AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Indian Railways

Indian Railways

ಭಾರತೀಯ ರೈಲ್ವೆ ಭಾರತ ಸರ್ಕಾರದ, ರೈಲ್ವೇ ಖಾತೆಯ ಅಧೀನದ, ಒಂದು ಇಲಾಖೆ. ಭಾರತ ಉದ್ದಗಲಕ್ಕೂ ಹರಡಿದ ರೈಲು ಮಾರ್ಗಗಳ (ಉಗಿ ಬಂಡಿ ದಾರಿಗಳ) ನಿರ್ವಹಣೆಯ ಜವಾಬ್ದಾರಿ ಈ ಇಲಾಖೆಯದಾಗಿದೆ. 1853 ರಲ್ಲಿ ಸ್ಥಾಪಿತವಾದ ಇದು ಪ್ರಪಂಚದ ಅತಿದೊಡ್ಡ ರೈಲು ಜಾಲಗಳಲ್ಲಿ ಒಂದಾಗಿದೆ, ವಿವಿಧ ಪ್ರದೇಶಗಳನ್ನು ಸಂಪರ್ಕಿಸುತ್ತದೆ ಮತ್ತು ಸರಕುಗಳು ಮತ್ತು ಪ್ರಯಾಣಿಕರ ಚಲನೆಯನ್ನು ಸುಗಮಗೊಳಿಸುತ್ತದೆ. ರೈಲ್ವೇ ಖಾತೆಯ ಮುಖ್ಯಸ್ಥರು ಕ್ಯಾಬಿನೆಟ್ ದರ್ಜೆಯ ಮಂತ್ರಿಯಾಗಿದ್ದರೆ, ರೈಲ್ವೇ ಇಲಾಖೆಯ ಆಡಳಿತ ವ್ಯವಸ್ಥೆ ರೈಲ್ವೇ ಮಂಡಳಿಯ ಅಧೀನದಲ್ಲಿದೆ. ರೈಲ್ವೇ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ರೈಲ್ವೇಗಳು ದಿನನಿತ್ಯ ಸಾವಿರಾರು ರೈಲುಗಳನ್ನು ಓಡಿಸುವುದರೊಂದಿಗೆ ವಿಸ್ತಾರವಾದ ಜಾಲವನ್ನು ಹೊಂದಿದೆ. ವ್ಯಾಪಾರ ಮತ್ತು ಪ್ರಯಾಣವನ್ನು ಸಕ್ರಿಯಗೊಳಿಸುವ ಮೂಲಕ ಭಾರತದ ಆರ್ಥಿಕ ಅಭಿವೃದ್ಧಿಯಲ್ಲಿ ಇದು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.

ಇನ್ನೂ ಹೆಚ್ಚು ಓದಿ

ಟ್ರೈನ್ ಟಿಕೆಟ್ ಬೆಲೆ ಪ್ರತೀ ಕಿಮೀಗೆ 1-2 ಪೈಸೆ ಹೆಚ್ಚಳ; ಡಿ. 26ರಿಂದ ಹೊಸ ದರ ಜಾರಿ

Indian Railways hikes fares from Dec 26th: ಭಾರತೀಯ ರೈಲ್ವೇಸ್ ಜುಲೈ ನಂತರ ಮತ್ತೊಮ್ಮೆ ರೈಲು ಟಿಕೆಟ್ ದರಗಳನ್ನು ಹೆಚ್ಚಿಸಲು ನಿರ್ಧರಿಸಿದೆ. ಜನರಲ್ ಕೋಚ್​ಗಳಲ್ಲಿ 215 ಕಿಮೀಗಿಂತ ಹೆಚ್ಚಿನ ದೂರದ ಪ್ರಯಾಣವಾದರೆ ಪ್ರತಿ ಕಿಮೀಗೆ 1 ಪೈಸೆಯಷ್ಟು ಬೆಲೆ ಏರಿಕೆ ಆಗಲಿದೆ. ಎಸಿ ಕೋಚ್ ಮತ್ತು ಮೇಲ್ ಟ್ರೈನ್, ಎಕ್ಸ್​ಪ್ರೆಸ್ ಟ್ರೈನ್​ಗಳಲ್ಲಿ ಪ್ರತೀ ಕಿಮೀಗೆ 2 ಪೈಸೆಯಷ್ಟು ಟಿಕೆಟ್ ಬೆಲೆ ಏರಲಿದೆ. ಡಿ. 26ರಿಂದ ಪರಿಷ್ಕೃತ ದರ ಜಾರಿಗೆ ಬರುತ್ತದೆ.

ಪಾಂಡವಪುರದಲ್ಲಿ ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್

ರೈಲನ್ನು ಇಳಿಯುವ ಭರದಲ್ಲಿ ರೈಲು ನಿಲ್ಲುವ ಮೊದಲೇ ಪ್ರಯಾಣಿಕರು ರೈಲಿನಿಂದ ಕೆಳಗೆ ಹಾರಿಬಿಡುತ್ತಾರೆ. ಇದರಿಂದ ಕೆಲವೊಮ್ಮೆ ಕೆಲವರು ರೈಲಿನಡಿ ಸಿಲುಕಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇನ್ನು ಕೆಲವು ಜನರು ಕಾಲು ಮುರಿದುಕೊಂಡಿದ್ದಾರೆ. ಪಾಂಡವಪುರದಲ್ಲಿ ಡಿಸೆಂಬರ್ 13ರಂದು ಪಾಂಡವಪುರದ ಸ್ಟೇಷನ್ ಮಾಸ್ಟರ್ ಅಭಿಜಿತ್ ಸಿಂಗ್ ಅವರು ಚಲಿಸುವ ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕರೊಬ್ಬರನ್ನು ರಕ್ಷಿಸುವ ಮೂಲಕ ದಿಟ್ಟತನ ತೋರಿದ್ದಾರೆ. ರೈಲ್ವೆ ಇಲಾಖೆ ಸಿಸಿಟಿವಿಯಲ್ಲಿ ಸೆರೆಯಾದ ಈ ವಿಡಿಯೋವನ್ನು ಎಕ್ಸ್​ನಲ್ಲಿ ಹಂಚಿಕೊಂಡಿದೆ.

Indian Railways Update: ರೈಲ್ವೆ ಪ್ರಯಾಣಿಕರೇ ಗಮನಿಸಿ, ಇನ್ಮುಂದೆ ಟಿಕೆಟ್​ ಅನ್ನು ಮೊಬೈಲ್​ನಲ್ಲಿ ತೋರಿಸಿದ್ರೆ ಸಾಲ್ದು

ಭಾರತೀಯ ರೈಲ್ವೆ ಡಿಜಿಟಲ್ ವಂಚನೆ ತಡೆಗಟ್ಟಲು ಹೊಸ ನಿಯಮ ಜಾರಿಗೊಳಿಸಿದೆ. ಇನ್ಮುಂದೆ ಯುಟಿಎಸ್, ಎಟಿವಿಎಂ ಅಥವಾ ಕೌಂಟರ್ ಟಿಕೆಟ್‌ಗಳಿಗೆ ಮುದ್ರಿತ ಪ್ರತಿಯನ್ನು ಕೊಂಡೊಯ್ಯುವುದು ಕಡ್ಡಾಯ. AI ಬಳಸಿ ನಕಲಿ ಟಿಕೆಟ್ ಸೃಷ್ಟಿ ಪ್ರಕರಣಗಳ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. E-ಟಿಕೆಟ್ ಮತ್ತು M-ಟಿಕೆಟ್‌ಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ. ಪ್ರಯಾಣಿಕರು ಸುರಕ್ಷಿತ ಮತ್ತು ಪಾರದರ್ಶಕ ಪ್ರಯಾಣಕ್ಕಾಗಿ ಇದನ್ನು ಪಾಲಿಸಬೇಕು.

ತರಕಾರಿ ಕೊಳ್ಳಲು ಸಿಗ್ನಲ್​​ನಲ್ಲೇ ರೈಲು ನಿಲ್ಲಿಸಿದ ಹೋದ ಲೋಕೋ ಪೈಲಟ್!

ತರಕಾರಿ ಖರೀದಿಸಲು ರೈಲು ಎಂಜಿನ್ ಅನ್ನು ಸಿಗ್ನಲ್​​ನಲ್ಲಿ ನಿಲ್ಲಿಸಿರುವುದನ್ನು ತೋರಿಸುವ ಆಘಾತಕಾರಿ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಅದನ್ನೇನು ಬಸ್, ಕಾರು ಎಂದುಕೊಂಡಿದ್ದಾರಾ? ಅದು ಹೇಗೆ ಸಿಕ್ಕ ಕಡೆಗೆಲ್ಲ ನಿಲ್ಲಿಸಿ ಹೋಗುತ್ತಾರೆ? ಎಂದು ನೆಟ್ಟಿಗರು ಈ ವಿಡಿಯೋಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ಖೈರಾಬಾದ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಟಪ್ಪಾ ಖಜುರಿಯಾ ರೈಲ್ವೆ ಕ್ರಾಸಿಂಗ್ ಬಳಿ ಈ ಘಟನೆ ನಡೆದಿದೆ.

ಕರ್ನಾಟಕದಲ್ಲಿ ರೈಲ್ವೆ ಯೋಜನೆಗಳು ವಿಳಂಬವಾಗ್ತಿರೋದೇಕೆ? ಕೇಂದ್ರ ಸರ್ಕಾರ ಕೊಟ್ಟ ಕಾರಣ ಇಲ್ಲಿದೆ

ಕೇಂದ್ರ ಸರ್ಕಾರವು ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಬೃಹತ್ ಅನುದಾನ ನೀಡಿದ್ದರೂ, ರಾಜ್ಯ ಸರ್ಕಾರದ ಭೂಸ್ವಾಧೀನ ವಿಳಂಬದಿಂದಾಗಿ ಹಲವು ಯೋಜನೆಗಳು ಸ್ಥಗಿತಗೊಂಡಿವೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಲೋಕಸಭೆಯಲ್ಲಿ ತಿಳಿಸಿದ್ದಾರೆ. ರೈಲ್ವೆ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ರಾಜ್ಯ ಸರ್ಕಾರದ ಸಹಕಾರ ಅಗತ್ಯ ಎಂದು ಅವರು ಹೇಳಿದ್ದಾರೆ.

ಭಾರತೀಯ ರೈಲುಗಳಲ್ಲಿ ಉಚಿತ ನೀರಿನ ಬಾಟಲಿ ನೀಡುವುದಿಲ್ಲವೇ? ರೈಲ್ವೆ ಇಲಾಖೆ ಸ್ಪಷ್ಟನೆ

ಭಾರತೀಯ ರೈಲ್ವೆ ಇಲಾಖೆ ರೈಲುಗಳಲ್ಲಿ ಉಚಿತ ನೀರಿನ ಬಾಟಲಿಗಳನ್ನು ನೀಡುವ ಬಗ್ಗೆ ಸಂಪೂರ್ಣವಾದ ಸ್ಪಷ್ಟನೆ ನೀಡಿದೆ. ರೈಲುಗಳಲ್ಲಿ ಉಚಿತ ನೀರಿನ ಬಾಟಲಿಗಳ ಬಗ್ಗೆ ಪ್ರಯಾಣಿಕರಲ್ಲಿ ಗೊಂದಲವಿದೆ. ವಂದೇ ಭಾರತ್, ಶತಾಬ್ದಿ ಮತ್ತು ರಾಜಧಾನಿ ಎಕ್ಸ್​​ಪ್ರೆಸ್​​ನಂತಹ ಪ್ರೀಮಿಯಂ ರೈಲುಗಳಲ್ಲಿ ರೈಲ್ವೆ ಉಚಿತ ನೀರಿನ ಬಾಟಲಿಗಳನ್ನು ಒದಗಿಸುತ್ತಿದೆ. ಆದರೆ, ಆಹಾರವಿಲ್ಲದ ಆಯ್ಕೆಯನ್ನು ಹೊಂದುವ ಪ್ರಯಾಣಿಕರಿಗೆ ನೀರಿನ ಬಾಟಲಿ ನೀಡುವುದಿಲ್ಲ ಎಂಬ ಪ್ರಚಾರ ನಡೆಯುತ್ತಿದೆ.

ಯಶವಂತಪುರ – ಕಾರವಾರ ನಡುವೆ ವಿಶೇಷ ಎಕ್ಸ್​ಪ್ರೆಸ್ ರೈಲು: ಇಲ್ಲಿದೆ ವೇಳಾಪಟ್ಟಿ, ನಿಲುಗಡೆ ಇತ್ಯಾದಿ ವಿವರ

Yeshwantpur Karwar Special Express train: ನೈಋತ್ಯ ರೈಲ್ವೇಯು ಕ್ರಿಸ್ಮಸ್ ಮತ್ತು ಹೊಸ ವರ್ಷ ಪ್ರಯುಕ್ತ ಬೆಂಗಳೂರಿನ ಯಶವಂತಪುರ ಮತ್ತು ಕಾರವಾರ ಮಧ್ಯೆ ವಿಶೇಷ ಎಕ್ಸ್​ಪ್ರೆಸ್ ರೈಲು ಘೋಷಣೆ ಮಾಡಿದೆ. ಇದರಿಂದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಹಾಗೂ ಬೆಂಗಳೂರು ನಡುವಣ ಸಂಚಾರ ಸುಗಮವಾಗಲಿದೆ. ರೈಲು ವೇಳಾಪಟ್ಟಿ, ನಿಲುಗಡೆ ವಿವರ ಇಲ್ಲಿದೆ.

ಪ್ರಯಾಣಿಕರೇ ದಯವಿಟ್ಟು ಗಮನಿಸಿ, ರೈಲಿನಲ್ಲಿ ಈ ವಸ್ತುವನ್ನು ಕೊಂಡೊಯ್ದರೆ ಜೈಲೇ ಗತಿ

ಆರಾಮದಾಯಕ ಹಾಗೆಯೇ ಟಿಕೆಟ್ ಹಣ ಕೂಡ ಕಡಿಮೆಯಾಗಿರುವ ಕಾರಣ ಜನರು ಬಸ್ ಬದಲು ರೈಲು ಪ್ರಯಾಣ ಆಯ್ದುಕೊಳ್ಳುತ್ತಾರೆ. ವಿಶ್ವದ ನಾಲ್ಕನೇ ಅತಿದೊಡ್ಡ ರೈಲು ಜಾಲವಾದ ಭಾರತೀಯ ರೈಲ್ವೆ(Indian Railway) ಕೆಲವು ನಿಯಮಗಳನ್ನು ಜಾರಿಗೆ ತಂದಿದೆ. ಸುರಕ್ಷಿತ ಮತ್ತು ಸುಗಮ ಕಾರ್ಯಾಚರಣೆ , ರೈಲ್ವೆ ಪ್ರಯಾಣಿಕರಿಗಾಗಿ ವಿವರವಾದ ನಿಯಮಗಳನ್ನು ಜಾರಿಗೊಳಿಸಿದೆ,ಅವುಗಳಲ್ಲಿ ಹಲವು ಇನ್ನೂ ಸಾಮಾನ್ಯ ಪ್ರಯಾಣಿಕರಿಗೆ ಪರಿಚಯವಿಲ್ಲ.ಈ ನಿಯಮಗಳನ್ನು ಉಲ್ಲಂಘಿಸಿದರೆ ಭಾರೀ ದಂಡ ಮತ್ತು ಜೈಲು ಶಿಕ್ಷೆ ಕೂಡ ವಿಧಿಸಬಹುದು.

ರೈಲಿನೊಳಗೆ ಮ್ಯಾಗಿ ಬೇಯಿಸಿ, ಚಹಾ ಮಾಡಿದ ಮಹಿಳೆ! ರೈಲ್ವೆ ಇಲಾಖೆ ಎಚ್ಚರಿಕೆ

ರೈಲಿನಲ್ಲಿ ವಿದ್ಯುತ್ ಕೆಟಲ್ ಬಳಸಿ ಮ್ಯಾಗಿ ಅಡುಗೆ ಮಾಡುತ್ತಿರುವ ಮಹಿಳೆಯ ವಿರುದ್ಧ ರೈಲ್ವೆ ಇಲಾಖೆ ಕ್ರಮ ಕೈಗೊಂಡಿದೆ. ಆ ಮಹಿಳೆಯ ಈ ಕೃತ್ಯ ಗಂಭೀರ ಸುರಕ್ಷತಾ ಕಾಳಜಿಯನ್ನು ಹುಟ್ಟುಹಾಕಿದೆ. ಎಕ್ಸ್‌ಪ್ರೆಸ್ ರೈಲಿನಲ್ಲಿ ಮಹಿಳೆ ನೀರಿನ ಕೆಟಲ್ ಬಳಸಿ ಮ್ಯಾಗಿ ಅಡುಗೆ ಮಾಡುತ್ತಿರುವುದನ್ನು ವೈರಲ್ ವೀಡಿಯೊದಲ್ಲಿ ನೋಡಬಹುದು. ಇದಕ್ಕೆ ನೆಟ್ಟಿಗರು ಕೂಡ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈಲಿನ ಇತರೆ ಪ್ರಯಾಣಿಕರ ಸುರಕ್ಷತೆಯೊಂದಿಗೆ ಈ ಮಹಿಳೆ ಆಟವಾಡುತ್ತಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಟೀಕಿಸಿದ್ದಾರೆ.

IRCTC Child Ticket Rules: ಟ್ರೈನ್​ನಲ್ಲಿ ಮಕ್ಕಳಿಗೆ ಟಿಕೆಟ್; ವಿನಾಯಿತಿ, ವಯಸ್ಸು, ಸೀಟು, ನಿರ್ಬಂಧ ಇತ್ಯಾದಿ ವಿವರ

Indian Child Ticket Policy: ಟ್ರೈನುಗಳಲ್ಲಿ 5 ವರ್ಷದೊಳಗಿನ ವಯಸ್ಸಿನ ಮಕ್ಕಳಿಗೆ ಉಚಿತ ಪ್ರಯಾಣದ ಸೌಲಭ್ಯ ಇದೆ. 5ರಿಂದ 12 ವರ್ಷ ವಯಸ್ಸಿನ ಮಕ್ಕಳಿಗೆ ಅರ್ಧ ಟಿಕೆಟ್ ಮಾತ್ರ ಇದೆ. 12 ವರ್ಷ ಮೇಲ್ಪಟ್ಟ ವಯಸ್ಸಿನವರಿಗೆ ಪೂರ್ಣ ದರದ ಟಿಕೆಟ್ ನೀಡಲಾಗುತ್ತದೆ. ಮಕ್ಕಳಿಗೆ ಟಿಕೆಟ್​ನಲ್ಲಿ ವಿನಾಯಿತಿ ಮತ್ತು ರಿಯಾಯಿತಿ ಇದ್ದರೂ ಕೆಲ ನಿರ್ಬಂಧಗಳು ಅನ್ವಯ ಆಗುತ್ತವೆ. ಅವನ್ನು ಈ ಲೇಖನದಲ್ಲಿ ತಿಳಿಯಿರಿ.

ಮೋದಿ ಉದ್ಘಾಟಿಸಿದ ವಂದೇ ಭಾರತ್​​ನಿಂದ 2 ಗಂಟೆ ಕಡಿಮೆಯಾಗಲಿದೆ ಎರ್ನಾಕುಲಂ-ಬೆಂಗಳೂರು ಪ್ರಯಾಣದ ಸಮಯ

ವಂದೇ ಭಾರತ್ ಎಕ್ಸ್​​ಪ್ರೆಸ್ ರೈಲು ಬೆಂಗಳೂರು- ಎರ್ನಾಕುಲಂ ನಡುವಿನ ರೈಲು ಪ್ರಯಾಣದ ಸಮಯವನ್ನು 2 ಗಂಟೆಗಳಿಗೂ ಹೆಚ್ಚು ಕಡಿತಗೊಳಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದ 4 ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಬೆಂಗಳೂರು-ಎರ್ನಾಕುಲಂ ಮಾರ್ಗದ ರೈಲು ಕೂಡ ಸೇರಿದೆ. ಇದು ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

ಮುಂಬೈನಲ್ಲಿ ರಸ್ತೆ ದಾಟುತ್ತಿದ್ದಾಗ ರೈಲು ಡಿಕ್ಕಿ ಹೊಡೆದು ಮೂವರು ಸಾವು

ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT)ನಲ್ಲಿ ನಡೆದ ಪ್ರತಿಭಟನೆಯಿಂದ ಉಂಟಾದ ಅಡಚಣೆಗಳ ನಡುವೆ ಮುಂಬೈನ ಸ್ಯಾಂಡ್‌ಹರ್ಸ್ಟ್ ರಸ್ತೆ ನಿಲ್ದಾಣದ ಬಳಿ ಸ್ಥಳೀಯ ರೈಲು ಡಿಕ್ಕಿ ಹೊಡೆದು ಮೂವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಮತ್ತು ಒಬ್ಬರು ಗಾಯಗೊಂಡಿದ್ದಾರೆ. ಅಧಿಕಾರಿಗಳ ಪ್ರಕಾರ, ಪ್ರಯಾಣಿಕರು ರೈಲ್ವೆ ಹಳಿಗಳನ್ನು ದಾಟಲು ಪ್ರಯತ್ನಿಸುತ್ತಿದ್ದಾಗ ಸಮಯಕ್ಕೆ ಸರಿಯಾಗಿ ಚಲಿಸಲು ಸಾಧ್ಯವಾಗದ ಕಾರಣ ರೈಲು ಅವರಿಗೆ ಡಿಕ್ಕಿ ಹೊಡೆದಿದೆ.