AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿಯಲ್ಲಿ ಮತ್ತೊಂದು ಬಹುಕೊಟಿ ವಂಚನೆ ಪ್ರಕರಣ: 165 ಕೋಟಿ ರೂ. ದೋಖಾ

ಬೆಳಗಾವಿಯಲ್ಲಿ ಮತ್ತೊಂದು ಬಹುಕೊಟಿ ವಂಚನೆ ಪ್ರಕರಣ: 165 ಕೋಟಿ ರೂ. ದೋಖಾ

Sahadev Mane
| Edited By: |

Updated on: Jul 15, 2026 | 2:33 PM

Share

ಹೂಡಿಕೆದಾರರಿಗೆ ಹೆಚ್ಚಿನ ಬಡ್ಡಿ ಆಮಿಷ ತೋರಿಸಿ ನೂರಾರು ಕೋಟಿ ರೂಪಾಯಿ ವಂಚನೆ ನಡೆಸಿರುವ ಆರೋಪ ಬೆಳಗಾವಿಯಲ್ಲಿ ಕೇಳಿಬಂದಿದೆ. ಅಪೆಕ್ಸ್​ ಬಿಜ್ ಕಾರ್ಪ್ LLP ಸಂಸ್ಥೆಯಿಂದ ಮೋಸ ನಡೆದಿದ್ದು, ಮಾಲೀಕರಾದ ಕಾಶೀನಾಥ್ ವಾಗ್ಮೋರೆ ಮತ್ತು ಗಣೇಶ್ ಭಂಡಾರಿ ಕಚೇರಿಗೆ ಬೀಗ ಜಡಿದು ಪರಾರಿಯಾಗಿದ್ದಾರೆ. ಹೂಡಿಕೆದಾರರ ದೂರಿನನ್ವಯ ಎಫ್ಐಆರ್ ದಾಖಲಾಗಿದ್ದು,50 ಕೋಟಿಗೂ ಹೆಚ್ಚು ಹಣ ವಂಚನೆ ಮಾಡಿರುವುದರಿಂದ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗುತ್ತೆ ಎಂದು ಬೆಳಗಾವಿ ನಗರ ಪೊಲೀಸ್ ಕಮಿಷನರ್​ ಭೂಷಣ್ ಬೊರಸೆ ತಿಳಿಸಿದ್ದಾರೆ.

ಬೆಳಗಾವಿ, ಜುಲೈ 15: ನಗರದಲ್ಲಿ ಮತ್ತೊಂದು ಬಹುಕೋಟಿ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ಹೆಚ್ಚಿ‌ನ ಬಡ್ಡಿ ಆಮಿಷವೊಡ್ಡಿ ಗ್ರಾಹಕರಿಗೆ 165 ಕೋಟಿ ರೂ. ವಂಚನೆ ಆರೋಪ ಕೇಳಿಬಂದಿದೆ. ಅಪೆಕ್ಸ್​ ಬಿಜ್ ಕಾರ್ಪ್ LLP  ಸಂಸ್ಥೆಯಿಂದ ಮೋಸ ನಡೆದಿರೋದಾಗಿ ಬೆಳಗಾವಿ ನಗರ ಪೊಲೀಸ್ ಕಮಿಷನರ್​ ಭೂಷಣ್ ಬೊರಸೆ ಹೇಳಿಕೆ ನೀಡಿದ್ದಾರೆ. ವಂಚನೆ ಬಗ್ಗೆ ಅಶೋಕ ಬಿಸಗುಪ್ಪಿ ಎಂಬವರು ಜುಲೈ 13ರಂದು ಬೆಳಗಾವಿಯ ಟಿಳಕವಾಡಿ ಠಾಣೆ ದೂರು ನೀಡಿದ್ದರು. ಅಪೆಕ್ಸ್ ಕಂಪನಿಯಲ್ಲಿ ಸಾವಿರಾರು ಜನರು ಇನ್ವೆಸ್ಟ್ ಮಾಡಿದ್ದು, ಶೇ.4ರಷ್ಟು ಬಡ್ಡಿ ಆಮಿಷವೊಡ್ಡಿ ಜನರಿಂದ ಹಣ ಸಂಗ್ರಹಿಸಿದ್ದಾರೆ. ಹ್ಯಾಂಡ್ ಲೋನ್ ಅಗ್ರಿಮೆಂಟ್ ಮತ್ತು ಚೆಕ್ ಕೊಟ್ಟಿದ್ದಾರೆ. ಆದರೆ ಹಣ ವಾಪಸ್​​ ನೀಡದೆ ಪರಾರಿಯಾಗಿದ್ದಾರೆ. ಹೂಡಿಕೆದಾರರ ದೂರಿನನ್ವಯ ಎಫ್ಐಆರ್ ದಾಖಲಾಗಿದ್ದು, ಕಾಶಿನಾಥ್​ ವಾಗ್ಮರೆ ಹಾಗೂ ಗಣೇಶ್​​ ಬಂಡಾರಿ ದಂಪತಿಗಳು ಇದರಲ್ಲಿ ಭಾಗಿಯಾಗಿದ್ದಾರೆ. 50 ಕೋಟಿಗೂ ಹೆಚ್ಚು ಹಣ ವಂಚನೆ ಮಾಡಿರುವುದರಿಂದ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗುತ್ತೆ. ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us