IMA ಬಹುಕೋಟಿ ವಂಚನೆ: ಕೊರೊನಾದಿಂದಾಗಿ ತನಿಖೆಯ ವೇಗ ನಿಧಾನವಾಗಿದೆ!

ಬೆಂಗಳೂರು:IMA ಸಂಸ್ಥೆಯಿಂದ ಬಹುಕೋಟಿ ರೂ. ವಂಚನೆ ಪ್ರಕರಣ ಸಂಬಂಧ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಪಿಐಎಲ್ ವಿಚಾರಣೆ ನಡೆಯುತ್ತಿದ್ದು, ಸದ್ಯ ವಿಚಾರಣೆಯನ್ನು ಅಕ್ಟೋಬರ್ 21ಕ್ಕೆ ಮುಂದೂಡಲಾಗಿದೆ. ವಿಚಾರಣೆ ವೇಳೆ CBI, ಹೈಕೋರ್ಟ್‌ಗೆ ತನಿಖಾ ವರದಿ ಸಲ್ಲಿಸಿದೆ. ಕೊವಿಡ್-19ನಿಂದಾಗಿ ತನಿಖೆಯ ವೇಗ ನಿಧಾನವಾಗಿದೆ ಎಂದು ಹೈಕೋರ್ಟ್‌ಗೆ CBI ಎಸ್‌ಪಿಪಿ ಪ್ರಸನ್ನಕುಮಾರ್ ತಿಳಿಸಿದ್ದಾರೆ. ಠೇವಣಿದಾರರ ಭಾಗಶಃ ಹಣ ಹಿಂತಿರುಗಿಸಲು ಕ್ರಮ ಠೇವಣಿದಾರರ ಭಾಗಶಃ ಹಣ ಹಿಂತಿರುಗಿಸಲು ಕ್ರಮ ಕೈಗೊಳ್ಳಲು ಆಧಾರ್ ದೃಢೀಕರಣಕ್ಕಾಗಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಹೈಕೋರ್ಟ್‌ಗೆ ಸರ್ಕಾರಿ ವಕೀಲ […]

IMA ಬಹುಕೋಟಿ ವಂಚನೆ: ಕೊರೊನಾದಿಂದಾಗಿ ತನಿಖೆಯ ವೇಗ ನಿಧಾನವಾಗಿದೆ!
Edited By:

Updated on: Oct 08, 2020 | 1:03 PM

ಬೆಂಗಳೂರು:IMA ಸಂಸ್ಥೆಯಿಂದ ಬಹುಕೋಟಿ ರೂ. ವಂಚನೆ ಪ್ರಕರಣ ಸಂಬಂಧ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಪಿಐಎಲ್ ವಿಚಾರಣೆ ನಡೆಯುತ್ತಿದ್ದು, ಸದ್ಯ ವಿಚಾರಣೆಯನ್ನು ಅಕ್ಟೋಬರ್ 21ಕ್ಕೆ ಮುಂದೂಡಲಾಗಿದೆ. ವಿಚಾರಣೆ ವೇಳೆ CBI, ಹೈಕೋರ್ಟ್‌ಗೆ ತನಿಖಾ ವರದಿ ಸಲ್ಲಿಸಿದೆ. ಕೊವಿಡ್-19ನಿಂದಾಗಿ ತನಿಖೆಯ ವೇಗ ನಿಧಾನವಾಗಿದೆ ಎಂದು ಹೈಕೋರ್ಟ್‌ಗೆ CBI ಎಸ್‌ಪಿಪಿ ಪ್ರಸನ್ನಕುಮಾರ್ ತಿಳಿಸಿದ್ದಾರೆ.

ಠೇವಣಿದಾರರ ಭಾಗಶಃ ಹಣ ಹಿಂತಿರುಗಿಸಲು ಕ್ರಮ
ಠೇವಣಿದಾರರ ಭಾಗಶಃ ಹಣ ಹಿಂತಿರುಗಿಸಲು ಕ್ರಮ ಕೈಗೊಳ್ಳಲು ಆಧಾರ್ ದೃಢೀಕರಣಕ್ಕಾಗಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಹೈಕೋರ್ಟ್‌ಗೆ ಸರ್ಕಾರಿ ವಕೀಲ ವಿಜಯ್ ಕುಮಾರ್ ಪಾಟೀಲ್ ಹೇಳಿದ್ದಾರೆ. ಹೈಕೋರ್ಟ್‌ನ ಹಿಂದಿನ ಆದೇಶಗಳ ಜಾರಿ ಬಗ್ಗೆ ವರದಿ ಸಲ್ಲಿಸಿ ಸಕ್ಷಮ ಪ್ರಾಧಿಕಾರಕ್ಕೆ ಹೈಕೋರ್ಟ್ ಸೂಚಿಸಿದೆ.