AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾನು ಓದಿದ ಶಾಲೆಗೆ ಕಟ್ಟಡ ಕಟ್ಟಿಸಿಕೊಟ್ರು.. ಕೋಟೆನಾಡಿನ ನಿವೃತ್ತ ನೌಕರ ಮಾಡಿದ ಕೆಲಸ ಜನ ಮೆಚ್ಚುಗೆಗೆ ಪಾತ್ರ

ಬಹುತೇಕ ಜನರು ಸರ್ಕಾರಿ ಶಾಲೆಗಳ‌‌ು ಅಂದ್ರೆ ನೋಡೋವ ರೀತಿಯೇ ಬೇರೆ. ಆದ್ರೆ,‌ ಕೋಟೆನಾಡಿನ ನಿವೃತ್ತ ನೌಕರ ಮಾಡಿದ ಕೆಲಸ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರ ಕೆಲಸ ಸಾಕಷ್ಟು ಜನರಿಗೆ ಮಾದರಿಯಾಗಿದೆ.

ತಾನು ಓದಿದ ಶಾಲೆಗೆ ಕಟ್ಟಡ ಕಟ್ಟಿಸಿಕೊಟ್ರು.. ಕೋಟೆನಾಡಿನ ನಿವೃತ್ತ ನೌಕರ ಮಾಡಿದ ಕೆಲಸ ಜನ ಮೆಚ್ಚುಗೆಗೆ ಪಾತ್ರ
ನಿವೃತ್ತ ನೌಕರ ಸಣ್ಣಕ್ಕಿ ಪ್ರಹ್ಲಾದ್ ನಿರ್ಮಾಣ ಮಾಡಿಕೊಟ್ಟ ಶಾಲಾ ಕಟ್ಟಡ
ಆಯೇಷಾ ಬಾನು
|

Updated on: Jan 22, 2021 | 8:07 AM

Share

ಚಿತ್ರದುರ್ಗ: ದಂಡಿನ ಕುರುಬರಹಟ್ಟಿ ಗ್ರಾಮದಲ್ಲಿ ಸುಮಾರು ಆರು ದಶಕಗಳ ಹಿಂದೆ ನಿರ್ಮಾಣವಾಗಿದ್ದ ಗ್ರಾಮದ ಶಾಲಾ ಕಟ್ಟಡ ಶಿಥಿಲಾವಸ್ಥೆ ತಲುಪಿತ್ತು. ಇದನ್ನ ಕಂಡ ಗ್ರಾಮದ ರೈಲ್ವೆ ಇಲಾಖೆ ನಿವೃತ್ತ ನೌಕರ ಸಣ್ಣಕ್ಕಿ ಪ್ರಹ್ಲಾದ್, ತಾನು ಓದಿದ ಶಾಲೆಗೆ ಒಳ್ಳೆಯ ಕಟ್ಟಡವಿರಲಿ ಅಂತಾ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಿಕೊಟ್ಟಿದ್ದಾರೆ.

ಇನ್ನು ಸಣ್ಣಕ್ಕಿ ಪ್ರಹ್ಲಾದ್ ಅವರ ಕಾರ್ಯಕ್ಕೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮೆಚ್ಚುಗೆ ಸೂಚಿಸಿದ್ದಾರೆ. ಅಂತೆಯೇ ಖುದ್ದಾಗಿ ಗ್ರಾಮಕ್ಕೆ ಬಂದು ಶಾಲಾ ಕಟ್ಟಡ ವೀಕ್ಷಿಸಿ ಉದ್ಘಾಟನೆಗೊಳಿಸಿದ್ದಾರೆ. ಶಿಕ್ಷಣ ಸಚಿವರಿಗೆ ಸ್ಥಳೀಯ ಶಾಸಕ‌ ಜಿ.ಹೆಚ್.ತಿಪ್ಪಾರೆಡ್ಡಿ ಮತ್ತು ಅಧಿಕಾರಿಗಳು ಸಾಥ್ ನೀಡಿದ್ರು.

ಒಟ್ನಲ್ಲಿ ಸರ್ಕಾರಿ ಶಾಲೆಗಳ ಬಗ್ಗೆ ಯಾರು ಹೆಚ್ಚು ತಲೆ ಕೆಡಿಸಿಕೊಳ್ಳಲ್ಲ. ತಮ್ಮ ಮಕ್ಕಳನ್ನ ಖಾಸಗಿ ಶಾಲೆಯಲ್ಲಿ ಓದಿಸುತ್ತಾ ತಮ್ಮ ಪಾಡಿಗೆ ಇರ್ತಾರೆ. ಇಂತಹದರಲ್ಲಿ ಈ ನಿವೃತ್ತ ನೌಕರ ಪ್ರಹ್ಲಾದ್ ಕಾರ್ಯ ನಿಜಕ್ಕೂ ಶ್ಲಾಘನೀಯ.

ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳಿಗೆ ಬಸ್ ಇಲ್ಲ; ಸಮಸ್ಯೆ ಪರಿಹರಿಸುವ ಭರವಸೆ ನೀಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್