Indian Railways
ಭಾರತೀಯ ರೈಲ್ವೆ ಭಾರತ ಸರ್ಕಾರದ, ರೈಲ್ವೇ ಖಾತೆಯ ಅಧೀನದ, ಒಂದು ಇಲಾಖೆ. ಭಾರತ ಉದ್ದಗಲಕ್ಕೂ ಹರಡಿದ ರೈಲು ಮಾರ್ಗಗಳ (ಉಗಿ ಬಂಡಿ ದಾರಿಗಳ) ನಿರ್ವಹಣೆಯ ಜವಾಬ್ದಾರಿ ಈ ಇಲಾಖೆಯದಾಗಿದೆ. 1853 ರಲ್ಲಿ ಸ್ಥಾಪಿತವಾದ ಇದು ಪ್ರಪಂಚದ ಅತಿದೊಡ್ಡ ರೈಲು ಜಾಲಗಳಲ್ಲಿ ಒಂದಾಗಿದೆ, ವಿವಿಧ ಪ್ರದೇಶಗಳನ್ನು ಸಂಪರ್ಕಿಸುತ್ತದೆ ಮತ್ತು ಸರಕುಗಳು ಮತ್ತು ಪ್ರಯಾಣಿಕರ ಚಲನೆಯನ್ನು ಸುಗಮಗೊಳಿಸುತ್ತದೆ. ರೈಲ್ವೇ ಖಾತೆಯ ಮುಖ್ಯಸ್ಥರು ಕ್ಯಾಬಿನೆಟ್ ದರ್ಜೆಯ ಮಂತ್ರಿಯಾಗಿದ್ದರೆ, ರೈಲ್ವೇ ಇಲಾಖೆಯ ಆಡಳಿತ ವ್ಯವಸ್ಥೆ ರೈಲ್ವೇ ಮಂಡಳಿಯ ಅಧೀನದಲ್ಲಿದೆ. ರೈಲ್ವೇ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ರೈಲ್ವೇಗಳು ದಿನನಿತ್ಯ ಸಾವಿರಾರು ರೈಲುಗಳನ್ನು ಓಡಿಸುವುದರೊಂದಿಗೆ ವಿಸ್ತಾರವಾದ ಜಾಲವನ್ನು ಹೊಂದಿದೆ. ವ್ಯಾಪಾರ ಮತ್ತು ಪ್ರಯಾಣವನ್ನು ಸಕ್ರಿಯಗೊಳಿಸುವ ಮೂಲಕ ಭಾರತದ ಆರ್ಥಿಕ ಅಭಿವೃದ್ಧಿಯಲ್ಲಿ ಇದು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.
ಇನ್ನೂ ಹೆಚ್ಚು ಓದಿರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್: ಭುವನೇಶ್ವರ – ಯಶವಂತಪುರ ವಿಶೇಷ ರೈಲುಗಳ ಸಂಚಾರ ಅವಧಿ ವಿಸ್ತರಣೆ
ಭುವನೇಶ್ವರ–ಯಶವಂತಪುರ ವೀಕ್ಲಿ ಎಕ್ಸ್ಪ್ರೆಸ್ ವಿಶೇಷ ರೈಲುಗಳ ಸಂಚಾರ ಅವಧಿಯನ್ನು ವಿಸ್ತರಿಸಲಾಗಿದೆ. ರೈಲು ಸಂಖ್ಯೆ 02811 ಸೆಪ್ಟೆಂಬರ್ 5ರಿಂದ ನವೆಂಬರ್ 28ರವರೆಗೆ ಹಾಗೂ 02812 ಸೆಪ್ಟೆಂಬರ್ 7ರಿಂದ ನವೆಂಬರ್ 30ರವರೆಗೆ ಸಂಚರಿಸಲಿದೆ. ಪ್ರತಿ ದಿಕ್ಕಿನಲ್ಲಿ 13 ಹೆಚ್ಚುವರಿ ಟ್ರಿಪ್ಗಳು ಇರಲಿವೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.
- Ganapathi Sharma
- Updated on: Aug 26, 2026
- 9:22 am
ಬೆಂಗಳೂರು – ತಿರುವನಂತಪುರ ಮಧ್ಯೆ ವಿಶೇಷ ರೈಲು ಸಂಚಾರ: ಇಲ್ಲಿದೆ ವೇಳಾಪಟ್ಟಿ, ನಿಲುಗಡೆ ವಿವರ
Bengaluru-Thiruvananthapuram Special Train: ಓಣಂ ಹಬ್ಬದ ಕಾರಣ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಹಿನ್ನೆಲೆ ನೈಋತ್ಯ ರೈಲ್ವೆಯು ಬೆಂಗಳೂರಿನಿಂದ ತಿರುವನಂತಪುರಂ ನಾರ್ತ್ಗೆ ವಿಶೇಷ ಎಕ್ಸ್ಪ್ರೆಸ್ ರೈಲು ಸಂಚಾರ ಪ್ರಕಟಿಸಿದೆ. ಆಗಸ್ಟ್ 22ರಂದು SMVTಯಿಂದ ಹೊರಡುವ ರೈಲು ಕರ್ನಾಟಕ ಹಾಗೂ ಕೇರಳದ ಹಲವು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.
- Ganapathi Sharma
- Updated on: Aug 21, 2026
- 9:00 am
ರೈಲು ಪ್ರಯಾಣಿಕರೇ ಗಮನಿಸಿ: ಶಿವಮೊಗ್ಗ, ತಾಳಗುಪ್ಪ ಮಾರ್ಗದ ಹಲವು ರೈಲು ಸಂಚಾರ ರದ್ದು, ಮಾರ್ಗ ಬದಲಾವಣೆ
ಬೆಂಗಳೂರು, ಆ.19: ಮಲ್ಲಸಂದ್ರ-ಗುಬ್ಬಿ ನಡುವೆ ನಡೆಯುತ್ತಿರುವ ಇಂಜಿನಿಯರಿಂಗ್ ಕಾಮಗಾರಿಗಳಿಂದ ಆಗಸ್ಟ್ ತಿಂಗಳಲ್ಲಿ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ತಾಳಗುಪ್ಪ, ಶಿವಮೊಗ್ಗ, ಚಿಕ್ಕಮಗಳೂರು ಮಾರ್ಗದ ರೈಲುಗಳು ಭಾಗಶಃ/ಸಂಪೂರ್ಣ ರದ್ದುಗೊಂಡಿವೆ ಅಥವಾ ಮಾರ್ಗ ಬದಲಾವಣೆಗೊಂಡಿವೆ. ಪ್ರಯಾಣಿಕರು ಆಗಸ್ಟ್ 19, 22, 23, 26 ರಂದು ತಮ್ಮ ರೈಲು ವೇಳಾಪಟ್ಟಿ ಪರಿಶೀಲಿಸಿ ಪ್ರಯಾಣಿಸಲು ರೈಲ್ವೆ ಇಲಾಖೆ ಕೋರಿದೆ.
- Akshay Pallamajalu
- Updated on: Aug 19, 2026
- 10:51 am
ಬಟ್ಟೆ ಬಿಚ್ಚಿ, ರೇಜರ್ ಬ್ಲೇಡ್ನಿಂದ ಹಲ್ಲೆಗೆ ಯತ್ನ: ರೈಲಿನಲ್ಲಿ ನಟಿ ಅಂತರಾ ಬ್ಯಾನರ್ಜಿ ಅವಾಂತರ; ಬಂಧನ
Actress Antara Banerjee allegedly stripped and attacked RPF official with razor blade: ಮುಂಬೈನಿಂದ ಸೂರತ್ಗೆ ಹೋಗುವ ಅರಾವಳಿ ಎಕ್ಸ್ಪ್ರೆಸ್ ರೈಲಿನಲ್ಲಿ ನಟಿ ಅಂತರಾ ಬ್ಯಾನರ್ಜಿ ಅವಾಂತರ ಸೃಷ್ಟಿಸಿದ್ದಾಳೆ. ಸ್ಲೀಪರ್ ಕ್ಲಾಸ್ ಟಿಕೆಟ್ ಪಡೆದು ರಿಸರ್ವ್ ಎಸಿ ಕೋಚ್ಗೆ ಹೋಗಿ ಸಹಪ್ರಯಾಣಿಕರಿಗೆ ಸೀಟು ಬಿಟ್ಟುಕೊಡದೆ ನಕರಾ ಮಾಡಿದ ಆರೋಪ ಇದೆ. ಹಾಗೆಯೆ, ಸೀಟು ತೆರವುಗೊಳಿಸಲು ಬಂದ ಆರ್ಪಿಎಫ್ ಸಿಬ್ಬಂದಿ ಮೇಲೆ ಹಲ್ಲೆ ಎಸಗಿದ ಆರೋಪವೂ ಆಕೆಯ ಮೇಲಿದೆ.
- Vijaya Sarathy SN
- Updated on: Aug 16, 2026
- 5:23 pm
ಬೆಂಗಳೂರು-ಮುಂಬೈ ಮಾರ್ಗಕ್ಕೆ ವಂದೇ ಭಾರತ್ ಸ್ಲೀಪರ್ ಸಿದ್ಧ: ಬೆಂಗಳೂರಿನಲ್ಲೇ ತಯಾರಾದ ರೈಲಿನ ಪ್ರಾಯೋಗಿಕ ಸಂಚಾರ ಶೀಘ್ರ
Bengaluru-Mumbai Vande Bharat sleeper train: ಬೆಂಗಳೂರು-ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ಸಿದ್ಧವಾಗಿದೆ. ಎರಡು 16 ಬೋಗಿಗಳ ರೈಲು ಸೆಟ್ಗಳನ್ನು ನೈಋತ್ಯ ರೈಲ್ವೆ ನಿಯೋಜನೆ ಮಾಡಿದ್ದು, ಶೀಘ್ರದಲ್ಲೇ ಟ್ರಯಲ್ ರನ್ ನಡೆಯಲಿದೆ. ಸುಮಾರು 16 ಗಂಟೆಗಳಲ್ಲಿ ಪ್ರಯಾಣ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
- Ganapathi Sharma
- Updated on: Aug 10, 2026
- 10:49 am
ಚೀನಾ, ಪಾಕಿಸ್ತಾನ, ಬಾಂಗ್ಲಾದೇಶ ಗಡಿಗಳಲ್ಲಿ ಪ್ರಬಲ ರೈಲು ಜಾಲ ಅಳವಡಿಕೆಗೆ ಭಾರತ ಯೋಜನೆ; 45,000 ಕೋಟಿ ರೂ ಹೂಡಿಕೆ ಸಾಧ್ಯತೆ
India to strengthen border regions by upgrading railway infrastructure: ಗಡಿಗಳಲ್ಲಿ ಬಿಗಿ ಭದ್ರತೆ ಹೆಚ್ಚಿಸಲು ಮತ್ತು ಸಮರ ಸನ್ನದ್ಧತೆಯನ್ನು ತೀವ್ರಗೊಳಿಸಲು ಭಾರತ ಮತ್ತೊಂದು ಹೆಜ್ಜೆ ಇಡುತ್ತಿದೆ. ಪಾಕಿಸ್ತಾನ, ಚೀನಾ, ಬಾಂಗ್ಲಾ ಗಡಿಗಳಲ್ಲಿ ರೈಲ್ವೆ ಮೂಲ ಸೌಕರ್ಯ ಅಭಿವೃದ್ಧಿಗೆ ಭಾರತ ಯೋಜನೆ ಹಾಕಿದೆ. 45,000 ಕೋಟಿ ರೂ ಹೂಡಿಕೆ ಬೇಕಾಗಬಹುದು. ಎರಡು ವರ್ಷದಲ್ಲಿ ಈ ಹೂಡಿಕೆ ಆಗಲಿದೆ.
- Vijaya Sarathy SN
- Updated on: Aug 3, 2026
- 2:35 pm
ಮಂಗಳೂರು-ಬೆಂಗಳೂರು ರೈಲು ಪ್ರಯಾಣಿಕರೇ ಗಮನಿಸಿ: ಎಡಕುಮೇರಿ ಗುಡ್ಡಕುಸಿತದಿಂದ ಇಂದೂ ಹಲವು ರೈಲುಗಳ ಸಂಚಾರ ಬಂದ್
ಸಕಲೇಶಪುರದ ಎಡಕುಮೇರಿ ಬಳಿ ರೈಲ್ವೆ ಹಳಿಗೆ ಗುಡ್ಡಕುಸಿತವಾಗಿರುವ ಹಿನ್ನೆಲೆಯಲ್ಲಿ ಮಂಗಳೂರು–ಬೆಂಗಳೂರು ಮಾರ್ಗದಲ್ಲಿ ಇಂದು ಕೂಡ ಹಲವು ರೈಲುಗಳ ಸಂಚಾರ ಸ್ಥಗಿತಗೊಂಡಿದ್ದು, ಕೆಲವು ರೈಲುಗಳ ಮಾರ್ಗ ಬದಲಿಸಲಾಗಿದೆ. ಶನಿವಾರ ರಾತ್ರಿ ಗುಡ್ಡ ಕುಸಿತ ಸಂಭವಿಸಿ ರೈಲುಗಳ ಸಂಚಾರಕ್ಕೆ ಅಡ್ಡಿಯಾಗಿತ್ತು. ನಿರಂತರ ಮಳೆಯಿಂದಾಗಿ ಮಣ್ಣು ತೆರವು ಕಾರ್ಯಾಚರಣೆಗೂ ಅಡ್ಡಿಯಾಗುತ್ತಿದೆ.
- Manjunath KB
- Updated on: Aug 3, 2026
- 9:16 am
ರೈಲು ಪ್ರಯಾಣಿಕರೇ ಗಮನಿಸಿ; ನಾಳೆಯಿಂದ ರೈಲ್ವೆ ಇಲಾಖೆಯಿಂದ ಲಗೇಜ್ ಆನ್ಲೈನ್ ಬುಕಿಂಗ್ ಆರಂಭ
ರೈಲ್ವೆ ನಿಲ್ದಾಣಗಳಲ್ಲಿ ಉದ್ದದ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು, ಪ್ರಯಾಣಿಕರು ಟಿಕೆಟ್ ಕಾಯ್ದಿರಿಸುವಾಗಲೇ ಹೆಚ್ಚುವರಿ ಲಗೇಜ್ ವಿವರಗಳನ್ನು ನಮೂದಿಸಿ ಲಗೇಜ್ ಬುಕ್ ಮಾಡಲು ಅನುಕೂಲವಾಗುವಂತೆ ರೈಲ್ವೆ ಇಲಾಖೆಯು ನಾಳೆಯಿಂದ (ಜುಲೈ 31) ಆನ್ಲೈನ್ ಸೌಲಭ್ಯವನ್ನು ಪ್ರಾರಂಭಿಸುತ್ತಿದೆ. ಪ್ರಸ್ತುತ, ಉಚಿತ ಮಿತಿಗಿಂತ ಹೆಚ್ಚಿನ ಲಗೇಜ್ ಒಯ್ಯುವ ಪ್ರಯಾಣಿಕರು ರೈಲು ಹೊರಡುವ ಮೊದಲು ಪಾರ್ಸಲ್ ಕಚೇರಿಗಳಿಗೆ ತೆರಳಿ ತಮ್ಮ ಹೆಚ್ಚುವರಿ ಲಗೇಜ್ ಅನ್ನು ಕಾಯ್ದಿರಿಸಬೇಕಾಗಿತ್ತು. ಆದರೆ, ಇನ್ಮುಂದೆ ಆ ತಲೆಬಿಸಿ ಇರುವುದಿಲ್ಲ.
- Sushma Chakre
- Updated on: Jul 30, 2026
- 4:30 pm
August 2026 Rule Changes: ಆಗಸ್ಟ್ 1 ರಿಂದ ಜಾರಿಗೆ ಬರಲಿವೆ 5 ಹೊಸ ನಿಯಮಗಳು: ಎಲ್ಪಿಜಿ ದರ,ತತ್ಕಾಲ್ ಬುಕಿಂಗ್ ಮತ್ತು ಬ್ಯಾಂಕಿಂಗ್ ಮೇಲೆ ಭಾರಿ ಪ್ರಭಾವ
ಆಗಸ್ಟ್ 1, 2026 ರಿಂದ 5 ಪ್ರಮುಖ ನಿಯಮಗಳು ಜಾರಿಗೆ ಬರಲಿವೆ. ಇವು ಎಲ್ಪಿಜಿ ದರ, ರೈಲ್ವೆ ತತ್ಕಾಲ್ ಬುಕಿಂಗ್, ಬ್ಯಾಂಕಿಂಗ್ ಸೇವೆ, ಅಂಚೆ ಶುಲ್ಕ ಹಾಗೂ ಫಾಸ್ಟ್ಟ್ಯಾಗ್ ಕೆವೈಸಿ ಮೇಲೆ ಪರಿಣಾಮ ಬೀರಲಿವೆ. ಸಿಲಿಂಡರ್ ಬೆಲೆ ಪರಿಷ್ಕರಣೆ, ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್ಸ್ ಮಿತಿ, ರೈಲ್ವೆ ಟಿಕೆಟ್ ಸುಧಾರಣೆಗಳು ಸಾರ್ವಜನಿಕರ ದೈನಂದಿನ ಬಜೆಟ್ ಮತ್ತು ವೆಚ್ಚಗಳ ಮೇಲೆ ನೇರ ಪ್ರಭಾವ ಬೀರಲಿದ್ದು, ಎಲ್ಲರೂ ತಿಳಿದುಕೊಳ್ಳುವುದು ಮುಖ್ಯವಾಗಿದೆ.
- Nayana Rajeev
- Updated on: Jul 29, 2026
- 11:47 am
ಧಾರವಾಡದ ಅಳ್ನಾವರದಲ್ಲಿ ನಾಲ್ಕು ಗಂಟೆಗೂ ಹೆಚ್ಚು ರೈಲುಗಳ ನಿಲುಗಡೆ: ಪ್ರಯಾಣಿಕರ ಪರದಾಟ
Dharwad News: ಲೋಂಡಾ ಭಾಗದಲ್ಲಿ ಉಂಟಾದ ವಿದ್ಯುತ್ ಪೂರೈಕೆ ಸಮಸ್ಯೆಯಿಂದ ಧಾರವಾಡ ಜಿಲ್ಲೆಯ ಅಳ್ನಾವರ ರೈಲು ನಿಲ್ದಾಣದಲ್ಲಿ ಬೆಂಗಳೂರು–ಬೆಳಗಾವಿ ಎಕ್ಸ್ಪ್ರೆಸ್ ಹಾಗೂ ರಾಣಿ ಚೆನ್ನಮ್ಮ ಎಕ್ಸ್ಪ್ರೆಸ್ ಸೇರಿದಂತೆ ಕೆಲವು ರೈಲುಗಳು ನಾಲ್ಕು ಗಂಟೆಗೂ ಹೆಚ್ಚು ಕಾಲ ನಿಂತಿದ್ದು, ಪ್ರಯಾಣಿಕರು ಪರದಾಡಿದರು. ರೈಲು ನಿಲ್ದಾಣದಲ್ಲಿನ ಪರಿಸ್ಥಿತಿಯ ವಿಡಿಯೋ ಇಲ್ಲಿದೆ.
- Narasimha Murti Pyati
- Updated on: Jul 28, 2026
- 12:40 pm
ಕರ್ನಾಟಕಕ್ಕೆ ಒಳ್ಳೆ ಸುದ್ದಿ; ಬಳ್ಳಾರಿ- ಗುಂತಕಲ್ ನಡುವಿನ 1,264 ಕೋಟಿ ವೆಚ್ಚದ ರೈಲು ಮಾರ್ಗಕ್ಕೆ ಸಂಪುಟ ಒಪ್ಪಿಗೆ
ಕೇಂದ್ರ ಸಂಪುಟ ಸಭೆಯ ನಂತರ ನಿರ್ಧಾರಗಳ ಬಗ್ಗೆ ದೆಹಲಿಯಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಕೇಂದ್ರ ಸಚಿವ ಸಂಪುಟವು ಎರಡು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ. ಕರ್ನಾಟಕ ಹಾಗೂ ಆಂಧ್ರಪ್ರದೇಶದ ನಡುವೆ ಸಂಪರ್ಕ ಕಲ್ಪಿಸುವ 1,264 ಕೋಟಿ ರೂ. ವೆಚ್ಚದ ಬಳ್ಳಾರಿ-ಗುಂತಕಲ್ ನಡುವಿನ ರೈಲು ಮಾರ್ಗಕ್ಕೆ ಅನುಮೋದನೆ ನೀಡಲಾಗಿದೆ. 3 ಮತ್ತು 4ನೇ ಹಂತದ ರೈಲು ಮಾರ್ಗಗಳಿಗೆ ಸಂಪುಟ ಅನುಮೋದನೆ ನೀಡಿದೆ.
- Sushma Chakre
- Updated on: Jul 24, 2026
- 10:05 pm
ಬುಲೆಟ್ ರೈಲು ಯೋಜನೆ ವಿಳಂಬವನ್ನು ಟೀಕಿಸಿದ ಜಪಾನ್ ಮಾಜಿ ಸಚಿವ; ಭಾರತ ತಿರುಗೇಟು
ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆ ವಿಳಂಬವಾಗುತ್ತಿರುವುದಕ್ಕೆ ಭಾರತದ ಸಚಿವರು ಮತ್ತು ಅಧಿಕಾರಿಗಳೇ ಕಾರಣ ಎಂದು ಜಪಾನ್ನ ಮಾಜಿ ಸಚಿವರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಜಪಾನ್ನ ಮಾಜಿ ನ್ಯಾಯಾಂಗ ಸಚಿವ ಹಿದೇಕಿ ಮಾಕಿಹರಾ ಅವರು ಜುಲೈ 15ರಂದು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಈ ಬಗ್ಗೆ ಪೋಸ್ಟ್ ಒಂದನ್ನು ಮಾಡಿದ್ದು, ಭಾರತೀಯ ಅಧಿಕಾರಿಗಳು ಮಾತುಕತೆಯ ವೇಳೆ ಜಪಾನ್ಗೆ ನೀಡಿದ ಭರವಸೆಗಳನ್ನು ಪದೇ ಪದೇ ಮುರಿದಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಆರೋಪವನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ಸಂಪೂರ್ಣವಾಗಿ ತಳ್ಳಿಹಾಕಿದೆ.
- Sushma Chakre
- Updated on: Jul 17, 2026
- 8:20 pm