AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vemagal Police: ಕೋಲಾರದಲ್ಲಿ ಇದೇನಿದು ಲವ್ ಗಲಾಟೆ, ಮುಂದೇನಾಗುತ್ತದೆ ಆ ಯುವಕ-ಯುವತಿಯ ಬಾಳಲ್ಲಿ?

vemagal police: ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಯುವಕ ಮುನಿರಾಜು ಹಾಗೂ ಯುವತಿ ಸಿಂಧು ಒಂದೇ ಜಾತಿಯವರಾಗಿದ್ದು, ಪೋಷಕರನ್ನ ಒಪ್ಪಿಸಿ ಮದುವೆಯಾಗುವಲ್ಲಿ ವಿಫಲರಾಗಿದ್ದಾರೆ. ಇನ್ನು ವೇಮಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಯುವತಿ ಸಿಂಧು ದೂರು ನೀಡಿದ್ದಾಳೆ.

Vemagal Police: ಕೋಲಾರದಲ್ಲಿ ಇದೇನಿದು ಲವ್ ಗಲಾಟೆ, ಮುಂದೇನಾಗುತ್ತದೆ ಆ ಯುವಕ-ಯುವತಿಯ ಬಾಳಲ್ಲಿ?
ಕೋಲಾರದಲ್ಲಿ ಇದೇನಿದು ಲವ್ ಗಲಾಟೆ, ಮುಂದೇನಾಗುತ್ತದೆ ಆ ಯುವಕ-ಯುವತಿಯ ಬಾಳಲ್ಲಿ?
TV9 Web
| Edited By: |

Updated on: Apr 26, 2022 | 10:12 PM

Share

ಕೋಲಾರ: ಹಲವಾರು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವ ಪ್ರೇಮಿಗಳು, ಕೊನೆಗೂ ಪ್ರೀತಿಸಿ ಮದುವೆಯಾಗಿದ್ದಾರೆ (love marriage). ಆದರೆ ಅದೇ ಮಹಾಪರಾಧವಾಗಿ ಪರಿಣಮಿಸಿದೆ. ಇವರ ಪ್ರೀತಿಯನ್ನು ಒಪ್ಪದ ಯುವತಿಯ ಮನೆಯವರು ಯುವಕನ ಮನೆಯ ಮೇಲೆ‌ ದಾಳಿ ಮಾಡಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ. ಕೋಲಾರ ತಾಲ್ಲೂಕಿನ ವೇಮಗಲ್‌ನಲ್ಲಿ ಈ ಘಟನೆ ನಡೆದಿದ್ದು, ವೇಮಗಲ್ ಗ್ರಾಮದ ಮುನಿರಾಜು ಹಾಗೂ ಸಿಂಧು ಪರಸ್ಪರ ಪ್ರೀತಿಸಿ ಮದುವೆಯಾದ ದಂಪತಿ.

ಆದರೆ, ಪ್ರೀತಿಯಿಂದ ಸಾಕಿ ಸಲುಹಿದ ಮಗಳನ್ನ ಪ್ರೀತಿಸಿದ ಯುವಕ ಬೇರೆಡೆ ಕರೆದುಕೊಂಡು ಹೋಗಿ ಮದುವೆಯಾಗಿದ್ದಾನೆ ಎಂದು ವಿಚಾರ ತಿಳಿದ ಯುವತಿಯ ಪೋಷಕರು ವೇಮಗಲ್‌ನಲ್ಲಿನ ಮುನಿರಾಜು ಮನೆಯ ಮೇಲೆ‌ ದಾಳಿ ಮಾಡಿ‌ ಮನೆಯ ಆವರಣದಲ್ಲಿದ್ದ ವಸ್ತುಗಳಿಗೆ ಬೆಂಕಿ ಹಚ್ಚಿದ್ದಾರೆ. ಮನೆಯಲ್ಲಿದ್ದ ಸಾವಿರಾರು ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ. ಮನೆಯ ಮೇಲೆ‌ ದಾಳಿ ಮಾಡಿ ಬೆಂಕಿ ಹಚ್ಚಿ ಯುವಕನ ತಂದೆ ಹಾಗೂ ಅತ್ತಿಗೆಯ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಇನ್ನು, ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಯುವಕ ಮುನಿರಾಜು ಹಾಗೂ ಯುವತಿ ಸಿಂಧು ಒಂದೇ ಜಾತಿಯವರಾಗಿದ್ದು, ಪೋಷಕರನ್ನ ಒಪ್ಪಿಸಿ ಮದುವೆಯಾಗುವಲ್ಲಿ ವಿಫಲರಾಗಿದ್ದಾರೆ. ಇನ್ನು ವೇಮಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ (vemagal police) ಘಟನೆ ನಡೆದಿದ್ದು, ಯುವತಿ ಸಿಂಧು ದೂರು ನೀಡಿದ್ದಾಳೆ. ತಮ್ಮ ಪೋಷಕರ ವಿರುದ್ದವೇ ದೂರು ಸಲ್ಲಿಸಿದ ಯುವತಿ ಸಿಂಧು ತಮಗೆ ರಕ್ಷಣೆ ನೀಡುವಂತೆ ವ್ಯಾಟ್ಸಾಪ್ ಮೂಲಕ ಪತ್ರ ರವಾನೆ ಮಾಡಿದ್ದಾಳೆ.

Also Read: Jet Airways Jobs: ಜೆಟ್​ ಏರ್​ವೇಸ್ ಆಕಾಶ ಮಾರ್ಗದಲ್ಲಿ ಉದ್ಯೋಗಾವಕಾಶ ಸುರಿಮಳೆ, ಅಕ್ರಮಗಳಿಗೆ ಅವಕಾಶವಿಲ್ಲ!

Also Read: PSI Recruitment Scam: ದೇಶದ್ರೋಹಿ ದಾವೂದ್ ಇಬ್ರಾಹಿಂಗೆ ಜಾರಿ ಮಾಡಿದಂತೆ ದಿವ್ಯಾ ಹಾಗರಗಿಗೂ ಅರೆಸ್ಟ್​ ವಾರಂಟ್ ಜಾರಿ!

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು