AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ಮೋದಿಯವರಿಂದ ಅಭಿನಂದನೆ: ತಂತಾನೆ ಬದಲಾಯಿತು ಕಸದವರು ಎಂದು ಕರೆಯುತ್ತಿದ್ದವರ ಮಾತು!

ಕೋಲಾರ ತಾಲೂಕಿನ ಬೆಗ್ಗಿಹೊಸಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕಸಮುಕ್ತವನ್ನಾಗಿ ಮಾಡಲು ಶ್ರಮಿಸುತ್ತಿದ್ದ ಮಹಿಳೆಯರು, ಕೋಳಿ ಕೂಗುವ‌ ಮುನ್ನವೇ ಸ್ವಚ್ಚ ವಾಹನದಲ್ಲಿ ಮನೆ ಮನೆಗೆ ತೆರಳಿ‌ ಕಸ ಸಂಗ್ರಹಿಸಿ ಇಡೀ ಗ್ರಾಮವನ್ನು ಸ್ವಚ್ಚವಾಗಿಸುತ್ತಿದ್ದವರು, ಅವರ ಕರ್ತವ್ಯ ನಿಷ್ಠೆ ರಾಷ್ಟ್ರ ಮಟ್ಟದಲ್ಲಿ ಪ್ರಧಾನಿಮಂತ್ರಿ ನರೇಂದ್ರ ಮೋದಿಯವರಿಂದ ಶಬ್ಬಾಸ್ ಗಿರಿ ಗಿಟ್ಟಿಸಿಕೊಟ್ಟಿತ್ತು. 

ಪ್ರಧಾನಿ ಮೋದಿಯವರಿಂದ ಅಭಿನಂದನೆ: ತಂತಾನೆ ಬದಲಾಯಿತು ಕಸದವರು ಎಂದು ಕರೆಯುತ್ತಿದ್ದವರ ಮಾತು!
ಪ್ರಧಾನಿ ಮೋದಿಯವರಿಂದ ಅಭಿನಂದನೆ: ತಂತಾನೆ ಬದಲಾಯಿತು ಕಸದವರು ಎಂದು ಕರೆಯುತ್ತಿದ್ದವರ ಮಾತು!
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Edited By: |

Updated on:Feb 01, 2024 | 7:31 PM

Share

ಕೋಲಾರ, ಫೆ.01: ತಾಲೂಕಿನ ಬೆಗ್ಗಿಹೊಸಹಳ್ಳಿ(Begli Hosahalli) ಗ್ರಾಮ ಪಂಚಾಯಿತಿಯಲ್ಲಿ ಸ್ವಚ್ಛ ವಾಹಿನಿಯ ಚಾಲಕಿ ಮಂಜುಳಾ ಹಾಗೂ ನಿತ್ಯ ಕಸವನ್ನು ವೈಜ್ಞಾನಿಕವಾಗಿ ವಿಂಗಡನೆ ಮಾಡುವ ಶಶಿಕಲಾ ಅವರ ಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರ ವಿಶೇಷವಾಗಿ ಗಣರಾಜ್ಯೋತ್ಸವ ದಿನದಂದು ಅಭಿನಂಧಿಸಿತ್ತು. ಅಷ್ಟೇ ಅಲ್ಲದೆ ಗಣರಾಜ್ಯೋತ್ಸವ ದಿನದಂದು ಕರ್ತವ್ಯ ಪಥದಲ್ಲಿನ ಪೆರೇಡ್​ ವೀಕ್ಷಣೆಗೆ ಅವಕಾಶ ಕಲ್ಪಿಸಿಕೊಟ್ಟಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕರೆಯ ಮೇರೆಗೆ ಅವರನ್ನು ಜ.25 ರಂದು ನವದೆಹಲಿಗೆ ಕರೆಸಿಕೊಂಡು ಚಹಾಕೂಟದಲ್ಲಿ ಅವರ ಜೊತೆ ಚಹಾ ಸೇವಿಸಿ ನಂತರ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ‌ ಭಾಗವಹಿಸಲು ಅನುವು ಮಾಡಿಕೊಟ್ಟಿರುವುದು ಕೋಲಾರ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ.

ಇನ್ನು ಸ್ವಚ್ಛ ಭಾರತ ಯೋಜನೆಯಡಿಯಲ್ಲಿ ರಾಜ್ಯದ ನಾಲ್ಕು ಜಿಲ್ಲೆಗಳ‌ ಸಾಧಕಿಯನ್ನು ಆಯ್ಕೆ ಮಾಡಲಾಗಿತ್ತು.‌ ಆದರಲ್ಲಿ ಕೋಲಾರ ಜಿಲ್ಲೆಯ ಬೆಗ್ಲಿಹೊಸಹಳ್ಳಿಯ ಮಂಜುಳಾ ಮತ್ತು ಶಶಿಕಲಾ ಅವರನ್ನು ಆಯ್ಕೆ ಮಾಡಿದ್ದು, ಸ್ವಚ್ಛಗ್ರಹಿಗಳಲ್ಲಿ ಸಂತಸ ಮೂಡಿಸಿದೆ. ನರೇಂದ್ರ ಮೋದಿಯ ಜೊತೆ‌ ಚಹಾ ಕೂಟದಲ್ಲಿ ಭಾಗವಹಿಸಿದ ಇವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಇದರಿಂದ‌ ಗ್ರಾಮದಲ್ಲಿ ಮತ್ತಷ್ಟು ಕೆಲಸ ಮಾಡಲು ಉತ್ಸುಕರಾಗಿದ್ದು, ಯಾವುದೇ ಕೆಲಸವನ್ನು ಮಾಡುವಾಗ ಜವಾಬ್ದಾರಿಯಿಂದ ಮಾಡಿದರೆ ನಮ್ಮನ್ನು ಜನ ಗುರುತಿಸುತ್ತಾರೆ ಎನ್ನುವುದು ಮಂಜುಳಾ ಹಾಗೂ ಶಶಿಕಲಾ ಅವರ ಮಾತು.

ಇದನ್ನೂ ಓದಿ:ನರೇಂದ್ರ ಮೋದಿ ಜೀವನ ಮತ್ತು ಕೃತಿಗಳ ಕುರಿತು ಬ್ರೈಲ್ ಲಿಪಿಯಲ್ಲಿ ಬರೆಯಲಾದ ಪುಸ್ತಕ ಬಿಡುಗಡೆ

ಕೇಂದ್ರದ ಅಭಿನಂದನೆ; ನಮ್ಮನ್ನು ಕೀಳಾಗಿ ನೋಡುತ್ತಿದ್ದವರ ಮನಸ್ಥಿತಿಯನ್ನೇ ಬದಲಿಸಿತು!

ಈ ಕುರಿತು ಮಾತನಾಡಿದ ಶಶಿಕಲಾ ಅವರು ‘ಕಳೆದ ಮೂರು ವರ್ಷಗಳಿಂದ ಸ್ವಚ್ಚ ವಾಹಿನಿಯ ಚಾಲಕಿಯಾಗಿ ಮಂಜುಳಾ ಮತ್ತು ನಾನು, ಕಸ ವಿಗಂಡಣೆ ಕೆಲಸ ಮಾಡಿಕೊಂಡು ಬರುತ್ತಿದ್ದೇವೆ. ಮೊದಲು ಕಸವನ್ನು ಸಂಗ್ರಹಿಸುವುದು ಗ್ರಾಮದಲ್ಲಿ ಕಷ್ಟದ ಕೆಲಸವಾಗಿತ್ತು. ನೋಡುವವರು ಕೂಡ ಕಸದವರು ಬಂದರೂ ಎಂದು ಕರೆಯುತ್ತಿದ್ದರು. ಆಗ ಇವರಿಗೆ ನಮ್ಮನ್ನು ಕೀಳಾಗಿ ನೋಡುತ್ತಿದ್ದಾರೆ ಎನ್ನುವ ಭಾವನೆ ಮೂಡುತ್ತಿತ್ತಂತೆ. ಆದರೂ ಮನಸ್ಸು ಗಟ್ಟಿ ಮಾಡಿಕೊಂಡು ಕೆಲಸ ಮಾಡಿದ್ದೇವೆ.

ಕೆಲವು ವೇಳೆ ನಾವು ಜನರ ಮನೆ ಬಾಗಿಲಿಗೆ ಹೋದಾಗ ಕೆಲವು ವೇಳೆ ಮಕ್ಕಳು ಕೂಡ ಕಸದವರು ಬಂದರು ಎಂದು ಕರೆದಾಗ ಅವರ ಮನಸ್ಸಿಗೆ ನೋವಾಗುತ್ತಿತ್ತಂತೆ. ಆದರೆ, ನಂತರದ ದಿನಗಳಲ್ಲಿ ಅರಿವು ಮೂಡಿಸುವ ಹಾಗೂ ಸ್ವಚ್ಚ ಭಾರತ್​ ಅಭಿಯಾನದ ನಂತರದಲ್ಲಿ ಅದರ ಕುರಿತಾದ ಕೀಳರಿಮೆ ಜನರಲ್ಲಿ ಕಡಿಮೆಯಾಗುತ್ತಾ ಬಂದಿತ್ತು. ಆದಾದ ನಂತರ ನಮ್ಮ ಕೆಲಸವನ್ನು ಗುರುತಿಸಿ ದೆಹಲಿಯ ಗಣರಾಜ್ಯೋತ್ಸವ ದಿನದಂದು ಪೆರೇಡ್​ ವೀಕ್ಷಣೆಗೆ ಅವಕಾಶ ಮಾಡಿ ಕೊಟ್ಟಿದ್ದು, ಜೊತೆಗೆ ಮೋದಿ ಸೇರಿದಂತೆ ಗ್ರಾಮೀಣಾಭಿವೃದ್ದಿ ಸಚಿವರೊಂದಿಗೆ ತಮ್ಮ ಅನುಭವ ಹಂಚಿಕೊಂಡು ಬಂದ ನಂತರ ಗ್ರಾಮಗಳಲ್ಲಿ ನಮ್ಮನ್ನು ನೋಡುವ ರೀತಿಯೇ ಬದಲಾಗಿ ಹೋಗಿದೆ. ಎಲ್ಲರೂ ಕೂಡ ಇವರನ್ನು ಬಹಳ ಗೌರವ ಹಾಗೂ ಹೆಮ್ಮೆಯಿಂದ ನೋಡುತ್ತಿದ್ದಾರೆ ಎಂದರು.

ಇದನ್ನೂ ಓದಿ:ಸಂಸತ್ತಿನಲ್ಲಿ ಅನಗತ್ಯ ದೊಂಬಿಯೆಬ್ಬಿಸುವ ಸಂಸದರಿಗೆ ಆತ್ಮಾವಲೋಕನ ಮಾಡಿಕೊಳ್ಳುವ ಸಮಯ: ಪ್ರಧಾನ ಮಂತ್ರಿ ನರೇಂದ್ರ ಮೋದಿ

‘ಸ್ವಚ್ಚಗ್ರಹಿಗಳಾದರೂ ಗ್ರಾಮ ಪಂಚಾಯ್ತಿಯ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ರು!

ಗ್ರಾಮ ಪಂಚಾಯತಿ ಅಧ್ಯಕ್ಷೆ ದೀಪಿಕಾ ಲೋಕೇಶ್ ಮಾತನಾಡಿ ‘ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯನ್ನು ನಿತ್ಯ ಕಸ ಸಂಗ್ರಹಿಸುವ ಮೂಲಕ ಸ್ವಚ್ಚಗ್ರಹಿಗಳಾಗಿ ಕೆಲಸ ಮಾಡಿದರು. ಅವರ ಕೆಲಸದಲ್ಲಿನ ನಿಷ್ಠೆ ಮತ್ತು ಕರ್ತವ್ಯ ಪ್ರಜ್ನೆಯಿಂದ ಇವತ್ತು ನಮ್ಮ ಗ್ರಾಮ ಪಂಚಾಯ್ತಿಯ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ. ಈ ಇಬ್ಬರು ಮಹಿಳೆಯರ ಕಾರ್ಯ ನಿಜಕ್ಕೂ ಶ್ಲಾಘನೀಯ, ಮಹಿಳೆಯರು ಯಾವ ಕ್ಷೇತ್ರದಲ್ಲೂ ಯಾರಿಗೂ ಕಡಿಮೆ ಇಲ್ಲ ಎನ್ನುವುದನ್ನು ಈ ಇಬ್ಬರು ಮಹಿಳೆಯರು ಸಾಧಿಸಿ ತೋರಿಸಿದ್ದಾರೆ. ಮಹಿಳೆಯಾಗಿ ನಿತ್ಯ ಬೆಳಿಗಿನ ಜಾವ ಕೆಲಸಕ್ಕೆ ಬಂದು ಮಂಜುಳ ಆಟೋ ಓಡಿಸಿದರೆ, ಶಶಿಕಲಾ ಕಸವನ್ನು ಸಂಗ್ರಹಿಸಿ, ಅದನ್ನು ವೈಜ್ಞಾನಿಕವಾಗಿ ವಿಂಗಡಿಸಿ ಗ್ರಾಮಗಳನ್ನು ಸ್ವಚ್ಚವಾಗಿಡುವಲ್ಲಿ ಅವರ ಕಾರ್ಯ ಪ್ರಶಂಸನೀಯ ಎಂದರು.

ಒಟ್ಟಾರೆ ಇಬ್ಬರು ಮಹಿಳೆಯರು ನರೇಂದ್ರ ಮೋದಿಯವರ ಕನಸಿನ ಯೋಜನೆಯಾದ ಸ್ವಚ್ಛಭಾರತ ಯೋಜನೆಯನ್ನು ಸಕಾರಗೊಳಿಸಿದ್ದು ಕೋಲಾರ ಜಿಲ್ಲೆಗೆ ಹೆಮ್ಮೆಯ ಸಂಗತಿ, ಜೊತೆಗೆ ಮಹಿಳೆಯರು ಕೂಡಾ ನಾವು ಯಾವುದಕ್ಕೂ ಕಮ್ಮಿ ಇಲ್ಲಾ ಎಂದು ಸ್ವಚ್ವ ವಾಹನದ‌ ಚಾಲಕಿಯಾಗಿ ಮತ್ತು ಕಸ‌‌ವಿಂಗಡಣೆ ಮಾಡಿ‌ ಪ್ರಧಾನಿ ಮೋದಿ ಅವರಿಂದಲೇ ಶಹಬ್ಬಾಸ್ ಗಿರಿ ಪಡೆದು, ಕೆಲಸ ಯಾವುದಾದರೇನು ನಿಷ್ಠ ಇರಬೇಕಷ್ಟೇ ಅನ್ನೋದನ್ನು ಈ ಇಬ್ಬರು ಮಹಿಳೆಯರು ಸಾಭೀತು ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:27 pm, Thu, 1 February 24

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?