AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರುನಾಡಿಗೆ ಕಂಟಕ: ಗಡಿಯಲ್ಲಿ ಖಾಕಿ ಕಣ್ಣಿಗೆ ಬೀಳದಂತೆ ಬರ್ತಿದ್ದಾರೆ ನುಸುಳುಕೋರರು!

ಸಮುದ್ರವನ್ನ ದಾಟಿ ಬಂದಿರೋ ಕೊರೊನಾಗೆ ಗಡಿಗಳು ಲೆಕ್ಕವೇ ಇಲ್ಲ. ಲಾಕ್​ಡೌನ್ ಮಾಡಿದ್ರೂ ತನ್ನ ಕೇಕೆ ನಿಲ್ಲಿಸ್ತಿಲ್ಲ. ಅಧಿಕಾರಿಗಳು ಎಷ್ಟೇ ಅಲರ್ಟ್ ಆಗಿದ್ರೂ ಮಹಾಮಾರಿಗೆ ಬ್ರೇಕ್ ಬಿದ್ದಿಲ್ಲ. ಇಂತಹ ಸಮಯದಲ್ಲಿ ನುಸುಳುಕೋರರು ತಮ್ಮ ನರಿ ಬುದ್ಧಿಯನ್ನ ಬಿಚ್ಚಿಡ್ತಿದ್ದಾರೆ..! ಹೊಟ್ಟೆಪಾಡಿಗಾಗಿ ದೂರದೂರಿಗೆ ಪಯಣ ಬೆಳೆಸಿದ್ದ ಜನ ಕೊರೊನಾದಿಂದ ನಡುಗಿ ಹೋಗಿದ್ರು. ಲಾಕ್​​ಡೌನ್ ಹೊಡೆತದಿಂದ ಪರದಾಡಿದ್ರು. ಆದ್ರೆ, ವಾಪಸ್ ಊರು ಸೇರಲು ಮಾತ್ರ ಕೆಲವ್ರು ಕಳ್ ದಾರಿ ಹಿಡಿದಿದ್ದಾರೆ. ಇವ್ರಿಂದ ಕರುನಾಡಿಗೆ ಕಂಟಕ ಎದುರಾಗಿದೆ. ಮಹಾರಾಷ್ಟ್ರ ಲಿಂಕ್ ನಡುವೆ ಬೀದರ್​ಗೆ ಸಂಕಟ! […]

ಕರುನಾಡಿಗೆ ಕಂಟಕ: ಗಡಿಯಲ್ಲಿ ಖಾಕಿ ಕಣ್ಣಿಗೆ ಬೀಳದಂತೆ ಬರ್ತಿದ್ದಾರೆ ನುಸುಳುಕೋರರು!
ಸಾಧು ಶ್ರೀನಾಥ್​
| Edited By: |

Updated on: May 30, 2020 | 6:45 AM

Share

ಸಮುದ್ರವನ್ನ ದಾಟಿ ಬಂದಿರೋ ಕೊರೊನಾಗೆ ಗಡಿಗಳು ಲೆಕ್ಕವೇ ಇಲ್ಲ. ಲಾಕ್​ಡೌನ್ ಮಾಡಿದ್ರೂ ತನ್ನ ಕೇಕೆ ನಿಲ್ಲಿಸ್ತಿಲ್ಲ. ಅಧಿಕಾರಿಗಳು ಎಷ್ಟೇ ಅಲರ್ಟ್ ಆಗಿದ್ರೂ ಮಹಾಮಾರಿಗೆ ಬ್ರೇಕ್ ಬಿದ್ದಿಲ್ಲ. ಇಂತಹ ಸಮಯದಲ್ಲಿ ನುಸುಳುಕೋರರು ತಮ್ಮ ನರಿ ಬುದ್ಧಿಯನ್ನ ಬಿಚ್ಚಿಡ್ತಿದ್ದಾರೆ..!

ಹೊಟ್ಟೆಪಾಡಿಗಾಗಿ ದೂರದೂರಿಗೆ ಪಯಣ ಬೆಳೆಸಿದ್ದ ಜನ ಕೊರೊನಾದಿಂದ ನಡುಗಿ ಹೋಗಿದ್ರು. ಲಾಕ್​​ಡೌನ್ ಹೊಡೆತದಿಂದ ಪರದಾಡಿದ್ರು. ಆದ್ರೆ, ವಾಪಸ್ ಊರು ಸೇರಲು ಮಾತ್ರ ಕೆಲವ್ರು ಕಳ್ ದಾರಿ ಹಿಡಿದಿದ್ದಾರೆ. ಇವ್ರಿಂದ ಕರುನಾಡಿಗೆ ಕಂಟಕ ಎದುರಾಗಿದೆ.

ಮಹಾರಾಷ್ಟ್ರ ಲಿಂಕ್ ನಡುವೆ ಬೀದರ್​ಗೆ ಸಂಕಟ! ಗಡಿ ಜಿಲ್ಲೆ ಬೀದರ್​ನಲ್ಲಿ ಕೊರೊನಾ ಕೇಕೆ ಹಾಕ್ತಿದೆ. ಈಗಾಗಲೇ ಮಹಾರಾಷ್ಟ್ರ ಲಿಂಕ್​ಗೆ ತತ್ತರಿಸಿ ಹೋಗಿದೆ. ತೆಲಂಗಾಣ ಮತ್ತು ಮಹಾರಾಷ್ಟ್ರದಿಂದ 8,000 ಜನ ವಾಪಸಾಗಿದ್ದಾರೆ. ಇಂತಹ ಟೈಮ್​ನಲ್ಲಿ ತೆಲಂಗಾಣ ಹಾಗೂ ಮಹಾರಾಷ್ಟ್ರದಿಂದ ನೂರಾರು ಜನ ಕಳ್ಳದಾರಿ ಮೂಲಕ ಜನ ಬೀದರ್​ಗೆ ಎಂಟ್ರಿ ಕೊಟ್ಟಿದ್ದಾರೆ.

ಚೆಕ್​ಪೋಸ್ಟ್ ಹಾಕಿದ್ರೂ ಪ್ರಯೋಜನ ಆಗ್ತಿಲ್ವಾ..?  ಆಂಧ್ರಪ್ರದೇಶದ ಗಡಿ ಭಾಗದಲ್ಲಿ ಕಳ್ಳ ದಾರಿಗಳ ಮೂಲಕ ಆಂಧ್ರದ ಜನ ಚಿತ್ರದುರ್ಗ ಜಿಲ್ಲೆಗೆ ನುಗ್ತಿದ್ದಾರೆ. ಚಳ್ಳಕೆರೆ ತಾಲೂಕಿನ ಪಾತಪ್ಪನಗುಡಿ, ನಾಗಪ್ಪನಹಳ್ಳಿ, ಪುಟ್ಲಾರಹಳ್ಳಿ, ಜಾಜೂರಿನ ಕಾಲು ದಾರಿಗಳಲ್ಲಿ ಪೊಲೀಸರ ಕಣ್ತಪ್ಪಿಸಿ ಜನ ಅಕ್ರಮವಾಗಿ ಪ್ರವೇಶ ಮಾಡ್ತಿದ್ದಾರೆ. ಹೀಗಾಗಿ, ಕೊರೊನಾ ಸೋಂಕು ಹರಡುವ ಆತಂಕ ಹೆಚ್ಚಾಗಿದೆ.

ಕೋಲಾರ ಜಿಲ್ಲೆಗೂ ಅಕ್ರಮ ಪ್ರವೇಶ: ಕೋಲಾರ ಜಿಲ್ಲೆಗೆ ದಿನದಿಂದ ದಿನಕ್ಕೆ ಕೊರೊನಾ ಆತಂಕ ಎದುರಾಗುತ್ತಿದೆ. ಹೊರ ರಾಜ್ಯದಿಂದ ಬಂದ ವಲಸಿಗರಿಂದಲೇ ಹೆಚ್ಚಾಗಿ ಕೊರೊನಾ ಕಾಣಿಸಿಕೊಳ್ಳುತ್ತಿದೆ. ಇದ್ರಿಂದ ಕೋಲಾರದ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಹೀಗಿದ್ರೂ ತಮಿಳುನಾಡಿನ ಕೆಲ ಕಾಲು ದಾರಿಗಳಿಂದ ಕರುನಾಡಿಗೆ ಆಗಮಿಸ್ತಿದ್ದಾರೆ. ವಿಶೇಷವಾಗಿ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕನುಮನಹಳ್ಳಿ ಹಾಗೂ ಕೆಜಿಎಫ್ ತಾಲೂಕಿನ ವಿ.ಕೋಟ ಗಡಿಯಲ್ಲಿ ಅಕ್ರಮವಾಗಿ ಆಂಧ್ರಪ್ರದೇಶ ಹಾಗೂ ತಮಿಳುನಾಡಿನಿಂದ ಪ್ರವೇಶ ಮಾಡುತ್ತಿದ್ದಾರೆ.

ಪೊಲೀಸರ ಕಣ್ಣಿಗೆ ಬೀಳದಂತೆ ಬರ್ತಿದ್ದಾರೆ ಜನ..! ಬಳ್ಳಾರಿ ಹಾಗೂ ಆಂಧ್ರ ಗಡಿಭಾಗಗಳಲ್ಲಿ ಚೆಕ್​ಪೋಸ್ಟ್​​ಗಳನ್ನ ನಿರ್ಮಾಣ ಮಾಡ್ಲಾಗಿದೆ. ಪೊಲೀಸರು ಕೂಡ ಫುಲ್ ಅಲರ್ಟ್ ಆಗಿದ್ದಾರೆ. ಹೀಗಿದ್ರೂ ಬಳ್ಳಾರಿ ಜಿಲ್ಲೆಗೆ ಆಂಧ್ರದ ಗ್ರಾಮಗಳಿಂದ ಪ್ರತಿದಿನ ನೂರಾರು ಜನ ಕದ್ದುಮುಚ್ಚಿ ಬರ್ತಿದ್ದಾರೆ.

ಇತ್ತ, ತುಮಕೂರು ಜಿಲ್ಲೆಯ ಗಡಿಭಾಗದಲ್ಲೂ ನುಸುಳುಕೋರರ ಕಾಟ ಹೆಚ್ಚಾಗಿದೆ. ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜನ ಕಳ್ಳದಾರಿಗಳ ಮೂಲಕ ಎಂಟ್ರಿ ಕೋಡ್ತಿದ್ದಾರೆ‌. ರಸ್ತೆಗಳಿಗೆ ಬೇಲಿ ಹಾಕಿ ಹಾಕಿದ್ದರೂ ಜನ ಅದನ್ನ ದಾಟಿ ಬರ್ತಿದ್ದಾರೆ. ಒಟ್ನಲ್ಲಿ, ಕ್ವಾರಂಟೈನ್ ಭಯವೋ ಏನೋ. ಕೆಲವರು ಅಡ್ಡದಾರಿ ಹಿಡಿದು ಕರುನಾಡಿಗೆ ಎಂಟ್ರಿ ಕೊಡ್ತಿದ್ದಾರೆ. ಇವರಿಂದ ಕರುನಾಡಿಗೆ ಕಂಟಕವೂ ಎದುರಾಗಿದೆ.

ತಾಯಿ ಜತೆ ಓಡಿ ಹೋಗಿದ್ದವನನ್ನ ಕೊಲೆಗೈದ ಪುತ್ರ, ಶವದ ಮೇಲೆ ಕಾಲಿಟ್ಟು ಕರೆ
ತಾಯಿ ಜತೆ ಓಡಿ ಹೋಗಿದ್ದವನನ್ನ ಕೊಲೆಗೈದ ಪುತ್ರ, ಶವದ ಮೇಲೆ ಕಾಲಿಟ್ಟು ಕರೆ
ಸೈಟ್ ವಿವಾದ: ಯಶ್ ತಾಯಿ ಪುಷ್ಪಾ ಮೇಲೆ ಮಾನನಷ್ಟ ಕೇಸ್ ಹಾಕಲು ಪಿಡಿಒ ನಿರ್ಧಾರ
ಸೈಟ್ ವಿವಾದ: ಯಶ್ ತಾಯಿ ಪುಷ್ಪಾ ಮೇಲೆ ಮಾನನಷ್ಟ ಕೇಸ್ ಹಾಕಲು ಪಿಡಿಒ ನಿರ್ಧಾರ
ಸಾಗರ ಮಾರಿಕಾಂಬೆ ದರ್ಶನದ ವೇಳೆ ಕುಸಿದು ಬಿದ್ದ ಕಾಗೋಡು ತಿಮ್ಮಪ್ಪ
ಸಾಗರ ಮಾರಿಕಾಂಬೆ ದರ್ಶನದ ವೇಳೆ ಕುಸಿದು ಬಿದ್ದ ಕಾಗೋಡು ತಿಮ್ಮಪ್ಪ
ಐತಿಹಾಸಿಕ ದೇವರ ನಕ್ಲೇಸ್ ಕದ್ದುಕೊಂಡು ಹೋದ್ರಾ ಮುಜರಾಯಿ ಇಲಾಖೆ ಅಧಿಕಾರಿ?
ಐತಿಹಾಸಿಕ ದೇವರ ನಕ್ಲೇಸ್ ಕದ್ದುಕೊಂಡು ಹೋದ್ರಾ ಮುಜರಾಯಿ ಇಲಾಖೆ ಅಧಿಕಾರಿ?
ಪಾಕ್ ಸ್ಪಿನ್ನರ್​ನ ಬೌಲಿಂಗ್ ಆ್ಯಕ್ಷನ್ ಕಾನೂನು ಬದ್ಧವೇ?
ಪಾಕ್ ಸ್ಪಿನ್ನರ್​ನ ಬೌಲಿಂಗ್ ಆ್ಯಕ್ಷನ್ ಕಾನೂನು ಬದ್ಧವೇ?
ವಿಧಾನಸಭೆಯಲ್ಲಿ ಪೆನ್​ಡ್ರೈವ್ ಪ್ರದರ್ಶಿಸಿ ಅಶೋಕ್ ಗಂಭೀರ ಆರೋಪ
ವಿಧಾನಸಭೆಯಲ್ಲಿ ಪೆನ್​ಡ್ರೈವ್ ಪ್ರದರ್ಶಿಸಿ ಅಶೋಕ್ ಗಂಭೀರ ಆರೋಪ
ಕಹಿ ಬೇವಿನ ಮರದಲ್ಲಿ ಬರುತ್ತಿದೆ ಸಿಹಿಯಾದ ನೀರು! ಏನಿದು ವಿಸ್ಮಯ?
ಕಹಿ ಬೇವಿನ ಮರದಲ್ಲಿ ಬರುತ್ತಿದೆ ಸಿಹಿಯಾದ ನೀರು! ಏನಿದು ವಿಸ್ಮಯ?
ಬೆಂಚ್​​ ಮೇಲೆ ಕಾಲಿಟ್ಟು ರಾಜ್ಯಸಭೆಯಲ್ಲಿ ಮಾತಾಡಿದ ಸದಸ್ಯ!:  ವಿಡಿಯೋ ನೋಡಿ
ಬೆಂಚ್​​ ಮೇಲೆ ಕಾಲಿಟ್ಟು ರಾಜ್ಯಸಭೆಯಲ್ಲಿ ಮಾತಾಡಿದ ಸದಸ್ಯ!:  ವಿಡಿಯೋ ನೋಡಿ
ಉಡುಪಿಯ ಹಿರಿಯಡ್ಕದಲ್ಲಿ ಭೀಕರ ಅಪಘಾತ: ಎದೆ ಝಲ್​​ ಎನಿಸುತ್ತೆ ಈ ದೃಶ್ಯ
ಉಡುಪಿಯ ಹಿರಿಯಡ್ಕದಲ್ಲಿ ಭೀಕರ ಅಪಘಾತ: ಎದೆ ಝಲ್​​ ಎನಿಸುತ್ತೆ ಈ ದೃಶ್ಯ
ಶ್ರೀಲಂಕಾ ಸ್ಕೋರ್ 189: 173 ರನ್ ಬಾರಿಸಿ ಗೆದ್ದ ಇಂಗ್ಲೆಂಡ್
ಶ್ರೀಲಂಕಾ ಸ್ಕೋರ್ 189: 173 ರನ್ ಬಾರಿಸಿ ಗೆದ್ದ ಇಂಗ್ಲೆಂಡ್