AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

3ನೇ ಅಲೆ ನಿರ್ವಹಣೆಗೆ ತಂಡ ರೂಪಿಸಿದ ಕರ್ನಾಟಕ ಸರ್ಕಾರ: ಕೊವಿಡ್ ವಾರ್​ರೂಂಗೆ ಮುನಿಶ್ ಮೌದ್ಗಿಲ್ ನೇತೃತ್ವ

ಕರ್ನಾಟಕ ಸರ್ಕಾರವು ಕೊವಿಡ್ ಕಣ್ಗಾವಲು ಮೇಲುಸ್ತುವಾರಿ, ನಿರ್ವಹಣೆ ಹಾಗೂ ಸಮನ್ವಯಕ್ಕಾಗಿ ವಿಪತ್ತು ನಿರ್ವಹಣಾ ಕಾಯ್ದೆಯಡಿ ಅಧಿಕಾರಿಗಳ ಹಲವು ತಂಡಗಳನ್ನು ರಚಿಸಿದೆ

3ನೇ ಅಲೆ ನಿರ್ವಹಣೆಗೆ ತಂಡ ರೂಪಿಸಿದ ಕರ್ನಾಟಕ ಸರ್ಕಾರ: ಕೊವಿಡ್ ವಾರ್​ರೂಂಗೆ ಮುನಿಶ್ ಮೌದ್ಗಿಲ್ ನೇತೃತ್ವ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Jan 04, 2022 | 9:54 PM

Share

ಬೆಂಗಳೂರು: ಕರ್ನಾಟಕ ಸೇರಿದಂತೆ ಇಡೀ ದೇಶದಲ್ಲಿ ಕೊರೊನಾ ಸೋಂಕು (Coronavirus) ಮತ್ತೆ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೊವಿಡ್ ಸೋಂಕಿನ ನಿಯಂತ್ರಣ, ನಿಗಾವಣೆ ಹಾಗೂ ಜಾಗೃತಿಗೆ ಸಂಬಂಧಿಸಿದಂತೆ ಹಲವು ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರವು ಹೊರಡಿಸಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯ (Covid Guidelines) ಅನ್ವಯ ರಾಜ್ಯ ಸರ್ಕಾರವು ಕೊವಿಡ್ ಕಣ್ಗಾವಲು ಮೇಲುಸ್ತುವಾರಿ, ನಿರ್ವಹಣೆ ಹಾಗೂ ಸಮನ್ವಯಕ್ಕಾಗಿ ವಿಪತ್ತು ನಿರ್ವಹಣಾ ಕಾಯ್ದೆಯಡಿ ಅಧಿಕಾರಿಗಳ ಹಲವು ತಂಡಗಳನ್ನು ರಚಿಸಿದೆ. ಈ ತಂಡಗಳ ವಿವರ ಇಂತಿದೆ.

ಕೊವಿಡ್ ವಾರ್​ರೂಂ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸೇರಿದಂತೆ ಇಡೀ ರಾಜ್ಯವನ್ನು ಒಳಗೊಂಡ ಕಾರ್ಯವ್ಯಾಪ್ತಿ ಇರುವ ಕೊವಿಡ್ ವಾರ್​ರೂಂಗೆ ಐಎಎಸ್ ಅಧಿಕಾರಿ ಮುನಿಶ್ ಮೌದ್ಗಿಲ್ ಅವರ ನೇತೃತ್ವ ಇರಲಿದೆ.

ಸೋಂಕಿತರಿಗೆ ಆಸ್ಪತ್ರೆ ಸೌಕರ್ಯ: ರಾಜ್ಯದಲ್ಲಿ ವರದಿಯಾಗುವ ಕೋವಿಡ್ ಸೋಂಕು ಲಕ್ಷಣ ಇರುವವರನ್ನು (ILI ಮತ್ತು SARI) ಆಂಬುಲೆನ್ಸ್ ಮತ್ತು ಆಸ್ಪತ್ರೆಗಳ ಮೂಲಕ ಅಸ್ಪತ್ರೆಗಳಿಗೆ ದಾಖಲಿಸುವ ಹೊಣೆಗಾರಿಕೆಯನ್ನು ಐಎಎಸ್ ಅಧಿಕಾರಿ ಆರ್.ವಿನೂತ್ ಪ್ರಿಯಾ ಅವರಿಗೆ ವಹಿಸಲಾಗಿದೆ.

ಟೆಸ್ಟಿಂಗ್: ಮಾದರಿ ಸಂಗ್ರಹ, ಟೆಸ್ಟಿಂಗ್ ಮತ್ತು ಲ್ಯಾಬ್ ಬಳಕೆಯ ಉಸ್ತುವಾರಿವನ್ನು ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ನಿರ್ವಹಿಸಲಿದ್ದಾರೆ.

ಕಂಟೇನ್​ಮೆಂಟ್: ಹೋಮ್ ಐಸೊಲೇಷನ್ ಮತ್ತು ಕಂಟೇನ್​ಮೆಂಟ್ ಜೋನ್ ನಿರ್ವಹಣೆಯ ಹೊಣೆಗಾರಿಕೆಯನ್ನು ಐಎಎಸ್ ಅಧಿಕಾರಿ ಪಂಕಜ್ ಕುಮಾರ್ ಪಾಂಡೆ ಅವರಿಗೆ ನೀಡಲಾಗಿದೆ.

ಲಿಕ್ವಿಡ್ ಆಕ್ಸಿಜನ್: ರಾಜ್ಯಮಟ್ಟದಲ್ಲಿ ಲಿಕ್ವಿಡ್ ಆಕ್ಸಿಜನ್ ಟ್ಯಾಂಕರ್​ಗಳ ಚಲನೆಯ ಮೇಲ್ವಿಚಾರಣೆಯ ಹೊಣೆಯನ್ನು ಐಎಎಸ್ ಅಧಿಕಾರಿಗಳಾದ ಪ್ರತಾಪ್ ರೆಡ್ಡಿ ಮತ್ತು ಡಾ.ಎನ್.ಶಿವಶಂಕರ್ ಅವರಿಗೆ ವಹಿಸಲಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ಪವನ್​ ಕುಮಾರ್ ಮಾಲಪಾಟಿ ಅವರು ನೋಡಿಕೊಳ್ಳುತ್ತಾರೆ.

ರಾಜ್ಯಮಟ್ಟದ ಸಹಾಯವಾಣಿ 1912 ಮೂಲಕ ಟೆಲಿಕೌನ್ಸಲಿಂಗ್​ ಆಪ್ತಸಮಾಲೋಚನಾ ವ್ಯವಸ್ಥೆಯ ಮೇಲ್ವಿಚಾರಣೆಯನ್ನು ವಿಪಿನ್ ಸಿಂಗ್ ಮತ್ತು ಬಿಸ್ವಜಿತ್ ಮಿಶ್ರಾ ನಿರ್ವಹಿಸಲಿದ್ದಾರೆ. ಸರ್ಕಾರೇತರ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುವ ಜವಾಬ್ದಾರಿಯನ್ನು ಉಮಾ ಮಹದೇವನ್ ಹಾಗೂ ಅಂತರರಾಷ್ಟ್ರೀಯ ಸಹಕಾರ ಪಡೆಯುವ ಜವಾಬ್ದಾರಿಯನ್ನು ಡಾ.ಪೊನ್ನುರಾಜ್ ಅವರಿಗೆ ನೀಡಲಾಗಿದೆ. ಸೋಂಕಿನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಸೌಲಭ್ಯ ಒದಗಿಸುವ ಹೊಣೆಗಾರಿಕೆಯನ್ನು ಪಲ್ಲವಿ ಆಕೃತಿ ಅವರಿಗೆ ನೀಡಲಾಗಿದೆ. ಕೊವಿಡ್ ಸಂಬಂಧಿತ ಪರಿಕರಗಳನ್ನು ಆಮದು ಮಾಡಿಕೊಳ್ಳುವ ನೋಡೆಲ್ ಪ್ರಾಧಿಕಾರದ ಕಾರ್ಯನಿರ್ವಹಣೆಯನ್ನು ಉಮಾ ಮಹದೇವನ್ ಹಾಗೂ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ನೋಡಿಕೊಳ್ಳುತ್ತಾರೆ.

ಇದನ್ನೂ ಓದಿ: ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಗೆ ಕೊರೊನಾ ಸೋಂಕು ದೃಢ ಇದನ್ನೂ ಓದಿ: Karnataka Covid19 Update: ಕರ್ನಾಟಕದಲ್ಲಿ ಹೊಸದಾಗಿ 2,479 ಜನರಿಗೆ ಕೊರೊನಾ ದೃಢ; 4 ಮಂದಿ ಸಾವು

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು