Pink Line Metro: ಪಿಂಕ್ ಲೈನ್ ಆರು ಸ್ಟೇಷನ್ಗಳಲ್ಲಿ ಈ ವರ್ಷವೇ ಮೆಟ್ರೋ ರೈಲು ಸಂಚಾರ
ಅದು ಬನ್ನೇರುಘಟ್ಟ ಭಾಗದಿಂದ ಐಟಿ-ಬಿಟಿ ಟೆಕ್ ಪಾರ್ಕ್ಗಳಿಗೆ ಸಂಪರ್ಕ ಕಲ್ಪಿಸುವ ಪಿಂಕ್ ಲೈನ್ ಮೆಟ್ರೋ ಮಾರ್ಗ. ಬರೋಬ್ಬರಿ 16,000 ಕೋಟಿ ರುಪಾಯಿ ವೆಚ್ಚದಲ್ಲಿ ಕಾಮಗಾರಿ ಮಾಡಲಾಗುತ್ತಿದೆ. ಆದರೆ ಈ ವರ್ಷ ಎಲಿವೇಟೆಡ್ ಮೆಟ್ರೋ ಸ್ಟೇಷನ್ಗಳಿಗೆ ಚಾಲನೆ ಸಿಕ್ಕರೆ ಅಂಡರ್ ಗ್ರೌಂಡ್ನಲ್ಲಿ ಕಾಮಗಾರಿ ವಿಳಂಬವಾಗಿರುವುದರಿಂದ ಮುಂದಿನ ವರ್ಷ ರೈಲು ಸಂಚಾರ ಮಾಡಲಿದೆ ಎನ್ನಲಾಗಿದೆ.
- Kiran Surya
- Updated on: Jun 27, 2025
- 7:59 am
ಬೈಕ್ ಟ್ಯಾಕ್ಸಿ ನಿಷೇಧದಿಂದ ಸ್ವಿಗ್ಗಿ, ಜೊಮೆಟೋ ಡೆಲಿವರಿ ಬಾಯ್ಗಳಿಗೂ ಸಂಕಷ್ಟ
ಬೈಕ್ ಟ್ಯಾಕ್ಸಿ ನಿಷೇಧ ಬೆನ್ನಲ್ಲೇ ಅವುಗಳನ್ನು ಓಡಿಸುತ್ತಿದ್ದ ಯುವಕರು ಫುಡ್ ಡೆಲಿವರಿ, ಗ್ರೋಸರಿ, ಆನ್ಲೈನ್ ಐಟಮ್ಸ್ ಡೆಲಿವರಿ ಮೊರೆ ಹೋಗಿದ್ದಾರೆ. ಇತ್ತ ಕೇಂದ್ರ ಸರ್ಕಾರ ಆನ್ಲೈನ್ ಡೆಲಿವರಿ ಮಾಡುವ ಬೈಕ್ಗಳಿಗೂ ಕಡಿವಾಣ ಹಾಕುವ ಚಿಂತನೆ ನಡೆಸಿದ್ದು, ಬೈಕ್ ಟ್ಯಾಕ್ಸಿ ಹುಡುಗರು ಮತ್ತು ಆನ್ಲೈನ್ ಡೆಲಿವರಿ ಮಾಡುತ್ತಿರುವವರಿಗೆ ದಿಕ್ಕು ತೋಚದಂತೆ ಮಾಡಿದೆ.
- Kiran Surya
- Updated on: Jun 26, 2025
- 7:35 am
ಇನ್ಮುಂದೆ ಐದು ಖಾಸಗಿ ಆ್ಯಪ್ಗಳ ಮೂಲಕವೂ ಖರೀದಿಸಬಹುದು ನಮ್ಮ ಮೆಟ್ರೋ ಟಿಕೆಟ್!
ಪ್ರತಿದಿನ ನಮ್ಮ ಮೆಟ್ರೋದಲ್ಲಿ ಎಂಟು ಲಕ್ಷಕ್ಕೂ ಹೆಚ್ಚು ಮಂದಿ ಪ್ರಯಾಣ ಮಾಡುತ್ತಾರೆ. ಆದರೆ ಟೋಕನ್ಗಾಗಿ ಸರದಿಯಲ್ಲಿ ನಿಂತು ಪರದಾಡುವವರೇ ಹೆಚ್ಚು. ಇನ್ಮುಂದೆ ಇದಕ್ಕೆ ಬ್ರೇಕ್ ಬೀಳಲಿದ್ದು, ನಮ್ಮ ಮೆಟ್ರೋ Open Network for Digital Commerce ಗೆ ಎಂಟ್ರಿ ಕೊಟ್ಟಿದೆ. ಹೀಗಾಗಿ, ಎಲ್ಲಿ ಇದ್ದೀರೋ ಅಲ್ಲಿಂದಲೇ ಟಿಕೆಟ್ ಖರೀದಿಸಿ ಮೆಟ್ರೋದಲ್ಲಿ ಪ್ರಯಾಣ ಮಾಡಬಹುದು.
- Kiran Surya
- Updated on: Jun 26, 2025
- 6:51 am
ಮದ್ಯದಂಗಡಿ ಮಾಲೀಕರಿಗೆ ಸಿಹಿ ಸುದ್ದಿ: ನವೀಕರಣ ಶುಲ್ಕ ಇಳಿಕೆ
ಕರ್ನಾಟಕ ಸರ್ಕಾರವು ಅಬಕಾರಿ ಪರವಾನಗಿ ನವೀಕರಣ ಶುಲ್ಕವನ್ನು ಶೇಕಡಾ 100ರಷ್ಟು ಹೆಚ್ಚಿಸಿತ್ತು. ಇದರಿಂದ ಮದ್ಯದಂಗಡಿ ಮಾಲೀಕರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗೆ ಮುಂದಾಗಿದ್ದರು. ಮದ್ಯದಂಗಡಿ ಮಾಲೀಕರ ಒತ್ತಡಕ್ಕೆ ಮಣಿದ ಸರ್ಕಾರ, ಶುಲ್ಕವನ್ನು ಶೇಕಡಾ 50ರಷ್ಟು ಕಡಿಮೆ ಮಾಡಿದೆ. ಈ ಪರಿಷ್ಕೃತ ದರ ಜುಲೈ 1 ರಿಂದ ಜಾರಿಯಾಗಲಿದೆ.
- Kiran Surya
- Updated on: Jun 24, 2025
- 7:45 pm
ಸರ್ಕಾರಿ ಬಸ್ ಚಾಲಕರಿಂದ ಅಪಘಾತ ಹೆಚ್ಚಳ: ನಾಲ್ಕು ನಿಗಮಗಳಿಗೆ ಖಡಕ್ ವಾರ್ನಿಂಗ್, ಮುಲಾಜಿಲ್ಲದೆ ಕ್ರಮಕ್ಕೆ ಸೂಚನೆ
ಕರ್ನಾಟಕದಲ್ಲಿ ಸರ್ಕಾರಿ ಬಸ್ ಚಾಲಕರಿಂದ ಪದೇ ಪದೇ ಅಪಘಾತಗಳು ಉಂಟಾಗುತ್ತಿದ್ದು, ಇತ್ತೀಚೆಗೆ ಈ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನಾಲ್ಕು ನಿಗಮಗಳಿಗೂ ಖಡಕ್ ವಾರ್ನಿಂಗ್ ನೀಡಿದ್ದು, ಅಧಿಕಾರಿಗಳಿಗೆ ಮಹತ್ವದ ಸೂಚನೆ ನೀಡಿದ್ದಾರೆ.
- Kiran Surya
- Updated on: Jun 23, 2025
- 8:24 am
ಪ್ರತಿದಿನ ಬೆಂಗಳೂರಿನಲ್ಲಿ 2500 ಹೊಸ ವಾಹನ ನೋಂದಣಿ! ಟ್ರಾಫಿಕ್, ವಾಯುಮಾಲಿನ್ಯದಲ್ಲಿ ದೆಹಲಿಯನ್ನೂ ಮೀರಿಸುವ ಆತಂಕ
ಬೆಂಗಳೂರಿನಲ್ಲಿ ಪ್ರತಿದಿನ ಎರಡೂವರೆ ಸಾವಿರ ವಾಹನಗಳು ರಸ್ತೆಗಿಳಿಯುತ್ತಿವೆ. ತಿಂಗಳಿಗೆ ಸರಾಸರಿ 55 ರಿಂದ 60 ಸಾವಿರ ಹೊಸ ವಾಹನಗಳ ನೋಂದಣಿ ಆಗುತ್ತಿವೆ. ಈಗಾಗಲೇ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದೆ. ಪ್ರತಿದಿನ ಹೊಸದಾಗಿ ರೋಡಿಗಳಿಯುತ್ತಿರುವ ವಾಹನಗಳ ಸಂಖ್ಯೆಯನ್ನು ಗಮನಿಸಿದರೆ, ದೆಹಲಿಯನ್ನು ಹಿಂದಿಕ್ಕಿ ಬೆಂಗಳೂರು ಶೀಘ್ರದಲ್ಲೇ ವಾಯುಮಾಲಿನ್ಯ ನಗರ, ಟ್ರಾಫಿಕ್ ಸಿಟಿ ಆಗುವ ಆತಂಕ ಉಂಟಾಗಿದೆ.
- Kiran Surya
- Updated on: Jun 23, 2025
- 7:58 am
ಪ್ರಯಾಣಿಕರ ಗಮನಕ್ಕೆ: ಭಾನುವಾರ ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ
ಜೂನ್ 22ರ ಭಾನುವಾರದಂದು ನಮ್ಮ ಮೆಟ್ರೋದ ನೇರಳೆ ಮಾರ್ಗದಲ್ಲಿ ಬಿಎಂಆರ್ಸಿಎಲ್ ನಿರ್ವಹಣಾ ಕಾಮಗಾರಿ ಕೈಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ. ಹಸಿರು ಮಾರ್ಗದ ಸಂಚಾರಕ್ಕೆ ಯಾವುದೇ ವ್ಯತ್ಯಯವಿಲ್ಲ. ಕೇವಲ ನೇರಳೆ ಮಾರ್ಗದಲ್ಲಿ ಮಾತ್ರ ಸಂಚಾರ ವ್ಯತ್ಯಯವಾಗಲಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ. ಹಾಗಿದ್ದರೆ ಯಾವ ಸಮಯದಲ್ಲಿ ಸಂಚಾರ ವ್ಯತ್ಯಯವಾಗಲಿದೆ? ಇಲ್ಲಿದೆ ವಿವರ
- Kiran Surya
- Updated on: Jun 20, 2025
- 2:57 pm
ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಮಳಿಗೆಗಳು: ಗೊಂದಲಗಳಿಗೆ BMRCL ಸ್ಪಷ್ಟನೆ
ಬಿಎಂಆರ್ಸಿಎಲ್ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಕಿಯೋಸ್ಕ್ಗಳನ್ನು ತೆರೆಯಲು ಒಪ್ಪಂದ ಮಾಡಿಕೊಂಡಿರುವುದರಿಂದ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಟೆಂಡರ್ ಪ್ರಕ್ರಿಯೆಯ ಮೂಲಕ ಈ ಒಪ್ಪಂದವಾಗಿದೆ ಬಿಎಂಆರ್ಸಿಎಲ್ನ ಸಾರ್ವಜನಿಕ ಮುಖ್ಯ ಸಂಪರ್ಕಾಧಿಕಾರಿ ಎಂದು ಸ್ಪಷ್ಟನೆ ನೀಡಿದ್ದಾರೆ. ನಂದಿನಿಗೂ ಅವಕಾಶವಿದೆ ಎಂದು ಹೇಳಿದ್ದಾರೆ. ಆದರೆ, ಕೆಎಂಎಫ್ ಟೆಂಡರ್ನಲ್ಲಿ ಭಾಗವಹಿಸಿಲ್ಲ ಎಂದು ತಿಳಿಸಿದ್ದಾರೆ.
- Kiran Surya
- Updated on: Jun 18, 2025
- 3:52 pm
ಕೊರಿಯರ್, ಪಾರ್ಸೆಲ್ ಹೆಸರಿನಲ್ಲಿ ಬೈಕ್ ಟ್ಯಾಕ್ಸಿ ಓಡಿಸುತ್ತಿದ್ದಾರೆ, ಹೀಗಾಗಿ ಕ್ರಮ: ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ
ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿಗಳಿಗೆ ನಿಷೇಧ ಜಾರಿಗೆ ಬಂದಿದೆ. ಸರ್ಕಾರ ಕೂಡ ಹೈಕೋರ್ಟ್ಗೆ ನಿಲುವನ್ನು ತಿಳಿಸಿದೆ. ಈ ಮಧ್ಯೆ, ಕೊರಿಯರ್/ಪಾರ್ಸೆಲ್ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಬೈಕ್ ಟ್ಯಾಕ್ಸಿಗಳ ಮೇಲೆ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ. ಪೊಲೀಸರು 103 ಬೈಕ್ ಟ್ಯಾಕ್ಸಿಗಳನ್ನು ವಶಪಡಿಸಿಕೊಂಡಿದ್ದಾರೆ. ಬಗ್ಗೆ ಸಾರಿಗೆ ಸಚಿ ರಾಮಲಿಂಗಾ ರೆಡ್ಡಿ ಹೇಳಿದ್ದೇನೆಂಬ ಮಾಹಿತಿ ಇಲ್ಲಿದೆ.
- Kiran Surya
- Updated on: Jun 17, 2025
- 1:06 pm
ಮಟನ್ ತರಲು ಹೋದವ ಆಸ್ಪತ್ರೆ ಪಾಲಾದ: ಅಪ್ಪನ ಹುಟ್ಟುಹಬ್ಬದಂದೇ ಮಗನ ಸ್ಥಿತಿ ಗಂಭೀರ
ಬೆಂಗಳೂರಿನ ಬನಶಂಕರಿಯಲ್ಲಿ ಒಣಗಿದ ಮರದ ಕೊಂಬೆ ಬಿದ್ದು ಬೈಕ್ ಸವಾರ ಅಕ್ಷಯ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರ ಚಿಕಿತ್ಸಾ ವೆಚ್ಚ 1.35 ಲಕ್ಷ ರೂಪಾಯಿಗಳಾಗಿದ್ದು, ಬಡ ಕುಟುಂಬ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಬಿಬಿಎಂಪಿ ಅಕ್ಷಯ್ರ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಭರವಸೆ ನೀಡಿದೆ. ಈ ದುರ್ಘಟನೆಯು ಅಕ್ಷಯ್ ತಂದೆಯ ಹುಟ್ಟುಹಬ್ಬದ ದಿನ ನಡೆದಿದೆ.
- Kiran Surya
- Updated on: Jun 15, 2025
- 7:55 pm
ಬೆಂಗಳೂರಿನ ಈ ಏರಿಯಾದಲ್ಲಿ ನೀರಿದ ಸಮಸ್ಯೆ: ಮನೆ ಬಾಡಿಗೆಗಿಂತ ವಾಟರ್ ಬಿಲ್ ದುಪ್ಪಟ್ಟು, ಜನರು ಆಕ್ರೋಶ
ಬೆಂಗಳೂರು ದಾಸರಹಳ್ಳಿಯ ಸಂಜೀವಿನಿ ನಗರದಲ್ಲಿ ಕಳೆದ ಕೆಲವು ತಿಂಗಳಿಂದ ನೀರಿನ ಸಮಸ್ಯೆ ತೀವ್ರವಾಗಿದ್ದು, ನೀರಿಲ್ಲದಿದ್ದರೂ ದುಪ್ಪಟ್ಟು ಬಿಲ್ ಬರುತ್ತಿದೆ. ಮನೆ ಬಾಡಿಗೆಗಿಂತ ನೀರಿನ ಬಿಲ್ ಸಾವಿರಾರು ರೂ ದುಪ್ಪಟ್ಟು ಬರುತ್ತಿದೆ ಎಂದು ನಗರದ ನಿವಾಸಿಗಳು ಜಲಮಂಡಳಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
- Kiran Surya
- Updated on: Jun 15, 2025
- 8:59 am
ಕಟ್ಟಡ ನಕ್ಷೆಗೆ ಇನ್ಮುಂದೆ ಇ ಖಾತಾ ಕಡ್ಡಾಯ: ಬಿಬಿಎಂಪಿ ನಡೆಗೆ ಆಸ್ತಿ ಮಾಲೀಕರು ಕಂಗಾಲು
ಬೆಂಗಳೂರಿನ ಆಸ್ತಿ ಮಾಲೀಕರಿಗೆ ಇ ಖಾತಾ ಮಾಡಿಸಲು ಸೂಚನೆ ನೀಡಿದ್ದ ಬಿಬಿಎಂಪಿ, ಇದೀಗ ಜುಲೈ 1 ರಿಂದ ಕಟ್ಟಡ ನಕ್ಷೆ ಮಂಜೂರು ಮಾಡಲು ಇ ಖಾತಾ ಕಡ್ಡಾಯ ಮಾಡಿ ಆದೇಶ ಹೊರಡಿಸಿದೆ. ಇನ್ಮುಂದೆ ಆನ್ಲೈನ್ನಲ್ಲಿ ನಂಬಿಕೆ ನಕ್ಷೆ ಪಡೆಯುವುದರಿಂದ ಹಿಡಿದು ಅರ್ಜಿ ಸಲ್ಲಿಕೆ ಮಾಡುವುದಕ್ಕೂ ಇ ಖಾತಾ ಕಡ್ಡಾಯಗೊಳಿಸಿರುವ ಪಾಲಿಕೆ, ಇ ಖಾತಾ ಇಲ್ಲದಿದ್ರೆ ಕಟ್ಟಡ ನಕ್ಷೆ ಸಿಗಲಾರದು ಎಂದು ಎಚ್ಚರಿಕೆ ನೀಡಿದೆ.
- Kiran Surya
- Updated on: Jun 12, 2025
- 7:47 am