AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kiran Surya

Kiran Surya

Author - TV9 Kannada

kiran.sharanu@tv9.com
ಎಐ ತಂತ್ರವಲ್ಲ, ಹಳದಿ ಮೆಟ್ರೋದಲ್ಲೂ ಅಪರ್ಣಾ ಧ್ವನಿ

ಎಐ ತಂತ್ರವಲ್ಲ, ಹಳದಿ ಮೆಟ್ರೋದಲ್ಲೂ ಅಪರ್ಣಾ ಧ್ವನಿ

Aparna: ಅಪರ್ಣಾ ಅವರ ಸುಮಧುರ ಧ್ವನಿಯು ಬೆಂಗಳೂರಿನ ಹಸಿರು ಮತ್ತು ನೇರಳೆ ಮೆಟ್ರೋ ಮಾರ್ಗಗಳಲ್ಲಿ ಜನಪ್ರಿಯವಾಗಿತ್ತು. ಹೊಸದಾಗಿ ಉದ್ಘಾಟನೆಯಾದ ಹಳದಿ ಮೆಟ್ರೋ ಮಾರ್ಗದಲ್ಲಿ ಅವರ ಧ್ವನಿಯನ್ನು ಬಳಸಲಾಗಿದೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದರೂ ಅಪರ್ಣಾ ಅವರು ತಮ್ಮ ಕೊನೆಯ ದಿನಗಳಲ್ಲಿಯೂ ಈ ರೆಕಾರ್ಡಿಂಗ್‌ಗೆ ಸಹಕರಿಸಿದ್ದರು.

ಈ ಮೆಟ್ರೋ ಮಾರ್ಗದಲ್ಲಿ ಇಂದಿನಿಂದ ಬಿಎಂಟಿಸಿ ಫೀಡರ್ ಬಸ್​ಗಳ ಸಂಚಾರ

ಈ ಮೆಟ್ರೋ ಮಾರ್ಗದಲ್ಲಿ ಇಂದಿನಿಂದ ಬಿಎಂಟಿಸಿ ಫೀಡರ್ ಬಸ್​ಗಳ ಸಂಚಾರ

ಆರ್.ವಿ.ರಸ್ತೆ ಟು ಬೊಮ್ಮಸಂದ್ರ ಮಾರ್ಗದಲ್ಲಿ ಹಳದಿ ಮೆಟ್ರೋ ಮಾರ್ಗ ಭಾನುವಾರ ಲೋಕಾರ್ಪಣೆ ಆಗಿದೆ. ಇದೇ ರಸ್ತೆಯಲ್ಲಿ ಇಂದಿನಿಂದ ಫೀಡರ್ ಬಸ್‌ಗಳು ರಸ್ತೆಗಳಿಯಲಿವೆ. ಆ ಮೂಲಕ ಮೆಟ್ರೊ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಹತ್ತಕ್ಕೂ ಹೆಚ್ಚು ಬಿಎಂಟಿಸಿ ಫೀಡರ್ ಬಸ್‌ಗಳು ಸಂಚರಿಸಲಿವೆ. ಬಸ್‌ಗಳ ಸಂಚಾರದ ಸಮಯ ಮತ್ತು ಮಾರ್ಗಗಳ ಮಾಹಿತಿ ಇಲ್ಲಿದೆ.

ಮೆಟ್ರೋ ಹಳದಿ ಮಾರ್ಗ ಶುರು: ಪ್ರಯಾಣಿಕರು ಏನಂದ್ರು ನೋಡಿ

ಮೆಟ್ರೋ ಹಳದಿ ಮಾರ್ಗ ಶುರು: ಪ್ರಯಾಣಿಕರು ಏನಂದ್ರು ನೋಡಿ

ಬೆಂಗಳೂರಿನ ಹೊಸ ಮೆಟ್ರೋ ಹಳದಿ ಮಾರ್ಗವು ಪ್ರಯಾಣಿಕರಿಗೆ ಸಂತೋಷ ತಂದಿದೆ. ನಿನ್ನೆ ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಿದ ಈ ಮಾರ್ಗವು ಆರ್.ವಿ. ರೋಡ್ ಮತ್ತು ಬೊಮ್ಮಸಂದ್ರವನ್ನು ಸಂಪರ್ಕಿಸುತ್ತದೆ. ಪ್ರಯಾಣಿಕರು ಟ್ರಾಫಿಕ್ ಕಡಿಮೆಯಾಗುವುದು ಮತ್ತು ಸಮಯ ಉಳಿತಾಯವಾಗುವುದರಿಂದ ಸಂತೋಷ ವ್ಯಕ್ತಪಡಿಸಿದ್ದಾರೆ. ವಿಡಿಯೋ ನೋಡಿ.

ಮೋದಿ ಪ್ರಯಾಣಿಸಲಿರುವ ಮೆಟ್ರೋಗೆ ಮಹಿಳಾ ಲೋಕೋ ಪೈಲಟ್: ಪ್ರಧಾನಿ ಜತೆ 117 ಮಂದಿ ಪ್ರಯಾಣ

ಮೋದಿ ಪ್ರಯಾಣಿಸಲಿರುವ ಮೆಟ್ರೋಗೆ ಮಹಿಳಾ ಲೋಕೋ ಪೈಲಟ್: ಪ್ರಧಾನಿ ಜತೆ 117 ಮಂದಿ ಪ್ರಯಾಣ

ಮೆಟ್ರೋ ಹಳದಿ ಮಾರ್ಗ ಲೋಕಾರ್ಪಣೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ರಾಗಿಗುಡ್ಡ ಮೆಟ್ರೋ ನಿಲ್ದಾಣದಿಂದ ಕೋನಪ್ಪನ ಅಗ್ರಹಾರಕ್ಕೆ ಮೆಟ್ರೋದಲ್ಲಿ ಪ್ರಯಾಣಿಸಲಿದ್ದಾರೆ. ಮಹಿಳಾ ಲೋಕೋಪೈಲಟ್ ವಿನುತಾ ಅವರು ಈ ರೈಲಿಗೆ ಸಾರಥಿಯಾಗಲಿದ್ದಾರೆ. ಪ್ರಧಾನಿ ಮೋದಿ ಅವರೊಂದಿಗೆ ಒಟ್ಟು 117 ಜನರು ಪ್ರಯಾಣಿಸಲಿದ್ದಾರೆ.

ಸರ್ಕಾರದ ವಿರುದ್ಧ ಸಾರಿಗೆ ಮುಖಂಡರು ಮತ್ತೆ ಕೆಂಡ: ಈ ಬಾರಿಯ ಸಿಟ್ಟಿಗೆ ಇದೇ ಕಾರಣ

ಸರ್ಕಾರದ ವಿರುದ್ಧ ಸಾರಿಗೆ ಮುಖಂಡರು ಮತ್ತೆ ಕೆಂಡ: ಈ ಬಾರಿಯ ಸಿಟ್ಟಿಗೆ ಇದೇ ಕಾರಣ

ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಮಂಗಳವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದರು. ಆರೆ, ಹೈಕೋರ್ಟ್ ಆದೇಶದ ಹಿನ್ನೆಲೆ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದರು. ಮುಷ್ಕರ ಒಂದೇ ದಿನದಲ್ಲಿ ಮುಂದೂಡಿಕೆಯಾಗಿದ್ದರೂ, ಮುಷ್ಕರದಲ್ಲಿ ಭಾಗಿಯಾಗಿದ್ದವರ ಮೇಲೆ ಸರ್ಕಾರ ನೋಟಿಸ್ ನೀಡಿ ಅಮಾನತು ಮತ್ತು ವಜಾಗೊಳಿಸಲು ಮುಂದಾಗಿದ್ದು, ಇದಕ್ಕೆ ಸಾರಿಗೆ ಮುಖಂಡರು ಕೆಂಡಾಮಂಡಲರಾಗಿದ್ದಾರೆ.

ಹೈಕೋರ್ಟ್‌ ಛೀಮಾರಿ ಬೆನ್ನಲ್ಲೇ ರಸ್ತೆಗಿಳಿದ ಸಾರಿಗೆ ಬಸ್​ಗಳು, ಪ್ರಯಾಣಿಕರು ಖುಷ್​

ಹೈಕೋರ್ಟ್‌ ಛೀಮಾರಿ ಬೆನ್ನಲ್ಲೇ ರಸ್ತೆಗಿಳಿದ ಸಾರಿಗೆ ಬಸ್​ಗಳು, ಪ್ರಯಾಣಿಕರು ಖುಷ್​

ಕರ್ನಾಟಕದ ಸಾರಿಗೆ ನೌಕರರ ಮುಷ್ಕರವು ಹೈಕೋರ್ಟ್‌ನ ಖಡಕ್ ಎಚ್ಚರಿಕೆಯ ನಂತರ ಅಂತ್ಯಗೊಂಡಿದೆ. ನಾಲ್ಕೂ ಸಾರಿಗೆ ನಿಗಮಗಳ ಬಸ್​ಗಳ ಸಂಚಾರವು ಪುನರಾರಂಭಗೊಂಡಿದೆ. ಪ್ರಯಾಣಿಕರು ಖುಷಿಪಟ್ಟಿದ್ದಾರೆ. ಜೊತೆಗೆ ಸರ್ಕಾರ ಸಾರಿಗೆ ನೌಕರರ ಬೇಡಿಕೆಗಳನ್ನು ಪರಿಶೀಲಿಸಬೇಕೆಂದು ಒತ್ತಾಯಿಸಿದ್ದಾರೆ. ಸಾರಿಗೆ ನೌಕರರ ಮುಷ್ಕರ ಮುಂದೂಡಿದ್ದೇವೆ ಎಂದು ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಅಧ್ಯಕ್​ ಅನಂತ್ ಸುಬ್ಬರಾವ್​ ಘೋಷಿಸಿದ್ದಾರೆ.

ನಾಳೆಯಿಂದ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್​ಗಳು ರಸ್ತೆಗಿಳಿಯೋದು ಅನುಮಾನ: ಇಂದು ಸಿಎಂ ಸಭೆ ಬಳಿಕ ಅಂತಿಮ ನಿರ್ಧಾರ

ನಾಳೆಯಿಂದ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್​ಗಳು ರಸ್ತೆಗಿಳಿಯೋದು ಅನುಮಾನ: ಇಂದು ಸಿಎಂ ಸಭೆ ಬಳಿಕ ಅಂತಿಮ ನಿರ್ಧಾರ

ಬೆಂಗಳೂರಿನಲ್ಲಿ ಮಂಗಳವಾರ ಬಿಎಂಟಿಸಿ ಬಸ್‌ಗಳು ರಸ್ತೆಗೆ ಇಳಿಯುವುದಿಲ್ವಾ? ಕರ್ನಾಟಕದಾದ್ಯಂತ ಕೆಎಸ್‌ಆರ್‌ಟಿಸಿ ಬಸ್‌ಗಳ ಓಡಾಟ ಸ್ತಬ್ಧವಾಗಲಿದೆಯಾ? ಪ್ರಯಾಣಿಕರಿಗೆ, ದಿನನಿತ್ಯ ಕೆಲಸ ಕಾರ್ಯಗಳಿಗೆ ತೆರಳಲು ಸಾರಿಗೆ ಬಸ್ಸನ್ನೇ ನಂಬಿಕೊಂಡವರಿಗೆ, ಶಾಲೆ, ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ನಾಳೆ ಬಸ್‌ ಬಂದ್ ಬಿಸಿ ತಟ್ಟಲಿದೆಯಾ? ಇಂತಹ ಪ್ರಶ್ನೆಗಳು ಇದೀಗ ಸಾಮಾನ್ಯ ಜನರಲ್ಲಿ ಮೂಡಿವೆ.

ಆಗಸ್ಟ್​ 5 ರಂದು ಸಾರಿಗೆ ನೌಕರರು ಬಸ್ ಸಂಚಾರ​ ಬಂದ್ ಮಾಡಿ ಮನೆಯಿಂದಲೇ ಪ್ರತಿಭಟನೆ: ಅನಂತ ಸುಬ್ಬರಾವ್

ಆಗಸ್ಟ್​ 5 ರಂದು ಸಾರಿಗೆ ನೌಕರರು ಬಸ್ ಸಂಚಾರ​ ಬಂದ್ ಮಾಡಿ ಮನೆಯಿಂದಲೇ ಪ್ರತಿಭಟನೆ: ಅನಂತ ಸುಬ್ಬರಾವ್

ಆಗಸ್ಟ್​ 5 ರಂದು ಸಾರಿಗೆ ನೌಕರರು ಮುಷ್ಕರ ಮಾಡುತ್ತಿಲ್ಲ. ಬದಲಿಗೆ ಬಸ್​ ಸಂಚಾರ ಸ್ಥಗಿತಗೊಳಿಸಿ ಎಲ್ಲ ಸಿಬ್ಬಂದಿ ಮನೆಯಲ್ಲಿರುತ್ತಾರೆ. ಸರ್ಕಾರ ಮಾತುಕತೆಗೆ ಕರೆದಿದೆ. ಆದರೆ ಕೊನೆ ಗಳಿಗೆಯಲ್ಲಿ ಸಭೆ ಕರೆದಿರುವುದು ಖಂಡನೀಯ. ನೌಕರರ 38 ತಿಂಗಳ ಅರಿಯರ್ಸ್ ಕೊಡಬೇಕು​. ಸಿಬ್ಬಂದಿಗೆ ಸಿದ್ದರಾಮಯ್ಯ ಸರ್ಕಾರ ವಿಶ್ವಾಸ ದ್ರೋಹ ಮಾಡಿದೆ ಎಂದು ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ ಸುಬ್ಬರಾವ್ ಹೇಳಿದರು.

ಮೊದಲ ಬಾರಿ ನಮ್ಮ ಮೆಟ್ರೋದಲ್ಲಿ ಯಶಸ್ವಿಯಾಗಿ ಅಂಗಾಂಗ ಸಾಗಾಟ

ಮೊದಲ ಬಾರಿ ನಮ್ಮ ಮೆಟ್ರೋದಲ್ಲಿ ಯಶಸ್ವಿಯಾಗಿ ಅಂಗಾಂಗ ಸಾಗಾಟ

ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಮೊದಲ ಬಾರಿಗೆ ದೇಣಿಗೆಯಾದ ಯಕೃತ್ತನ್ನು ಯಶಸ್ವಿಯಾಗಿ ಸಾಗಿಸಲಾಯಿತು. ವೈದ್ಯಕೀಯ ತಂಡವು ವೈಟ್‌ಫೀಲ್ಡ್ ನಿಲ್ದಾಣದಿಂದ ಆರ್‌ಆರ್ ನಗರ ನಿಲ್ದಾಣಕ್ಕೆ ಮೆಟ್ರೋ ಮೂಲಕ ಯಕೃತ್ತನ್ನು ಸಾಗಿಸಿತು. ಮೆಟ್ರೋ ಸಿಬ್ಬಂದಿ ಮತ್ತು ಭದ್ರತಾ ಅಧಿಕಾರಿಗಳು ಸಮಯೋಚಿತ ಸಹಾಯ ನೀಡಿದರು. ಈ ಕಾರ್ಯಾಚರಣೆಯು ಗೃಹ ಮತ್ತು ನಗರ ವ್ಯವಹಾರಗಳ ಸಚಿವಾಲಯ ಮತ್ತು ಬಿಎಂಆರ್‌ಸಿಎಲ್‌ನ ಮಾರ್ಗಸೂಚಿಗಳ ಅಡಿಯಲ್ಲಿ ನಡೆಯಿತು.

Bengaluru Metro Yellow Line: ಹಳದಿ ಮಾರ್ಗ ಮೆಟ್ರೋ ಸಂಚಾರಕ್ಕೆ ಸುರಕ್ಷತಾ ಆಯುಕ್ತರಿಂದ ಗ್ರೀನ್ ಸಿಗ್ನಲ್

Bengaluru Metro Yellow Line: ಹಳದಿ ಮಾರ್ಗ ಮೆಟ್ರೋ ಸಂಚಾರಕ್ಕೆ ಸುರಕ್ಷತಾ ಆಯುಕ್ತರಿಂದ ಗ್ರೀನ್ ಸಿಗ್ನಲ್

ಆರ್.ವಿ.ರೋಡ್ ಟು ಬೊಮ್ಮಸಂದ್ರ ವರೆಗಿನ ನಮ್ಮ ಮೆಟ್ರೋ ಯೆಲ್ಲೋ ಲೈನ್​​ಗಾಗಿ ಕಾದು ಕಾದು ಸುಸ್ತಾಗಿದ್ದವರಿಗೆ ಕೊನೆಗೂ ರೈಲ್ವೆ ಕಮಿಷನರ್ ಶುಭ ಸುದ್ದಿ ನೀಡಿದ್ದು, ಸದ್ಯದಲ್ಲೇ ಡ್ರೈವರ್ಲೆಸ್ ರೈಲುಗಳು ಟ್ರ್ಯಾಕಿಗಿಳಿಯಲಿವೆ. ಜುಲೈ 22 ರಿಂದ 25 ರವರೆಗೆ ಸುರಕ್ಷತಾ ಪರೀಕ್ಷೆ ನಡೆಸಿದ್ದ ರೈಲ್ವೆ ಸುರಕ್ಷತಾ ಆಯುಕ್ತರು ಚಾಲಕರಹಿತ ರೈಲುಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

Auto fare hike: ಆಟೋ ಪ್ರಯಾಣಿಕರಿಗೆ ಶಾಕ್​​! ಬೆಂಗಳೂರಲ್ಲಿ ಇಂದಿನಿಂದ ಮೀಟರ್ ದರ ಏರಿಕೆ

Auto fare hike: ಆಟೋ ಪ್ರಯಾಣಿಕರಿಗೆ ಶಾಕ್​​! ಬೆಂಗಳೂರಲ್ಲಿ ಇಂದಿನಿಂದ ಮೀಟರ್ ದರ ಏರಿಕೆ

ಆಟೋ ಏರುವುದಕ್ಕೂ ಮೊದಲು ಜೇಬು ಗಟ್ಟಿ ಇದೆಯಾ ಚೆಕ್ ಮಾಡಿಕೊಳ್ಳುವ ಪರಿಸ್ಥಿತಿ ಸಿಲಿಕಾನ್​ ಸಿಟಿ ಜನರದ್ದಾಗಿದೆ. ಏಕೆಂದರೆ ಇಂದಿನಿಂದ ಬೆಂಗಳೂರಲ್ಲಿ ಪರಿಷ್ಕೃತ ಆಟೋ ಮೀಟರ್ ಪ್ರಯಾಣ ದರ ಏರಿಕೆ ಜಾರಿ ಆಗಿದೆ. ಪರಿಷ್ಕೃತ ಆಟೋ ಪ್ರಯಾಣ ದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರಿನ ಈ ರಸ್ತೆಯಲ್ಲಿ ಪ್ರತಿದಿನ ಕಿಲೋಮೀಟರ್​ ಗಟ್ಟಲೇ ಟ್ರಾಫಿಕ್ ಜಾಮ್: ವಾಹನ ಸವಾರರಿಗೆ ನಿತ್ಯ ನರಕ ದರ್ಶನ

ಬೆಂಗಳೂರಿನ ಈ ರಸ್ತೆಯಲ್ಲಿ ಪ್ರತಿದಿನ ಕಿಲೋಮೀಟರ್​ ಗಟ್ಟಲೇ ಟ್ರಾಫಿಕ್ ಜಾಮ್: ವಾಹನ ಸವಾರರಿಗೆ ನಿತ್ಯ ನರಕ ದರ್ಶನ

ಸಿಲಿಕಾನ್ ಸಿಟಿ ಬೆಂಗಳೂರು ದಿನದಿಂದ ದಿನಕ್ಕೆ ಟ್ರಾಫಿಕ್ ಸಿಟಿ ಆಗುತ್ತಿದೆ ಎಂದೆನ್ನಿಸುತ್ತಿದೆ. ನಗರದ ಯಾವ ರಸ್ತೆಗೆ ಹೋದರೂ ಸಹ ಟ್ರಾಫಿಕ್ ಜಾಮ್ ನಲ್ಲಿ ಗಂಟೆಗಟ್ಟಲೆ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಈ ಒಂದು ರಸ್ತೆಯಲ್ಲಿ ಪ್ರತಿದಿನ ಕಿ.ಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ವಾಹನಗಳ ಅಡ್ಡದಿಡ್ಡಿ ಸಂಚಾರ,ಯಾವ ಏರಿಯಾಗೆ ಹೋಗಬೇಕಂದ್ರು ಗಂಟೆಗಟ್ಟಲೆ ರೋಡ್ ನಲ್ಲಿ ಕಾಯ ಬೇಕಾಗಿದ್ದು, ಈ ಬಗ್ಗೆ ಟಿವಿ9 ಗ್ರೌಂಡ್ ರಿಪೋರ್ಟ್ ಇಲ್ಲಿದೆ.