AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತ್ನಿ ಮತ್ತು ಪ್ರಿಯಕರ ಸೇರಿಕೊಂಡು ಗಂಡನ ಕೊಲೆ ಮಾಡಿದರಾ? ಚಿತ್ತಾಪುರ ಪೊಲೀಸರ ಚಿತ್ತ ಶವಪರೀಕ್ಷೆ ವರದಿಗಾಗಿ ಕಾಯುತ್ತಿರುವುದು ಏಕೆ?

Chittapur police: ಸಹೋದರನದ್ದು ಸಹಜ ಸಾವಲ್ಲಾ, ಬದಲಾಗಿ ಕೊಲೆ ಅಂತಿದ್ದಾರೆ ಸಿದ್ದಣ್ಣನ ನಾಲ್ವರು ಸಹೋದರಿಯರು. ಮೃತ ಪಡುವ ಒಂದು ದಿನಕ್ಕೆ ಮುಂಚೆ, ಸ್ವತಃ ಸಿದ್ದಣ್ಣ ತಮ್ಮ ಸಹೋದರಿಯರಿಗೆ ಪೋನ್ ಮಾಡಿದ್ದನಂತೆ. ತನಗೆ ಪತ್ನಿ ಮತ್ತು ಅವರ ಮನೆಯವರು ಹೊಟ್ಟೆ ಸೇರಿದಂತೆ ಅನೇಕ ಕಡೆ ಹೊಡೆದಿದ್ದಾರೆ ಅಂತ ಹೇಳಿದ್ದನಂತೆ.

ಪತ್ನಿ ಮತ್ತು ಪ್ರಿಯಕರ ಸೇರಿಕೊಂಡು ಗಂಡನ ಕೊಲೆ ಮಾಡಿದರಾ? ಚಿತ್ತಾಪುರ ಪೊಲೀಸರ ಚಿತ್ತ ಶವಪರೀಕ್ಷೆ ವರದಿಗಾಗಿ ಕಾಯುತ್ತಿರುವುದು ಏಕೆ?
ಪತ್ನಿ ಮತ್ತು ಪ್ರಿಯಕರ ಸೇರಿಕೊಂಡು ಗಂಡನ ಕೊಲೆ ಮಾಡಿದರಾ?
Follow us
TV9 Web
| Updated By: ಸಾಧು ಶ್ರೀನಾಥ್​

Updated on: Mar 17, 2023 | 6:33 PM

ಅಲ್ಲಿ ವ್ಯಕ್ತಿಯೋರ್ವ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ. ಆತ ತನ್ನ ಪತಿಯಾಗಿದ್ದು, ಸಹಜ ಸಾವು ಅಂತ ಪತ್ನಿ ಹೇಳಿದರೆ, ಸಹೋದರಿಯರು ಮಾತ್ರ ತಮ್ಮ ಸಹೋದರದ್ದು ಕೊಲೆ ಅಂತಿದ್ದಾರೆ. ತಮ್ಮ ಸಹೋದರನನ್ನು ಆತನ ಪತ್ನಿ ಮತ್ತು ಪ್ರಿಯಕರ ಸೇರಿಕೊಂಡು ಕೊಲೆ ಮಾಡಿದ್ದಾರೆ ಅಂತ ಆರೋಪಿಸುತ್ತಿದ್ದಾರೆ. ಈ ಮಧ್ಯೆ ಪೊಲೀಸರು (Chittapur police) ಆರೋಪಿಗಳನ್ನು ಮಾತ್ರ ಬಂಧಿಸುತ್ತಿಲ್ಲ (Postmortem ಅಂತ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೈ ಮುಗಿದು ಮನವಿ ಮಾಡುತ್ತಾ, ನಮಗೆ ಎಲ್ಲಿಯೂ ನ್ಯಾಯ ಸಿಗ್ತಿಲ್ಲಾ, ಪೊಲೀಸರು ಪ್ರಕರಣ ಮುಚ್ಚಿ ಹಾಕುತ್ತಿದ್ದಾರೆ. ಕಣ್ಣ ಮುಂದೆಯೆ ಆರೋಪಿಗಳು (murder) ಇದ್ದರೂ ಯಾರನ್ನೂ ಬಂಧಿಸುತ್ತಿಲ್ಲ. ದಯವಿಟ್ಟು ನಮಗೆ ನ್ಯಾಯ ಕೊಡಿಸಿ ಅಂತ ಮನವಿ ಮಾಡ್ತಿರುವವರು ಕಲಬುರಗಿ ಜಿಲ್ಲೆಯ ಶಹಬಾದ್ ನಿವಾಸಿಗಳು. ಇನ್ನು ಇವರ ನೋವಿಗೆ ಕಾರಣವಾಗಿದ್ದು ಇವರ ಸಹೋದರನ ಸಾವು. ಹೌದು ಕಲಬುರಗಿ (Kalaburgi) ಜಿಲ್ಲೆಯ ಶಹಬಾದ್ ಪಟ್ಟಣದ ನಿವಾಸಿಯಾಗಿದ್ದ ಸಿದ್ದಣ್ಣ ಆಂದೇಲಿ ಅನ್ನೋ 38 ವರ್ಷದ ವ್ಯಕ್ತಿ 2023 ರ ಜನವರಿ 15 ರಂದು ಮೃತಪಟ್ಟಿದ್ದಾನೆ. ಕೆಲ ದಿನಗಳಿಂದ, ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಬೊಮ್ಮನಳ್ಳಿ ಗ್ರಾಮದಲ್ಲಿ ಪತ್ನಿಯ ತವರು ಮನೆಯಲ್ಲಿಯೇ ವಾಸವಾಗಿದ್ದ ಸಿದ್ದಣ್ಣ ಮೃತಪಟ್ಟಿದ್ದಾನೆ. ಗೋಡೆ ಮೇಲಿಂದ ಬಿದ್ದು ಸತ್ತಿದ್ದಾನೆ ಅಂತ ಪತ್ನಿ ಹೇಳಿದ್ದಾಳೆ.

ಆದ್ರೆ ಸಹೋದರನದ್ದು ಸಹಜ ಸಾವಲ್ಲಾ, ಬದಲಾಗಿ ಕೊಲೆ ಅಂತಿದ್ದಾರೆ ಸಿದ್ದಣ್ಣನ ನಾಲ್ವರು ಸಹೋದರಿಯರು. ಮೃತ ಪಡುವ ಒಂದು ದಿನಕ್ಕೆ ಮುಂಚೆ, ಸ್ವತಃ ಸಿದ್ದಣ್ಣ ತಮ್ಮ ಸಹೋದರಿಯರಿಗೆ ಪೋನ್ ಮಾಡಿದ್ದನಂತೆ. ತನಗೆ ಪತ್ನಿ ಮತ್ತು ಅವರ ಮನೆಯವರು ಹೊಟ್ಟೆ ಸೇರಿದಂತೆ ಅನೇಕ ಕಡೆ ಹೊಡೆದಿದ್ದಾರೆ ಅಂತ ಹೇಳಿದ್ದನಂತೆ. ಇನ್ನು ಸಿದ್ದಣ್ಣನ ಪತ್ನಿ ಭೀಮಾಬಾಯಿ ಕೂಡಾ ನಿಮ್ಮ ಸಹೋದರನನ್ನು ಕರೆದುಕೊಂಡು ಹೋಗಿ ಅಂತ ಹೇಳಿದ್ದಳಂತೆ. ಆದ್ರೆ ಹೀಗೆ ಹೇಳಿದ ಮಾರನೇ ದಿನವೇ, ಸಿದ್ದಣ್ಣ ಮೃತಪ್ಟಟಿದ್ದು, ಅನೇಕ ಅನುಮಾನಗಳಿಗೆ ಕಾರಣವಾಗಿದ್ದು, ಸಿದ್ದಣ್ಣನ ಪತ್ನಿ ಮತ್ತು ಅವರ ಕುಟುಂಬದವರು ಸೇರಿಕೊಂಡು ಕೊಲೆ ಮಾಡಿದ್ದಾರೆ ಅಂತ ಸಿದ್ದಣ್ಣನ ಸಹೋದರಿಯರು ಆರೋಪಿಸುತ್ತಿದ್ದಾರೆ.

ಇನ್ನು ಸಿದ್ದಣ್ಣ ಮತ್ತು ಭೀಮಬಾಯಿ ಮದುವೆಯಾಗಿ 15 ವರ್ಷವಾಗಿದೆಯಂತೆ. ಇಬ್ಬರು ಮಕ್ಕಳು ಕೂಡಾ ಇದ್ದಾರೆ. ಸಿದ್ದಣ್ಣ ಮತ್ತು ಭೀಮಬಾಯಿ ಅನೇಕ ವರ್ಷಗಳ ಕಾಲ ಬೆಂಗಳೂರಿನಲ್ಲಿದ್ದುಕೊಂಡು, ಅಲ್ಲಿಯೇ ಕೂಲಿ ಕೆಲಸ ಮಾಡಿಕೊಂಡಿದ್ದರಂತೆ. ಆದ್ರೆ ಬೆಂಗಳೂರಲ್ಲಿ ಇರುವಾಗ, ಭೀಮಬಾಯಿಗೆ ಶರಣು ಅನ್ನೋ ಯುವಕ ಪರಿಚಯವಾಗಿದ್ದನಂತೆ.

ಕಲಬುರಗಿ ತಾಲೂಕಿನ ಹೊನ್ನಕಿರಣಗಿ ಗ್ರಾಮದ ನಿವಾಸಿಯಾಗಿದ್ದ ಶರಣು ಜೊತೆ ಭೀಮಬಾಯಿ ಅಕ್ರಮ ಸಂಬಂಧ ಹೊಂದಿದ್ದಳು. ಪತಿಗಿಂತ, ಪ್ರಿಯಕರನ ಜೊತೆಯೇ ಭೀಮಬಾಯಿ ಹೆಚ್ಚು ಸಮಯ ಕಳೆಯುತ್ತಿದ್ದಳು. ಸಿದ್ದಣ್ಣ ಕೆಲಸಕ್ಕೆ ಹೋದ್ರೆ, ಮನೆಯಲ್ಲಿ ಪ್ರಿಯಕರನ ಜೊತೆ ಭೀಮಬಾಯಿ ಇರ್ತಿದ್ದಳು ಅಂತ ಮೃತ ಸಿದ್ದಣ್ಣನ ಸಹೋದರಿಯರು ಆರೋಪಿಸಿದ್ದಾರೆ.

ಇನ್ನು ಪತ್ನಿಯ ಅಕ್ರಮ ಸಂಬಂಧ ಸಿದ್ದಣ್ಣನಿಗೆ ಗೊತ್ತಾಗಿತ್ತಂತೆ. ಹೀಗಾಗಿ ಬೆಂಗಳೂರು ಬಿಟ್ಟು, ಕಲಬುರಗಿ ಜಿಲ್ಲೆಗೆ ಬಂದಿದ್ದನಂತೆ. ಆದ್ರೆ ತವರು ಮನೆಯಲ್ಲಿಯೇ ಇದ್ದ ಭೀಮಬಾಯಿ, ಅಕ್ರಮ ಸಂಬಂಧಕ್ಕೆ ಬ್ರೇಕ್ ಹಾಕಿರಲಿಲ್ಲವಂತೆ. ಇದಕ್ಕೆ ಸಿದ್ದಣ್ಣ ಪದೇ ಪದೇ ಆಕ್ಷೇಪ ವ್ಯಕ್ತಪಡಿಸುತ್ತಿದ್ದನಂತೆ. ತನ್ನ ಅಕ್ರಮ ಸಂಬಂಧಕ್ಕೆ ಪತಿ ಅಡ್ಡಿ ಬಂದಿದ್ದರಿಂದ, ಪತ್ನಿ ಮತ್ತು ಆಕೆಯ ಮನೆಯವರು ಸಿದ್ದಣ್ಣನನ್ನು ಕೊಲೆ ಮಾಡಿದ್ದಾರೆ ಅಂತ ಸಿದ್ದಣ್ಣನ ಸಹೋದರಿಯರು ಆರೋಪಿಸುತ್ತಿದ್ದಾರೆ.

ಇನ್ನು ಕೊಲೆ ಮಾಡಿದ ನಂತರ ಸಿದ್ದಣ್ಣನ ಪತ್ನಿ ಭೀಮಬಾಯಿ, ನಾವೇ ಕೊಲೆ ಮಾಡಿದ್ದೇವೆ. 15 ಲಕ್ಷ ಕೊಡ್ತೇವೆ ಸುಮ್ಮನಿರಿ ಅಂತ ಕೂಡಾ ಹೇಳಿದ್ದಳಂತೆ. ಆದ್ರೆ ಸಿದ್ದಣ್ಣನ ಸಹೋದರಿಯರು ಈ ಬಗ್ಗೆ ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದರು. ಆದರೂ ಇಲ್ಲಿಯವರಗೆ ಆರೋಪಿಗಳ ಬಂಧನವಾಗಿಲ್ಲಾ ಅಂತ ಸಿದ್ದಣ್ಣನ ಸಹೋದರಿಯರು ಆರೋಪಿಸಿದ್ದಾರೆ.

ಇನ್ನು ಸಿದ್ದಣ್ಣನದು ಕೊಲೆಯಾ ಅನ್ನೋ ಬಗ್ಗೆ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ. ಹೀಗಾಗಿ ಮರಣೋತ್ತವರ ವರದಿಗಾಗಿ ಕಾಯುತ್ತಿದ್ದೇವೆ. ಮರಣೋತ್ತರ ವರದಿ ಬಂದ ಮೇಲೆ ಕೊಲೆಯಾಗಿದ್ದರೆ ಖಂಡಿತ ಕ್ರಮ ಕೈಗೊಳ್ಳುತ್ತೇವೆ ಅಂತಾ ಕಲಬುರಗಿ ಎಸ್ಪಿ ಇಶಾ ಪಂತ್ ಹೇಳುತ್ತಿದ್ದಾರೆ. ಬಾಳಿ ಬದುಕಬೇಕಿದ್ದ ವ್ಯಕ್ತಿ ಸಣ್ಣ ವಯಸ್ಸಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು ಹತ್ತಾರು ಸಂಶಯಗಳಿಗೆ ಕಾರಣವಾಗಿದೆ, ಎಲ್ಲದಕ್ಕೂ ಮರಣೋತ್ತರ ವರದಿಯೇ ಉತ್ತರ ನೀಡಲಿದೆ.

ವರದಿ: ಸಂಜಯ್, ಟಿವಿ9, ಕಲಬುರಗಿ

ತಮ್ಮ ಪಕ್ಷದ ಅಧ್ಯಕ್ಷರಿಗೆ ಮಾಲೆ ಹಾಕಿ, ಕಪಾಳಕ್ಕೆ ಬಾರಿಸಿದ ನಾಯಕ
ತಮ್ಮ ಪಕ್ಷದ ಅಧ್ಯಕ್ಷರಿಗೆ ಮಾಲೆ ಹಾಕಿ, ಕಪಾಳಕ್ಕೆ ಬಾರಿಸಿದ ನಾಯಕ
ನನ್ನ ವಯಸ್ಸು 35, ಶಿವಣ್ಣ ಚಿತ್ರರಂಗಕ್ಕೆ ಬಂದೇ 40 ವರ್ಷ ಆಗಿದೆ: ಧ್ರುವ
ನನ್ನ ವಯಸ್ಸು 35, ಶಿವಣ್ಣ ಚಿತ್ರರಂಗಕ್ಕೆ ಬಂದೇ 40 ವರ್ಷ ಆಗಿದೆ: ಧ್ರುವ
ಫೋಟೋ, ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಜಲಪಾತಗಳ ಬಂಡೆಗಳೇ ಆಗಬೇಕೇ?
ಫೋಟೋ, ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಜಲಪಾತಗಳ ಬಂಡೆಗಳೇ ಆಗಬೇಕೇ?
ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ: ಕಾಗೇರಿ
ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ: ಕಾಗೇರಿ
ಅಪಾರ್ಟ್​ಮೆಂಟ್​​ನಲ್ಲಿ ಬೆಂಕಿ ಅವಘಡ; ಮಹಡಿಯಿಂದ ಹಾರಿದ ತಂದೆ, ಮಕ್ಕಳ ಸಾವು
ಅಪಾರ್ಟ್​ಮೆಂಟ್​​ನಲ್ಲಿ ಬೆಂಕಿ ಅವಘಡ; ಮಹಡಿಯಿಂದ ಹಾರಿದ ತಂದೆ, ಮಕ್ಕಳ ಸಾವು
ಅಪ್ಪು ಇದ್ದ ಕಡೆ ನಗುವಿಗೆಲ್ಲಿ ಕೊರತೆ, ಅಪ್ಪು ಹಳೆ ವಿಡಿಯೋ
ಅಪ್ಪು ಇದ್ದ ಕಡೆ ನಗುವಿಗೆಲ್ಲಿ ಕೊರತೆ, ಅಪ್ಪು ಹಳೆ ವಿಡಿಯೋ
ಜಾತಿಗಣತಿಯ ಮರುಸರ್ವೇ ಮಾಡಿಸಲು ಹೈಕಮಾಂಡ್ ಸೂಚಿಸಿದೆ: ಸಿದ್ದರಾಮಯ್ಯ
ಜಾತಿಗಣತಿಯ ಮರುಸರ್ವೇ ಮಾಡಿಸಲು ಹೈಕಮಾಂಡ್ ಸೂಚಿಸಿದೆ: ಸಿದ್ದರಾಮಯ್ಯ
ಶಾಂತಿಯುತವಾಗಿ ಹೋರಾಟ ಮಾಡುವ ವಾಟಾಳ್ ಇವತ್ತು ಭಿನ್ನವಾಗಿ ಕಂಡರು
ಶಾಂತಿಯುತವಾಗಿ ಹೋರಾಟ ಮಾಡುವ ವಾಟಾಳ್ ಇವತ್ತು ಭಿನ್ನವಾಗಿ ಕಂಡರು
ಸಿದ್ದರಾಮಯ್ಯ ಬಚಾವಾಗಲು ಸಾಧ್ಯವೇ ಇಲ್ಲ ಎಂದ ಸ್ನೇಹಮಯಿ ಕೃಷ್ಣ
ಸಿದ್ದರಾಮಯ್ಯ ಬಚಾವಾಗಲು ಸಾಧ್ಯವೇ ಇಲ್ಲ ಎಂದ ಸ್ನೇಹಮಯಿ ಕೃಷ್ಣ
ಜಾತಿ ಗಣತಿ ವರದಿ, ಕಾಲ್ತುಳಿತದ ಬಗ್ಗೆ CM-DCMಗೆ ಹೈಕಮಾಂಡ್ ಖಡಕ್​ ಸೂಚನೆ
ಜಾತಿ ಗಣತಿ ವರದಿ, ಕಾಲ್ತುಳಿತದ ಬಗ್ಗೆ CM-DCMಗೆ ಹೈಕಮಾಂಡ್ ಖಡಕ್​ ಸೂಚನೆ