AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲಬುರಗಿ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಸಭ್ಯ ವರ್ತನೆ ತೋರಿದ 20 ಜನರನ್ನು ವಶಕ್ಕೆ ಪಡೆದ ಪೋಲಿಸರು

ಕಲಬುರಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಸಭ್ಯ ವರ್ತನೆ ತೋರಿದ ಆರೋಪದಡಿ ಡಿಸಿ ಯಶವಂತ್ ಗುರಿಕಾರ್ ಅವರ ಸೂಚನೆ ಮೇರೆಗೆ ಕಲಬುರಗಿ ಸ್ಟೇಷನ್ ಬಜಾರ್ ಪೊಲೀಸರು ರೈತ ಮುಖಡರು ಮತ್ತು ಸಿಪಿಐ, ಪ್ರಾಂತ ರೈತ ಸಂಘದ ಮುಖಂಡರು ಸೇರಿದಂತೆ 20 ಜನರನ್ನು ವಶಕ್ಕೆ ಪಡೆದಿದ್ದಾರೆ.

ಕಲಬುರಗಿ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಸಭ್ಯ ವರ್ತನೆ ತೋರಿದ 20 ಜನರನ್ನು ವಶಕ್ಕೆ ಪಡೆದ ಪೋಲಿಸರು
20 ಜರನ್ನು ವಶಕ್ಕೆ ಪಡೆದ ಪೊಲೀಸರು
TV9 Web
| Updated By: ವಿವೇಕ ಬಿರಾದಾರ|

Updated on: Jun 22, 2022 | 7:12 PM

Share

ಕಲಬುರಗಿ: ಕಲಬುರಗಿ (Kalaburagi) ಜಿಲ್ಲಾಧಿಕಾರಿ (DC) ಕಚೇರಿಯಲ್ಲಿ ಅಸಭ್ಯ ವರ್ತನೆ ತೋರಿದ ಆರೋಪದಡಿ ಡಿಸಿ ಯಶವಂತ್ ಗುರಿಕಾರ್ ಅವರ ಸೂಚನೆ ಮೇರೆಗೆ ಕಲಬುರಗಿ ಸ್ಟೇಷನ್ ಬಜಾರ್ ಪೊಲೀಸರು (Police) ರೈತ (Farmer) ಮುಖಂಡರು ಮತ್ತು ಸಿಪಿಐ, ಪ್ರಾಂತ ರೈತ ಸಂಘದ ಮುಖಂಡರು ಸೇರಿದಂತೆ 20 ಜನರನ್ನು ವಶಕ್ಕೆ ಪಡೆದಿದ್ದಾರೆ.  ಚಿತ್ತಾಪುರದ ಓರಿಯೆಂಟ್ ಸಿಮೆಂಟ್ ಕಾರ್ಖಾನೆ ವಿರುದ್ಧ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು. ಈ ವೇಳೆ ರೈತ ಮುಖಂಡರು ಮನವಿ ಪತ್ರ ನೀಡಲು ಡಿಸಿ ಕೋಣೆಗೆ ಹೋಗಿದ್ದರು.

ಇದನ್ನು ಓದಿ: ಕುತೂಹಲ ಕೆರಳಿಸಿದ ನಾಳೆಯ ಸಿಎಂ ಬೊಮ್ಮಾಯಿ ದೆಹಲಿ ಪ್ರವಾಸ

ಈ ವೇಳೆ ಜಿಲ್ಲಾಧಿಕಾರಿ-ರೈತ ಮುಖಂಡರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಸಂಬಂಧ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ, ಅಸಭ್ಯ ವರ್ತನೆ ಆರೋಪದಡಿ 20 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರಾಜದ್ಯ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.