AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆನೆಗೊಂದಿಯಲ್ಲಿ ಮೊಳಗಿತು ಜಾನಪದ ಕಹಳೆ, ಐತಿಹಾಸಿಕ ಉತ್ಸವಕ್ಕೆ ಅದ್ಧೂರಿ ಚಾಲನೆ

ಕೊಪ್ಪಳ: ವಿಜಯನಗರ ಸಾಮ್ರಾಜ್ಯದ ತೊಟ್ಟಿಲು ಆನೆಗೊಂದಿ ಉತ್ಸವಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಆನೆಗೊಂದಿ ಉತ್ಸವಕ್ಕೆ ಮೆರವಣಿಗೆ ಮೂಲಕ ಚಾಲನೆ ನೀಡಲಾಯ್ತು. ಮೆರವಣಿಗೆಯಲ್ಲಿ ವಿದೇಶಿಗರು ಕುಣಿದಿದ್ದು ಆಕರ್ಷಕವಾಗಿತ್ತು. ವಿವಿಧ ಕಲಾ ತಂಡಗಳ ವೈಭವ ನೋಡುಗರ ಗಮನ ಸೆಳೆದ್ವು. ಇನ್ನು ಉತ್ಸವದ ವೇದಿಕೆ ಹಿಂಬಾಗದ ಗುಡ್ಡದಲ್ಲಿ ಗುಡ್ಡಗಾಡು ಸಾಹಸ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಕೊಪ್ಪಳ ಸೇರಿದಂತೆ, ವಿವಿಧ ಕಡೆಯಿಂದ ಬಂದ ಸಾಹಸಿಗರು ಗುಡ್ಡಗಾಡು ಸಾಹಸ ಕ್ರೀಡೆಯಲ್ಲಿ ಭಾಗಿಯಾಗಿದ್ರು. ಇದರ ಜೊತೆ ನೀರಿನಲ್ಲಿ ಮೈ ರೋಮಾಂಚನವಾಗೋ ಕ್ರೀಡೆಗಳು ಕೂಡ ಸಖತ್ […]

ಆನೆಗೊಂದಿಯಲ್ಲಿ ಮೊಳಗಿತು ಜಾನಪದ ಕಹಳೆ, ಐತಿಹಾಸಿಕ ಉತ್ಸವಕ್ಕೆ ಅದ್ಧೂರಿ ಚಾಲನೆ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Jan 10, 2020 | 2:44 PM

Share

ಕೊಪ್ಪಳ: ವಿಜಯನಗರ ಸಾಮ್ರಾಜ್ಯದ ತೊಟ್ಟಿಲು ಆನೆಗೊಂದಿ ಉತ್ಸವಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಆನೆಗೊಂದಿ ಉತ್ಸವಕ್ಕೆ ಮೆರವಣಿಗೆ ಮೂಲಕ ಚಾಲನೆ ನೀಡಲಾಯ್ತು. ಮೆರವಣಿಗೆಯಲ್ಲಿ ವಿದೇಶಿಗರು ಕುಣಿದಿದ್ದು ಆಕರ್ಷಕವಾಗಿತ್ತು. ವಿವಿಧ ಕಲಾ ತಂಡಗಳ ವೈಭವ ನೋಡುಗರ ಗಮನ ಸೆಳೆದ್ವು.

ಇನ್ನು ಉತ್ಸವದ ವೇದಿಕೆ ಹಿಂಬಾಗದ ಗುಡ್ಡದಲ್ಲಿ ಗುಡ್ಡಗಾಡು ಸಾಹಸ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಕೊಪ್ಪಳ ಸೇರಿದಂತೆ, ವಿವಿಧ ಕಡೆಯಿಂದ ಬಂದ ಸಾಹಸಿಗರು ಗುಡ್ಡಗಾಡು ಸಾಹಸ ಕ್ರೀಡೆಯಲ್ಲಿ ಭಾಗಿಯಾಗಿದ್ರು. ಇದರ ಜೊತೆ ನೀರಿನಲ್ಲಿ ಮೈ ರೋಮಾಂಚನವಾಗೋ ಕ್ರೀಡೆಗಳು ಕೂಡ ಸಖತ್ ಕಿಕ್ ನೀಡಿದ್ವು. ಇನ್ನು ಆನೆಗೊಂದಿ ಉತ್ಸವಕ್ಕೆ ಮತ್ತಷ್ಟು ರಂಗು ತರಲು ಜಿಲ್ಲಾಡಳಿತ ಆನೆಗೊಂದಿ ಬೈ ಸ್ಕೈ ಆಯೋಜನೆ ಮಾಡಿತ್ತು.

Published On - 2:41 pm, Fri, 10 January 20

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು