AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರಣ್ಯದಲ್ಲಿ ಅಂಚೆ ಇಲಾಖೆಯ ಸಾವಿರಾರು ದಾಖಲೆ ಪತ್ರಗಳು ದಿಢೀರ್ ಪತ್ತೆ!

ಮಡಿಕೇರಿ: ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ ಅರಣ್ಯದಲ್ಲಿ ಅಂಚೆ ಇಲಾಖೆಯ ಸಾವಿರಾರು ದಾಖಲೆ ಪತ್ರಗಳು ದಿಢೀರನೇ ಪತ್ತೆಯಾಗಿವೆ. ಆಧಾರ್ ಕಾರ್ಡ್, ಬ್ಯಾಂಕ್​ ಚೆಕ್ ಬುಕ್, ಶಾಲಾ ದಾಖಲೆ, ವಿದ್ಯಾರ್ಥಿ ವೇತನದ​ ಪತ್ರ, ಎಲ್​ಐಸಿ ದಾಖಲೆಗಳು ಪತ್ತೆಯಾಗಿವೆ. 2017ರಿಂದ ವಿತರಣೆಯಾಗದ ದಾಖಲೆಗಳು ಕಾಡಿನಲ್ಲಿ ಪತ್ತೆಯಾಗಿವೆ. ಸೂರ್ಲಬ್ಬಿ ಗ್ರಾಮದ ಪೋಸ್ಟ್ ಮ್ಯಾನ್​ ಮಹೇಶ್ ಈ ಅನಾಹುತಕ್ಕೆ ಕಾರಣ ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ಆತನ ವಿರುದ್ಧ ಗ್ರಾಮಸ್ಥರು ಬೇಜವಾಬ್ದಾರಿತನದ ಆರೋಪ ಹೊರಿಸಿದ್ದಾರೆ. ಕೊಡಗು ಸೇವಾ ಕೇಂದ್ರದ ಸದಸ್ಯರಿಗೆ ಈ ದಾಖಲೆಗಳು ಸಿಕ್ಕಿವೆ. […]

ಅರಣ್ಯದಲ್ಲಿ ಅಂಚೆ ಇಲಾಖೆಯ ಸಾವಿರಾರು ದಾಖಲೆ ಪತ್ರಗಳು ದಿಢೀರ್ ಪತ್ತೆ!
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Apr 25, 2020 | 1:18 PM

Share

ಮಡಿಕೇರಿ: ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ ಅರಣ್ಯದಲ್ಲಿ ಅಂಚೆ ಇಲಾಖೆಯ ಸಾವಿರಾರು ದಾಖಲೆ ಪತ್ರಗಳು ದಿಢೀರನೇ ಪತ್ತೆಯಾಗಿವೆ. ಆಧಾರ್ ಕಾರ್ಡ್, ಬ್ಯಾಂಕ್​ ಚೆಕ್ ಬುಕ್, ಶಾಲಾ ದಾಖಲೆ, ವಿದ್ಯಾರ್ಥಿ ವೇತನದ​ ಪತ್ರ, ಎಲ್​ಐಸಿ ದಾಖಲೆಗಳು ಪತ್ತೆಯಾಗಿವೆ. 2017ರಿಂದ ವಿತರಣೆಯಾಗದ ದಾಖಲೆಗಳು ಕಾಡಿನಲ್ಲಿ ಪತ್ತೆಯಾಗಿವೆ.

ಸೂರ್ಲಬ್ಬಿ ಗ್ರಾಮದ ಪೋಸ್ಟ್ ಮ್ಯಾನ್​ ಮಹೇಶ್ ಈ ಅನಾಹುತಕ್ಕೆ ಕಾರಣ ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ಆತನ ವಿರುದ್ಧ ಗ್ರಾಮಸ್ಥರು ಬೇಜವಾಬ್ದಾರಿತನದ ಆರೋಪ ಹೊರಿಸಿದ್ದಾರೆ.

ಕೊಡಗು ಸೇವಾ ಕೇಂದ್ರದ ಸದಸ್ಯರಿಗೆ ಈ ದಾಖಲೆಗಳು ಸಿಕ್ಕಿವೆ. ಕೊಡಗು ಡಿಸಿ, ಎಸ್​ಪಿಗೆ ಸೇವಾ ಕೇಂದ್ರದಿಂದ ದೂರು ಸಲ್ಲಿಕೆಯಾಗಿದೆ. ಪೋಸ್ಟ್ ಮ್ಯಾನ್​ ಮಹೇಶ್​ ವಿರುದ್ಧ ಸೋಮವಾರಪೇಟೆ ಠಾಣೆಯಲ್ಲಿ ಕೇಸ್​ ದಾಖಲು ಮಾಡಲಾಗಿದೆ.

Published On - 1:12 pm, Sat, 25 April 20

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು