AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ದೇವಾಲಯಕ್ಕೆ ಬಂದು ಆದಿತ್ಯ ಹೃದಯ ಪಠಣೆ ಮಾಡಿದರೆ ಪರಿಹಾರವಾಗುತ್ತೆ ಹತ್ತಾರು ಸಮಸ್ಯೆಗಳು

ಪ್ರಮುಖವಾಗಿ ಯಾಜ್ನವಲ್ಕರ ಜಯಂತಿಯನ್ನು ಆಚರಣೆ ಮಾಡುತ್ತಾ ಪ್ರತಿದಿನ ಸೂರ್ಯೋಪಾಸನೆಗಳನ್ನು ಮಾಡುತ್ತಿದ್ದ ಶುಕ್ಷಯಜುರ್ವೇದಿಗಳು ಸುಮಾರು ನೂರಾರು ವರ್ಷಗಳ ಹಿಂದೆ ದೇವಾಲಯವನ್ನು ನಿರ್ಮಾಣ ಮಾಡಿದರು.

ಈ ದೇವಾಲಯಕ್ಕೆ ಬಂದು ಆದಿತ್ಯ ಹೃದಯ ಪಠಣೆ ಮಾಡಿದರೆ ಪರಿಹಾರವಾಗುತ್ತೆ ಹತ್ತಾರು ಸಮಸ್ಯೆಗಳು
ಸೂರ್ಯನಾರಾಯಣ ದೇವಾಲಯ
Follow us
TV9 Web
| Updated By: sandhya thejappa

Updated on:Aug 22, 2021 | 5:21 PM

ಕೋಲಾರ: ಜಿಲ್ಲೆಯ ಮುಳಬಾಗಿಲು ಪಟ್ಟಣದ ಕುಂಬಾರಪಾಳ್ಯದಲ್ಲಿ ಅತ್ಯಂತ ವಿಶೇಷವಾದ ಹಾಗೂ ಅಪರೂಪವಾದ ಸೂರ್ಯನಾರಾಯಣ ಸ್ವಾಮಿ ದೇವಾಲಯವಿದೆ. ಈ ಪ್ರದೇಶದಲ್ಲಿ ಯಾಜ್ನವಲ್ಕ ಆಶ್ರಮವೊಂದು ನೂರಾರು ವರ್ಷಗಳಿಂದ ಇತ್ತು. ಇಲ್ಲಿ ಶುಕ್ಲ ಯಜುರ್ವೇದಿಗಳು ಸೂರ್ಯನ ಆರಾಧನೆ ಮಾಡುತ್ತಿದ್ದರು. ಆದರೆ ಅಷ್ಟ ಗ್ರಹ ಕೂಟ ಒಂದಾದ ಸಂದರ್ಭದಲ್ಲಿ ಇಲ್ಲಿ ಸೂರ್ಯ ದೇವಾಲಯವನ್ನು ಸ್ಥಾಪನೆ ಮಾಡಲಾಯಿತು ಎಂಬ ಪ್ರತೀತಿ ಇದೆ. ಪ್ರಮುಖವಾಗಿ ಮುಳಬಾಗಿಲು ಪಟ್ಟಣದಲ್ಲಿ ಶುಕ್ಲ ಯಜುರ್ವೇದಿಗಳು ಯಾಜ್ನವಲ್ಕರ ಜಯಂತಿ, ರಥಸಪ್ತಮಿ, ಸೂರ್ಯೋಪಾಸನೆ ಸೇರಿದಂತೆ ಹಲವು ಆಚರಣೆಗಳನ್ನು ಮಾಡುತ್ತಾ ಬಂದಿದ್ದರು. ಈ ವೇಳೆ ಮುಳಬಾಗಿಲು ಹರಪ್ಪನಾಯಕನಹಳ್ಳಿ ಬಿಸ್ಸೇಗೌಡರ ವಂಶಸ್ಥರು ಸಹಾಯದೊಂದಿಗೆ ಇಲ್ಲಿ ನವಗ್ರಹಗಳ ಅಧಿಪತಿ ಸೂರ್ಯ ದೇವಾಲಯವನ್ನು ಪ್ರತಿಷ್ಠಾಪನೆ ಮಾಡಲು ನಿರ್ಧರಿಸಿದರು. ಅದರಂತೆ ಇಲ್ಲಿ ಯಾಜ್ನವಲ್ಕರ ಮೂರ್ತಿಯ ಜೊತೆಗೆ ಸೂರ್ಯದೇವರ ದೇವಾಲಯವನ್ನು ನಿರ್ಮಾಣ ಮಾಡಲಾಯಿತು.

ಸೂರ್ಯ ಉಪಾಸನೆಯಿಂದ ಏನೇನಾಗುತ್ತೆ ಗೊತ್ತಾ? ಪ್ರಮುಖವಾಗಿ ಯಾಜ್ನವಲ್ಕರ ಜಯಂತಿಯನ್ನು ಆಚರಣೆ ಮಾಡುತ್ತಾ ಪ್ರತಿದಿನ ಸೂರ್ಯೋಪಾಸನೆಗಳನ್ನು ಮಾಡುತ್ತಿದ್ದ ಶುಕ್ಷಯಜುರ್ವೇದಿಗಳು ಸುಮಾರು ನೂರಾರು ವರ್ಷಗಳ ಹಿಂದೆ ದೇವಾಲಯವನ್ನು ನಿರ್ಮಾಣ ಮಾಡಿದರು. ಪ್ರಮುಖವಾಗಿ ಸೂರ್ಯ ದೇವರ ಆರಾಧನೆಯಿಂದ ಉಷ್ಣಾಂಶ ಕಡಿಮೆಯಾಗುತ್ತದೆ. ತೇಜಸ್ಸು ಹೆಚ್ಚಾಗುತ್ತದೆ ಎನ್ನಲಾಗುತ್ತದೆ. ಹಾಗಾಗಿ ವಿದ್ಯಾಭ್ಯಾಸದಲ್ಲಿ ಹಿನ್ನೆಡೆ ಅನುಭವಿಸುತ್ತಿರುವ ಮಕ್ಕಳು, ಮದುವೆಯಾಗಿ ಮಕ್ಕಳಾಗದವರು, ವ್ಯವಸಾಯದಲ್ಲಿ ಹಿನ್ನೆಡೆ ಅನುಭವಿಸುತ್ತಿರುವ ರೈತರು, ಇಲ್ಲಿ ಬಂದು ಪ್ರಾರ್ಥನೆ ಸಲ್ಲಿಸೋದು ವಾಡಿಕೆ.

ಪರಿಹಾರವಾಗುತ್ತೆ ಹತ್ತಾರು ಸಮಸ್ಯೆಗಳು ಮನುಷ್ಯನ ದೇಹದ ಪ್ರಮುಖ ಅಂಗ, ಶಿರವನ್ನು ಸೂರ್ಯನಿಗೆ ಹೋಲಿಕೆ ಮಾಡಲಾಗುತ್ತದೆ. ಹೀಗಾಗಿ ದೇಹ ಸಂಬಂಧಿ ಯಾವುದೇ ಕಾಯಿಲೆಗಳಿದ್ದರೂ ಇಲ್ಲಿಗೆ ಭಾನುವಾರ ಬಂದು ಸೂರ್ಯದೇವರನ್ನು ಒಲಿಸಿಕೊಳ್ಳುವ ಆದಿತ್ಯ ಹೃದಯ ಪಠನೆ ಮಾಡಿದರೆ ಭಕ್ತರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎನ್ನುವ ನಂಬಿಕ ಇದೆ. ಶ್ರೀರಾಮನೂ ರಾಮಾಯಣ ಯುದ್ಧಕ್ಕೂ ಮುನ್ನ ಆಧಿತ್ಯ ಹೃದಯವನ್ನು ಪಠನೆ ಮಾಡಿದ್ದರಿಂದಲೇ ರಾಮಾಯಣ ಯುದ್ಧದಲ್ಲಿ ಜಯಗಳಿಸಿದ್ದ ಅನ್ನೋ ಮಾತಿದೆ. ಈ ಕಾರಣ ಇಲ್ಲಿ ಪ್ರತಿ ಭಾನುವಾರ ಸಾವಿರಾರು ಜನ ಭಕ್ತರು ಆಗಮಿಸುತ್ತಾರೆ. ಮತ್ತೊಂದು ವಿಶೇಷವೆಂದರೆ ಎಲ್ಲಾ ಧರ್ಮದವರು ಈ ದೇವಾಲಯಕ್ಕೆ ಸಾಮಾನ್ಯ ಭಕ್ತರಂತೆ ಬಂದು ತಮ್ಮ ಹರಕೆಯನ್ನು ಈಡೇರಿಸಿಕೊಳ್ಳುತ್ತಾರೆ.

ರಥಸಪ್ತಮಿಯಂದು ನಡೆಯಲಿದೆ ಸೂರ್ಯನ ಉತ್ಸವ ಆದಿತ್ಯಾದಿ ನವಗ್ರಹ ಅಧಿಪತಿಯಾದ ಸೂರ್ಯದೇವನಿಗೆ ಪ್ರಿಯವಾದ ದಿನ ಭಾನುವಾರ. ಹಾಗಾಗಿ ಪ್ರತಿ ಭಾನುವಾರ ಈ ದೇವಾಲಯದಲ್ಲಿ ವಿಶೇಷ ಪೂಜೆ, ಅಭಿಷೇಕ ಏರ್ಪಡಿಸಲಾಗುತ್ತದೆ. ಜೊತೆಗೆ ಈ ದೇವಾಲಯದಲ್ಲಿ ರಥಸಪ್ತಮಿಯಂದು ಸೂರ್ಯೋಪಾಸನೆ, ಮಾರ್ತಾಂಡ ಹೋಮ, ಸೇರಿದಂತೆ ರಥೋತ್ಸವಗಳು ನಡೆಯುತ್ತದೆ. ಜೊತೆಗೆ ಯಾಜ್ನಮಲ್ಕರ ಜಯಂತಿ, ಸೂರ್ಯ ಜಯಂತಿ, ನವರಾತ್ರಿ ಉತ್ಸವಗಳು, ಧನುರ್ಮಾಸಗಳಲ್ಲಿ ಈ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆಯುತ್ತದೆ.

ಇದನ್ನೂ ಓದಿ

Yakshagana: ಭೂಜಾತೆ ಸೀತೆಗೆ ಭೂಮಿಯಷ್ಟೇ ಸಹನೆ; ಅದು ನಮಗೆ ದಾರಿದೀಪ

Poetry : ಅವಿತಕವಿತೆ ; ‘ಒಂದು ವಿಶ್ವಾಸವನ್ನು ಕಾಯಲು ಎಂಥ ಸುಂದರ ಕಾವಲು’

(There is a very special and rare Suryanarayana Swamy Temple in Kolar)

Published On - 5:20 pm, Sun, 22 August 21

ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅಪ್ಪು ಪುತ್ರಿ ಧ್ರುತಿ
ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅಪ್ಪು ಪುತ್ರಿ ಧ್ರುತಿ
ಶಿವಣ್ಣನ ಮನೆಯ ಗೌಪ್ಯ ಸಭೆಯಲ್ಲಿ ಚರ್ಚೆಯಾದ ವಿಷಯಗಳೇನು: ನರಸಿಂಹಲು ಮಾಹಿತಿ
ಶಿವಣ್ಣನ ಮನೆಯ ಗೌಪ್ಯ ಸಭೆಯಲ್ಲಿ ಚರ್ಚೆಯಾದ ವಿಷಯಗಳೇನು: ನರಸಿಂಹಲು ಮಾಹಿತಿ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಒಡಿಷಾದಿಂದ ಬಂದಿರುವ ಕೊಹ್ಲಿ ಕಟ್ಟಾಭಿಮಾನಿಗೆ ಟಿಕೆಟ್ ಸಿಕ್ಕಿಲ್ಲ
ಒಡಿಷಾದಿಂದ ಬಂದಿರುವ ಕೊಹ್ಲಿ ಕಟ್ಟಾಭಿಮಾನಿಗೆ ಟಿಕೆಟ್ ಸಿಕ್ಕಿಲ್ಲ
ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ಮದುಮಗ ಸಾವು: ಅಸಲಿಗೆ ಆಗಿದ್ದೇನು?
ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ಮದುಮಗ ಸಾವು: ಅಸಲಿಗೆ ಆಗಿದ್ದೇನು?