ಹುಬ್ಬಳ್ಳಿಯಲ್ಲಿ 18ರ ಯುವತಿಯನ್ನು ಮೋಸದಿಂದ ಮದುವೆಯಾಗಿದ್ದ 50-ವರ್ಷದ ಪ್ರಕಾಶ್​ನನ್ನು ಬಂಧನ

ಅರುಣ್​ ಕುಮಾರ್​ ಬೆಳ್ಳಿ

Updated on: Feb 19, 2025 | 4:40 PM

ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ್ದ ಯುವತಿ ತನ್ನನ್ನು ಪ್ರಕಾಶ್ ಮೋಸದಿಂದ ಎಲ್ಲಿಗೋ ಕರೆದೊಯ್ದು ಮದುವೆಯಾದ ಅಂತ ಹೇಳಿದ್ದಳು. ಇವನ ಕಾಟದಿಂದ ತಪ್ಪಿಸಲೆಂದು ಪಾಲಕರು ಯುವತಿಯನ್ನು ಕೊಲ್ಹಾಪುರದಲ್ಲಿರುವ ಅಜ್ಜಿಯ ಮನೆಯಲ್ಲಿ ಬಿಟ್ಟಿದ್ದರು. ಆದರೆ ಕಳೆದ ತಿಂಗಳು ಪ್ರಕಾಶ್ ಆಕೆಯನ್ನು ಪತ್ತೆ ಮಾಡಿದ ಬಳಿಕ ಸುಮಾರು ಒಂದೂವರೆ ತಿಂಗಳುಗಳವರೆಗೆ ಇಬ್ಬರೂ ನಾಪತ್ತೆಯಾಗಿದ್ದರು.

ಹುಬ್ಬಳ್ಳಿ: ನೀಲಿ ಚೆಕ್ಸ್ ಶರ್ಟ್ ತೊಟ್ಟಿರುವ ಮಹಾನುಭಾವನ ಬಗ್ಗೆ ನಾವು ಸಾಕಷ್ಟು ಬರೆದಿದ್ದೇವೆ. ಇವನ ಹೆಸರು ಪ್ರಕಾಶ್ ಮತ್ತು ಈತ ಈಗ ನಗರದ ಕೇಶ್ವಾಪುರ ಪೊಲೀಸರ ವಶದಲ್ಲಿದ್ದಾನೆ. ಪ್ರಕಾಶ್ ಮಾಡಿದ ಘನಂದಾರಿ ಕೆಲಸದ ಬಗ್ಗೆ ಕನ್ನಡಿಗರಿಗೆ ಗೊತ್ತಿದೆ. ವಿಡಿಯೋದ ಎಡಭಾಗದಲ್ಲಿ ಕಾಣುವ ಯುವತಿಯನ್ನು ಇವನು ಪುಸಲಾಯಿಸಿ, ಆಮಿಶಗಳನ್ನೊಡ್ಡಿ, ಬೆದರಿಕೆಯನ್ನೂ ಹಾಕಿ ಮದುವೆಯಾಗಿದ್ದ. ಯುವತಿ ಅವನಿಂದ ತಪ್ಪಿಸಿಕೊಂಡು ಹುಬ್ಬಳ್ಳಿಯಲ್ಲಿರುವ ತನ್ನ ತಂದೆ ತಾಯಿಗಳ ಮನೆಗೆ ಬಂದು ವಿರುದ್ಧ ದೂರು ದಾಖಲಿಸಿದ ಬಳಿಕ ಪೊಲೀಸರು ಇವನನ್ನು ಬಂಧಿಸಿದ್ದಾರೆ. ತನ್ನ ತಂದೆಗಿಂತ ಹಿರಿಯನಾಗಿರುವ ವ್ಯಕ್ತಿಯನ್ನು ಯುವತಿ ನಂಬಿದ್ದಾದರೂ ಹೇಗೆ ಅನ್ನೋದೇ ಯಕ್ಷ ಪ್ರಶ್ನೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಹುಬ್ಬಳ್ಳಿ: 50 ವರ್ಷದ ವಿವಾಹಿತ ಪುರುಷನೊಂದಿಗೆ ನಾಪತ್ತೆಯಾಗಿದ್ದ 18ರ ಯುವತಿ ಕಹಾನಿಯಲ್ಲಿ ಟ್ವಿಸ್ಟ್​ನೊಂದಿಗೆ ವಾಪಸ್ಸಾಗಿದ್ದಾಳೆ!

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.