ಮಂಡೀರ ಕಾರ್ಯಪ್ಪ ಕಳೆದ ಶನಿವಾರ ಮಾದಾಪುರದ ಅಂಗಡಿಯಿಂದ 12 ಮೊಟ್ಟೆಗಳನ್ನು ಖರೀದಿಸಿ ಮನೆಗೆ ತಂದಿದ್ದಾರೆ. ಬುಧವಾರ (ಸೆಪ್ಟೆಂಬರ್ 27) ಈ ಮೊಟ್ಟೆಗಳನ್ನು ಬೇಯಿಸಿದ್ದು, ತಿನ್ನುವಾಗ ಬಾಯಲ್ಲಿ ಏನೋ ಸಿಕ್ಕಿದ ಹಾಗೆ ಆಗಿದೆ. ತೆಗೆದು ನೋಟಿದಾಗ ಕಬ್ಬಿಣದ ಚೂರು ಪತ್ತೆಯಾಗಿದೆ. ಬಳಿಕ ಗಾಬರಿಗೊಂಡ ಮಂಡೀರ ಕಾರ್ಯಪ್ಪ ಬೆಂಗಳೂರಿನಲ್ಲಿ ವಾಸವಾಗಿರುವ ತಮ್ಮ ಮಗಳಿಗೆ ವಿಷಯ ತಿಳಿಸಿದ್ದು, ಮೊಟ್ಟೆಯನ್ನು ಹಾಗೆ ತೆಗೆದಿಟ್ಟಿದ್ದಾರೆ.
ಇಷ್ಟೇ ಅಲ್ಲದೇ ಮಂಡೀರ ಕಾರ್ಯಪ್ಪ ಸಂಬಂಧಿ ಕೂಡ ಈ ಬಗ್ಗೆ ಪರಿಶೀಲನೆ ನಡೆಸಿದ್ದು, ಮತ್ತೆ ಗುರುವಾರ ಮೊಟ್ಟೆ ಬೇಯಿಸಿದ್ದಾರೆ. ಈ ಮೊಟ್ಟೆಗಳಲ್ಲಿ ಮೊದಲಿಗಿಂತ ದೊಡ್ಡ ಕಬ್ಬಿಣದ ಚೂರುಗಳು ಪತ್ತೆಯಾಗಿವೆ. ಈಗಾಗಲೇ ಆಹಾರ ಇಲಾಖೆಗೆ ದೂರು ನೀಡಿದ್ದು, ಇಲಾಖೆಯವರು ಈ ಬಗ್ಗೆ ಪರಿಶೀಲನೆ ನಡೆಸುವ ಭರವಸೆ ನೀಡಿದ್ದಾರೆ.
ಇದನ್ನೂ ಓದಿ:
ಕೊಡಗು: ಕೊರೊನಾ ವಾರಿಯರ್ಸ್ಗೆ ಊಟ ಪೂರೈಸಿದ್ದ ಹೋಟೆಲ್ ಮಹಿಳೆಗೆ ಕಿರುಕುಳ; ಅಧಿಕಾರಿಗಳ ವಿರುದ್ಧ ಆರೋಪ
ಕಾರ್ಮಿಕರನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ಆರೋಪಿ ಸೆರೆ; ಠಾಣೆಯಲ್ಲಿ ಪೊಲೀಸರು ಹೊಡೆಯುತ್ತಿರುವ ವಿಡಿಯೋ ವೈರಲ್