Shivamogga Blast: JDS ಮುಖಂಡ ನರಸಿಂಹ, ಗುತ್ತಿಗೆದಾರ ಸುಧಾಕರ್ ಅರೆಸ್ಟ್

ಕಲ್ಲು ಗಣಿಗಾರಿಕೆ ಪಾಲುದಾರಿಕೆಯಲ್ಲಿ ನಡೀತಿತ್ತು. ಕ್ರಷರ್​ಗೆ ಸುಧಾಕರ್, ಮುಮ್ತಾಜ್, ಅವಿನಾಶ್ ಪಾರ್ಟ್​ನರ್ಸ್​ಗಳಾಗಿದ್ರು. ಅನಿಲ್ ಎಂಬುವವರ ಅಜ್ಜಿ ಜಮೀನಿನಲ್ಲೇ ಈ ಕಲ್ಲು ಗಣಿಗಾರಿಕೆ ನಡೆಯುತ್ತಿತ್ತು.

Shivamogga Blast: JDS ಮುಖಂಡ ನರಸಿಂಹ, ಗುತ್ತಿಗೆದಾರ ಸುಧಾಕರ್ ಅರೆಸ್ಟ್
JDS ಮುಖಂಡ ನರಸಿಂಹ (ಎಡ) ಕಲ್ಲು ಗಣಿ ಪ್ರದೇಶದ ಗುತ್ತಿಗೆದಾರ ಸುಧಾಕರ್ (ಬಲ)
ಆಯೇಷಾ ಬಾನು Edited By: ಸಾಧು ಶ್ರೀನಾಥ್​

Updated on: Jan 22, 2021 | 10:35 AM

ಶಿವಮೊಗ್ಗ: ಕಲ್ಲು ಗಣಿ ಪ್ರದೇಶದಲ್ಲಿ ಜಿಲೆಟಿನ್ ಸ್ಫೋಟಗೊಂಡು ದುರಂತಕ್ಕೆ ಸಂಬಂಧಿಸಿ ಅಕ್ರಮ ಕಲ್ಲುಗಣಿಗಾರಿಕೆ ಆರೋಪದಡಿ ಜೆಡಿಎಸ್ ಮುಖಂಡ ನರಸಿಂಹನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಇದೇ ಪ್ರಕರಣ ಸಂಬಂಧ ಕಲ್ಲು ಗಣಿ ಪ್ರದೇಶದ ಗುತ್ತಿಗೆದಾರ ಸುಧಾಕರ್​ನನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನರಸಿಂಹ ಅಕ್ರಮ ಕಲ್ಲುಗಣಿಗಾರಿಕೆಗೆ ಜಿಲೆಟಿನ್​ ಪೂರೈಸುತ್ತಿದ್ದ. ಹಾಗೂ ಸುಧಾಕರ್ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ. ನರಸಿಂಹ ಕಲ್ಲು ಕೊಟ್ಟರೆ ಸುಧಾಕರ್ ಕಲ್ಲು ಪುಡಿ ಮಾಡ್ತಿದ್ದ. ಇನ್ನು ಕಲ್ಲು ಗಣಿಗಾರಿಕೆ ಪಾಲುದಾರಿಕೆಯಲ್ಲಿ ನಡೀತಿತ್ತು. ಕ್ರಷರ್​ಗೆ ಸುಧಾಕರ್, ಮುಮ್ತಾಜ್, ಅವಿನಾಶ್ ಪಾರ್ಟ್​ನರ್ಸ್​ಗಳಾಗಿದ್ರು. ಅನಿಲ್ ಎಂಬುವವರ ಅಜ್ಜಿ ಜಮೀನಿನಲ್ಲೇ ಈ ಕಲ್ಲು ಗಣಿಗಾರಿಕೆ ನಡೆಯುತ್ತಿತ್ತು.

ಈ ಮೂವರು ಮೂರು ಪಕ್ಷಗಳ ರಾಜಕೀಯ ಮುಖಂಡರ ಆಪ್ತರಾಗಿದ್ದರು. ರಾಜಕೀಯ ನಾಯಕರ ಬೆಂಬಲದಿಂದಲೇ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದರೂ ಯಾರು ಪ್ರಶ್ನಿಸುತ್ತಿರಲಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಶಿವಮೊಗ್ಗ: ಕಲ್ಲು ಗಣಿಗಾರಿಕೆಗೆಂದು.. ಲಾರಿಯಲ್ಲಿ ಸಾಗಿಸುತ್ತಿದ್ದ ಡೈನಮೈಟ್​​ ಸ್ಫೋಟ

Published On - 8:55 am, Fri, 22 January 21

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us