AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಣ್ಣವ್ರ ಸನಾದಿ ಅಪ್ಪಣ್ಣ ಸಿನಿಮಾದ ಪ್ರೇರಣೆಗೊಂಡು ಮೂಗಿನಲ್ಲೇ ಶಹನಾಯ್​ ನುಡಿಸುವ ಯುವ ಕಲಾವಿದ

ಡಾ.ರಾಜ್​ ಕುಮಾರ್ ಅವರ ಸನಾದಿ ಅಪ್ಪಣ್ಣ ಸಿನಿಮಾದಿಂದ ಪ್ರೇರೇಪಣೆ ಪಡೆದುಕೊಂಡಿದ್ದ ಯುವಕ, ಶಹನಾಯ್​ ಕಲಿತನು. ನಂತರ ನನ್ನ ಮೂಗನ್ನೇ ಯಾಕೆ ಶಹನಾಯ್ ಮಾಡಿಕೊಳ್ಳಬಾರದೆಂದು ಯೋಚಿಸಿ ಅಭ್ಯಾಸ ಮಾಡಿ ಇದೀಗ ರಾಜ್ಯಾದ್ಯಂತ ಸುದ್ದು ಮಾಡುತ್ತಿದ್ದಾನೆ.

ಅಣ್ಣವ್ರ ಸನಾದಿ ಅಪ್ಪಣ್ಣ ಸಿನಿಮಾದ ಪ್ರೇರಣೆಗೊಂಡು ಮೂಗಿನಲ್ಲೇ ಶಹನಾಯ್​ ನುಡಿಸುವ ಯುವ ಕಲಾವಿದ
ಮೂಗಿನಲ್ಲೇ ಶಹನಾಯ್​ ನುಡಿಸುವ ಕಲಾವಿದ ಪ್ರೇಮ್ ಕುಮಾರ್
TV9 Web
| Edited By: Rakesh Nayak Manchi|

Updated on: Nov 05, 2022 | 2:23 PM

Share

ಕೋಲಾರ: ತನ್ನ ಮೂಗಿನಲ್ಲೇ ಶಹನಾಯ್​ ರೀತಿಯಲ್ಲಿ ಹಾಡುಗಳನ್ನು ನುಡಿಸುತ್ತಿರುವ ಯುವ ಕಲಾವಿದ ಪ್ರೇಮ್ ಕುಮಾರ್, ಕಾಂತಾರಾ ಸಿನಿಮಾ, ಪುನಿತ್​ ರಾಜ್​ಕುಮಾರ್ ಅಭಿನಯದ​ ಗೊಂಬೆ ಹೇಳುತೈತೆ, ಶಬರಿಮಲೆ ಸ್ವಾಮಿ ಅಯ್ಯಪ್ಪ, ಹಾಡುಗಳನ್ನು ತನ್ನ ಮೂಗಿನಲ್ಲೇ ನುಡಿಸುತ್ತಾರೆ. ಇನ್ನೊಂದುಕಡೆ ಪ್ರಖ್ಯಾತ ಕಲಾವಿದರ, ಸಾಧಕರ ಧ್ವನಿಯನ್ನು ಮಿಮಿಕ್ರಿ ಮಾಡುತ್ತಿದ್ದಾರೆ. ಈ ಸಾಧನೆಯನ್ನು ಮಾಡುತ್ತಿರುವ ಪ್ರೇಮ್ ಕುಮಾರ್ ಕೋಲಾರ ನಗರದ ಗಾಂಧಿನಗರದವನಾಗಿದ್ದಾರೆ. ಚಂದ್ರಶೇಖರ್ ಎಂಬುವರ ಮಗನಾಗಿರುವ ಇವರು, ಸದ್ಯ ವಿಭಿನ್ನ ಸಾಧನೆ ಮಾಡುವ ಮೂಲಕ ರಾಜ್ಯದಲ್ಲಿ ತಾನೊಬ್ಬ ವಿಭಿನ್ನ ಕಲಾವಿದನಾಗಿ ಗುರುತು ಮಾಡಿಕೊಳ್ಳುತ್ತಿದ್ದಾರೆ.

ಡಿಪ್ಲಮೋ ವ್ಯಾಸಾಂಗ ಮಾಡಿಕೊಂಡಿರುವ ಪ್ರೇಮ್​ ಕುಮಾರ್ ಹವಲು ವರ್ಷಗಳ ಹಿಂದೆ ಸನಾದಿ ಅಪ್ಪಣ್ಣ ಸಿನಿಮಾದಲ್ಲಿ ಡಾ.ರಾಜ್​ ಕುಮಾರ್​ ಅವರು ಶಹನಾಯ್​ ನುಡಿಸುವ ದೃಷ್ಯಗಳನ್ನು ನೋಡಿದ್ದರು. ಇದರಿಂದ ಪ್ರೇರೇಪಿತರಾದ ಪ್ರೇಮ್​ ಕುಮಾರ್​ ತಾನು ತನ್ನ ಮೂಗಿನಿಂದಲೇ ಆ ರೀತಿಯ ಸದ್ದು ಮಾಡಬೇಕು ಅಂತ ಯೋಚಿಸಿದರು. ಅದರಂತೆ ಅದಕ್ಕೆ ಬೇಕಾದ ಸಾಕಷ್ಟು ತಯಾರಿಗಳನ್ನು ಮಾಡಿಕೊಂಡು ಅಬ್ಯಾಸ ಮಾಡಿದ ಪ್ರೇಮ್​ ಕುಮಾರ್​ ಶಹನಾಯ್​ ರೀತಿಯಲ್ಲಿ ತನ್ನ ಮೂಗಿನಿಂದ ಸದ್ದು ಮಾಡೋದನ್ನ ಅಬ್ಯಾಸ ಮಾಡಿದ್ದಾರೆ. ನಿಧಾನವಾಗಿ ಮೂಗಿನಲ್ಲಿ ಹೆಹನಾಯ್ ನುಡಿಸುವುದನ್ನು ಕರಗತ ಮಾಡಿಕೊಂಡರು.

ನಂತರ ಸಿನಿಮಾ ಚಿತ್ರದ ಹಾಡುಗಳನ್ನು ಹಾಗೂ ದೇವರ ಭಕ್ತಿಗೀತೆಗಳನ್ನು ನುಡಿಸುವುದನ್ನ ಅಬ್ಯಾಸ ಮಾಡಿಕೊಂಡ ಪ್ರೇಮ್ ಇದೀಗ ಎಲ್ಲೆಡೆ ಗಮನ ಸೆಳೆಯುತ್ತಿದ್ದಾರೆ. ಪ್ರೇಮ್​ ಕುಮಾರ್​ ಕೇವಲ ಮೂಗಿನಲ್ಲಿ ಶಹನಾಯ್​ ರೀತಿಯಲ್ಲಿ ನುಡಿಸುವುದಷ್ಟೇ ಅಲ್ಲದೆ ರಾಜ್ಯದ ಶಂಕರ್​ನಾಗ್​, ರವಿಬೆಳೆಗೆರೆ, ಹೀಗೂಉಂಟೆ ನಾರಾಯಣಸ್ವಾಮಿ, ದಿನೇಶ್​ ಸೇರಿದಂತೆ ಹಲವು ಪ್ರಖ್ಯಾತ ನಟರ ವಾಯ್ಸ್​ಗಳನ್ನು ಕೂಡ ಮಿಮಿಕ್ರಿ ಮಾಡುತ್ತಾರೆ.

ಆರಂಭದಲ್ಲಿ ಪ್ರೇಮ್​ ಕುಮಾರ್​ಗೆ ತನ್ನ ಕಲೆಯನ್ನು ಪ್ರದರ್ಶನ ಮಾಡಲು ಯಾವುದೇ ವೇದಿಕೆಗಳು ಸಿಗುತ್ತಿರಲಿಲ್ಲ. ಆಗ ಸರ್ಕಾರಿ ಶಾಲೆಗಳು, ಖಾಸಗಿ ಶಾಲೆಗಳು, ಸಣ್ಣ ಪುಟ್ಟ ಕಾರ್ಯಕ್ರಮಗಳಲ್ಲಿ ತಾನಾಗಿ ತಾನೇ ಹೋಗಿ ಕಾರ್ಯಕ್ರಮಗಳನ್ನು ಕೊಟ್ಟು ಬರುತ್ತಿದ್ದರಂತೆ, ಅದಾದ ನಂತರದಲ್ಲಿ ಪ್ರೇಮ್​ ಕುಮಾರ್ ಅವರ ಕೆಲವೊಂದು ಕಲೆಯನ್ನು ಗುರುತಿಸಿದ ನಂತರದಲ್ಲಿ ವೇದಿಕೆಯಲ್ಲಿ ಕಾರ್ಯಕ್ರಮಗಳನ್ನು ಕೊಡಲು ಅವಕಾಶ ಸಿಕ್ಕಿದೆ.

ಕಳೆದ ಐದಾರು ವರ್ಷಗಳಿಂದ ತನ್ನ ಓದಿನ ಜೊತೆ ಜೊತೆಗೆ ಪ್ರೇಮ್​ ಕುಮಾರ್​ ವೇದಿಕೆಗಳಲ್ಲಿ ತನ್ನ ಮೂಗಿನಿಂದ ಶಹನಾಯ್​ ರೀತಿಯಲ್ಲಿ ನುಡಿಸುವುದು, ಮಿಮಿಕ್ರಿ ಮಾಡುವ ಮೂಲಕ ಎಲ್ಲೆಡೆ ಗಮನ ಸೆಳೆಯುತ್ತಿದ್ದಾರೆ. ಸದ್ಯ ಪ್ರೇಮ್​ ಕುಮಾರ್​ ಸರ್ಕಾರಿ ಕೆಲಸಕ್ಕೆ ಸೇರಬೇಕು ಎಂದು ಬಯಸುತ್ತಿದ್ದ ತಂದೆ ತಾಯಿ ಪೊಷಕರು ಕೂಡಾ ಪ್ರೇಮ್​ ಕುಮಾರ್​ ಆಸಕ್ತಿ ನೋಡಿ ಅವನೊಬ್ಬ ಕಲಾವಿದನಾಗಿ ಬೆಳೆಯಲಿ ಎಂದು ಅವರು ಕೂಡಾ ಪ್ರೋತ್ಸಾಹ ನೀಡುತ್ತಿದ್ದಾರೆ.

ಪ್ರೇಮ್​ ಕುಮಾರ್ ತನ್ನ ಮೂಗಿನ ಮೂಲಕ ನಿರಂತರವಾಗಿ ಶಹನಾಯ್​ ರೀತಿ ಹಾಡುಗಳನ್ನು ಹಾಡುವ ಕಲೆಯನ್ನು ಸದ್ಯ ಬುಕ್​ ಆಫ್​ ರೆಕಾರ್ಡ್​ನಲ್ಲೂ ಸೇರಿಸಬೇಕು ಎಂದು ಪ್ರಯತ್ನ ಮಾಡುತ್ತಿದ್ದಾರೆ. ಸದ್ಯ ಮಗನ ಈ ವಿಭಿನ್ನ ಸಾಧನೆಯನ್ನು ಕಂಡ ಪೊಷಕರು ಕೂಡಾ ಮಗನಿಗೆ ಸಹಕಾರ ನೀಡುವ ಜೊತೆಗೆ ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ.

ಒಟ್ಟಾರೆ ಒಬ್ಬೊಬ್ಬರಲ್ಲಿ ಒಂದೊಂದು ಕಲೆ ಇರುತ್ತದೆ. ಅದು ಅವಕಾಶಗಳು ಸಿಕ್ಕಾಗ ಮಾತ್ರವೇ ಹೊರಬರುತ್ತವೆ ಅನ್ನೋದಕ್ಕೆ ಸದ್ಯ ಪ್ರೇಮ್​ ಕುಮಾರ್​ ಸಾಕ್ಷಿಯಾಗಿ ನಿಲ್ಲುತ್ತಾರೆ, ಪ್ರೇಮ್​ ಕುಮಾರ್​ಗೆ ಇನ್ನಷ್ಟು ಪ್ರೋತ್ಸಾಹ ಹಾಗೂ ಅವಕಾಶಗಳು ಸಿಕ್ಕಿದ್ದೇ ಆದಲ್ಲಿ ಮತ್ತಷ್ಟು ಉತ್ತಮ ಕಲಾವಿದನಾಗೋದರಲ್ಲಿ ಯಾವುದೇ ಅನುಮಾನವಿಲ್ಲ.

ವರದಿ: ರಾಜೇಂದ್ರಸಿಂಹ ಟಿವಿ9 ಕೋಲಾರ

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್