Karnataka 2nd PUC Topper: ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಬಂದ ವಿದ್ಯಾರ್ಥಿ ಕೌಶಿಕ್​ ಫಸ್ಟ್ ರಿಯಾಕ್ಷನ್

ಪಟ್ಟಣದ ಗಂಗೋತ್ರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಯಾಗಿದ್ದು ಎಸ್.ಸಿ ಮುರುಳಿನಾಥ್ ,ಎಸ್.ಎಂ ಸುಜಾತ ದಂಪತಿ ಪುತ್ರ ಕೌಶಿಕ್. ತನ್ನ‌ ಸಾಧನೆ ಕುರಿತು ಸ್ವತಹ ಕೌಶಿಕ್ ಟಿವಿ9 ಗೆ ಸ್ವತಃ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Follow us
| Updated By: Digi Tech Desk

Updated on:Apr 21, 2023 | 3:45 PM

ಈ ಭಾರಿಯ ಪಿಯುಸಿ ಪಲಿತಾಂಶ (Karnataka 2nd PUC results) ಹೊರಬಿದ್ದಿದ್ದು ಕೋಲಾರ (Kolar) ಜಿಲ್ಲೆ ಶ್ರೀನಿವಾಸಪುರದ ಕೌಶಿಕ್ (Kaushik) ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದಿದ್ದಾನೆ. ವಿಜ್ಞಾನ (Science) ವಿಭಾಗದಲ್ಲಿ 596 ಅಂಕ ಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ತಮ್ಮ ಪೋಷಕರು ಮತ್ತು ತನ್ನ‌ ಕಾಲೇಜಿಗೆ ಕೀರ್ತಿ ತಂದಿದ್ದಾನೆ. ಇಂಗ್ಲಿಷ್ ಮತ್ತು ಹಿಂದಿಯಲ್ಲಿ ತಲಾ ಎರಡು ಅಂಕ ಕಡಿಮೆ ಹೊರತು ಪಡಿಸಿದಂತೆ ಇನ್ನುಳಿದ ಎಲ್ಲ ವಿಭಾಗದಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದಿದ್ದಾನೆ. ಪಟ್ಟಣದ ಗಂಗೋತ್ರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಯಾಗಿದ್ದು ಎಸ್.ಸಿ ಮುರುಳಿನಾಥ್ ,ಎಸ್.ಎಂ ಸುಜಾತ ದಂಪತಿ ಪುತ್ರ ಕೌಶಿಕ್. ತನ್ನ‌ ಸಾಧನೆ ಕುರಿತು ಸ್ವತಹ ಕೌಶಿಕ್ ಟಿವಿ9 ಗೆ ಸ್ವತಃ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ಒಳ್ಳೆ ಅಂಕಗಳನ್ನು ನೀರಿಕ್ಷಿಸಿದ್ದೆ, ಆದರೆ ರಾಜ್ಯಕ್ಕೆ ಪ್ರಥಮ ಬರುತ್ತೇನೆ ಎಂದು ಊಹಿಸಿರಲಿಲ್ಲ. ತುಂಬ ಸಂತೋಷವಾಗುತ್ತಿದೆ,” ಎಂದು ರಾಜ್ಯಕ್ಕೆ ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಕೌಶಿಕ್ ಪ್ರತಿಕ್ರಿಯಿಸಿದ್ದಾರೆ. ಪರೀಕ್ಷಾ ತಯಾರಿಯ ಕುರಿತು ಕೇಳಿದಾಗ, “ಪ್ರತಿ ದಿನ ಒಂದರಿಂದ ಎರಡು ಗಂಟೆಗಳ ಕಾಲ ಓದುತ್ತಿದ್ದೆ. ಪರೀಕ್ಷಾ ಸಮಯದಲ್ಲಿ ಮಾತ್ರ ಸ್ವಲ್ಪ ಹೆಚ್ಚು ಪರಿಶ್ರಮ ಹಾಕಿದ್ದೆ, ಅಷ್ಟೇ.” ಎಂದು ಕೌಶಿಕ್ ಹೇಳಿದ್ದಾರೆ.

“ಮುಂದೆ ಇಂಜಿನಿಯರಿಂಗ್ ಮಾಡಬೇಕು ಅನ್ಕೊಂಡಿದ್ದೀನಿ. PCMB ನಾಲ್ಕು ವಿಷಯಗಳಲ್ಲೂ 100 ಕ್ಕೆ 100 ಅಂಕ ಪಡೆದುಕೊಂಡಿದ್ದು ಸಂತೋಷವಾಗಿದೆ. ನನಗೆ ಯಾವುದೇ ಒತ್ತಡ ಇರಲಿಲ್ಲ. ನನ್ನ ಇಷ್ಟದಿಂದಲೇ ಓದಿ ಇವತ್ತು ಈ ಸ್ಥಾನದಲ್ಲಿ ನಿಂತಿದ್ದೇನೆ” ಎಂದು ತಮ್ಮ ಮುಂದಿನ ಯೋಜನೆಯ ಬಗ್ಗೆ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಮರುಮೌಲ್ಯಮಾಪನಕ್ಕೆ ಮೇ 3 ರಿಂದ ಅರ್ಜಿ ಸಲ್ಲಿಸಲು ಅವಕಾಶ

ತಮ್ಮದೇ ಸಂಸ್ಥೆಯಾದ ಗಂಗೋತ್ರಿ ಪದವಿ ಪೂರ್ವ ಕಾಲೇಜಿನಲ್ಲಿ ಓದಿ ರಾಜ್ಯಕ್ಕೆ ಪ್ರಥಮ ಬಂದಿರುವುದರ ಬಗ್ಗೆ ಕೌಶಿಕ್ ತಂದೆ ಮಗನ ಸಾಧನೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. “ಮನೆಯಲ್ಲಿ ನಾವು ಯಾರು ಒತ್ತಡ ಹಾಕಿಲ್ಲ. ನಮಗಿಂತ ಹೆಚ್ಚು ಓದಬೇಕು ಎಂಬ ಜವಾಬ್ದಾರಿ ನಮ್ಮ ಮಗನಿಗಿತ್ತು. ಇವತ್ತು ನನ್ನ ಮಗ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿದ್ದು ಬಹಳ ಹೆಮ್ಮೆಯ ವಿಷಯ” ಎಂದು ಮಗನ ಕುರಿತು ಕೌಶಿಕ್ ತಂದೆ ಮಾತನಾಡಿದ್ದಾರೆ.

Published On - 3:36 pm, Fri, 21 April 23