AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲಬುರಗಿ: ಅಪ್ಪನ ಕೆರೆಯಲ್ಲಿ ಈಜಾಡಿದ ಎಮ್ಮೆಗಳು, ಮಾಲೀಕರ ವಿರುದ್ಧ ದೂರು ದಾಖಲು

ಕಲಬುರಗಿ ನಗರದ ಅಪ್ಪಾ ಕೆರೆಯಲ್ಲಿ ಎಮ್ಮೆಗಳ ಮೈ ತೊಳದಿದ್ದ ಮಾಲೀಕರ ವಿರುದ್ಧ ದೂರು ದಾಖಲಾಗಿದೆ. ಎಮ್ಮೆ ಮಾಲೀಕರು ತಂತಿ ಬೇಲಿ ಕಟ್ ಮಾದುವುದರೊಂದಿಗೆ 5000 ರೂ ನಷ್ಟು ಪಾಲಿಕೆ ಆಸ್ತಿ ನಷ್ಟವನ್ನುಂಟು ಮಾಡಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.

ಕಲಬುರಗಿ: ಅಪ್ಪನ ಕೆರೆಯಲ್ಲಿ ಈಜಾಡಿದ ಎಮ್ಮೆಗಳು, ಮಾಲೀಕರ ವಿರುದ್ಧ ದೂರು ದಾಖಲು
ಅಪ್ಪನ ಕೆರೆಯಲ್ಲಿ ಎಮ್ಮೆಗಳು
ಸಂಜಯ್ಯಾ ಚಿಕ್ಕಮಠ
| Updated By: ರಮೇಶ್ ಬಿ. ಜವಳಗೇರಾ|

Updated on: Aug 11, 2023 | 8:14 AM

Share

ಕಲಬುರಗಿ, (ಆಗಸ್ಟ್ 11): ಕಲಬುರಗಿ(Kalaburagi) ನಗರದ ಪ್ರಸಿದ್ಧ ಅಪ್ಪಾ ಕೆರೆಯಲ್ಲಿ ಇತ್ತೀಚೆಗೆ ಎಮ್ಮೆಗಳ (buffalo) ಮೈ ತೊಳದಿದ್ದ ಮಾಲೀಕರ ವಿರುದ್ಧ ದೂರು ದಾಖಲಾಗಿದೆ. ಕೆರೆ ಸುತ್ತ ಆಳವಡಿಸಿದ್ದ ಗ್ರಿಲ್ ಕಟ್ ಮಾಡಿ ಎಮ್ಮೆಗಳನ್ನ ಸ್ನಾನ ಮಾಡಿಸುವುದರಿಂದಿಗೆ ಅತಿಕ್ರಮ ಪ್ರವೇಶ ಮಾಡಿದ ಆರೋಪದ ಮೇಲೆ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆರೆ ಸುತ್ತ ಆಳವಡಿಸಿದ್ದ ಗ್ರಿಲ್ ಕಟ್ ಮಾಡಿ ಎಮ್ಮೆಗಳನ್ನ ಕರೆಯೊಳಗೆ ಬಿಡಲಾಗಿತ್ತು. ಅಲ್ಲದೇ ಕೆರೆಯಲ್ಲೇ ಎಮ್ಮೆಗಳ ತೊಳೆದಿದ್ದರು. ಕಲಬುರಗಿ ಮಹಾನಗರ ‌ಪಾಲಿಕೆ ಅಧಿಕಾರಿಗಳು ಖುದ್ದು ಭೇಟಿ ನೀಡಿದ್ದಾಗ ಎಮ್ಮೆಗಳನ್ನ ಕೆರೆ ಒಳಗೆ ಇದ್ದವು. ಇದರಿಂದ ತಂತಿ ಬೇಲಿ‌ ಕಟ್ ಮಾಡಿ ಅತಿಕ್ರಮ ಪ್ರವೇಶ ಮಾಡಿದ ಹಿನ್ನಲೆಯಲ್ಲಿ ಎಮ್ಮೆ ಮಾಲೀಕರ ವಿರುದ್ಧ ದೂರು ದಾಖಲಿಸಲಾಗಿದೆ. ಎಮ್ಮೆ ಮಾಲೀಕರು ತಂತಿ ಬೇಲಿ ಕಟ್ ಮಾದುವುದರೊಂದಿಗೆ 5000 ರೂ ನಷ್ಟು ಪಾಲಿಕೆ ಆಸ್ತಿ ನಷ್ಟವನ್ನುಂಟು ಮಾಡಿದ್ದಾರೆ.

ಇದನ್ನೂ ಓದಿ: ಕೆಕೆಆರ್​ಡಿಬಿ ಅಧ್ಯಕ್ಷರಾಗಿ ಅಜಯ್ ಸಿಂಗ್ ನೇಮಕ, ತನ್ನದೇ ವಾಗ್ದಾನಕ್ಕೆ ಎಳ್ಳುನೀರು ಬಿಟ್ಟ ಕಾಂಗ್ರೆಸ್​

ಅಪ್ಪನ ಕೆರೆಯ ಬೇಲಿ ಗ್ರಿಲ್‍ಗಳನ್ನು ಕಟ್ ಮಾಡಿ ಹಾಳು ಮಾಡಿದಲ್ಲದೇ ಕೆರೆಯ ಜಾಗೆಯಲ್ಲಿ ಅತಿಕ್ರಮ ಪ್ರವೇಶ ಮಾಡಿ ಎಮ್ಮೆಗಳನ್ನು ಒಳಗೆ ಬಿಟ್ಟಿದ್ದು, ಅವರ ಮೇಲೆ ಕಲಬುರಗಿ ನಗರದ ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ: 175/2023, ಕಲಂ 447, 427 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.

ಸಾರ್ವಜನಿಕರು ಹಾಗೂ ದನ/ ಎಮ್ಮೆ ಮೇಯಿಸುವವರು ಈ ಕೆರೆಯ ಸುತ್ತಮುತ್ತಲಿನ ಬೇಲಿ ದಾಟಿ ಅಕ್ರಮವಾಗಿ ಪ್ರವೇಶ ಮಾಡಬಾರದೆಂದು ತಿಳಿಸಿದೆ. ಈ ಕುರಿತು ಸುತ್ತಮುತ್ತಲಿನ‌ ಬೇಲಿಗೆ‌ ನಿಷೇಧಿತ ಪ್ರದೇಶವೆಂದು‌ ನಾಮಫಲಕ ಸಹ ಅಳವಡಿಸಿದೆ.

ಸರಿಯಾದ ನಿರ್ವಹಣೆಯಿಧಿಲ್ಲದೆ ಕೆರೆಯಲ್ಲಿ ಹೂಳು ತುಂಬಿದೆ. ಆಗಾಗ ಭೀಮಾ ನದಿ ನೀರು ಕೆರೆಗೆ ಬಂದು ಬೀಳುತ್ತದೆ. ಆದರೆ, ಇಡೀ ಕೆರೆಯಲ್ಲಿ ಹೂಳು ತುಂಬಿದೆ. ಅಲ್ಲದೇ ಸ್ವಚ್ಛತೆ ಮಾಯವಾಗಿದ್ದು, ಜನರು ವಾಕಿಂಗ್ ಬರದ ಸ್ಥಿತಿಗೆ ಬಂದಿದೆ. ಇದರೊಂದಿಗೆ ಒಂದು ಕಾಲದ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳವಾಗಿದ್ದ ಅಪ್ಪನ​ ಕೆರೆ ಇದೀಗ ತನ್ನ ಕಳೆ ಕಳೆದುಕೊಂಡಿದೆ.

ಇನ್ನಷ್ಟು ಕಲಬುರಗಿ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ