ಅಗ್ನಿ ದುರಂತಗಳ ಬೆನ್ನಲ್ಲೇ ಎಚ್ಚೆತ್ತುಕೊಂಡ KSRTC: ಬಸ್ಸಿನಲ್ಲಿ ಸೇಫ್ಟಿ ಅಳವಡಿಕೆ ಪ್ಲಾನ್
ಇತ್ತೀಚಿಗೆ ಖಾಸಗಿ ನೈಟ್ ಸರ್ವಿಸ್ ಬಸ್ಗಳಲ್ಲಿ ಅಗ್ನಿ ಅವಘಡಗಳು ಸಂಭವಿಸಿ ಅಮಾಯಕ ಪ್ರಯಾಣಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಎಚ್ಚೆತ್ತುಕೊಂಡಿರುವ ಕೆಎಸ್ಆರ್ಟಿಸಿ ಅತ್ಯಾಧುನಿಕ ಸೇಫ್ಟಿ ಮೆಜರ್ಮೆಂಟ್ ಅಳವಡಿಸಲು ಮುಂದಾಗಿದೆ. ಅಂಬಾರಿ ಉತ್ಸವ ಮತ್ತು ಅಂಬಾರಿ 2.0 ಬಸ್ಗಳಲ್ಲಿ ಅತ್ಯಾಧುನಿಕ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರುತ್ತಿದೆ.
- Kiran Surya
- Updated on: Jan 2, 2026
- 10:59 pm
ಕೋಗಿಲು ನಿರಾಶ್ರಿತರ ಮೇಲೆ ಬಹುದೊಡ್ಡ ಅನುಮಾನ: ಒತ್ತುವರಿದಾರರ ಜನ್ಮಜಾಲಾಡಲು ಮುಂದಾದ ಜಿಲ್ಲಾಡಳಿತ, ಪೊಲೀಸ್
ಕೋಗಿಲು ಲೇಔಟ್ ಒತ್ತುವರಿ ತೆರವು ಬಳಿಕ ನಿರಾಶ್ರಿತರಿಗೆ ಮನೆ ನೀಡಲು ಮುಂದಾಗಿರುವ ಸರ್ಕಾರಕ್ಕೀಗ ಬಾಂಗ್ಲಾದೇಶ ಮೂಲದವರ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಜಂಟಿ ಪರಿಶೀಲನೆಗೆ ಮುಂದಾಗಿವೆ. ನಕಲಿ ಆಧಾರ್, ಮತದಾರರ ಚೀಟಿಗಳ ಬಳಕೆಯ ಕುರಿತು ಕಟ್ಟುನಿಟ್ಟಿನ ತನಿಖೆ ನಡೆಯಲಿದೆ. ಅರ್ಹ ಫಲಾನುಭವಿಗಳಿಗೆ ಮಾತ್ರ ಪುನರ್ವಸತಿ ಒದಗಿಸಲು ಈ ಕ್ರಮ ಕೈಗೊಳ್ಳಲಾಗಿದೆ.
- Kiran Surya
- Updated on: Jan 2, 2026
- 11:04 am
ಹೊಸ ವರ್ಷಕ್ಕೆ ಭರ್ಜರಿ ಕಿಕ್ ಕೊಟ್ಟ ಮದ್ಯ: ಅಬಕಾರಿ ಇಲಾಖೆಗೆ ಕೋಟ್ಯಂತರ ರೂ ಆದಾಯ
ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಜನರು ಹೊಸ ವರ್ಷವನ್ನು ಅದ್ಧೂರಿಯಾಗಿ ವೆಲ್ಕಂ ಮಾಡಿದ್ದಾರೆ. ಮಧ್ಯರಾತ್ರಿವರೆಗೂ ಮದ್ಯ ಮಾರಾಟಕ್ಕೆ ಅವಕಾಶವಿದ್ದ ಹಿನ್ನೆಲೆ ಕುಡಿದು ಎಂಜಾಯ್ ಮಾಡಿದರು. ಹೊಸ ವರ್ಷದಂದು ಮದ್ಯ ಮಾರಾಟದಿಂದ ಅಬಕಾರಿ ಇಲಾಖೆಗೆ ಕೋಟ್ಯಂತರ ರೂ ಆದಾಯ ಹರಿದುಬಂದಿದೆ. ಎಷ್ಟು ಅಂತ ಕೇಳಿದರೆ ಶಾಕ್ ಆಗ್ತೀರಾ.
- Kiran Surya
- Updated on: Jan 1, 2026
- 5:07 pm
ಹೊಸ ವರ್ಷದಂದು ಬಿಎಂಟಿಸಿಗೆ ಭರ್ಜರಿ ಆದಾಯ: ನಿನ್ನೆ ಒಂದೇ ದಿನ ಗಳಿಸಿದ್ದೆಷ್ಟು ಗೊತ್ತಾ?
ಹೊಸ ವರ್ಷಾಚರಣೆಗೆ ಬೆಂಗಳೂರಿನ ಬಿಎಂಟಿಸಿ ಹೆಚ್ಚುವರಿ ಬಸ್ ಸೇವೆಗಳನ್ನು ಒದಗಿಸಿ ಯಶಸ್ವಿಯಾಗಿದೆ. ರಾತ್ರಿ 11 ರಿಂದ ಮಧ್ಯರಾತ್ರಿ 3 ರವರೆಗೆ 200 ವಿಶೇಷ ಬಸ್ಗಳು ಸಂಚಾರ ಮಾಡಿವೆ. ನಿನ್ನೆ ಒಂದೇ ದಿನ ಸರಿಸುಮಾರು 1 ಲಕ್ಷ ಅಧಿಕ ಪ್ರಯಾಣಿಕರು ಸಂಚಾರ ಮಾಡಿದ್ದು, ಬಿಎಂಟಿಸಿ ಬೊಕ್ಕಸಕ್ಕೆ ಲಕ್ಷ ಲಕ್ಷ ರೂ ಆದಾಯ ಹರಿದುಬಂದಿದೆ.
- Kiran Surya
- Updated on: Jan 1, 2026
- 3:25 pm
ಕೋಗಿಲು ಬಡಾವಣೆಯಲ್ಲಿ ಡೆಮಾಲಿಷ್ ಆಗಿದ್ದು 167 ಮನೆ, ಫ್ಲಾಟ್ಗಾಗಿ ಸಲ್ಲಿಕೆಯಾದ ಅರ್ಜಿ 250ಕ್ಕೂ ಹೆಚ್ಚು!
ಬೆಂಗಳೂರು ಕೋಗಿಲು ಲೇಔಟ್ನಲ್ಲಿ ಅಕ್ರಮ ಶೆಡ್ ತೆರವು ಬಳಿಕ ನಿರಾಶ್ರಿತರಿಗೆ ಮನೆ ನೀಡುವ ಸರ್ಕಾರದ ನಿರ್ಧಾರ ವಿವಾದಕ್ಕೀಡಾಗಿದೆ. ರಾಜೀವ್ ಗಾಂಧಿ ವಸತಿ ಯೋಜನೆಯಡಿ ಸಿಎಂ ಸಿದ್ದರಾಮಯ್ಯ 167 ಫ್ಲಾಟ್ಗಳಿಗೆ ಸೂಚಿಸಿದ್ದು, 250ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಒಂದೇ ಮನೆ ವಿಳಾಸಕ್ಕೆ ಹಲವು ಅರ್ಜಿಗಳು, ನಿವಾಸಿಗಳಲ್ಲದವರೂ ಅರ್ಜಿ ಸಲ್ಲಿಸಿದ್ದು ಅಧಿಕಾರಿಗಳಿಗೆ ತಲೆನೋವಾಗಿದೆ.
- Kiran Surya
- Updated on: Jan 1, 2026
- 2:45 pm
ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ ಬಂಪರ್ ಆದಾಯ: ಆದ ಕಲೆಕ್ಷನ್ ಎಷ್ಟು?
ಹೊಸ ವರ್ಷಾಚರಣೆಯ ಪ್ರಯುಕ್ತ ನಮ್ಮ ಮೆಟ್ರೋ ಒಂದೇ ದಿನದಲ್ಲಿ 3.08 ಕೋಟಿ ರೂ. ಆದಾಯ ಗಳಿಸಿ ದಾಖಲೆ ಮಾಡಿದೆ. ನಿನ್ನೆ 8,93,903 ಮಂದಿ ಮೆಟ್ರೋದಲ್ಲಿ ಪ್ರಯಾಣಿಸಿದ್ದು, ಎಂ.ಜಿ. ರಸ್ತೆ ಹೊರತುಪಡಿಸಿ ಉಳಿದ ಮಾರ್ಗಗಳ ಮೆಟ್ರೋ ನಿಲ್ದಾಣಗಳು ಓಪನ್ ಇದ್ದವು. ನಿನ್ನೆ ಬೆಳಗ್ಗೆ 5 ಗಂಟೆಯಿಂದ ಇಂದು ಬೆಳಗ್ಗಿನ ಜಾವ 3:10ರವರೆಗೆ ಮೆಟ್ರೋ ಸಂಚಾರ ಸಮಯ ವಿಸ್ತರಿಸಲಾಗಿತ್ತು.
- Kiran Surya
- Updated on: Jan 1, 2026
- 12:36 pm
ಹೊಸ ವರ್ಷದ ಮರುದಿನವೇ ಕೋಗಿಲು ನಿರಾಶ್ರಿತರಿಗೆ ಮನೆ ಭಾಗ್ಯ: 187 ಮನೆಗಳ ಸರ್ವೆ ಮುಕ್ತಾಯ, ಯಾರಿಗೆ ಸಿಗಲಿದೆ ಸೂರು?
ಬೆಂಗಳೂರಿನ ಕೋಗಿಲು ನಿರಾಶ್ರಿತರಿಗೆ ಜನವರಿ 2 ರಂದು ಮನೆ ಹಸ್ತಾಂತರವಾಗುವುದು ಬಹುತೇಕ ಖಚಿತವಾಗಿದೆ. ಆದರೆ, ಲಿಂಗನಮಕ್ಕಿ, ಬೆಳಗಾವಿಯಂತಹ ಪ್ರದೇಶಗಳ ಅರ್ಹ ಸಂತ್ರಸ್ತರಿಗೆ ದಶಕಗಳಿಂದ ಸೂರು ಸಿಕ್ಕಿಲ್ಲ. ಈ ನಡುವೆ, ಕೋಗಿಲು ಲೇಔಟ್ನಲ್ಲಿ ರೋಹಿಂಗ್ಯಾ, ಬಾಂಗ್ಲಾದೇಶಿ ಅಕ್ರಮ ವಲಸಿಗರಿದ್ದ ಬಗ್ಗೆ ಬಿಜೆಪಿ ಪ್ರಸ್ತಾಪಿಸಿದ್ದು ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ‘ಮಿನಿ ಬಾಂಗ್ಲಾದೇಶ’ ಮಾಡಹೊರಟಿದೆ ಎಂದು ಕಿಡಿಕಾರಿದೆ.
- Kiran Surya
- Updated on: Jan 1, 2026
- 6:52 am
ಮೆಟ್ರೋ ಹೊಸ ನಿಯಮಗಳು: ಪ್ರಯಾಣಿಕರೇ ಇನ್ಮುಂದೆ ರೀಲ್ಸ್ ನೋಡುವ ಮುನ್ನ ಎಚ್ಚರ
ನಮ್ಮ ಮೆಟ್ರೋದಲ್ಲಿ ಇನ್ನುಮುಂದೆ ಜೋರಾಗಿ ಮೊಬೈಲ್ ಬಳಕೆ, ರೀಲ್ಸ್ ನೋಡುವುದು, ಊಟ-ತಿಂಡಿ ಅಥವಾ ತಂಬಾಕು ಸೇವನೆ ಮಾಡುವಂತಿಲ್ಲ. ನಿಯಮ ಮೀರಿದರೆ ದಂಡದ ಜೊತೆಗೆ ಪ್ರಕರಣ ದಾಖಲಾಗಲಿದೆ. ಸಹ ಪ್ರಯಾಣಿಕರಿಗೆ ತೊಂದರೆಯಾಗುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಕಳೆದ 20 ದಿನಗಳಲ್ಲಿ 7,429 ಪ್ರಕರಣಗಳು ದಾಖಲಾಗಿದ್ದು, ಪ್ರಯಾಣಿಕರು ಈ ಹೊಸ ನಿಯಮಗಳನ್ನು ಸ್ವಾಗತಿಸಿದ್ದಾರೆ.
- Kiran Surya
- Updated on: Dec 30, 2025
- 7:49 pm
ಹೊಸ ವರ್ಷಕ್ಕೆ ಗುಡ್ನ್ಯೂಸ್: ಡಿ. 31ರ ತಡರಾತ್ರಿವರೆಗೂ ಮೆಟ್ರೋ, BMTC ಬಸ್ ಸಂಚಾರ
ಹೊಸ ವರ್ಷದ ಹಿನ್ನೆಲೆ ಡಿ. 31ರ ತಡ ರಾತ್ರಿಯಿಂದ ಜ. 1ರ ಬೆಳಗ್ಗಿನ ಜಾವದವರೆಗೂ ಮೆಟ್ರೋ ಸೇವೆ ಸಮಯವನ್ನು ವಿಸ್ತರಣೆಗೊಳಿಸಲಾಗಿದೆ. ಆದರೆ ಒಂದು ನಿಲ್ದಾಣ ಕ್ಲೋಸ್ ಆಗಿರಲಿದ್ದು, 2 ಸ್ಟಾಪ್ಗಳಲ್ಲಿ ರಾತ್ರಿ 11ರ ನಂತರ ಟೋಕನ್ ಮಾರಾಟ ಇರುವುದಿಲ್ಲ ಎಂದು BMRCL ಪ್ರಕಟಣೆಯಲ್ಲಿ ತಿಳಿಸಿದೆ. ಡಿಸೆಂಬರ್ 31ರಂದು ತಡರಾತ್ರಿವರೆಗೂ ಬಿಎಂಟಿಸಿ ಬಸ್ಗಳು ಕೂಡ ಕಾರ್ಯಾಚರಣೆ ನಡೆಸಲಿವೆ.
- Kiran Surya
- Updated on: Dec 29, 2025
- 6:51 pm
ಕೋಗಿಲು ಲೇಔಟ್ಗೆ ಡಿಕೆ ಶಿವಕುಮಾರ್ ಭೇಟಿ: ಸ್ಥಳ ಪರಿಶೀಲನೆ ಬಳಿಕ ಹೇಳಿದ್ದಿಷ್ಟು
ಕೋಗಿಲು ಲೇಔಟ್ನಲ್ಲಿ ಅನಧಿಕೃತ ಮನೆಗಳ ತೆರವು ಪ್ರಕರಣದ ಸ್ಥಳ ಪರಿಶೀಲನೆ ಬಳಿಕ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಕಸದ ಗುಂಡಿ ಮೇಲೆ ನಿರ್ಮಿಸಿದ ಮನೆಗಳ ಬಗ್ಗೆ ರಾಜಕೀಯ ಆರೋಪಗಳು ಕೇಳಿಬಂದಿವೆ. ನಿವಾಸಿಗಳಿಗೆ ನ್ಯಾಯ ಒದಗಿಸುವ ಭರವಸೆ ನೀಡಿದ ಡಿಸಿಎಂ, ಬೆಂಗಳೂರು ಸ್ವಚ್ಛತೆಗೂ ಆದ್ಯತೆ ನೀಡುವುದಾಗಿ ತಿಳಿಸಿದ್ದಾರೆ.
- Kiran Surya
- Updated on: Dec 29, 2025
- 5:43 pm
ಹೆಬ್ಬಾಳ ಮೇಲ್ಸೆತುವೆ ಹೊಸ ಲೂಪ್ ಓಪನ್: ಎಸ್ಟೀಮ್ ಮಾಲ್, ತುಮಕೂರು ರಸ್ತೆ ವಾಹನಗಳ ಮೇಖ್ರೀ ಸರ್ಕಲ್ ಪ್ರವೇಶ ತುಂಬಾ ಸುಲಭ
ಬೆಂಗಳೂರಿನ ವಾಹನ ಸವಾರರಿಗೆ ಕೊನೆಗೂ ಶುಭ ಸುದ್ದಿ ದೊರೆತಿದೆ. ಹೆಬ್ಬಾಳ ಜಂಕ್ಷನ್ ಟ್ರಾಫಿಕ್ ಸಮಸ್ಯೆಗೆ ಪರಿಹಾರ ದೊರೆತಿದೆ. ಹೆಬ್ಬಾಳ ಮೇಲ್ಸೆತುವೆಯ ಹೊಸ ಲೂಪ್ ರ್ಯಾಂಪ್ ಸಂಚಾರಕ್ಕೆ ಮುಕ್ತವಾಗಿದೆ. ಇದರಿಂದ ಯಲಹಂಕ, ಸಹಕಾರನಗರ, ಜಕ್ಕೂರು, ತುಮಕೂರು ರಸ್ತೆಯ ವಾಹನಗಳು ನಗರ ಪ್ರವೇಶಿಲು ತುಂಬಾ ಅನುಕೂಲ ಆಗಿದೆ.
- Kiran Surya
- Updated on: Dec 27, 2025
- 7:28 am
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ನಮ್ಮ ಮೆಟ್ರೋದ ವಿಧಾನಸೌಧ ನಿಲ್ದಾಣದಲ್ಲಿ ಯುವತಿಯೊಬ್ಬಳಿಗೆ ಅಪರಿಚಿತ ವ್ಯಕ್ತಿ ಅಸಭ್ಯ ವರ್ತನೆ ತೋರಿದ್ದಾನೆಂದು ಆರೋಪಿಸಲಾಗಿದೆ. ಯುವತಿಯ ದೂರಿನಂತೆ ಭದ್ರತಾ ಸಿಬ್ಬಂದಿ ಆರೋಪಿಯನ್ನು ಉಪ್ಪಾರಪೇಟೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು NCR ದಾಖಲಿಸಿ ಆರೋಪಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಈ ಬಗ್ಗೆ ಯುವತಿ ವಿಡಿಯೋ ಮೂಲಕ ಮಾಹಿತಿ ನೀಡಿದ್ದಾಳೆ.
- Kiran Surya
- Updated on: Dec 26, 2025
- 4:13 pm