AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿನ್ನ ಅಗತ್ಯ ಸೇವೆಯಲ್ಲ; ಅಕ್ಷಯ ತೃತೀಯದಂದು ಅಂಗಡಿ ತೆರೆಯಲು ಅನುಮತಿ ನಿರಾಕರಿಸಿದ ರಾಜ್ಯದ ಮುಖ್ಯ ಕಾರ್ಯದರ್ಶಿ

ಇಂದು ಅಕ್ಷಯ ತೃತೀಯ ಇರುವ ಕಾರಣ ಚಿನ್ನದ ಮಾರಾಟಕ್ಕೆ ಅನುಮತಿ ನೀಡುವಂತೆ ಜ್ಯುವೆಲರಿ ಫೌಂಡೇಶನ್ ವತಿಯಿಂದ ಸರ್ಕಾರಕ್ಕೆ ಮನವಿ ಮಾಡಲಾಗಿತ್ತಾದರೂ ಪರಿಸ್ಥಿತಿ ಗಂಭೀರವಾಗಿರುವುದರಿಂದ ಅನುಮತಿ ನಿರಾಕರಿಸಲಾಗಿದೆ.

ಚಿನ್ನ ಅಗತ್ಯ ಸೇವೆಯಲ್ಲ; ಅಕ್ಷಯ ತೃತೀಯದಂದು ಅಂಗಡಿ ತೆರೆಯಲು ಅನುಮತಿ ನಿರಾಕರಿಸಿದ ರಾಜ್ಯದ ಮುಖ್ಯ ಕಾರ್ಯದರ್ಶಿ
ಸಾಂದರ್ಭಿಕ ಚಿತ್ರ
Skanda
|

Updated on: May 14, 2021 | 8:08 AM

Share

ಬೆಂಗಳೂರು: ಕೊರೊನಾ ಎರಡನೇ ಅಲೆ ದೆಸೆಯಿಂದ ಈ ಬಾರಿಯೂ ಹಬ್ಬ, ಹರಿದಿನ, ಸಂಭ್ರಮಾಚರಣೆಗಳೆಲ್ಲಾ ಸೊರಗಿ ಹೋಗಿವೆ. ಪ್ರತಿವರ್ಷ ಅಕ್ಷಯ ತೃತೀಯ ಬಂತೆಂದರೆ ಬಂಗಾರ ಖರೀದಿಸಲು ಮುಗಿಬೀಳುತ್ತಿದ್ದ ಜನರಿಗೆ ಕಳೆದ ವರ್ಷದಿಂದ ಹಬ್ಬದ ನೆಪದಲ್ಲಿ ಚಿನ್ನ ಕೊಳ್ಳುವುದು ದೂರದ ಮಾತಾಗಿದೆ. ಇಂದು ಅಕ್ಷಯ ತೃತೀಯ ಇರುವ ಕಾರಣ ಚಿನ್ನದ ಮಾರಾಟಕ್ಕೆ ಅನುಮತಿ ನೀಡುವಂತೆ ಜ್ಯುವೆಲರಿ ಫೌಂಡೇಶನ್ ವತಿಯಿಂದ ಸರ್ಕಾರಕ್ಕೆ ಮನವಿ ಮಾಡಲಾಗಿತ್ತಾದರೂ ಪರಿಸ್ಥಿತಿ ಗಂಭೀರವಾಗಿರುವುದರಿಂದ ಅನುಮತಿ ನಿರಾಕರಿಸಲಾಗಿದೆ.

ಅಕ್ಷಯ ತೃತೀಯ ಸಂಭ್ರಮಕ್ಕೆ ಲಾಕ್‌ಡೌನ್‌ ಅಡ್ಡಿಯಾಗಿದ್ದು, ಇಂದು 2 ಗಂಟೆಗಳ ಕಾಲ ಚಿನ್ನದ ಮಾರಾಟಕ್ಕೆ ಅವಕಾಶ ನೀಡಬೇಕೆಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರ ಬಳಿ ಕರ್ನಾಟಕ ಜ್ಯುವೆಲ್ಲರಿ ಫೆಡರೇಶನ್‌ ಪ್ರಧಾನ ಕಾರ್ಯದರ್ಶಿ ಡಾ.ಬಿ.ರಾಮಾಚಾರಿ ಮನವಿ ಮಾಡಿದ್ದರು. ಅಕ್ಷಯ ತೃತೀಯ ಹಿನ್ನೆಲೆ ಅವರನ್ನು ಭೇಟಿ ಮಾಡಿ ಮನವೊಲಿಸಲು ಯತ್ನಿಸಲಾಗಿತ್ತು. ಆದರೆ, ಮನವಿಗೆ ಒಪ್ಪದ ಪಿ.ರವಿಕುಮಾರ್ ನಿಮ್ಮದು ಅಗತ್ಯ ಸೇವೆಯಲ್ಲ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಟಿವಿ9ಗೆ ಕರ್ನಾಟಕ ಜ್ಯುವೆಲ್ಲರಿ ಫೆಡರೇಶನ್‌ ಪ್ರಧಾನ ಕಾರ್ಯದರ್ಶಿ ಡಾ.ಬಿ.ರಾಮಾಚಾರಿ ಪ್ರತಿಕ್ರಿಯಿಸಿದ್ದು, ಜನರ ಜೀವ ರಕ್ಷಣೆ ದೃಷ್ಟಿಯಿಂದ ಮನವಿ ತಿರಸ್ಕಾರ ಮಾಡಲಾಗಿದೆ ಎಂದಿದ್ದಾರೆ. ಬಂಗಾರದ ಹಬ್ಬಕ್ಕೆ ಕೊರೊನಾ ಕರಿ ನೆರಳು ಬಿದ್ದಿದೆ. ಅಕ್ಷಯ ತೃತೀಯದಂದೇ ಕರ್ನಾಟಕದಲ್ಲಿ 2 ಸಾವಿರ ಕೆ.ಜಿ ಚಿನ್ನ ಮಾರಾಟವಾಗ್ತಿತ್ತು. ರಾಜ್ಯದ ಚಿನ್ನದ ಮಾರುಕಟ್ಟೆಯಲ್ಲಿ ಬರೋಬ್ಬರಿ 500 ರಿಂದ 700 ಕೋಟಿ ರೂ. ವಹಿವಾಟು ಆಗ್ತಿತ್ತು. ರಾಜ್ಯದಲ್ಲಿ 1.20 ಲಕ್ಷ ಚಿನ್ನಾಭರಣ ಮಾರಾಟಗಾರರು ಅದೇ ಕೆಲಸವನ್ನ ನಂಬಿ ಬದುಕುತ್ತಿದ್ದಾರೆ. ಈ ವರ್ಷ ತುಂಬಾ ನಷ್ಟವಾಗ್ತಿದೆ ಎಂದು ಆಭರಣ ವ್ಯಾಪಾರಿಗಳ ಕಷ್ಟವನ್ನು ವಿವರಿಸಿದ್ದಾರೆ.

(Karnataka Government Chief Secretary denies to open jewellery shops for Akshaya Tritiya 2021 amid Lockdown)

ಇದನ್ನೂ ಓದಿ: Akshaya Tritiya: ಅಕ್ಷಯ ತೃತೀಯ ಆಚರಣೆಯ ಮಹತ್ವ, ಶುಭ ಮುಹೂರ್ತ ಮತ್ತು ಇತಿಹಾಸವನ್ನು ತಿಳಿಯಿರಿ 

Akshaya Tritiya: ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿಸುವುದು ಅದೃಷ್ಟ ತರುತ್ತದೆಯಾ? ಇಲ್ಲಿದೆ ಪೂರ್ಣ ಮಾಹಿತಿ