AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Indian Railways

Indian Railways

ಭಾರತೀಯ ರೈಲ್ವೆ ಭಾರತ ಸರ್ಕಾರದ, ರೈಲ್ವೇ ಖಾತೆಯ ಅಧೀನದ, ಒಂದು ಇಲಾಖೆ. ಭಾರತ ಉದ್ದಗಲಕ್ಕೂ ಹರಡಿದ ರೈಲು ಮಾರ್ಗಗಳ (ಉಗಿ ಬಂಡಿ ದಾರಿಗಳ) ನಿರ್ವಹಣೆಯ ಜವಾಬ್ದಾರಿ ಈ ಇಲಾಖೆಯದಾಗಿದೆ. 1853 ರಲ್ಲಿ ಸ್ಥಾಪಿತವಾದ ಇದು ಪ್ರಪಂಚದ ಅತಿದೊಡ್ಡ ರೈಲು ಜಾಲಗಳಲ್ಲಿ ಒಂದಾಗಿದೆ, ವಿವಿಧ ಪ್ರದೇಶಗಳನ್ನು ಸಂಪರ್ಕಿಸುತ್ತದೆ ಮತ್ತು ಸರಕುಗಳು ಮತ್ತು ಪ್ರಯಾಣಿಕರ ಚಲನೆಯನ್ನು ಸುಗಮಗೊಳಿಸುತ್ತದೆ. ರೈಲ್ವೇ ಖಾತೆಯ ಮುಖ್ಯಸ್ಥರು ಕ್ಯಾಬಿನೆಟ್ ದರ್ಜೆಯ ಮಂತ್ರಿಯಾಗಿದ್ದರೆ, ರೈಲ್ವೇ ಇಲಾಖೆಯ ಆಡಳಿತ ವ್ಯವಸ್ಥೆ ರೈಲ್ವೇ ಮಂಡಳಿಯ ಅಧೀನದಲ್ಲಿದೆ. ರೈಲ್ವೇ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ರೈಲ್ವೇಗಳು ದಿನನಿತ್ಯ ಸಾವಿರಾರು ರೈಲುಗಳನ್ನು ಓಡಿಸುವುದರೊಂದಿಗೆ ವಿಸ್ತಾರವಾದ ಜಾಲವನ್ನು ಹೊಂದಿದೆ. ವ್ಯಾಪಾರ ಮತ್ತು ಪ್ರಯಾಣವನ್ನು ಸಕ್ರಿಯಗೊಳಿಸುವ ಮೂಲಕ ಭಾರತದ ಆರ್ಥಿಕ ಅಭಿವೃದ್ಧಿಯಲ್ಲಿ ಇದು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.

ಇನ್ನೂ ಹೆಚ್ಚು ಓದಿ

ರೈಲ್ವೆ ಟಿಕೆಟ್ ಬುಕಿಂಗ್ ಅಲರ್ಟ್: ಆಧಾರ್ ದೃಢೀಕೃತ ಬಳಕೆದಾರರಿಗೆ ನಿಯಮ ಬದಲಾವಣೆ

IRCTC rules change for Aadhaar authenticated users: ಐಆರ್​ಸಿಟಿಸಿಯ ಆಧಾರ್ ದೃಢೀಕೃತ ಬಳಕೆದಾರರಿಗೆ ಟಿಕೆಟ್ ಬುಕಿಂಗ್​ನನಲ್ಲಿ ಹೆಚ್ಚಿನ ಆದ್ಯತೆ ಸಿಗುತ್ತದೆ. ಅಡ್ವಾನ್ಸ್ ರಿಸರ್ವೇಶನ್ ಪೀರಿಯಡ್ ಆರಂಭವಾದ ಮೊದಲ ದಿನ ಸಂಪೂರ್ಣವಾಗಿ ಆಧಾರ್ ದೃಢೀಕೃತ ಬಳಕೆದಾರರಿಗೆ ಮೀಸಲಾಗಿರುತ್ತದೆ. ಆ ದಿನ ಏಜೆಂಟ್ ಆಗಲೀ ಬೇರೆಯವರಾಗಲೀ ಯಾರೂ ಟಿಕೆಟ್ ಬುಕಿಂಗ್ ಮಾಡಲು ಅವಕಾಶ ಇರುವುದಿಲ್ಲ.

Viral Video: ರೈಲಿನ ಸಿಂಕ್​ನಲ್ಲಿ ಸಿಲುಕಿದ್ದ ಕಸವನ್ನು ಕೈಯಿಂದ ತೆಗೆದ ಪ್ರಯಾಣಿಕನಿಗೆ ಭಾರಿ ಮೆಚ್ಚುಗೆ

ಯುವಕನೊಬ್ಬ ರೈಲಿನ ವಾಶ್ ಬೇಸಿನ್​ನಲ್ಲಿ ಸಿಲುಕಿಕೊಂಡಿದ್ದ ಕಸವನ್ನು ಕೈನಲ್ಲಿ ತೆಗೆದಿರುವ ವಿಡಿಯೋ ವೈರಲ್ ಆಗಿದೆ. ಹಲವು ಬಾರಿ ರೈಲಿನ ವಾಶ್​ರೂಂನಲ್ಲಿ ನಲ್ಲಿ ಸರಿ ಇರುವುದಿಲ್ಲ, ಕೆಲವೊಮ್ಮೆ ನೀರೇ ಬರುವುದಿಲ್ಲ, ಕೆಲವೊಮ್ಮೆ ಸಿಂಕ್​ನಲ್ಲಿ ನೀರು ತುಂಬಿ ಹೋಗಿರುತ್ತದೆ. ಆದರೆ ಪ್ರಯಾಣಿಕರು ಅದರ ಬಗ್ಗೆ ಎಷ್ಟಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ, ರೈಲ್ವೆಗೆ ದೂರು ಕೊಡುವುದೂ ಇಲ್ಲ, ಆಗ ವ್ಯವಸ್ಥೆ ಸರಿಯಾಗುವುದಾದರೂ ಹೇಗೆ?. ರೈಲಿನ ಸಿಂಕ್​ನಲ್ಲಿ ಪ್ಲಾಸ್ಟಿಕ್​ ಸಿಲುಕಿ ಅದರಲ್ಲಿ ನೀರು ನಿಂತುಕೊಂಡಿತ್ತು, ಆಗ ಈ ಯುವಕ ನೀರಿನಲ್ಲಿರುವ ಪ್ಲಾಸ್ಟಿಕ್ ಅನ್ನು ಕೈಯಲ್ಲೇ ತೆಗೆದು, ನೀರು ಸರಾಗವಾಗಿ ಕೆಳಗೆ ಇಳಿಯಲು ಅವಕಾಶ ಮಾಡಿಕೊಟ್ಟಿದ್ದಾನೆ.

ಕಿಕ್ಕಿರಿದ ರೈಲಿನೊಳಗೆ ಹತ್ತಲು ಬಡ ಯುವಕನ ಪರದಾಟ; ಇಲ್ಲಿದೆ ವಿಡಿಯೋ

ಪ್ರತಿದಿನ ಅಂತರ್ಜಾಲದಲ್ಲಿ ವಿವಿಧ ರೀತಿಯ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಬೆನ್ನಿನ ಮೇಲೆ ಭಾರವಾದ ಹೊರೆಯನ್ನು ಹೊತ್ತು ಸಾಮಾನ್ಯ ವ್ಯಕ್ತಿಯೊಬ್ಬ ರೈಲನ್ನು ಹತ್ತಲು ಪ್ರಯತ್ನಿಸುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಬೆನ್ನಿನ ಮೇಲೆ ಭಾರವಾದ ಹೊರೆಯನ್ನು ಹೊತ್ತು ಸಾಮಾನ್ಯ ವ್ಯಕ್ತಿಯೊಬ್ಬ ರೈಲನ್ನು ಹತ್ತಲು ಪ್ರಯತ್ನಿಸುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಜನದಟ್ಟಣೆಯ ರೈಲನ್ನು ಹತ್ತಲು ಯುವಕನೊಬ್ಬ ಕಷ್ಟಪಡುತ್ತಿರುವ ವಿಡಿಯೋ ಇಂಟರ್​​ನೆಟ್​​​ನಲ್ಲಿ ಹರಿದಾಡುತ್ತಿದೆ.

Railway stocks: ಬಜೆಟ್​ಗೆ ಮುಂಚೆ ರೈಲ್ವೆ ಕ್ಷೇತ್ರದ ಯಾವ ಷೇರುಗಳನ್ನು ಖರೀದಿಸಬಹುದು?

Railway stocks to Buy Ahead of Budget 2026: ಫೆಬ್ರುವರಿ 1ರಂದು ಬಜೆಟ್ ಮಂಡನೆಯಾಗಲಿದ್ದು, ಈ ಬಾರಿ ರೈಲ್ವೆ ಕ್ಷೇತ್ರದ ಮತ್ತಷ್ಟು ಬಲವರ್ಧನೆಗೆ ಗಮನ ಹರಿಸುವ ನಿರೀಕ್ಷೆ ಇದೆ. ಇತ್ತೀಚೆಗೆ ಇಲಾಖೆಯ ರೈಲು ಪ್ರಯಾಣ ದರವನ್ನು ಏರಿಸಿದೆ. ಇದರಿಂದ ಈ ಕ್ಷೇತ್ರಕ್ಕೆ ಹೆಚ್ಚಿನ ಆದಾಯ ಬರುವ ನಿರೀಕ್ಷೆ ಇದೆ. ಬಜೆಟ್​ನಲ್ಲಿ 1.3 ಲಕ್ಷ ಕೋಟಿ ರೂ ಬಂಡವಾಳ ವೆಚ್ಚ ಬರುವ ನಿರೀಕ್ಷೆ ಇದೆ. ಹೀಗಾಗಿ, ರೈಲ್ವೆ ಸ್ಟಾಕ್​ಗಳಿಗೆ ಬೇಡಿಕೆ ಹೆಚ್ಚಿದೆ.

ಆಂಧ್ರದ ಶ್ರೀಕಾಕುಳಂನಲ್ಲಿ ರೈಲಿನ ಮೇಲೆ ಹತ್ತಿದ ಯುವಕನ ಹುಚ್ಚಾಟ

ಭಾನುವಾರ ಮಧ್ಯಾಹ್ನ ಭುವನೇಶ್ವರದಿಂದ ತಿರುಪತಿಗೆ ಸೂಪರ್ ಫಾಸ್ಟ್ ವೀಕ್ಲಿ ಎಕ್ಸ್‌ಪ್ರೆಸ್ ರೈಲು ಸೋಂಪೇಟ ರೈಲು ನಿಲ್ದಾಣಕ್ಕೆ ಬಂದು ನಿಂತಿತು. ರೈಲು ಆ ನಿಲ್ದಾಣದಲ್ಲಿ ಕೇವಲ ಎರಡು ನಿಮಿಷಗಳ ಕಾಲ ನಿಲ್ಲುತ್ತದೆ. ಪ್ರಯಾಣಿಕರು ರೈಲನ್ನು ಹತ್ತಿ ಹತ್ತುತ್ತಿದ್ದಾಗ ಆ ಯುವಕ ರೈಲಿನ ಮೇಲ್ಭಾಗಕ್ಕೆ ಹತ್ತಿ ಹುಚ್ಚಾಟ ನಡೆಸಿದ್ದಾನೆ. ಭುವನೇಶ್ವರ-ತಿರುಪತಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ ಮೇಲ್ಛಾವಣಿಯ ಮೇಲೆ ವ್ಯಕ್ತಿಯೊಬ್ಬ ಹತ್ತಿದ್ದಾನೆ. ಈ ಅವ್ಯವಸ್ಥೆಯಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡು, ಹೈ ವೋಲ್ಟೇಜ್ ಲೈನ್‌ಗಳಿಂದ ಆ ವ್ಯಕ್ತಿಯನ್ನು ರಕ್ಷಿಸಲು ಅಧಿಕಾರಿಗಳು ರೈಲನ್ನು ನಿಲ್ಲಿಸಿದರು. ಹೀಗಾಗಿ, ರೈಲು ಸೋಂಪೆಟ್ ರೈಲು ನಿಲ್ದಾಣದಿಂದ 20 ನಿಮಿಷ ತಡವಾಗಿ ಹೊರಟಿತು.

Video: ಕೇರಳದ ರೈಲ್ವೆ ನಿಲ್ದಾಣದ ಪಾರ್ಕಿಂಗ್​ನಲ್ಲಿ ಅಗ್ನಿ ಅವಘಡ, 200ಕ್ಕೂ ಅಧಿಕ ವಾಹನಗಳು ಭಸ್ಮ

ತ್ರಿಶೂರ್ ರೈಲ್ವೆ ನಿಲ್ದಾಣದ ಪಾರ್ಕಿಂಗ್​ನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, 200ಕ್ಕೂ ಅಧಿಕ ವಾಹನಗಳು ಸುಟ್ಟು ಭಸ್ಮವಾಗಿವೆ. ಪ್ಲಾಟ್‌ಫಾರ್ಮ್ ಸಂಖ್ಯೆ 2 ರ ಬಳಿ ಇರುವ ದ್ವಿಚಕ್ರ ವಾಹನಗಳ ಪಾರ್ಕಿಂಗ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಪ್ರಯಾಣಿಕರು ಮತ್ತು ಹತ್ತಿರದ ನಿವಾಸಿಗಳಲ್ಲಿ ಭಯಭೀತರಾಗಿದ್ದಾರೆ. ವರದಿಗಳ ಪ್ರಕಾರ, 6.45ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಜ್ವಾಲೆ ವೇಗವಾಗಿ ಪಾರ್ಕಿಂಗ್ ಪ್ರದೇಶವನ್ನು ಆವರಿಸಿಕೊಂಡಿತ್ತು. ಪ್ರತಿನಿತ್ಯ ಸುಮಾರು 500ಕ್ಕೂ ಹೆಚ್ಚು ಬೈಕ್​ಗಳನ್ನು ಅಲ್ಲಿ ನಿಲುಗಡೆ ಮಾಡಲಾಗುತ್ತದೆ.

ಗುವಾಹಟಿ-ಕೊಲ್ಕತ್ತಾ ಮಾರ್ಗದಲ್ಲಿ ಶೀಘ್ರದಲ್ಲೇ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರ

ನೂತನ ವಂದೇ ಭಾರತ್ ಸ್ಲೀಪರ್ ರೈಲು ದೆಹಲಿ, ಉತ್ತರ ಪ್ರದೇಶ, ಬಿಹಾರ ಮತ್ತು ಬಂಗಾಳದ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡಲಿದೆ. ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಸುಧಾರಿತ ಸುರಕ್ಷತಾ ವ್ಯವಸ್ಥೆ, ವಿಶ್ವ ದರ್ಜೆಯ ಬೋಗಿಗಳನ್ನು ಹೊಂದಿದೆ. ಈ ರೈಲು ಯಾವಾಗಿಂದ ಸಂಚಾರ ಆರಂಭಿಸಲಿದೆ? ಯಾವ ಮಾರ್ಗದಲ್ಲಿ ಸಾಗಲಿದೆ? ಇದರ ದರ ಎಷ್ಟಿರಲಿದೆ? ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

Indian Railways: ಭಾರತೀಯ ರೈಲುಗಳ ಬೋಗಿಗಳು ವಿಭಿನ್ನ ಬಣ್ಣಗಳನ್ನು ಹೊಂದಿರುವುದೇಕೆ?

ನಿಮ್ಮ ಮನಸ್ಸಿನಲ್ಲಿ ಎಂದಾದರೂ ರೈಲಿನ ಬೋಗಿಗಳು ಯಾಕೆ ಬೇರೆ ಬೇರೆ ಬಣ್ಣದ್ದಿರುತ್ತವೆ ಎನ್ನುವ ಪ್ರಶ್ನೆ ಮೂಡಿದೆಯೇ? ಕೆಲವು ರೈಲುಗಳು ಕೆಂಪು ಬಣ್ಣದ ಬೋಗಿಗಳನ್ನು ಹೊಂದಿದ್ದರೆ, ಇನ್ನು ಕೆಲವು ಹಸಿರು ಬಣ್ಣದ ಬೋಗಿಗಳನ್ನು ಹೊಂದಿರುತ್ತವೆ, ಇನ್ನು ಕೆಲವು ನೀಲಿ ಬಣ್ಣದ ಬೋಗಿಗಳನ್ನು ಹೊಂದಿರುತ್ತವೆ. ಭಾರತೀಯ ರೈಲು ಬೋಗಿಗಳ ಬಣ್ಣಗಳು ಕೇವಲ ಸೌಂದರ್ಯ ಮತ್ತು ನೋಟಕ್ಕಾಗಿ ಮಾತ್ರವಲ್ಲ, ಅವು ರೈಲಿನ ಬಗ್ಗೆಯೂ ಬಹಳಷ್ಟು ಬಹಿರಂಗಪಡಿಸುತ್ತವೆ. ಈ ಬಣ್ಣಗಳು ರೈಲಿನ ಪ್ರಕಾರ, ವೇಗ ಮತ್ತು ಬಳಸಿದ ಕೋಚ್ ತಂತ್ರಜ್ಞಾನದ ಪ್ರಕಾರವನ್ನು ಸೂಚಿಸುತ್ತವೆ. ಇದು ರೈಲ್ವೆ ಉದ್ಯೋಗಿಗಳಿಗೆ ರೈಲನ್ನು ಸುಲಭವಾಗಿ ನಿರ್ವಹಿಸಲು, ದುರಸ್ತಿ ಮಾಡಲು ಮತ್ತು ನಿರ್ವಹಿಸಲು ಸಹಾಯ ಮಾಡುತ್ತದೆ.

ಗಂಟೆಗೆ 180 ಕಿ.ಮೀ ವೇಗದಲ್ಲಿ ಚಲಿಸಿದ ವಂದೇ ಭಾರತ್ ಸ್ಲೀಪರ್ ರೈಲು; ಪರೀಕ್ಷೆಯ ವಿಡಿಯೋ ಇಲ್ಲಿದೆ

ಇಂದು ರೈಲ್ವೆ ಸುರಕ್ಷತಾ ಆಯುಕ್ತರು ವಂದೇ ಭಾರತ್ ಸ್ಲೀಪರ್ ಅನ್ನು ಪರೀಕ್ಷಿಸಿದರು. ಇದು ಕೋಟಾ ನಾಗ್ಡಾ ವಿಭಾಗದ ನಡುವೆ ಗಂಟೆಗೆ 180 ಕಿ.ಮೀ ವೇಗದಲ್ಲಿ ಚಲಿಸಿತು. ಈ ರೈಲಿನೊಳಗೆ ಗ್ಲಾಸ್​​ನಲ್ಲಿ ನೀರನ್ನು ಇಟ್ಟು ವಿಡಿಯೋ ಚಿತ್ರೀಕರಿಸಲಾಗಿದ್ದು, ಸ್ಪೀಡ್​​ ವಿವರ ಕೂಡ ಈ ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ಈ ನೀರಿನ ಪರೀಕ್ಷೆಯು ಈ ಹೊಸ ಪೀಳಿಗೆಯ ರೈಲಿನ ತಾಂತ್ರಿಕ ವೈಶಿಷ್ಟ್ಯಗಳನ್ನು ಪ್ರದರ್ಶಿಸಿತು.

Train Fare Hike: ಇಂದಿನಿಂದ ರೈಲು ಪ್ರಯಾಣ ದುಬಾರಿ, ಹೊಸ ಟಿಕೆಟ್ ದರಗಳ ಕುರಿತು ಇಲ್ಲಿದೆ ಮಾಹಿತಿ

ಭಾರತೀಯ ರೈಲ್ವೆ ಇಲಾಖೆ ಡಿಸೆಂಬರ್ 26 ರಿಂದ ದೇಶಾದ್ಯಂತ ರೈಲು ಪ್ರಯಾಣ ದರ ಹೆಚ್ಚಿಸಿದೆ. ಉಪನಗರ ರೈಲುಗಳನ್ನು ಹೊರತುಪಡಿಸಿ, ದೀರ್ಘ ಪ್ರಯಾಣದ ಟಿಕೆಟ್‌ಗಳು ದುಬಾರಿಯಾಗಲಿವೆ. ಸಾಮಾನ್ಯ, ಮೇಲ್, ಎಕ್ಸ್‌ಪ್ರೆಸ್, ಎಸಿ ವಿಭಾಗಗಳಲ್ಲಿ ಪ್ರತಿ ಕಿಲೋಮೀಟರ್‌ಗೆ 1 ರಿಂದ 2 ಪೈಸೆ ಏರಿಕೆ ಮಾಡಲಾಗಿದೆ. ಈ ವರ್ಷದಲ್ಲಿ ಇದು ಎರಡನೇ ದರ ಹೆಚ್ಚಳವಾಗಿದ್ದು, ರೈಲ್ವೆಗೆ 600 ಕೋಟಿ ರೂ. ಆದಾಯ ಗಳಿಸುವ ಗುರಿ ಹೊಂದಿದೆ.

ಬೆಂಗಳೂರು ಹೊರವಲಯದಲ್ಲಿ ಮತ್ತೊಂದು ರೈಲು ಮಾರ್ಗ: ಆರಂಭದಲ್ಲೇ ವಿಘ್ನ

ದೇವನಹಳ್ಳಿ ಬಳಿ ಕೆಂಪೇಗೌಡ ವಿಮಾನ ನಿಲ್ದಾಣ ಕಾರ್ಯಾರಂಭಿಸಿದ ನಂತರ ರಾಜ್ಯ ಮತ್ತು ಕೇಂದ್ರದಿಂದ ನೂರಾರು ಹೊಸ ಯೋಜನೆಗಳು ಈ ಭಾಗದಲ್ಲಿ ಜಾರಿಯಾಗುತ್ತಿದ್ದು ಸಾವಿರಾರು ಎಕರೆ ಭೂಮಿಯನ್ನು ಸರ್ಕಾರ ವಶಪಡಿಸಿಕೊಂಡಿದೆ. ಈ ಬೆನ್ನಲ್ಲೇ ಇದೀಗ ಮತ್ತೊಂದು ಹೊಸ ರೈಲು ಮಾರ್ಗಕ್ಕೆ ಸರ್ಕಾರ ಮುಂದಾಗಿದ್ದು, ಅದರ ವಿರುದ್ದ ಸ್ಥಳಿಯ ರೈತರು ಹೋರಾಟದ ಹಾದಿ ಹಿಡಿಯಲು ಮುಂದಾಗಿದ್ದಾರೆ.

ಟ್ರೈನ್ ಟಿಕೆಟ್ ಬೆಲೆ ಪ್ರತೀ ಕಿಮೀಗೆ 1-2 ಪೈಸೆ ಹೆಚ್ಚಳ; ಡಿ. 26ರಿಂದ ಹೊಸ ದರ ಜಾರಿ

Indian Railways hikes fares from Dec 26th: ಭಾರತೀಯ ರೈಲ್ವೇಸ್ ಜುಲೈ ನಂತರ ಮತ್ತೊಮ್ಮೆ ರೈಲು ಟಿಕೆಟ್ ದರಗಳನ್ನು ಹೆಚ್ಚಿಸಲು ನಿರ್ಧರಿಸಿದೆ. ಜನರಲ್ ಕೋಚ್​ಗಳಲ್ಲಿ 215 ಕಿಮೀಗಿಂತ ಹೆಚ್ಚಿನ ದೂರದ ಪ್ರಯಾಣವಾದರೆ ಪ್ರತಿ ಕಿಮೀಗೆ 1 ಪೈಸೆಯಷ್ಟು ಬೆಲೆ ಏರಿಕೆ ಆಗಲಿದೆ. ಎಸಿ ಕೋಚ್ ಮತ್ತು ಮೇಲ್ ಟ್ರೈನ್, ಎಕ್ಸ್​ಪ್ರೆಸ್ ಟ್ರೈನ್​ಗಳಲ್ಲಿ ಪ್ರತೀ ಕಿಮೀಗೆ 2 ಪೈಸೆಯಷ್ಟು ಟಿಕೆಟ್ ಬೆಲೆ ಏರಲಿದೆ. ಡಿ. 26ರಿಂದ ಪರಿಷ್ಕೃತ ದರ ಜಾರಿಗೆ ಬರುತ್ತದೆ.