Kannada Rajyotsava Award 2022: 2022ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ, 67 ಜನರ ಪಟ್ಟಿ ಇಲ್ಲಿದೆ

2022ನೇ ಸಾಲಿನಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದ್ದು, ಈ ಬಾರಿ 67 ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಹಾಗಾದ್ರೆ, ಯಾರ್ಯಾರಿಗೆ ಪ್ರಶಸ್ತಿ ಸಿಕ್ಕಿದೆ ಎನ್ನುವ ಲಿಸ್ಟ್ ಇಲ್ಲಿದೆ.

Kannada Rajyotsava Award 2022: 2022ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ, 67 ಜನರ ಪಟ್ಟಿ ಇಲ್ಲಿದೆ
ವಿಧಾನ ಸೌಧ
Edited By:

Updated on: Oct 31, 2022 | 1:25 AM

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 2022-23ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಇಂದು(ಅ.30)  (Kannada Rajyotsava Award 2022) ಪ್ರಕಟಿಸಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಒಟ್ಟು 67 ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇನ್ನು 10 ಸಂಘ ಸಂಸ್ಥೆಗಳಿಗೂ ಸಹ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದ್ದು, ನವೆಂಬರ್‌ 1 ರಂದು ನಾನಾ ಕ್ಷೇತ್ರಗಳ ಒಟ್ಟು 67 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಇನ್ನು 2022-23ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ 67 ಜನರ ಪಟ್ಟಿ ಈ ಕೆಳಗಿನಂತಿದೆ ನೋಡಿ.

ಕ್ಷೇತ್ರ: ಸಂಕೀರ್ಣ
ಕ್ರಮ ಸಂಖ್ಯೆ ಹೆಸರು ಜಿಲ್ಲೆ
1 ಶ್ರೀ ಸುಬ್ಬರಾಮ ಶೆಟ್ಟಿ ಆರ್​. ವಿ ಸಂಸ್ಥೆಗಳು ಬೆಂಗಳೂರು
2 ವಿದ್ವಾನ್​​ ಗೋಪಾಲ್​ ಕೃಷ್ಣ ಶರ್ಮ ಬೆಂಗಳೂರು
3 ಶ್ರೀಮತಿ ಸೋಲಿಗರ ಮಾದಮ್ಮ ಚಾಮರಾಜನಗರ
ಕ್ಷೇತ್ರ: ಸೈನಿಕ
ಕ್ರಮ ಸಂಖ್ಯೆ ಹೆಸರು ಜಿಲ್ಲೆ
1 ಶ್ರೀ ಸುಬೇದಾರ್​ ಬಿ ಕೆ ಕುಮಾರಸ್ವಾಮಿ ಬೆಂಗಳೂರು
ಕ್ಷೇತ್ರ: ಪತ್ರಿಕೋದ್ಯಮ
ಕ್ರಮ ಸಂಖ್ಯೆ ಹೆಸರು ಜಿಲ್ಲೆ
1 ಹೆಚ್​.ಆರ್.ಶ್ರೀಶಾ ಬೆಂಗಳೂರು
2 ಜಿ.ಎಂ. ಶಿರಹಟ್ಟಿ ಗದಗ
ಕ್ಷೇತ್ರ: ಕೃಷಿ
ಕ್ರಮ ಸಂಖ್ಯೆ ಹೆಸರು ಜಿಲ್ಲೆ
1 ಶ್ರೀ ಗಣೇಶ್​​ ತಿಮ್ಮಯ್ಯ ಕೊಡಗು
2 ಶ್ರೀ ಚಂದ್ರಶೇಖರ್​ ನಾರಾಯಣಪುರ ಚಿಕ್ಕಮಗಳೂರು
ಕ್ಷೇತ್ರ: ಪರಿಸರ
ಕ್ರಮ ಸಂಖ್ಯೆ ಹೆಸರು ಜಿಲ್ಲೆ
1 ಶ್ರೀ ಸಾಲುಮರದ ನಿಂಗಣ್ಣ ರಾಮನಗರ
ಕ್ಷೇತ್ರ: ಪೌರಕಾರ್ಮಿಕ
ಕ್ರಮ ಸಂಖ್ಯೆ ಹೆಸರು ಜಿಲ್ಲೆ
1 ಮಲ್ಲಮ್ಮ ಹೂವಿನಹಡಗಲಿ ವಿಜಯನಗರ
ಕ್ಷೇತ್ರ: ಆಡಳಿತ
ಕ್ರಮ ಸಂಖ್ಯೆ ಹೆಸರು ಜಿಲ್ಲೆ
1 ಎಲ್‌.ಹೆಚ್‌.ಮಂಜುನಾಥ್ ಶಿವಮೊಗ್ಗ
2 ಮದನ್ ಗೋಪಾಲ್ ಬೆಂಗಳೂರು
ಕ್ಷೇತ್ರ: ಹೊರನಾಡು
ಕ್ರಮ ಸಂಖ್ಯೆ ಹೆಸರು
1 ದೇವಿದಾಸ ಶೆಟ್ಟಿ ಮುಂಬೈ
2 ಅರವಿಂದ್ ಪಾಟೀಲ್ ಹೊರನಾಡು
3 ಕೃಷ್ಣಮೂರ್ತಿ ಮಾಂಜಾ ತೆಲಂಗಾಣ
ಕ್ಷೇತ್ರ: ಹೊರದೇಶ
ಕ್ರಮ ಸಂಖ್ಯೆ ಹೆಸರು
1 ರಾಜ್‌ಕುಮಾರ್‌ ಗಲ್ಫ್ ರಾಷ್ಟ್ರ
ಕ್ಷೇತ್ರ: ವೈದ್ಯಕೀಯ
ಕ್ರಮ ಸಂಖ್ಯೆ ಹೆಸರು ಜಿಲ್ಲೆ
1 ಡಾ.ಎಚ್‌.ಎಸ್‌.ಮೋಹನ್‌ ಶಿವಮೊಗ್ಗ
2 ಡಾ.ಬಸವಂತಪ್ಪ ದಾವಣಗೆರೆ
ಕ್ಷೇತ್ರ: ಸಮಾಜಸೇವೆ
ಕ್ರಮ ಸಂಖ್ಯೆ ಹೆಸರು ಜಿಲ್ಲೆ
1 ರವಿ ಶೆಟ್ಟಿ ದಕ್ಷಿಣ ಕನ್ನಡ
2 ಸಿ. ಕರಿಯಪ್ಪ ಬೆಂಗಳೂರು ಗ್ರಾಮಾಂತರ
3 ಎಂ ಎಸ್ ಕೋರಿ ಶೆಟ್ಟಿ ಹಾವೇರಿ
4 ಡಿ. ಮಾದೇಗೌಡ ಮೈಸೂರು
5 ಬಲಬೀರ್ ಸಿಂಗ್ ಬೀದರ್
ಕ್ಷೇತ್ರ: ವಾಣಿಜ್ಯೋದ್ಯಮ
ಕ್ರಮ ಸಂಖ್ಯೆ ಹೆಸರು ಜಿಲ್ಲೆ
1 ಬಿ.ವಿ. ನಾಯ್ಡು ಬೆಂಗಳೂರು
2 ಜಯರಾಮ ಬನಾನ್ ಉಡುಪಿ
3 ಜಿ ಶ್ರೀನಿವಾಸ್ ಕೋಲಾರ
ಕ್ಷೇತ್ರ: ರಂಗಭೂಮಿ
ಕ್ರಮ ಸಂಖ್ಯೆ ಹೆಸರು ಜಿಲ್ಲೆ
1 ತಿಪ್ಪಣ್ಣ ಹಳವರ್ ಯಾದಗಿರಿ
2 ಲಲಿತಾಬಾಯಿ ಚನ್ನದಾಸರ್ ವಿಜಯಪುರ
3 ಗುರುನಾಥ್ ಹೂಗಾರ್ ಕಲಬುರಗಿ
4 ಪ್ರಭಾಕರ್ ಜೋಶಿ ಉಡುಪಿ
5 ಶ್ರೀಶೈಲ ಹುದ್ದಾರ್ ಹಾವೇರಿ
ಕ್ಷೇತ್ರ: ಸಂಗೀತ
ಕ್ರಮ ಸಂಖ್ಯೆ ಹೆಸರು ಜಿಲ್ಲೆ
1 ನಾರಾಯಣ ಎಂ ದಕ್ಷಿಣ ಕನ್ನಡ
2 ಅನಂತಾರ್ಯ ಬಾಳಾಚಾರ್ಯ ಧಾರವಾಡ
3 ಅಂಜಿನಪ್ಪ ಸತ್ಪಾಡಿ ಚಿಕ್ಕಬಳ್ಳಾಪುರ
4 ಅನಂತ ಕುಲಕರ್ಣಿ ಬಾಗಲಕೋಟೆ
ಕ್ಷೇತ್ರ: ಜಾನಪದ
ಕ್ರಮ ಸಂಖ್ಯೆ ಹೆಸರು ಜಿಲ್ಲೆ
1 ಸಹಮದೇವಪ್ಪ ಈರಪ್ಪ ನಡಿಗೇರ್ ಉತ್ತರ ಕನ್ನಡ
2 ಗುಡ್ಡ ಪಾಣಾರ ಉಡುಪಿ
3 ಕಮಲಮ್ಮ ಸೂಲಗಿತ್ತಿ ರಾಯಚೂರು
4 ಸಾವಿತ್ರಿ ಪೂಜಾರ್ ಧಾರವಾಡ
5 ರಾಚಯ್ಯ ಸಾಲಿಮಠ್ ಬಾಗಲಕೋಟೆ
6 ಮಹೇಶ್ವರ್ ಗೌಡಗೆ ಲಿಂಗದಹಳ್ಳಿ ವೀರಗಾಸೆ ಹಾವೇರಿ
ಕ್ಷೇತ್ರ: ಶಿಲ್ಪಕಲೆ
ಕ್ರಮ ಸಂಖ್ಯೆ ಹೆಸರು ಜಿಲ್ಲೆ
1 ಪರಶುರಾಮ್ ಪವಾರ್ ಬಾಗಲಕೋಟೆ
2 ಹನುಮಂತಪ್ಪ ಬಾಳಪ್ಪ ಹುಕ್ಕೇರಿ ಬೆಳಗಾವಿ
ಕ್ಷೇತ್ರ: ಚಿತ್ರಕಲೆ
ಕ್ರಮ ಸಂಖ್ಯೆ ಹೆಸರು ಜಿಲ್ಲೆ
1 ಸಣ್ಣರಂಗಪ್ಪ ಚಿತ್ರಕಾರ್ ಕೊಪ್ಪಳ
ಕ್ಷೇತ್ರ: ಚಲನಚಿತ್ರ
ಕ್ರಮ ಸಂಖ್ಯೆ ಹೆಸರು ಜಿಲ್ಲೆ
1 ದತ್ತಣ್ಣ ಚಿತ್ರದುರ್ಗ
2 ಅವಿನಾಶ್‌ ಬೆಂಗಳೂರು
ಕ್ಷೇತ್ರ: ಕಿರುತೆರೆ
ಕ್ರಮ ಸಂಖ್ಯೆ ಹೆಸರು ಜಿಲ್ಲೆ
1 ಸಿಹಿಕಹಿ ಚಂದ್ರು ಬೆಂಗಳೂರು
ಕ್ಷೇತ್ರ:ಯಕ್ಷಗಾನ
ಕ್ರಮ ಸಂಖ್ಯೆ ಹೆಸರು ಜಿಲ್ಲೆ
1 ಎಂ.ಎ.ನಾಯಕ್ ಉಡುಪಿ
2 ಸುಬ್ರಹ್ಮಣ್ಯ ಧಾರೇಶ್ವರ ಉತ್ತರ ಕನ್ನಡ
3 ಸರಪಾಡಿ ಅಶೋಕ್ ಶೆಟ್ಟಿ ದಕ್ಷಿಣ ಕನ್ನಡ
ಕ್ಷೇತ್ರ: ಬಯಲಾಟ
ಕ್ರಮ ಸಂಖ್ಯೆ ಹೆಸರು ಜಿಲ್ಲೆ
1 ಅಡವಯ್ಯ ಚ ಹಿರೇಮಠ್ (ದೊಡ್ಡಾಟ) ಧಾರವಾಡ
2 ಶಂಕರಪ್ಪ ಮಲ್ಲಪ್ಪ ಹೊರಪೇಟೆ ಕೊಪ್ಪಳ
3 ಹೆಚ್‌.ಪಾಂಡುರಂಗಪ್ಪ ಬಳ್ಳಾರಿ
ಕ್ಷೇತ್ರ: ಸಾಹಿತ್ಯ
ಕ್ರಮ ಸಂಖ್ಯೆ ಹೆಸರು ಜಿಲ್ಲೆ
1 ಶಂಕರ ಚಚಡಿ ಬೆಳಗಾವಿ
2 ಪ್ರೊ.ಕೃಷ್ಣೇಗೌಡ ಮೈಸೂರು
3 ಶೋಕ್ ಬಾಬು ನೀಲಗಾರ್ ಬೆಳಗಾವಿ
4 ಅ.ರಾ.ಮಿತ್ರ ಹಾಸನ
5 ರಾಮಕೃಷ್ಣ ಮರಾಠೆ ಕಲಬುರಗಿ
ಕ್ಷೇತ್ರ: ಶಿಕ್ಷಣ
ಕ್ರಮ ಸಂಖ್ಯೆ ಹೆಸರು ಜಿಲ್ಲೆ
1 ಕೋಟಿ ರಂಗಪ್ಪ ತುಮಕೂರು
2 ಎಂ.ಜಿ.ನಾಗರಾಜ್ ಸಂಶೋಧಕರು ಬೆಂಗಳೂರು
ಕ್ಷೇತ್ರ: ಕ್ರೀಡೆ
ಕ್ರಮ ಸಂಖ್ಯೆ ಹೆಸರು ಜಿಲ್ಲೆ
1 ದತ್ತಾತ್ರೇಯಗೋವಿಂದ ಕುಲಕರ್ಣಿ ಧಾರವಾಡ
2 ರಾಘವೇಂದ್ರ ಅಣ್ಣೇಕರ್ ಬೆಳಗಾವಿ
ಕ್ಷೇತ್ರ: ನ್ಯಾಯಾಂಗ
ಕ್ರಮ ಸಂಖ್ಯೆ ಹೆಸರು ಜಿಲ್ಲೆ
1 ವೆಂಕಟಾಚಲಪತಿ ಬೆಂಗಳೂರು
2 ನಂಜುಂಡರೆಡ್ಡಿ ಬೆಂಗಳೂರು
ಕ್ಷೇತ್ರ: ನ್ಯಾಯಾಂಗ
ಕ್ರಮ ಸಂಖ್ಯೆ ಹೆಸರು ಜಿಲ್ಲೆ
1 ಕಮಲಾಕ್ಷಾಚಾರ್ಯ ದಕ್ಷಿಣ ಕನ್ನಡ
ಕ್ಷೇತ್ರ: ವಿಜ್ಞಾನ- ತಂತ್ರಜ್ಞಾನ
ಕ್ರಮ ಸಂಖ್ಯೆ ಹೆಸರು ಜಿಲ್ಲೆ
1 ಶ್ರೀ ಕೆ. ಶಿವನ್ ಬೆಂಗಳೂರು
2 ಡಾ. ಡಿ.ಆರ್.ಬಳೂರಗಿ ರಾಯಚೂರು

 

ಸಂಘ ಸಂಸ್ಥೆಗಳು
ಕ್ರಮ ಸಂಖ್ಯೆ ಹೆಸರು ಜಿಲ್ಲೆ
1 ರಾಮಕೃಷ್ಣ ಆಶ್ರಮ ಮೈಸೂರು
2 ಲಿಂಗಾಯತ ಪ್ರಗತಿಶೀಲ ಸಂಸ್ಥೆ ಗದಗ
3 ಅಗಡಿ ತೋಟ ಹಾವೇರಿ
4 ತಲಸೇಮಿಯಾ, ಹೀಮೋಫೀಲಿಯ ಸೊಸೈಟಿ ಬಾಗಲಕೋಟೆ
5 ಅಮೃತ ಶಿಶು ನಿವಾಸ ಬೆಂಗಳೂರು
6 ಸುಮನಾ ಫೌಂಡೇಷನ್ ಬೆಂಗಳೂರು
7 ಯುವ ವಾಹಿನಿ ಸಂಸ್ಥೆ ದಕ್ಷಿಣ ಕನ್ನಡ
8 ನೆಲೆ ಫೌಂಡೇಷನ್‌-ಅನಾಥ ಮಕ್ಕಳ ಪುನರ್ವಸತಿ ಕೇಂದ್ರ ಬೆಂಗಳೂರು
9 ನಮ್ಮನೆ ಸುಮ್ಮನೆ ಮಂಗಳಮುಖಿ ನಿರಾಶ್ರಿತ ಆಶ್ರಮ ಬೆಂಗಳೂರು
10 ಉಮಾಮಹೇಶ್ವರಿ ಹಿಂದುಳಿದ ವರ್ಗ ಅಭಿವೃದ್ಧಿ ಟ್ರಸ್ಟ್ ಮಂಡ್ಯ

 

ಸಿಎಂ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಪ್ರಶಸ್ತಿ ಆಯ್ಕೆ ಕುರಿತಂತೆ ಅಂತಿಮ ಸಭೆ ನಡೆದಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯ್ಕೆ ಸಲಹಾ ಸಮಿತಿ ನಾನಾ ಕ್ಷೇತ್ರಗಳ ಗಣ್ಯರನ್ನು 1:2 ಅನುಪಾತದಲ್ಲಿ 134 ಜನರ ಪಟ್ಟಿ ಸಿದ್ಧಪಡಿಸಿ ,ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿತ್ತು.2022ನೇ ಸಾಲಿನ ಕನ್ನಡ ರಾಜೋತ್ಸವ ಪ್ರಶಸ್ತಿಗೆ ಅರ್ಹ ಮಹನೀಯರನ್ನುಆಯ್ಕೆ ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯ್ಕೆ ಸಲಹಾ ಸಮಿತಿಯನ್ನು ರಚಿಸಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ ಸುನಿಲ್ ಕುಮಾರ್ ಅಧ್ಯಕ್ಷತೆಯಲ್ಲಿ ಪ್ರಸಕ್ತ ಸಾಲಿನ ರಾಜೋತ್ಸವ ಪ್ರಶಸ್ತಿಗೆ ನಾನಾ ಕ್ಷೇತ್ರದ ಸಾಧಕರನ್ನು ಆಯ್ಕೆ ಮಾಡಲು ಸಮಿತಿಯನ್ನು ರಚಿಸಲಾಗಿತ್ತು.

Published On - 6:39 pm, Sun, 30 October 22