
Indian Railways
ಭಾರತೀಯ ರೈಲ್ವೆ ಭಾರತ ಸರ್ಕಾರದ, ರೈಲ್ವೇ ಖಾತೆಯ ಅಧೀನದ, ಒಂದು ಇಲಾಖೆ. ಭಾರತ ಉದ್ದಗಲಕ್ಕೂ ಹರಡಿದ ರೈಲು ಮಾರ್ಗಗಳ (ಉಗಿ ಬಂಡಿ ದಾರಿಗಳ) ನಿರ್ವಹಣೆಯ ಜವಾಬ್ದಾರಿ ಈ ಇಲಾಖೆಯದಾಗಿದೆ. 1853 ರಲ್ಲಿ ಸ್ಥಾಪಿತವಾದ ಇದು ಪ್ರಪಂಚದ ಅತಿದೊಡ್ಡ ರೈಲು ಜಾಲಗಳಲ್ಲಿ ಒಂದಾಗಿದೆ, ವಿವಿಧ ಪ್ರದೇಶಗಳನ್ನು ಸಂಪರ್ಕಿಸುತ್ತದೆ ಮತ್ತು ಸರಕುಗಳು ಮತ್ತು ಪ್ರಯಾಣಿಕರ ಚಲನೆಯನ್ನು ಸುಗಮಗೊಳಿಸುತ್ತದೆ. ರೈಲ್ವೇ ಖಾತೆಯ ಮುಖ್ಯಸ್ಥರು ಕ್ಯಾಬಿನೆಟ್ ದರ್ಜೆಯ ಮಂತ್ರಿಯಾಗಿದ್ದರೆ, ರೈಲ್ವೇ ಇಲಾಖೆಯ ಆಡಳಿತ ವ್ಯವಸ್ಥೆ ರೈಲ್ವೇ ಮಂಡಳಿಯ ಅಧೀನದಲ್ಲಿದೆ. ರೈಲ್ವೇ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ರೈಲ್ವೇಗಳು ದಿನನಿತ್ಯ ಸಾವಿರಾರು ರೈಲುಗಳನ್ನು ಓಡಿಸುವುದರೊಂದಿಗೆ ವಿಸ್ತಾರವಾದ ಜಾಲವನ್ನು ಹೊಂದಿದೆ. ವ್ಯಾಪಾರ ಮತ್ತು ಪ್ರಯಾಣವನ್ನು ಸಕ್ರಿಯಗೊಳಿಸುವ ಮೂಲಕ ಭಾರತದ ಆರ್ಥಿಕ ಅಭಿವೃದ್ಧಿಯಲ್ಲಿ ಇದು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.
ಬೆಂಗಳೂರಿನಿಂದ ಮುಂಬೈ, ಕೋಲ್ಕತ್ತಾಗೆ ವಿಶೇಷ ರೈಲು: ಇಲ್ಲಿದೆ ವೇಳಾಪಟ್ಟಿ
Summer Special Trains: ಭಾರತೀಯ ರೈಲ್ವೆ ಬೆಂಗಳೂರಿನಿಂದ ಮುಂಬೈ ಮತ್ತು ಕೋಲ್ಕತ್ತಾಕ್ಕೆ ಬೇಸಿಗೆ ವಿಶೇಷ ರೈಲುಗಳನ್ನು ಘೋಷಿಸಿದೆ. ಬೇಸಿಗೆ ರಜೆ ಮತ್ತು ಪ್ರಯಾಣಿಕರ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ಈ ರೈಲುಗಳ ವ್ಯವಸ್ಥೆ ಮಾಡಲಾಗಿದೆ. ಮುಂಬೈ ಮತ್ತು ಕೋಲ್ಕತ್ತಾ ರೈಲುಗಳ ವೇಳಾಪಟ್ಟಿ ಮತ್ತು ನಿಲುಗಡೆಗಳ ಪಟ್ಟಿಯನ್ನು ರೈಲ್ವೆ ಇಲಾಖೆ ಪ್ರಕಟಿಸಿದ್ದು, ವಿವರಗಳು ಇಲ್ಲಿವೆ.
- Ganapathi Sharma
- Updated on: Mar 28, 2025
- 9:55 am
Train Ticket Transfer: ನಿಮ್ಮ ದೃಢೀಕೃತ ರೈಲು ಟಿಕೆಟ್ ಅನ್ನು ಬೇರೆಯವರಿಗೆ ವರ್ಗಾಯಿಸುವುದು ಹೇಗೆ?
ನೀವು ರೈಲು ಟಿಕೆಟ್(Train Ticket) ಕಾಯ್ದಿರಿಸಿ ಯಾವುದೋ ಕಾರಣಕ್ಕೆ ಪ್ರಯಾಣಿಸಲು ಸಾಧ್ಯವಾಗದಿದ್ದರೆ ನಿಮ್ಮ ದೃಢೀಕೃತ ಟಿಕೆಟ್ ಅನ್ನು ಹತ್ತಿರದ ಸಂಬಂಧಿಗಳಿಗೆ ವರ್ಗಾಯಿಸಬಹುದು. ಈ ವ್ಯವಸ್ಥೆಯಿಂದ ಪ್ರಯಾಣಿಕರಿಗೆ ತುಂಬಾ ಸಹಾಯವಾಗಲಿದೆ. ಆದರೆ ಭಾರತೀಯ ರೈಲ್ವೆಯ ನಿರ್ದಿಷ್ಟ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.ರೈಲ್ವೆ ನಿಯಮಗಳ ಪ್ರಕಾರ, ದೃಢಪಡಿಸಿದ ಟಿಕೆಟ್ ಅನ್ನು ನಿಮ್ಮ ಹತ್ತಿರದ ಸಂಬಂಧಿಗಳಿಗೆ, ಅಂದರೆ ನಿಮ್ಮ ಹೆಂಡತಿ, ಮಕ್ಕಳು, ಪೋಷಕರು, ಒಡಹುಟ್ಟಿದವರು ಅಥವಾ ಸಂಗಾತಿಗೆ ಮಾತ್ರ ವರ್ಗಾಯಿಸಬಹುದು.
- Nayana Rajeev
- Updated on: Mar 26, 2025
- 11:30 am
ರೈಲ್ವೆ ನಿಲ್ದಾಣದಲ್ಲಿ ಬಾಲಕಿ ಮತ್ತವಳ ತಂದೆಯ ಹತ್ಯೆಗೈದು, ತಾನೂ ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ
ಬಿಹಾರದ ಅರಾ ರೈಲು ನಿಲ್ದಾಣದಲ್ಲಿ ಬಾಲಕಿ ಮತ್ತವಳ ತಂದೆಯನ್ನು ಹತ್ಯೆಗೈದ ವ್ಯಕ್ತಿ ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. 3 ಮತ್ತು 4ನೇ ಪ್ಲಾಟ್ಫಾರ್ಮ್ಗಳನ್ನು ಸಂಪರ್ಕಿಸುವ ಪಾದಚಾರಿ ಮಾರ್ಗದಲ್ಲಿ ಈ ಘಟನೆ ಸಂಭವಿಸಿದೆ. ದಾಳಿಕೋರನನ್ನು ಅಮನ್ ಕುಮಾರ್ ಎಂದು ಗುರುತಿಸಲಾಗಿದೆ. ಅರಾ ರೈಲ್ವೆ ನಿಲ್ದಾಣದ 3 ಮತ್ತು 4 ನೇ ಪ್ಲಾಟ್ಫಾರ್ಮ್ಗಳ ನಡುವಿನ ಮೇಲ್ಸೇತುವೆಯಲ್ಲಿ, ಗುಂಡೇಟಿನಿಂದ ಮೂವರು ಸಾವನ್ನಪ್ಪಿದ್ದಾರೆ.
- Nayana Rajeev
- Updated on: Mar 26, 2025
- 7:39 am
ಬಿಡದಿ ರೈಲ್ವೆ ನಿಲ್ದಾಣ ಸ್ಫೋಟಿಸುವುದಾಗಿ ಬೆದರಿಕೆ ಕರೆ: ಪೊಲೀಸರಿಂದ ತೀವ್ರ ಶೋಧ
ಪಾಕಿಸ್ತಾನ ಪರ ಗೋಡೆ ಬರಹ ಪ್ರಕಟಿಸಿದ್ದವರ ಪರವಾಗಿ ಕರೆ ಮಾಡಿದ ದುಷ್ಕರ್ಮಿಗಳು, ಬಿಡದಿ ರೈಲ್ವೆ ನಿಲ್ದಾಣ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದರಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಯಿತು. ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ. ಸ್ಥಳದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ.
- Prashantha B
- Updated on: Mar 25, 2025
- 12:03 pm
ರೈಲು ಎಂಜಿನ್ ವಾಹನಗಳ ತಯಾರಿಕೆಯಲ್ಲಿ ಅಮೆರಿಕ, ಯೂರೋಪ್ ಅನ್ನು ಮೀರಿಸಿದ ಭಾರತ
Indian railways marching ahead confidently: ಭಾರತೀಯ ರೈಲ್ವೆಸ್ ಸಂಸ್ಥೆ ಈ ವರ್ಷ ತಯಾರಿಸಿರುವ ಲೋಕೋಮೋಟಿವ್ ವಾಹನಗಳ ಸಂಖ್ಯೆ 1,400 ದಾಟಿದೆ. ಅಮೆರಿಕ, ಯೂರೋಪ್ಗಳಲ್ಲಿ ತಯಾರಾದ ಒಟ್ಟಾರೆ ಲೋಕೋಮೋಟಿವ್ಗಳಿಗಿಂತ ಭಾರತವೇ ಹೆಚ್ಚು ತಯಾರಿಸಿದೆ. ಎರಡು ಲಕ್ಷಕ್ಕೂ ಅಧಿಕ ವ್ಯಾಗನ್ಗಳು, ಹತ್ತು ವರ್ಷದಲ್ಲಿ 41,000 ಎಲ್ಎಚ್ಬಿ ಕೋಚ್ಗಳನ್ನು ತಯಾರಿಸಿದೆ. ಎಲ್ಲಾ ಐಸಿಎಫ್ ಕೋಚ್ಗಳನ್ನು ಎಲ್ಎಚ್ಬಿ ಕೋಚ್ಗಳಾಗಿ ಪರಿವರ್ತಿಸುವ ಕಾರ್ಯ ಭರದಿಂದ ಸಾಗಿದೆ.
- Vijaya Sarathy SN
- Updated on: Mar 23, 2025
- 1:42 pm
ಭಾರತೀಯ ರೈಲ್ವೆ ಗರಿಮೆ; ಯೂರೋಪ್, ಆಸ್ಟ್ರೇಲಿಯಾ, ಸೌದಿಗೆ ಭಾರತದಿಂದ ರೈಲ್ವೆ ಉಪಕರಣಗಳ ರಫ್ತು: ಅಶ್ವಿನಿ ವೈಷ್ಣವ್
Indian rail equipment export: ಯೂರೋಪ್, ಆಫ್ರಿಕಾ, ಏಷ್ಯಾದ ವಿವಿಧ ದೇಶಗಳಿಗೆ ಭಾರತದಿಂದ ಸಾಕಷ್ಟು ರೈಲು ಉಪಕರಣಗಳ ರಫ್ತಾಗುತ್ತಿದೆ. 2014ಕ್ಕೆ ಮುನ್ನವೂ ರೈಲು ಕೋಚ್, ಬೋಗೀಗಳನ್ನು ಬೇರೆ ಬೇರೆ ದೇಶಗಳಿಗೆ ರಫ್ತು ಮಾಡಲಾಗುತ್ತಿತ್ತು. ಈಗ ಹತ್ತು ವರ್ಷದಲ್ಲಿ ಭಾರತದಿಂದ ರಫ್ತಾಗುತ್ತಿರುವ ಪ್ರಮಾಣ ಹಲವು ಪಟ್ಟು ಹೆಚ್ಚಾಗಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರಾಜ್ಯಸಭೆಗೆ ಕೆಲ ಮಾಹಿತಿ ಹಂಚಿಕೊಂಡಿದ್ದಾರೆ.
- Vijaya Sarathy SN
- Updated on: Mar 18, 2025
- 1:01 pm
ಬೆಂಗಳೂರಿನ ರೈಲಿನೊಳಗೆ ಯುವಕನಿಂದ ಮೂತ್ರ ವಿಸರ್ಜನೆ; ವೈರಲ್ ವಿಡಿಯೋಗೆ ಆಕ್ರೋಶ
ಈ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾವು ಭಾರತೀಯ ರೈಲ್ವೆಯನ್ನು ಒತ್ತಾಯಿಸುತ್ತೇವೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಸಂಭವಿಸದಂತೆ ನೋಡಿಕೊಳ್ಳಲು ಅಧಿಕಾರಿಗಳು ಅವನನ್ನು ಗುರುತಿಸಿ ಸೂಕ್ತ ದಂಡ ವಿಧಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಅದರಲ್ಲೂ ವಿಶೇಷವಾಗಿ ರೈಲುಗಳಲ್ಲಿ ಸ್ವಚ್ಛತೆ ಮತ್ತು ಶಿಸ್ತನ್ನು ಕಾಪಾಡಿಕೊಳ್ಳುವುದು ಎಲ್ಲಾ ಪ್ರಯಾಣಿಕರ ಕರ್ತವ್ಯ ಎಂದು ಕರ್ನಾಟಕ ಪೋರ್ಟ್ ಪೋಲಿಯೋ ತನ್ನ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದೆ.
- Sushma Chakre
- Updated on: Mar 15, 2025
- 4:35 pm
Tech Tips: ರೈಲಿನಲ್ಲಿ ಹೋಗುವಾಗ ಮೊಬೈಲ್ ಅಥವಾ ಪರ್ಸ್ ಹೊರ ಬಿದ್ದರೆ ಏನು ಮಾಡಬೇಕು?: ಇಲ್ಲಿದೆ ಮಾಹಿತಿ
ಬ್ಯಾಂಕಿಂಗ್ ವಿವರಗಳಿಂದ ಹಿಡಿದು ಪ್ರಮುಖ ಐಡಿಗಳವರೆಗೆ ಎಲ್ಲಾ ಮಾಹಿತಿಯನ್ನು ನಾವು ನಮ್ಮ ಫೋನ್ನಲ್ಲಿ ಸೇವ್ ಮಾಡಿಕೊಟ್ಟುಕೊಡಿರುತ್ತೇವೆ. ಅಂತಹ ಪರಿಸ್ಥಿತಿಯಲ್ಲಿ, ನಾವು ರೈಲಿನಲ್ಲಿ ಹೋಗುತ್ತಿರುವಾಗ ಫೋನ್ ಎಲ್ಲೋ ಬಿದ್ದರೆ ಅಥವಾ ಕಳೆದುಹೋದರೆ, ಅದು ಬಹಳಷ್ಟು ತೊಂದರೆ ಉಂಟುಮಾಡುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು, ಭಾರತೀಯ ರೈಲ್ವೆ ಕೆಲವು ನಿಯಮಗಳನ್ನು ಮಾಡಿದೆ.
- Preethi Bhat Gunavante
- Updated on: Mar 14, 2025
- 2:58 pm
ರೈಲುಗಳಲ್ಲಿ ಮೆನು, ಬೆಲೆಯ ಪಟ್ಟಿ ಕಡ್ಡಾಯ; ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಘೋಷಣೆ
ಇನ್ಮುಂದೆ ಭಾರತೀಯ ರೈಲುಗಳಲ್ಲಿ ನೀಡಲಾಗುವ ಆಹಾರದ ಮೆನು, ಅದರ ಬೆಲೆಯ ವಿವರಗಳನ್ನು ವೆಬ್ ಸೈಟಿನಲ್ಲಿ ಹಾಕುವುದು ಕಡ್ಡಾಯ. ಪ್ಯಾಂಟ್ರಿ ಕಾರುಗಳಲ್ಲಿ ದರ ಪಟ್ಟಿಯನ್ನು ಪ್ರದರ್ಶಿಸಲಾಗಿದ್ದು, ಉತ್ತಮ ಪಾರದರ್ಶಕತೆಗಾಗಿ ಪ್ರಯಾಣಿಕರು ಈಗ ಮೆನುಗಳು ಮತ್ತು ಸುಂಕಗಳ ಲಿಂಕ್ಗಳೊಂದಿಗೆ ಎಸ್ ಎಂಎಸ್ ಅಲರ್ಟ್ ಕೂಡ ಸ್ವೀಕರಿಸಬಹುದು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
- Sushma Chakre
- Updated on: Mar 12, 2025
- 10:29 pm
ಕೇವಲ ಅರ್ಧ ಗಂಟೆಯಲ್ಲಿ ಬೆಂಗಳೂರು ಚೆನ್ನೈ ಪ್ರಯಾಣ! ಹೈಪರ್ಲೂಪ್ ಟೆಸ್ಟ್ ಟ್ರಾಕ್ ಅಭಿವೃದ್ಧಿಪಡಿಸಿದ ಐಐಟಿ ಮದ್ರಾಸ್
ಐಐಟಿ ಮದ್ರಾಸ್ನ ತಜ್ಞರು ಅಭಿವೃದ್ಧಿಪಡಿಸಿರುವ ಹೈಪರ್ಲೂಪ್ ಟೆಸ್ಟ್ ಟ್ರಾಕ್ನಿಂದ ಬೆಂಗಳೂರು ಮತ್ತು ಚೆನ್ನೈ ನಗರಗಳ ನಡುವಿನ ಪ್ರಯಾಣ ಕೇವಲ 30 ನಿಮಿಷಗಳಿಗೆ ಇಳಿಕೆಯಾಗುವ ನಿರೀಕ್ಷೆ ಇದೆ. ರೈಲ್ವೆ ಸಚಿವಾಲಯದ ಸಹಯೋಗದೊಂದಿಗೆ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, 422 ಮೀಟರ್ಗಳ ಪರೀಕ್ಷಾ ಹಳಿಯನ್ನು ನಿರ್ಮಿಸಲಾಗಿದೆ. ಇದರ ವಿಶೇಷವೇನು? ರೈಲ್ವೆ ಸಚಿವರು ನೀಡಿದ ಮಾಹಿತಿ ಏನು ಎಂಬ ವಿವರ ಇಲ್ಲಿದೆ.
- Ganapathi Sharma
- Updated on: Feb 26, 2025
- 12:20 pm