ನನಗಿರುವುದು ಒಬ್ಬಳೇ ಹೆಂಡ್ತಿ, ಒಂದೇ ಸಂಸಾರ- ಕಾಂಗ್ರೆಸ್​ ಶಾಸಕ ಡಿ ಕೆ ಶಿವಕುಮಾರ್​

|

Updated on: Mar 24, 2021 | 12:31 PM

ನನಗಿರುವುದು ಒಬ್ಬಳೇ ಹೆಂಡ್ತಿ, ಒಂದೇ ಸಂಸಾರ ಎಂದು ಕಾಂಗ್ರೆಸ್​ ಶಾಸಕ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಮುತ್ತುಗಳನ್ನು ಉದುರಿಸಿದ್ದಾರೆ. ಇನ್ನೂ ಏನೇನು ಮಾತನಾಡುತ್ತಾರೋ ಮಾತನಾಡಲಿ. ನಾನಂತೂ ಏಕಪತ್ನೀವ್ರತಸ್ಥತ ಎಂದಿದ್ದಾರೆ.

ನನಗಿರುವುದು ಒಬ್ಬಳೇ ಹೆಂಡ್ತಿ, ಒಂದೇ ಸಂಸಾರ- ಕಾಂಗ್ರೆಸ್​ ಶಾಸಕ ಡಿ ಕೆ ಶಿವಕುಮಾರ್​
ಡಿ.ಕೆ.ಶಿವಕುಮಾರ್ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ರಮೇಶ್‌ಕುಮಾರ್ ಇವರೆಲ್ಲರೂ ಏಕಪತ್ನಿ ವ್ರತಸ್ಥರಾ? ನಾನೂ ಸೇರಿದಂತೆ ಎಲ್ಲ 224 ಶಾಸಕ ಮೇಲೆಯೂ ತನಿಖೆಯಾಗಲಿ. ಎಲ್ಲರನ್ನು ತನಿಖೆ ಮಾಡಿದಾಗ ಬಂಡವಾಳ ಗೊತ್ತಾಗುತ್ತೆ ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ್ ನೀಡಿರುವ ಪಂಥಾಹ್ವಾನದ ಬಗ್ಗೆ ಕಾಂಗ್ರೆಸ್ ಹಿರಿಯ ಶಾಸಕ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ನನಗಿರುವುದು ಒಬ್ಬಳೇ ಹೆಂಡ್ತಿ, ಒಂದೇ ಸಂಸಾರ ಎಂದು ಕಾಂಗ್ರೆಸ್​ ಶಾಸಕ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಮುತ್ತುಗಳನ್ನು ಉದುರಿಸಿದ್ದಾರೆ. ಇನ್ನೂ ಏನೇನು ಮಾತನಾಡುತ್ತಾರೋ ಮಾತನಾಡಲಿ. ನಾನಂತೂ ಏಕಪತ್ನೀವ್ರತಸ್ಥತ ಎಂದಿದ್ದಾರೆ.

ಕೆ. ಸುಧಾಕರ್ ಅವರು ಎಲ್ಲ ಶಾಸಕರ ವಿರುದ್ಧ ತನಿಖೆ ಮಾಡುವಂತೆ ಕೇಳಿದ್ದಾರೆ. ಕೆ. ಸುಧಾಕರ್ ತನಿಖೆಗೆ ಕೇಳಿರುವುದು ಬಹಳ ಸಂತೋಷ. ಡಾ.ಕೆ.ಸುಧಾಕರ್ ರಾಜ್ಯಕ್ಕೆ ನುಡಿಮುತ್ತುಗಳನ್ನು ರಾಜ್ಯಕ್ಕೆ ಕೊಟ್ಟಿದ್ದಾರೆ. ಅವರ ಹೇಳಿಕೆ ಬಗ್ಗೆ ಇಲ್ಲಿ ಚರ್ಚೆ ಮಾಡುವುದಕ್ಕೆ ಹೋಗಲ್ಲ. ನಮ್ಮ ನಾಯಕರ ಜತೆ ಚರ್ಚಿಸಿ, ಸದನದಲ್ಲಿ ಮಾತಾಡುತ್ತೇನೆ  ಎಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿ, ರಮೇಶ್‌ಕುಮಾರ್ ಸತ್ಯಹರಿಶ್ಚಂದ್ರರಾ? ಇವರೆಲ್ಲ ಏಕಪತ್ನಿ ವ್ರತ ಮಾಡುತ್ತಿದ್ದಾರಾ? ಸಚಿವ ಸುಧಾಕರ್ ಪ್ರಶ್ನೆ

Published On - 12:26 pm, Wed, 24 March 21