AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಲಾರ: ಭಕ್ತರು ನೀಡುವ ಕಾಣಿಕೆ ಮೂಲಕ ಶಾಲೆ ನಿರ್ಮಿಸಿದ ದೇವಾಲಯದ ಟ್ರಸ್ಟ್; ಇಲ್ಲಿದೆ ವಿವರ

ಇತ್ತೀಚೆಗೆ ದೇವಾಲಯಗಳ ಆದಾಯದ್ದೇ ದೊಡ್ಡ ಚರ್ಚೆ ನಡೆಯುತ್ತಿತ್ತು, ಹಣವನ್ನು ಹೇಗೆ ಬಳಕೆ ಮಾಡಬೇಕು, ಎಲ್ಲಿ ಬಳಕೆ ಮಾಡಬೇಕು ಎನ್ನುವ ಕುರಿತು ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿತ್ತು. ಇಂಥಹ ಸಂದರ್ಭದಲ್ಲಿ ಇಲ್ಲೊಂದು ದೇವಾಲಯದ ಟ್ರಸ್ಟ್​​ ಸದ್ದಿಲ್ಲದೆ, ತನ್ನ ಭಕ್ತರು ನೀಡುವ ಕಾಣಿಕೆಯನ್ನು ತನ್ನ ಭಕ್ತರಿಗೆ ಸಮಾಜಮುಖಿ ಕಾರ್ಯಗಳನ್ನ ಮಾಡುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ.

ಕೋಲಾರ: ಭಕ್ತರು ನೀಡುವ ಕಾಣಿಕೆ ಮೂಲಕ ಶಾಲೆ ನಿರ್ಮಿಸಿದ ದೇವಾಲಯದ ಟ್ರಸ್ಟ್; ಇಲ್ಲಿದೆ ವಿವರ
ಮಾಲೂರು ಭಕ್ತರು ನೀಡುವ ಕಾಣಿಕೆ ಮೂಲಕ ಶಾಲೆ ನಿರ್ಮಿಸಿದ ದೇವಾಲಯದ ಟ್ರಸ್ಟ್
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ಕಿರಣ್ ಹನುಮಂತ್​ ಮಾದಾರ್|

Updated on: Mar 13, 2024 | 10:28 PM

Share
ಕೋಲಾರ, ಮಾ.13: ಜಿಲ್ಲೆಯ ಮಾಲೂರು ಪಟ್ಟಣದ ಕುಂಬಾರಪಾಳ್ಯದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಂದರವಾಗಿ ನಿರ್ಮಾಣ ಮಾಡಲಾಗಿದೆ. ಆದರೆ, ಈ ಸರ್ಕಾರಿ ಶಾಲೆಯ ನಿರ್ಮಾಣಕ್ಕೆ ಮಾಲೂರು(Malur) ಮಾರಿಕಾಂಬ ದೇವಿಯ ಶಕ್ತಿಯೇ ಕಾರಣವಾಗಿದೆ. ಹೌದು, ಮಾಲೂರು ಜನರ ಭಕ್ತಿಯ ಕೇಂದ್ರ ಹಾಗೂ ಆರಾಧ್ಯ ದೈವ ಅಂದರೆ ಅದು ಮಾಲೂರು ಮಾರಿಕಾಂಬ ದೇವರು. ಇಲ್ಲಿನ ಜನರು ತಮಗೆ ಕಷ್ಟ ಬಂದಾಗ ಮೊದಲು ಬರುವುದೇ ಈ ಮಾರಿಕಾಂಬ ದೇವಾಲಯಕ್ಕೆ, ಅದೂ ಅಲ್ಲದೆ ಈ ದೇವಾಲಯಕ್ಕೆ ಅರ್ಚಕರು ಇಲ್ಲ, ಬಾಗಿಲುಗಳು ಇಲ್ಲ. ದಿನದ 24 ಗಂಟೆ ಮಾರಿಕಾಂಬ ದೇವಿಗೆ ಭಕ್ತರಿಂದ ಪೂಜೆ ನಡೆಯುತ್ತಲೇ ಇರುತ್ತದೆ.

ಕಾಣಿಕೆ ಹಣವನ್ನ ಸಮಾಜಮುಖಿ ಕಾರ್ಯಗಳಿಗೆ ಬಳಕೆ

ಈ ದೇವಾಲಯವನ್ನು ಶ್ರೀ ಕ್ಷೇತ್ರ ಮಾರಿಕಾಂಬ ಟ್ರಸ್ಟ್​ ಮೂಲಕ ನಿರ್ವಹಣೆ ಮಾಡುತ್ತದೆ. ದೇವಾಲಯಕ್ಕೆ ಬರುವ ಭಕ್ತರು, ದೇವರಿಗೆ ನೀಡುವ ಕಾಣಿಕೆ ಹಣವನ್ನು ಇಲ್ಲಿನ ಟ್ರಸ್ಟ್,​ ಭಕ್ತರಿಗಾಗಿಯೇ ವಿನಿಯೋಗಿಸುತ್ತಿದೆ. ಹಲವು ವರ್ಷಗಳಿಂದ ಹಲವು ಸಮಾಜಮುಖಿ ಕಾರ್ಯಗಳಿಗಾಗಿಯೇ ಬಳಕೆ ಮಾಡುತ್ತಿದೆ. ಈ ಮೊದಲು ಆಸ್ಪತ್ರೆಯಲ್ಲಿ ಐಸಿಯು ವಾರ್ಡ್​, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣದಲ್ಲಿ ಶುದ್ದ ಕುಡಿಯುವ ನೀರು, ನಿತ್ಯ ಅನ್ನ ದಾಸೋಹ, ಹೀಗೆ ಹತ್ತು ಹಲವು ಜನರಿಗೆ ಅನುಕೂಲವಾಗುವ ಕಾರ್ಯಗಳನ್ನು ಮಾಡಿಕೊಂಡು ಬಂದಿದೆ.

ಹೈಟೆಕ್​ ಶಾಲೆಯನ್ನಾಗಿ ನಿರ್ಮಾಣ

ಇಂಥಹ ದೇವಾಲಯ ಟ್ರಸ್ಟ್​ ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ, ಅವನತಿ ಹಾದಿಯಲ್ಲಿದ್ದ ಮಾಲೂರು ಪಟ್ಟಣದ ಕುಂಬಾರಪಾಳ್ಯದ ಸರ್ಕಾರಿ ಶಾಲೆಯನ್ನು ಹೈಟೆಕ್​ ಶಾಲೆಯನ್ನಾಗಿ ನಿರ್ಮಾಣ ಮಾಡಿಕೊಟ್ಟಿದೆ. ಈ ಸರ್ಕಾರಿ ಶಾಲೆಯಲ್ಲಿ ಮಕ್ಕಳ ದಾಖಲಾತಿ ಚೆನ್ನಾಗಿತ್ತು. ಆದರೆ, ಶಾಲೆಯ ಕಟ್ಟಡ ಮಾತ್ರ ಶಿಥಿಲಾವಸ್ಥೆಗೆ ತಲುಪಿತ್ತು. ಈ ವೇಳೆ ಅಲ್ಲಿನ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಯರು ಹಾಗೂ ಅಲ್ಲಿನ ಸಿಬ್ಬಂದಿಗಳು ಮಾಲೂರು ಮಾರಿಕಾಂಬ ದೇವಾಲಯ ಟ್ರಸ್ಟ್​ಗೆ ಒಂದು ಪತ್ರ ಬರೆದು ಸರ್ಕಾರಿ ಶಾಲೆಯನ್ನು ದೇವಾಲಯದ ಟ್ರಸ್ಟ್​ ಮೂಲಕ ರಿಪೇರಿ ಮಾಡಿಕೊಡುವಂತೆ ಮನವಿ ಮಾಡಿದ್ದರು. ಆದ್ರೆ, ಮಾರಿಕಾಂಬ ದೇವಾಲಯದ ಟ್ರಸ್ಟ್​ನ ಸದಸ್ಯರು ಶಾಲೆಯನ್ನು ರಿಪೇರಿ ಮಾಡೋದೇಕೆ ಹೊಸ ಸುಸರ್ಜಿತವಾದ ಶಾಲೆಯನ್ನೇ ನಿರ್ಮಾಣ ಮಾಡಿಕೊಡೋಣ ಎಂದು ನಿರ್ಧರಿಸಿ ಕೇವಲ ಒಂದು ವರ್ಷದ ಅವಧಿಯಲ್ಲಿ ಸುಮಾರು 75 ಲಕ್ಷ ರೂಪಾಯಿ ವೆಚ್ಚದಲ್ಲಿ ಒಂದು ಸುಸರ್ಜಿತವಾದ ಹೈಟೆಕ್​ ಶಾಲೆಯನ್ನೇ ನಿರ್ಮಾಣ ಮಾಡಿಕೊಟ್ಟಿದೆ.
ಈ ಮೂಲಕ ಮಾಲೂರಿನ ಜನರ ಆರಾಧ್ಯ ದೈವ ತಾಯಿ ಮಾರಿಕಾಂಬ ದೇವಿಯ ಶಕ್ತಿ ಹಾಗೂ ಪವಾಡದಿಂದ ಭಕ್ತರಿಗೆ ಒಳಿತಾದಾಗ ದೇವರಿಗೆ ಅರ್ಪಿಸುವ ಕಾಣಿಕೆಯನ್ನು ಆ ತಾಯಿಯ ಭಕ್ತರಿಗೆ ಅರ್ಪಿಸುವ ಮೂಲಕ ಮಾಲೂರು ಮಾರಿಕಾಂಬ ಟ್ರಸ್ಟ್​ ವಿಭಿನ್ನ ಹಾಗೂ ಸಮಾಜಮುಖಿ ಕಾರ್ಯಗಳ ಮೂಲಕ ಜನರ ಸೇವೆಗೆ ವಿನಿಯೋಗಿಸುತ್ತಿದ್ದಾರೆ. ಭಕ್ತರಿಂದ ಬಂದ ಹಣವನ್ನು ಭಕ್ತರಿಗೆ ವಿವಿಧ ಜನಪರ ಕಾರ್ಯಗಳ ಮೂಲಕ ವಿನಿಯೋಗಿಸಲಾಗುತ್ತಿದೆ ಎಂದು ಟ್ರಸ್ಟ್​ನವರು ಹೇಳುತ್ತಿದ್ದಾರೆ. ಒಟ್ಟಾರೆ ಮಾಲೂರು ಮಾರಿಕಾಂಬ ದೇವಿಯ ಶಕ್ತಿ ಹಾಗೂ ಪವಾಡಗಳಿಂದ ದೇವಾಲಯಕ್ಕೆ ವಾರ್ಷಿಕವಾಗಿ ಕೋಟ್ಯಾಂತರ ರೂಪಾಯಿ ಕಾಣಿಕೆ ರೂಪದಲ್ಲಿ ಬರುವ ಹಣ, ಆ ತಾಯಿಯ ಭಕ್ತರಿಗೆ ವಿನಿಯೋಗವಾಗುವ ಮೂಲಕ ಭಕ್ತರಿಂದ ಬಂದಿದ್ದು, ಭಕ್ತರಿಗೆ ಎನ್ನುವಂತೆ ಹಲವು ಸಮಾಜಮುಖಿ ಕಾರ್ಯಗಳಿಗೆ ದೇವಾಲಯದ ಟ್ರಸ್ಟ್​ ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ