Indian Railways
ಭಾರತೀಯ ರೈಲ್ವೆ ಭಾರತ ಸರ್ಕಾರದ, ರೈಲ್ವೇ ಖಾತೆಯ ಅಧೀನದ, ಒಂದು ಇಲಾಖೆ. ಭಾರತ ಉದ್ದಗಲಕ್ಕೂ ಹರಡಿದ ರೈಲು ಮಾರ್ಗಗಳ (ಉಗಿ ಬಂಡಿ ದಾರಿಗಳ) ನಿರ್ವಹಣೆಯ ಜವಾಬ್ದಾರಿ ಈ ಇಲಾಖೆಯದಾಗಿದೆ. 1853 ರಲ್ಲಿ ಸ್ಥಾಪಿತವಾದ ಇದು ಪ್ರಪಂಚದ ಅತಿದೊಡ್ಡ ರೈಲು ಜಾಲಗಳಲ್ಲಿ ಒಂದಾಗಿದೆ, ವಿವಿಧ ಪ್ರದೇಶಗಳನ್ನು ಸಂಪರ್ಕಿಸುತ್ತದೆ ಮತ್ತು ಸರಕುಗಳು ಮತ್ತು ಪ್ರಯಾಣಿಕರ ಚಲನೆಯನ್ನು ಸುಗಮಗೊಳಿಸುತ್ತದೆ. ರೈಲ್ವೇ ಖಾತೆಯ ಮುಖ್ಯಸ್ಥರು ಕ್ಯಾಬಿನೆಟ್ ದರ್ಜೆಯ ಮಂತ್ರಿಯಾಗಿದ್ದರೆ, ರೈಲ್ವೇ ಇಲಾಖೆಯ ಆಡಳಿತ ವ್ಯವಸ್ಥೆ ರೈಲ್ವೇ ಮಂಡಳಿಯ ಅಧೀನದಲ್ಲಿದೆ. ರೈಲ್ವೇ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ರೈಲ್ವೇಗಳು ದಿನನಿತ್ಯ ಸಾವಿರಾರು ರೈಲುಗಳನ್ನು ಓಡಿಸುವುದರೊಂದಿಗೆ ವಿಸ್ತಾರವಾದ ಜಾಲವನ್ನು ಹೊಂದಿದೆ. ವ್ಯಾಪಾರ ಮತ್ತು ಪ್ರಯಾಣವನ್ನು ಸಕ್ರಿಯಗೊಳಿಸುವ ಮೂಲಕ ಭಾರತದ ಆರ್ಥಿಕ ಅಭಿವೃದ್ಧಿಯಲ್ಲಿ ಇದು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.
ಇನ್ನೂ ಹೆಚ್ಚು ಓದಿಯಶವಂತಪುರ–ಮಂಗಳೂರು ವಂದೇ ಭಾರತ್ ರೈಲು: ನಿಗದಿತ ಸಮಯಕ್ಕಿಂತ ಮೊದಲೇ ಪೂರ್ಣಗೊಂಡ ಎರಡನೇ ಪ್ರಾಯೋಗಿಕ ಸಂಚಾರ
ಯಶವಂತಪುರ–ಮಂಗಳೂರು ಜಂಕ್ಷನ್ ಮಾರ್ಗದ 16 ಬೋಗಿಗಳ ವಂದೇ ಭಾರತ್ ರೈಲಿನ ಎರಡನೇ ಪ್ರಾಯೋಗಿಕ ಸಂಚಾರ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಯಶಸ್ವಿಯಾಗಿ ಪೂರ್ಣಗೊಂಡಿದೆ. ಮೊದಲ ಪ್ರಯೋಗಾತ್ಮಕ ಸಂಚಾರವು ಘಾಟ್ ಪ್ರದೇಶದಲ್ಲಿ ಬೀಸಿದ ಬಲವಾದ ಗಾಳಿ ಹಾಗೂ ಓವರ್ಹೆಡ್ ಉಪಕರಣ ಮತ್ತು ಪ್ಯಾಂಟೋಗ್ರಾಫ್ ನಡುವಿನ ಹೊಂದಾಣಿಕೆಯ ಸಮಸ್ಯೆಯಿಂದ ವಿಳಂಬವಾಗಿತ್ತು.
- Prasanna Hegde
- Updated on: Sep 11, 2026
- 11:33 am
ಕೇಂದ್ರ ಸಂಪುಟದಿಂದ 10,783 ಕೋಟಿ ವೆಚ್ಚದ ರೈಲ್ವೆ ಯೋಜನೆಗಳಿಗೆ ಅನುಮೋದನೆ: 5 ರಾಜ್ಯಗಳಲ್ಲಿ 656 ಕಿ.ಮೀ ರೈಲು ಜಾಲ ವಿಸ್ತರಣೆ
ಐದು ರಾಜ್ಯಗಳಾದ್ಯಂತ 656 ಕಿಮೀ ಹೆಚ್ಚುವರಿ ರೈಲು ಮಾರ್ಗ ನಿರ್ಮಿಸುವ ಮೂರು ಪ್ರಮುಖ ರೈಲ್ವೆ ವಿಸ್ತರಣಾ ಯೋಜನೆಗಳಿಗೆ ಹಸಿರು ನಿಶಾನೆ ಸಿಕ್ಕಿದೆ. ಕೇಂದ್ರ ಸಂಪುಟವು 10,783 ಕೋಟಿ ರೂ ವೆಚ್ಚದ ಈ ಮೂರು ಯೋಜನೆಗಳಿಗೆ ಸೆಪ್ಟೆಂಬರ್ 9ರಂದು ಅನುಮೋದನೆ ನೀಡಿದೆ. ಪಶ್ಚಿಮ ಬಂಗಾಳ, ಜಾರ್ಖಂಡ್, ಒಡಿಶಾ, ಮಧ್ಯಪ್ರದೇಶ ಮತ್ತು ಛತ್ತೀಸ್ಗಢ ರಾಜ್ಯಗಳಲ್ಲಿ ಈ ರೈಲು ಜಾಲ ವಿಸ್ತರಣೆಯ ಕಾರ್ಯ ನಡೆಯಲಿದೆ.
- Vijaya Sarathy SN
- Updated on: Sep 9, 2026
- 5:58 pm
ತಾಂತ್ರಿಕ ದೋಷದಿಂದ ತಡವಾದರೂ ಪರೀಕ್ಷಾರ್ಥಿಗಳನ್ನು ಸಮಯಕ್ಕೆ ಸರಿಯಾಗಿ ತಲುಪಿಸಿದ ಯಶವಂತಪುರ ಎಕ್ಸ್ಪ್ರೆಸ್!
ವಿಜಯಪುರದಿಂದ ಬೆಂಗಳೂರು CAR/DAR ಪೊಲೀಸ್ ಪರೀಕ್ಷೆಗೆ ಹೊರಟ ಯಶವಂತಪುರ ಎಕ್ಸ್ಪ್ರೆಸ್ ಇಂಜಿನ್ ವೈಫಲ್ಯದಿಂದ 4 ಗಂಟೆ ಸ್ಥಗಿತಗೊಂಡಿತ್ತು. 500ಕ್ಕೂ ಹೆಚ್ಚು ಅಭ್ಯರ್ಥಿಗಳು ಪ್ರತಿಭಟಿಸಿದರು. ರೈಲ್ವೆ ಇಲಾಖೆ ತಕ್ಷಣ ಪರ್ಯಾಯ ಇಂಜಿನ್ ಜೋಡಿಸಿ, 'ಗ್ರೀನ್ ಕಾರಿಡಾರ್' ಮೂಲಕ ರೈಲನ್ನು ಓಡಿಸಿ, ನಿಗದಿತ ಸಮಯಕ್ಕಿಂತ 2 ಗಂಟೆ ಮುಂಚಿತವಾಗಿ ಬೆಂಗಳೂರು ತಲುಪಿಸಿತು. ಪರೀಕ್ಷಾರ್ಥಿಗಳು ನಿರಾಳರಾಗಿ ಪರೀಕ್ಷೆಗೆ ಹಾಜರಾದರು.
- Akshatha Vorkady
- Updated on: Sep 6, 2026
- 10:40 am
ದಕ್ಷಿಣ ರೈಲ್ವೆಯಲ್ಲಿ 4,471 ಅಪ್ರೆಂಟಿಸ್ ಹುದ್ದೆಗಳ ಬಂಪರ್ ನೇಮಕಾತಿ; ಲಿಖಿತ ಪರೀಕ್ಷೆಯಿಲ್ಲದೆ ನೇರ ಆಯ್ಕೆ
ದಕ್ಷಿಣ ರೈಲ್ವೆಯಲ್ಲಿ 4,471 ಅಪ್ರೆಂಟಿಸ್ ಹುದ್ದೆಗಳ ಭರ್ಜರಿ ನೇಮಕಾತಿಗೆ ಅಧಿಸೂಚನೆ ಬಿಡುಗಡೆಯಾಗಿದೆ. ಯಾವುದೇ ಲಿಖಿತ ಪರೀಕ್ಷೆಯಿಲ್ಲದೆ, ಶೈಕ್ಷಣಿಕ ಅಂಕಗಳ ಆಧಾರದ ಮೇಲೆ ನೇರವಾಗಿ ಆಯ್ಕೆ ನಡೆಯಲಿದೆ. ಫಿಟ್ಟರ್, ವೆಲ್ಡರ್ ಸೇರಿದಂತೆ ಹಲವು ಟ್ರೇಡ್ಗಳಲ್ಲಿ ತರಬೇತಿ ಪಡೆಯಲು ಇದು ಉತ್ತಮ ಅವಕಾಶ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 27ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ, ಮಾಸಿಕ ಸ್ಟೈಫಂಡ್ ಪಡೆಯಿರಿ.
- Akshatha Vorkady
- Updated on: Sep 3, 2026
- 3:05 pm
ಪ್ರಯಾಗ್ರಾಜ್ಗೆ ಹೋಗಿ ಬರುವವರಿಗೆ ಗುಡ್ನ್ಯೂಸ್: ಸಬ್ದರ್ಗಂಜ್ – ಯಶವಂತಪುರ ನಡುವೆ ವಿಶೇಷ ರೈಲು
Subedarganj Yesvantpur special train: ಉತ್ತರ ಪ್ರದೇಶದ ಪ್ರಯಾಗ್ರಾಜ್ ಸಬ್ದರ್ಗಂಜ್ ಮತ್ತು ಬೆಂಗಳೂರಿನ ಯಶವಂತಪುರ ನಡುವೆ ಸೆಪ್ಟೆಂಬರ್ನಿಂದ ವಾರದ ವಿಶೇಷ ರೈಲು ಸಂಚಾರ ಆರಂಭವಾಗಲಿದೆ. ರಾಯಚೂರು, ಕೃಷ್ಣಾ, ಗುಂತಕಲ್ ಸೇರಿ ಕರ್ನಾಟಕದ ಹಲವೆಡೆ ಈ ರೈಲಿಗೆ ನಿಲುಗಡೆ ಇರಲಿದೆ. ವೇಳಾಪಟ್ಟಿ ಸಹಿತ ನಿಲುಗಡೆ ವಿವರಗಳು ಇಲ್ಲಿವೆ.
- Ganapathi Sharma
- Updated on: Sep 1, 2026
- 7:39 am
ಬೆಂಗಳೂರು ಉಪನಗರ ರೈಲು ಯೋಜನೆಯ ಮಲ್ಲಿಗೆ ಕಾರಿಡಾರ್: ಅದಾನಿ ಗ್ರೂಪ್ ಸಂಸ್ಥೆ ಎಲ್1 ಬಿಡ್ಡರ್
Adani group set to get Rs 666 crore Bengaluru suburban rail project: ಬೆಂಗಳೂರು ಸಬರ್ಬನ್ ರೈಲು ಯೋಜನೆಯ ಮಲ್ಲಿಗೆ ಕಾರಿಡಾರ್ನಲ್ಲಿನ ಕೆಲ ಕಾಮಗಾರಿಗಳಿಗೆ ಕರೆಯಲಾಗಿದ್ದ ಟೆಂಡರ್ನಲ್ಲಿ ಅದಾನಿ ಸಂಸ್ಥೆ ನಂಬರ್ ಒನ್ ಬಿಡ್ದಾರ ಎನಿಸಿದೆ. ಬೆನ್ನಿಗಾನಹಳ್ಳಿಯಿಂದ ಚಿಕ್ಕಬಾಣಾವರ ನಡುವಿನ ಈ ಕಾರಿಡಾರ್ನಲ್ಲಿ 7.8 ಕಿಮೀ ಉದ್ದದ ಎಲಿವೇಟೆಡ್ ಫ್ಲೈಓವರ್ ಇತ್ಯಾದಿ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿತ್ತು.
- Vijaya Sarathy SN
- Updated on: Aug 31, 2026
- 6:25 pm
ಕೇರಳದವರು ಬಟ್ಟೆ ಬಿಚ್ಚಿ ಕುಣೀತಿದ್ದಾರೆ, ತಲೆಕೆಡಿಸಿಕೊಳ್ಳಲ್ಲ: ಮಂಗಳೂರು ರೈಲ್ವೆ ವಿಭಾಗ ಸಂಬಂಧ ಸೋಮಣ್ಣ ಖಡಕ್ ತಿರುಗೇಟು
ಮಂಗಳೂರು ರೈಲ್ವೆ ಘಟಕವನ್ನು ಮೈಸೂರು ವಲಯಕ್ಕೆ ಸೇರಿಸಿದ ವಿಚಾರ ಕೇರಳದಲ್ಲಿ ಪ್ರತಿಭಟನೆಗೆ ಕಾರಣವಾಗಿದ್ದು, ರೈಲ್ವೆ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ಖಡಕ್ ತಿರುಗೇಟು ನೀಡಿದ್ದಾರೆ. ಯಾವುದೇ ತಪ್ಪು ಮಾಡಿಲ್ಲ, ನಮ್ಮ ನಿರ್ಧಾರ ತಾಂತ್ರಿಕ ಪರಿಶೀಲನೆಯ ಆಧಾರದಲ್ಲಿದೆ. ಕೇರಳದವರು ಬಟ್ಟೆಬಿಚ್ಚಿಕೊಂಡು ನನ್ನ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ, ಏನೂ ಮಾಡಲಾಗದು ಎಂದು ಸೋಮಣ್ಣ ತಿರುಗೇಟು ನೀಡಿದ್ದಾರೆ.
- Jagadisha B
- Updated on: Aug 31, 2026
- 11:45 am
ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್: ಭುವನೇಶ್ವರ – ಯಶವಂತಪುರ ವಿಶೇಷ ರೈಲುಗಳ ಸಂಚಾರ ಅವಧಿ ವಿಸ್ತರಣೆ
ಭುವನೇಶ್ವರ–ಯಶವಂತಪುರ ವೀಕ್ಲಿ ಎಕ್ಸ್ಪ್ರೆಸ್ ವಿಶೇಷ ರೈಲುಗಳ ಸಂಚಾರ ಅವಧಿಯನ್ನು ವಿಸ್ತರಿಸಲಾಗಿದೆ. ರೈಲು ಸಂಖ್ಯೆ 02811 ಸೆಪ್ಟೆಂಬರ್ 5ರಿಂದ ನವೆಂಬರ್ 28ರವರೆಗೆ ಹಾಗೂ 02812 ಸೆಪ್ಟೆಂಬರ್ 7ರಿಂದ ನವೆಂಬರ್ 30ರವರೆಗೆ ಸಂಚರಿಸಲಿದೆ. ಪ್ರತಿ ದಿಕ್ಕಿನಲ್ಲಿ 13 ಹೆಚ್ಚುವರಿ ಟ್ರಿಪ್ಗಳು ಇರಲಿವೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.
- Ganapathi Sharma
- Updated on: Aug 26, 2026
- 9:22 am
ಬೆಂಗಳೂರು – ತಿರುವನಂತಪುರ ಮಧ್ಯೆ ವಿಶೇಷ ರೈಲು ಸಂಚಾರ: ಇಲ್ಲಿದೆ ವೇಳಾಪಟ್ಟಿ, ನಿಲುಗಡೆ ವಿವರ
Bengaluru-Thiruvananthapuram Special Train: ಓಣಂ ಹಬ್ಬದ ಕಾರಣ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಹಿನ್ನೆಲೆ ನೈಋತ್ಯ ರೈಲ್ವೆಯು ಬೆಂಗಳೂರಿನಿಂದ ತಿರುವನಂತಪುರಂ ನಾರ್ತ್ಗೆ ವಿಶೇಷ ಎಕ್ಸ್ಪ್ರೆಸ್ ರೈಲು ಸಂಚಾರ ಪ್ರಕಟಿಸಿದೆ. ಆಗಸ್ಟ್ 22ರಂದು SMVTಯಿಂದ ಹೊರಡುವ ರೈಲು ಕರ್ನಾಟಕ ಹಾಗೂ ಕೇರಳದ ಹಲವು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.
- Ganapathi Sharma
- Updated on: Aug 21, 2026
- 9:00 am
ರೈಲು ಪ್ರಯಾಣಿಕರೇ ಗಮನಿಸಿ: ಶಿವಮೊಗ್ಗ, ತಾಳಗುಪ್ಪ ಮಾರ್ಗದ ಹಲವು ರೈಲು ಸಂಚಾರ ರದ್ದು, ಮಾರ್ಗ ಬದಲಾವಣೆ
ಬೆಂಗಳೂರು, ಆ.19: ಮಲ್ಲಸಂದ್ರ-ಗುಬ್ಬಿ ನಡುವೆ ನಡೆಯುತ್ತಿರುವ ಇಂಜಿನಿಯರಿಂಗ್ ಕಾಮಗಾರಿಗಳಿಂದ ಆಗಸ್ಟ್ ತಿಂಗಳಲ್ಲಿ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ತಾಳಗುಪ್ಪ, ಶಿವಮೊಗ್ಗ, ಚಿಕ್ಕಮಗಳೂರು ಮಾರ್ಗದ ರೈಲುಗಳು ಭಾಗಶಃ/ಸಂಪೂರ್ಣ ರದ್ದುಗೊಂಡಿವೆ ಅಥವಾ ಮಾರ್ಗ ಬದಲಾವಣೆಗೊಂಡಿವೆ. ಪ್ರಯಾಣಿಕರು ಆಗಸ್ಟ್ 19, 22, 23, 26 ರಂದು ತಮ್ಮ ರೈಲು ವೇಳಾಪಟ್ಟಿ ಪರಿಶೀಲಿಸಿ ಪ್ರಯಾಣಿಸಲು ರೈಲ್ವೆ ಇಲಾಖೆ ಕೋರಿದೆ.
- Akshay Pallamajalu
- Updated on: Aug 19, 2026
- 10:51 am
ಬಟ್ಟೆ ಬಿಚ್ಚಿ, ರೇಜರ್ ಬ್ಲೇಡ್ನಿಂದ ಹಲ್ಲೆಗೆ ಯತ್ನ: ರೈಲಿನಲ್ಲಿ ನಟಿ ಅಂತರಾ ಬ್ಯಾನರ್ಜಿ ಅವಾಂತರ; ಬಂಧನ
Actress Antara Banerjee allegedly stripped and attacked RPF official with razor blade: ಮುಂಬೈನಿಂದ ಸೂರತ್ಗೆ ಹೋಗುವ ಅರಾವಳಿ ಎಕ್ಸ್ಪ್ರೆಸ್ ರೈಲಿನಲ್ಲಿ ನಟಿ ಅಂತರಾ ಬ್ಯಾನರ್ಜಿ ಅವಾಂತರ ಸೃಷ್ಟಿಸಿದ್ದಾಳೆ. ಸ್ಲೀಪರ್ ಕ್ಲಾಸ್ ಟಿಕೆಟ್ ಪಡೆದು ರಿಸರ್ವ್ ಎಸಿ ಕೋಚ್ಗೆ ಹೋಗಿ ಸಹಪ್ರಯಾಣಿಕರಿಗೆ ಸೀಟು ಬಿಟ್ಟುಕೊಡದೆ ನಕರಾ ಮಾಡಿದ ಆರೋಪ ಇದೆ. ಹಾಗೆಯೆ, ಸೀಟು ತೆರವುಗೊಳಿಸಲು ಬಂದ ಆರ್ಪಿಎಫ್ ಸಿಬ್ಬಂದಿ ಮೇಲೆ ಹಲ್ಲೆ ಎಸಗಿದ ಆರೋಪವೂ ಆಕೆಯ ಮೇಲಿದೆ.
- Vijaya Sarathy SN
- Updated on: Aug 16, 2026
- 5:23 pm
ಬೆಂಗಳೂರು-ಮುಂಬೈ ಮಾರ್ಗಕ್ಕೆ ವಂದೇ ಭಾರತ್ ಸ್ಲೀಪರ್ ಸಿದ್ಧ: ಬೆಂಗಳೂರಿನಲ್ಲೇ ತಯಾರಾದ ರೈಲಿನ ಪ್ರಾಯೋಗಿಕ ಸಂಚಾರ ಶೀಘ್ರ
Bengaluru-Mumbai Vande Bharat sleeper train: ಬೆಂಗಳೂರು-ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ಸಿದ್ಧವಾಗಿದೆ. ಎರಡು 16 ಬೋಗಿಗಳ ರೈಲು ಸೆಟ್ಗಳನ್ನು ನೈಋತ್ಯ ರೈಲ್ವೆ ನಿಯೋಜನೆ ಮಾಡಿದ್ದು, ಶೀಘ್ರದಲ್ಲೇ ಟ್ರಯಲ್ ರನ್ ನಡೆಯಲಿದೆ. ಸುಮಾರು 16 ಗಂಟೆಗಳಲ್ಲಿ ಪ್ರಯಾಣ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
- Ganapathi Sharma
- Updated on: Aug 10, 2026
- 10:49 am