AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರುನಾಡಿಗೆ ಕೊರೊನಾಘಾತ, ಒಂದೇ ದಿನ 1,925 ಜನರಿಗೆ ಸೋಂಕು, 38 ಸಾವು

ಬೆಂಗಳೂರು: ಕರುನಾಡಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ರಾಜ್ಯದಲ್ಲಿಂದು ಹೊಸದಾಗಿ 1,925 ಜನರಿಗೆ ಸೋಂಕು ಪತ್ತೆಯಾಗಿದೆ. ಇದರಲ್ಲಿ ಅತಿ ಹೆಚ್ಚು ಪ್ರಕರಣಗಳು ಅಂದ್ರೆ 1,235 ಕೇಸ್​ಗಳು ಕೇವಲ ರಾಜಧಾನಿ ಬೆಂಗಳೂರಿನಲ್ಲೇ ವರದಿಯಾಗಿದೆ. ಇದೀಗ ರಾಜ್ಯದಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 23,474ಕ್ಕೇರಿದೆ. ಜೊತೆಗೆ ದಕ್ಷಿಣ ಕನ್ನಡದಲ್ಲಿ 147 ಕೇಸ್​ಗಳು, ಬಳ್ಳಾರಿಯಲ್ಲಿ 90 ಪ್ರಕರಣಗಳು, ವಿಜಯಪುರದಲ್ಲಿ 51, ಕಲಬುರಗಿಯಲ್ಲಿ 49 ಹಾಗೂ ಉಡುಪಿಯಲ್ಲಿ 45 ಪ್ರಕರಣಗಳು ವರದಿಯಾಗಿದೆ. ರಾಜ್ಯದಲ್ಲಿ ಸೋಂಕಿಗೆ 38 ಜನ ಬಲಿ ಕೊರೊನಾ ಸೋಂಕಿನಿಂದ ಇಂದು ಕರ್ನಾಟಕದಲ್ಲಿ […]

ಕರುನಾಡಿಗೆ ಕೊರೊನಾಘಾತ, ಒಂದೇ ದಿನ 1,925 ಜನರಿಗೆ ಸೋಂಕು, 38 ಸಾವು
KUSHAL V
|

Updated on: Jul 05, 2020 | 8:04 PM

Share

ಬೆಂಗಳೂರು: ಕರುನಾಡಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ರಾಜ್ಯದಲ್ಲಿಂದು ಹೊಸದಾಗಿ 1,925 ಜನರಿಗೆ ಸೋಂಕು ಪತ್ತೆಯಾಗಿದೆ. ಇದರಲ್ಲಿ ಅತಿ ಹೆಚ್ಚು ಪ್ರಕರಣಗಳು ಅಂದ್ರೆ 1,235 ಕೇಸ್​ಗಳು ಕೇವಲ ರಾಜಧಾನಿ ಬೆಂಗಳೂರಿನಲ್ಲೇ ವರದಿಯಾಗಿದೆ. ಇದೀಗ ರಾಜ್ಯದಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 23,474ಕ್ಕೇರಿದೆ.

ಜೊತೆಗೆ ದಕ್ಷಿಣ ಕನ್ನಡದಲ್ಲಿ 147 ಕೇಸ್​ಗಳು, ಬಳ್ಳಾರಿಯಲ್ಲಿ 90 ಪ್ರಕರಣಗಳು, ವಿಜಯಪುರದಲ್ಲಿ 51, ಕಲಬುರಗಿಯಲ್ಲಿ 49 ಹಾಗೂ ಉಡುಪಿಯಲ್ಲಿ 45 ಪ್ರಕರಣಗಳು ವರದಿಯಾಗಿದೆ.

ರಾಜ್ಯದಲ್ಲಿ ಸೋಂಕಿಗೆ 38 ಜನ ಬಲಿ ಕೊರೊನಾ ಸೋಂಕಿನಿಂದ ಇಂದು ಕರ್ನಾಟಕದಲ್ಲಿ 38 ಜನರು ಅಸುನೀಗಿದ್ದಾರೆ. ಬೆಂಗಳೂರಿನಲ್ಲಿ ಸೋಂಕಿಗೆ 16 ಜನರ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಇದುವರೆಗೆ ಕೊರೊನಾದಿಂದ 373 ಜನರು ಕೊನೆಯುಸಿರೆಳೆದಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ಸಿಕ್ಕಿದೆ.