AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೀನು ಕೃಷಿಗೆ ಕೈ ಹಾಕಿ ಯಶಸ್ವಿಯಾದ ಕೊಡಗು ರೈತ; ಗ್ರಾಹಕರ ಎದುರೇ ಹಿಡಿದು ತಾಜಾ ಮೀನು ಮಾರಾಟ

ತೇಜಸ್ ನಾಣಯ್ಯ, ರಾಷ್ಟ್ರಮಟ್ಟದ ಕೃಷಿ ಪಂಡಿತ ಪುರಸ್ಕೃತರು. ಸಾಮಾನ್ಯವಾಗಿ ಕೊಡಗು ಜಿಲ್ಲೆಯ ವಾತಾವರಣ ಮೀನು ಕೃಷಿಗೆ ಅಷ್ಟೊಂದು ಪೂರಕವಾಗಿಲ್ಲ. ಹಾಗಾಗಿ ಜಿಲ್ಲೆಯಲ್ಲಿ ಮೀನು ಕೃಷಿ ಅಷ್ಟಕಷ್ಟೆ. ಆದರೆ ತೇಜಸ್ ನಾಣಯ್ಯ ಮಾತ್ರ ಈ ಕೃಷಿಯನ್ನು ಸವಾಲಾಗಿ ಸ್ವೀಕರಿಸಿ ಇಂದು ಸಾವಿರಾರು ಮೀನುಗಳನ್ನು ಸಾಕಿದ್ದಾರೆ.

ಮೀನು ಕೃಷಿಗೆ ಕೈ ಹಾಕಿ ಯಶಸ್ವಿಯಾದ ಕೊಡಗು ರೈತ; ಗ್ರಾಹಕರ ಎದುರೇ ಹಿಡಿದು ತಾಜಾ ಮೀನು ಮಾರಾಟ
ತಾಜಾ ಮೀನು, ಮೀನು ಸಾಕಿದ ಕೆರೆ
Follow us
TV9 Web
| Updated By: sandhya thejappa

Updated on: Jun 03, 2021 | 2:08 PM

ಕೊಡಗು: ಕೊಡಗಿನ ಕಾಫಿ ಉದ್ಯಮ ಕಳೆದ ಹಲವು ವರ್ಷಗಳಿಂದ ಕುಸಿತ ಕಾಣುತ್ತಿದೆ. ಇದರ ಜೊತೆಗೆ ಪ್ರಾಕೃತಿಕ ವಿಕೋಪವೂ ಇಲ್ಲಿನ ಜನರನ್ನು ಕಂಗೆಡಿಸಿದೆ. ಆದರೆ ಜಿಲ್ಲೆಯ ರೈತರೊಬ್ಬರು ಕೇವಲ ಕಾಫಿ, ಕಾಳು ಮೆಣಸನ್ನು ಮಾತ್ರ ನೆಚ್ಚಿಕೊಳ್ಳದೆ ಪರ್ಯಾಯ ಕೃಷಿಯೊಂದನ್ನು ಮಾಡಿ ಯಶಸ್ವಿ ಕೃಷಿಕರಾಗಿದ್ದಾರೆ. ತೇಜಸ್ ನಾಣಯ್ಯ ಎಂಬ ರೈತ ವೃತ್ತಿಪರ ವ್ಯಾಪಾರಿಯಲ್ಲ. ಆದರೆ ವೃತ್ತಿಪರ ಮೀನು ಕೃಷಿಕರು. ಕಳೆದ ಲಾಕ್​​ಡೌನ್​ ಅವಧಿಯಲ್ಲಿ ಮೀನು ಕೃಷಿಗೆ ಕೈ ಹಾಕಿ ಯಶಸ್ವಿಯಾಗಿ ದಿನಕ್ಕೆ ನೂರಾರು ಕೆ.ಜಿ ಮೀನು ಮಾರಾಟ ಮಾಡಿ ಲಕ್ಷಾಂತರ ರೂ. ಆದಾಯಗಳಿಸುತ್ತಿದ್ದಾರೆ.

ಲಕ್ಷಾಂತರ ರೂಪಾಯಿ ಆದಾಯಗಳಿಸುತ್ತಿರುವ ತೇಜಸ್ ನಾಣಯ್ಯ, ರಾಷ್ಟ್ರಮಟ್ಟದ ಕೃಷಿ ಪಂಡಿತ ಪುರಸ್ಕೃತರು. ಸಾಮಾನ್ಯವಾಗಿ ಕೊಡಗು ಜಿಲ್ಲೆಯ ವಾತಾವರಣ ಮೀನು ಕೃಷಿಗೆ ಅಷ್ಟೊಂದು ಪೂರಕವಾಗಿಲ್ಲ. ಹಾಗಾಗಿ ಜಿಲ್ಲೆಯಲ್ಲಿ ಮೀನು ಕೃಷಿ ಅಷ್ಟಕಷ್ಟೆ. ಆದರೆ ತೇಜಸ್ ನಾಣಯ್ಯ ಮಾತ್ರ ಈ ಕೃಷಿಯನ್ನು ಸವಾಲಾಗಿ ಸ್ವೀಕರಿಸಿ ಇಂದು ಸಾವಿರಾರು ಮೀನುಗಳನ್ನು ಸಾಕಿದ್ದಾರೆ. ಲಾಕ್​ಡೌನ್​ ರಿಲೀಫ್ ಅವಧಿಯಲ್ಲಿ ಗ್ರಾಹಕರ ಎದುರೇ ಮೀನು ಹಿಡಿದು ಜೀವಂತ ತಾಜಾ ಮೀನು ಮಾರಾಟ ಮಾಡಿ ಭರ್ಜರಿ ಲಾಭ ಗಳಿಸುತ್ತಿದ್ದಾರೆ.

ಲಾಕ್​ಡೌನ್​ ಅವಧಿಯಲ್ಲಿ ನಗರಗಳಿಗೆ ತೆರಳಿ ಮೀನು ಖರೀದಿಸುವುದು ಕಷ್ಟವೇ. ಅಲ್ಲದೆ ಫ್ರೆಶ್ ಮೀನು ಕೂಡ ಸಿಗುವುದಿಲ್ಲ. ಹಾಗಾಗಿ ತಮ್ಮೂರಲ್ಲೇ ತಾಜಾ ಮೀನು ಸಿಗುತ್ತಿರುವುದು ಸ್ಥಳೀಯರಿಗೂ ಅನುಕೂಲ ಕಲ್ಪಿಸಿದೆ. ತಾಜಾ ಕೆರೆ ಮೀನು ಆರೋಗ್ಯಕ್ಕೂ ಒಳ್ಳೆಯದ್ದು ಮತ್ತು ರುಚಿಕರವೂ ಹೌದು. ಸ್ಥಳೀಯರು ಮಾತ್ರವಲ್ಲ ಮುಖ್ಯ ರಸ್ತೆಯಲ್ಲಿ ತೆರಳುವವರೂ ಕೂಡ ಇಲ್ಲಿಗೆ ಆಗಮಿಸಿ ಒಂದು ಕೆ.ಜಿಯ ಜಾಗದಲ್ಲಿ ಎರಡು ಕೆ.ಜಿ ಖರೀದಿಸಿ ಕೊಂಡೊಯ್ಯುತ್ತಾರೆ.

ಕೃಷಿ ಪಂಡಿತ ತೇಜಸ್ ಸುಮಾರು ಐದು ಏಕರೆ ಪ್ರದೇಶದಲ್ಲಿ ಏಳು ಕೆರೆಗಳನ್ನು ಹೊಂದಿದ್ದಾರೆ. ಕಳೆದೊಂದು ವರ್ಷದಿಂದ ಮೀನು ಕೃಷಿಯಲ್ಲಿ ಯಸ್ವಿಯಾಗಿದ್ದಾರೆ. ಕಾಫಿ ಬೆಲೆ ಕುಸಿತ, ಪ್ರಾಕೃತಿಕ ವಿಕೋಪದಿಂದ ತತ್ತರಿಸಿರುವ ಕೊಡಗಿನ ಜನರಿಗೆ ಮೀನು ಕೃಷಿ ಅತ್ಯುತ್ತಮ ಆದಾಯದ ಮಾರ್ಗವೂ ಹೌದು ಎಂದು ತೇಜಸ್ ತಿಳಿಸಿದರು.

ಇದನ್ನೂ ಓದಿ

ಬಳ್ಳಾರಿ: ದುಪ್ಪಟ್ಟು ದರಕ್ಕೆ ಮೆಣಸಿನಕಾಯಿ ಬೀಜ ವ್ಯಾಪಾರ; ರೈತರು ಕಂಗಾಲು

ಲಾಕ್​ಡೌನ್​ ಎಫೆಕ್ಟ್: ಐದು ಎಕರೆ ಹಸಿ ಮೆಣಸಿನಕಾಯಿ ಬೆಳೆಯನ್ನು ಹಾಳು ಮಾಡಿದ ಹಾವೇರಿ ರೈತ

(Kodagu farmer has succeeded in fish farming and getting more income)

ಯುದ್ಧ ಬೇಡ ಅಂತ ನಾನು ಹೇಳಿದ್ದಕ್ಕೆ ದೊಡ್ಡ ಯುದ್ಧವೇ ಆಗಿತ್ತು: ಸಿದ್ದರಾಮಯ್ಯ
ಯುದ್ಧ ಬೇಡ ಅಂತ ನಾನು ಹೇಳಿದ್ದಕ್ಕೆ ದೊಡ್ಡ ಯುದ್ಧವೇ ಆಗಿತ್ತು: ಸಿದ್ದರಾಮಯ್ಯ
ಒಂದನ್ನು ಜೈಸಲಮ್ಮೇರ್​ನಲ್ಲಿ ಪುಡಿಗಟ್ಟಿದರೆ ಮತ್ತೊಂದನ್ನು ಸಿರ್ಸಾದಲ್ಲಿ
ಒಂದನ್ನು ಜೈಸಲಮ್ಮೇರ್​ನಲ್ಲಿ ಪುಡಿಗಟ್ಟಿದರೆ ಮತ್ತೊಂದನ್ನು ಸಿರ್ಸಾದಲ್ಲಿ
ಎಲ್ಲ ಸರಿಯಾದ ಬಳಿಕ ಊರಿಗೆ ವಾಪಸ್ಸು ಬರುತ್ತೇವೆ ಎನ್ನುತ್ತಿರುವ ಜನ
ಎಲ್ಲ ಸರಿಯಾದ ಬಳಿಕ ಊರಿಗೆ ವಾಪಸ್ಸು ಬರುತ್ತೇವೆ ಎನ್ನುತ್ತಿರುವ ಜನ
Live: ರಕ್ಷಣಾ ಇಲಾಖೆಯಿಂದ ಸುದ್ದಿಗೋಷ್ಠಿ
Live: ರಕ್ಷಣಾ ಇಲಾಖೆಯಿಂದ ಸುದ್ದಿಗೋಷ್ಠಿ
ನೋಂದಣಿಗೆ ಬಂದವರಲ್ಲಿ ಯುವತಿಯರು ಮತ್ತು ವಯಸ್ಕರೂ ಶಾಮೀಲು!
ನೋಂದಣಿಗೆ ಬಂದವರಲ್ಲಿ ಯುವತಿಯರು ಮತ್ತು ವಯಸ್ಕರೂ ಶಾಮೀಲು!
ಪ್ರಧಾನಿ ಮೋದಿ ತೆಗೆದುಕೊಳ್ಳುತ್ತಿರುವ ಕ್ರಮಗಳ ಜೊತೆಗಿದ್ದೇವೆ: ಮುಸಲ್ಮಾನರು
ಪ್ರಧಾನಿ ಮೋದಿ ತೆಗೆದುಕೊಳ್ಳುತ್ತಿರುವ ಕ್ರಮಗಳ ಜೊತೆಗಿದ್ದೇವೆ: ಮುಸಲ್ಮಾನರು
ದಿನೇದಿನೆ ಅತೀವ ಹಾನಿಗೊಳಗಾಗುತ್ತಿದ್ದರೂ ಬುದ್ಧಿ ಕಲಿಯದ ಪಾಕಿಸ್ತಾನ
ದಿನೇದಿನೆ ಅತೀವ ಹಾನಿಗೊಳಗಾಗುತ್ತಿದ್ದರೂ ಬುದ್ಧಿ ಕಲಿಯದ ಪಾಕಿಸ್ತಾನ
ಕಾಶ್ಮೀರ ಗಡಿಯಲ್ಲಿ ಉಗ್ರ ನೆಲೆಗಳು ಉಡೀಸ್: ಸೇನೆಯ ಅಧಿಕೃತ ವಿಡಿಯೋ ಇಲ್ಲಿದೆ
ಕಾಶ್ಮೀರ ಗಡಿಯಲ್ಲಿ ಉಗ್ರ ನೆಲೆಗಳು ಉಡೀಸ್: ಸೇನೆಯ ಅಧಿಕೃತ ವಿಡಿಯೋ ಇಲ್ಲಿದೆ
ಕೇಂದ್ರ ಗೃಹ ಇಲಾಖೆಯಿಂದ ಕರ್ನಾಟಕಕ್ಕೂ ಎಚ್ಚರಿಕೆ ಸೂಚನೆ ಬಂದಿದೆ: ಡಿಕೆಶಿ
ಕೇಂದ್ರ ಗೃಹ ಇಲಾಖೆಯಿಂದ ಕರ್ನಾಟಕಕ್ಕೂ ಎಚ್ಚರಿಕೆ ಸೂಚನೆ ಬಂದಿದೆ: ಡಿಕೆಶಿ
ಇವತ್ತು ಸಾಯಂಕಾಲ ಸಿಎಂ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ: ಪರಮೇಶ್ವರ್
ಇವತ್ತು ಸಾಯಂಕಾಲ ಸಿಎಂ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ: ಪರಮೇಶ್ವರ್