AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

3ನೇ ಅಲೆ ನಿರ್ವಹಣೆಗೆ ತಂಡ ರೂಪಿಸಿದ ಕರ್ನಾಟಕ ಸರ್ಕಾರ: ಕೊವಿಡ್ ವಾರ್​ರೂಂಗೆ ಮುನಿಶ್ ಮೌದ್ಗಿಲ್ ನೇತೃತ್ವ

ಕರ್ನಾಟಕ ಸರ್ಕಾರವು ಕೊವಿಡ್ ಕಣ್ಗಾವಲು ಮೇಲುಸ್ತುವಾರಿ, ನಿರ್ವಹಣೆ ಹಾಗೂ ಸಮನ್ವಯಕ್ಕಾಗಿ ವಿಪತ್ತು ನಿರ್ವಹಣಾ ಕಾಯ್ದೆಯಡಿ ಅಧಿಕಾರಿಗಳ ಹಲವು ತಂಡಗಳನ್ನು ರಚಿಸಿದೆ

3ನೇ ಅಲೆ ನಿರ್ವಹಣೆಗೆ ತಂಡ ರೂಪಿಸಿದ ಕರ್ನಾಟಕ ಸರ್ಕಾರ: ಕೊವಿಡ್ ವಾರ್​ರೂಂಗೆ ಮುನಿಶ್ ಮೌದ್ಗಿಲ್ ನೇತೃತ್ವ
ಪ್ರಾತಿನಿಧಿಕ ಚಿತ್ರ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Jan 04, 2022 | 9:54 PM

Share

ಬೆಂಗಳೂರು: ಕರ್ನಾಟಕ ಸೇರಿದಂತೆ ಇಡೀ ದೇಶದಲ್ಲಿ ಕೊರೊನಾ ಸೋಂಕು (Coronavirus) ಮತ್ತೆ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೊವಿಡ್ ಸೋಂಕಿನ ನಿಯಂತ್ರಣ, ನಿಗಾವಣೆ ಹಾಗೂ ಜಾಗೃತಿಗೆ ಸಂಬಂಧಿಸಿದಂತೆ ಹಲವು ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರವು ಹೊರಡಿಸಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯ (Covid Guidelines) ಅನ್ವಯ ರಾಜ್ಯ ಸರ್ಕಾರವು ಕೊವಿಡ್ ಕಣ್ಗಾವಲು ಮೇಲುಸ್ತುವಾರಿ, ನಿರ್ವಹಣೆ ಹಾಗೂ ಸಮನ್ವಯಕ್ಕಾಗಿ ವಿಪತ್ತು ನಿರ್ವಹಣಾ ಕಾಯ್ದೆಯಡಿ ಅಧಿಕಾರಿಗಳ ಹಲವು ತಂಡಗಳನ್ನು ರಚಿಸಿದೆ. ಈ ತಂಡಗಳ ವಿವರ ಇಂತಿದೆ.

ಕೊವಿಡ್ ವಾರ್​ರೂಂ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸೇರಿದಂತೆ ಇಡೀ ರಾಜ್ಯವನ್ನು ಒಳಗೊಂಡ ಕಾರ್ಯವ್ಯಾಪ್ತಿ ಇರುವ ಕೊವಿಡ್ ವಾರ್​ರೂಂಗೆ ಐಎಎಸ್ ಅಧಿಕಾರಿ ಮುನಿಶ್ ಮೌದ್ಗಿಲ್ ಅವರ ನೇತೃತ್ವ ಇರಲಿದೆ.

ಸೋಂಕಿತರಿಗೆ ಆಸ್ಪತ್ರೆ ಸೌಕರ್ಯ: ರಾಜ್ಯದಲ್ಲಿ ವರದಿಯಾಗುವ ಕೋವಿಡ್ ಸೋಂಕು ಲಕ್ಷಣ ಇರುವವರನ್ನು (ILI ಮತ್ತು SARI) ಆಂಬುಲೆನ್ಸ್ ಮತ್ತು ಆಸ್ಪತ್ರೆಗಳ ಮೂಲಕ ಅಸ್ಪತ್ರೆಗಳಿಗೆ ದಾಖಲಿಸುವ ಹೊಣೆಗಾರಿಕೆಯನ್ನು ಐಎಎಸ್ ಅಧಿಕಾರಿ ಆರ್.ವಿನೂತ್ ಪ್ರಿಯಾ ಅವರಿಗೆ ವಹಿಸಲಾಗಿದೆ.

ಟೆಸ್ಟಿಂಗ್: ಮಾದರಿ ಸಂಗ್ರಹ, ಟೆಸ್ಟಿಂಗ್ ಮತ್ತು ಲ್ಯಾಬ್ ಬಳಕೆಯ ಉಸ್ತುವಾರಿವನ್ನು ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ನಿರ್ವಹಿಸಲಿದ್ದಾರೆ.

ಕಂಟೇನ್​ಮೆಂಟ್: ಹೋಮ್ ಐಸೊಲೇಷನ್ ಮತ್ತು ಕಂಟೇನ್​ಮೆಂಟ್ ಜೋನ್ ನಿರ್ವಹಣೆಯ ಹೊಣೆಗಾರಿಕೆಯನ್ನು ಐಎಎಸ್ ಅಧಿಕಾರಿ ಪಂಕಜ್ ಕುಮಾರ್ ಪಾಂಡೆ ಅವರಿಗೆ ನೀಡಲಾಗಿದೆ.

ಲಿಕ್ವಿಡ್ ಆಕ್ಸಿಜನ್: ರಾಜ್ಯಮಟ್ಟದಲ್ಲಿ ಲಿಕ್ವಿಡ್ ಆಕ್ಸಿಜನ್ ಟ್ಯಾಂಕರ್​ಗಳ ಚಲನೆಯ ಮೇಲ್ವಿಚಾರಣೆಯ ಹೊಣೆಯನ್ನು ಐಎಎಸ್ ಅಧಿಕಾರಿಗಳಾದ ಪ್ರತಾಪ್ ರೆಡ್ಡಿ ಮತ್ತು ಡಾ.ಎನ್.ಶಿವಶಂಕರ್ ಅವರಿಗೆ ವಹಿಸಲಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ಪವನ್​ ಕುಮಾರ್ ಮಾಲಪಾಟಿ ಅವರು ನೋಡಿಕೊಳ್ಳುತ್ತಾರೆ.

ರಾಜ್ಯಮಟ್ಟದ ಸಹಾಯವಾಣಿ 1912 ಮೂಲಕ ಟೆಲಿಕೌನ್ಸಲಿಂಗ್​ ಆಪ್ತಸಮಾಲೋಚನಾ ವ್ಯವಸ್ಥೆಯ ಮೇಲ್ವಿಚಾರಣೆಯನ್ನು ವಿಪಿನ್ ಸಿಂಗ್ ಮತ್ತು ಬಿಸ್ವಜಿತ್ ಮಿಶ್ರಾ ನಿರ್ವಹಿಸಲಿದ್ದಾರೆ. ಸರ್ಕಾರೇತರ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುವ ಜವಾಬ್ದಾರಿಯನ್ನು ಉಮಾ ಮಹದೇವನ್ ಹಾಗೂ ಅಂತರರಾಷ್ಟ್ರೀಯ ಸಹಕಾರ ಪಡೆಯುವ ಜವಾಬ್ದಾರಿಯನ್ನು ಡಾ.ಪೊನ್ನುರಾಜ್ ಅವರಿಗೆ ನೀಡಲಾಗಿದೆ. ಸೋಂಕಿನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಸೌಲಭ್ಯ ಒದಗಿಸುವ ಹೊಣೆಗಾರಿಕೆಯನ್ನು ಪಲ್ಲವಿ ಆಕೃತಿ ಅವರಿಗೆ ನೀಡಲಾಗಿದೆ. ಕೊವಿಡ್ ಸಂಬಂಧಿತ ಪರಿಕರಗಳನ್ನು ಆಮದು ಮಾಡಿಕೊಳ್ಳುವ ನೋಡೆಲ್ ಪ್ರಾಧಿಕಾರದ ಕಾರ್ಯನಿರ್ವಹಣೆಯನ್ನು ಉಮಾ ಮಹದೇವನ್ ಹಾಗೂ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ನೋಡಿಕೊಳ್ಳುತ್ತಾರೆ.

ಇದನ್ನೂ ಓದಿ: ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಗೆ ಕೊರೊನಾ ಸೋಂಕು ದೃಢ ಇದನ್ನೂ ಓದಿ: Karnataka Covid19 Update: ಕರ್ನಾಟಕದಲ್ಲಿ ಹೊಸದಾಗಿ 2,479 ಜನರಿಗೆ ಕೊರೊನಾ ದೃಢ; 4 ಮಂದಿ ಸಾವು

ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​