ಬೆಂಗಳೂರು ಪ್ರೆಸ್​ ಕ್ಲಬ್​ ಆವರಣದಲ್ಲಿ ಬಿರುಗಾಳಿ ಮಳೆಗೆ 8 ಮರ ಧರೆಗೆ

ಬೆಂಗಳೂರು: ನಾಲ್ಕನೆಯ ದಿನವಾದ ಇಂದೂ ನಗರದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ಸುರಿಯುತ್ತಿದೆ. ಪ್ರತಿಷ್ಠಿತ ಪ್ರೆಸ್​ ಕ್ಲಬ್​ ಆವರಣದಲ್ಲಿ 8 ಮರಗಳು ಧರೆಗುರುಳಿವೆ. ಮರಗಳು ಉರುಳಿದ್ದರಿಂದ ಮೇಜು, ಕುರ್ಚಿಗಳಿಗೆ ಹಾನಿಯಾಗಿದೆ. ಮರ ಬಿದ್ದಿದ್ದರಿಂದ ಪ್ರೆಸ್ ​ಕ್ಲಬ್​ ಕಟ್ಟಡಕ್ಕೂ ಭಾಗಶಃ ಹಾನಿಯಾಗಿದೆ. ಮಲ್ಲೇಶ್ವರಂ ಮತ್ತು ಯಶವಂತಪುರ ಸುತ್ತ ಮುತ್ತ ಜೋರು ಗಾಳಿ ಮತ್ತು ಮಳೆಯಾಗುತ್ತಿದೆ. ಭಾರಿ ಬಿರುಗಾಳಿಯ ಹೊಡೆತಕ್ಕೆ ಮಲ್ಲೇಶ್ವರಂ ರಸ್ತೆಯಲ್ಲಿ ಮರದ ರೆಂಬೆಗಳು ಮುರಿದುಬೀಳುತ್ತಿವೆ. ರಸ್ತೆಯಲ್ಲಿ ರೆಂಬೆ ಬಿದ್ದಿರುವುದರಿಂದ ಸಂಚಾರಕ್ಕೆ ಅಡ್ಡಿಯಾಗಿದೆ. ನಿಂತಲ್ಲೇ ನಿಂತಿರುವ ವಾಹನ ಸವಾರರು […]

ಬೆಂಗಳೂರು ಪ್ರೆಸ್​ ಕ್ಲಬ್​ ಆವರಣದಲ್ಲಿ ಬಿರುಗಾಳಿ ಮಳೆಗೆ 8 ಮರ ಧರೆಗೆ
ಸಾಧು ಶ್ರೀನಾಥ್​

Updated on: May 29, 2020 | 6:21 PM

ಬೆಂಗಳೂರು: ನಾಲ್ಕನೆಯ ದಿನವಾದ ಇಂದೂ ನಗರದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ಸುರಿಯುತ್ತಿದೆ. ಪ್ರತಿಷ್ಠಿತ ಪ್ರೆಸ್​ ಕ್ಲಬ್​ ಆವರಣದಲ್ಲಿ 8 ಮರಗಳು ಧರೆಗುರುಳಿವೆ. ಮರಗಳು ಉರುಳಿದ್ದರಿಂದ ಮೇಜು, ಕುರ್ಚಿಗಳಿಗೆ ಹಾನಿಯಾಗಿದೆ. ಮರ ಬಿದ್ದಿದ್ದರಿಂದ ಪ್ರೆಸ್ ​ಕ್ಲಬ್​ ಕಟ್ಟಡಕ್ಕೂ ಭಾಗಶಃ ಹಾನಿಯಾಗಿದೆ.

ಮಲ್ಲೇಶ್ವರಂ ಮತ್ತು ಯಶವಂತಪುರ ಸುತ್ತ ಮುತ್ತ ಜೋರು ಗಾಳಿ ಮತ್ತು ಮಳೆಯಾಗುತ್ತಿದೆ. ಭಾರಿ ಬಿರುಗಾಳಿಯ ಹೊಡೆತಕ್ಕೆ ಮಲ್ಲೇಶ್ವರಂ ರಸ್ತೆಯಲ್ಲಿ ಮರದ ರೆಂಬೆಗಳು ಮುರಿದುಬೀಳುತ್ತಿವೆ. ರಸ್ತೆಯಲ್ಲಿ ರೆಂಬೆ ಬಿದ್ದಿರುವುದರಿಂದ ಸಂಚಾರಕ್ಕೆ ಅಡ್ಡಿಯಾಗಿದೆ. ನಿಂತಲ್ಲೇ ನಿಂತಿರುವ ವಾಹನ ಸವಾರರು ಪರದಾಡುತ್ತಿದ್ದಾರೆ.

 

Published On - 6:10 pm, Fri, 29 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us