜನಶ್ರೀ ನ್ಯೂಜ್‌ ಹಾವೇರಿ ಜಿಲ್ಲಾ ವರದಿಗಾರರಾಗಿ ೨೦೧೦ ರಿಂದ ೨೦೧೫ ರವರೆಗೆ ಕೆಲಸ ಮಾಡಿದ್ದಾರೆ.೨೦೧೫ ರಿಂದ‌ ಟಿವಿ ೯ ಬಾಗಲಕೋಟೆ ಜಿಲ್ಲಾ ವರದಿಗಾರರಾಗಿ ‌ಕೆಲಸ ಮುಂದುವರೆಸಿದ್ದಾರೆ.ಮಾದ್ಯಮದಲ್ಲಿ ಸಕ್ರಿಯರಾಗಿದ್ದು,ಹಾವೇರಿ ಬಾಗಲಕೋಟೆ ಜಿಲ್ಲೆ ಸೇರಿ ಒಟ್ಟು.೧೪ ವರ್ಷ ಮಾದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ.ರಾಜಕೀಯ,ಕೃಷಿ,ಗ್ರಾಮೀಣ ಕ್ರೀಡೆ,ಮಾನವೀಯ ಸ್ಟೋರಿಗಳ ವರದಿ ಮಾಡಲು ಹೆಚ್ಚು ಆಸಕ್ತಿ.ಸಿನಿಮಾ ನೋಡುವುದು,ಸಂಗೀತ ಕೇಳೋದು ಹಾಡೋದು ಇಷ್ಟ. ಟಿರ್ವಿ ಬಾಗಲಕೋಟೆ ಜಿಲ್ಲಾ ವರದಿಗಾರನಾಗಿ ಉತ್ತರಕರ್ನಾಟಕ ದಲ್ಲಿನ ಪ್ರವಾಹ ಸಂಕಷ್ಟ ಕವರೇಜ್. ,ಬಾದಾಮಿ ಸಿದ್ದರಾಮಯ್ಯ- ರಾಮುಲು ಹೈವೋಲ್ಟೇಜ್ ಚುನಾವಣೆ ಕವರೇಜ್,ಅದೇ ಚುನಾವಣೆಯಲ್ಲಿ ಜೆಪಿ ಕೇಂದ್ರ ನಾಯಕ ಅಮಿತ್ ಷಾ ಇಂಟರ್ ವ್ಯೂ ಮಾಡೋಕೆ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿದ್ದು ಖುಷಿ ಹೆಮ್ಮೆ.

Read More
Follow Us