AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಳು ಬಿದ್ದ ಜಾಗದಲ್ಲಿ ಹೈಟೆಕ್ ಸ್ಮಶಾನ ನಿರ್ಮಾಣ, ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರುತ್ತದೆ ಈ ಸ್ಮಶಾನ

ಅದು ಸರ್ಕಾರಿ ಜಮೀನು. ಅಲ್ಲಿ ತಿಪ್ಪೆ ಗುಂಡಿಗಳಿದ್ವು ಜನ ಅದನ್ನ ಕಸ ಹಾಕೋಕೆ ಉಪಯೋಗ ಮಾಡ್ತಿದ್ರು, ಆ ಎರಡು ಎಕರೇ ಜಮೀನು ಸಂಪೂರ್ಣ ಕಸದಿಂದ ತುಂಬಿ ಹೋಗಿತ್ತು. ಆದ್ರೆ ಅಧಿಕಾರಿಗಳ ಪರಿಶ್ರಮದಿಂದ ಅಲ್ಲೊಂದು ಹೈಟೆಕ್ ಸ್ಮಶಾನ ನಿರ್ಮಾಣವಾಗಿದೆ. ಯಾವ ಪಾರ್ಕ್ಗೂ ಕಡಿಮೆ ಇಲ್ಲದ ಸ್ಮಶಾನ ಭಾವೈಕ್ಯತೆ ಬಿಂಬಿಸುತ್ತಿದೆ.

ಪಾಳು ಬಿದ್ದ ಜಾಗದಲ್ಲಿ ಹೈಟೆಕ್ ಸ್ಮಶಾನ ನಿರ್ಮಾಣ, ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರುತ್ತದೆ ಈ ಸ್ಮಶಾನ
ಪಾಳು ಬಿದ್ದ ಜಾಗದಲ್ಲಿ ಹೈಟೆಕ್ ಸ್ಮಶಾನ ನಿರ್ಮಾಣ, ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರುತ್ತದೆ ಈ ಸ್ಮಶಾನ
TV9 Web
| Edited By: |

Updated on: Oct 21, 2021 | 2:05 PM

Share

ಕೊಪ್ಪಳ: ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಕೋಟಯ್ಯ ಕ್ಯಾಂಪ್ ಬಳಿ ಸ್ಮಶಾನವೊಂದು ನಿರ್ಮಾಣವಾಗಿದೆ. ಎರಡು ಎಕರೆ ಜಾಗದಲ್ಲಿ ಸ್ಮಶಾನ ನಿರ್ಮಾಣವಾಗಿದ್ದು, ಇದು ಯಾವ ಉದ್ಯಾನವನಕ್ಕೂ ಕಡಿಮೆ ಇಲ್ಲ. ಇಲ್ಲಿ ಹಿಂದೂ ಮುಸ್ಲಿಂ ಯಾರೂ ಇದ್ರು ಶವ ಸಂಸ್ಕಾರ ಮಾಡಬಹುದು. ಮಾಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಇಂತಹ ಭಾವಕ್ಯತೆ ಸ್ಮಶಾನ ನಿರ್ಮಾಣವಾಗಿದೆ.

ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಅಧಿಕಾರಿಗಳು ಮಾಹತ್ಮಾ ಗಾಂಧಿ ಯೋಜನೆಯಲ್ಲಿ ಇಂತಹದ್ದೊಂದು ಯೋಜನೆ ರೂಪಿಸಿ ಯಾವುದೇ ಉದ್ಯಾನವನಕ್ಕೂ ಕಡಿಮೆ ಇರದ ಹೈಟೆಕ್ ಸ್ಮಶಾನ ನಿರ್ಮಿಸಿದ್ದಾರೆ. ಆರು ತಿಂಗಳ ಸಮಯದಲ್ಲಿ ಸುಮಾರು 2 ಲಕ್ಷ ವೆಚ್ಚದಲ್ಲಿ ಹೈಟೆಕ್ ಸ್ಮಶಾನ ರೆಡಿಯಾಗಿದೆ. ಸ್ಮಶಾನ ನಿರ್ಮಣ ವಾಗೋ ಮುನ್ನ ಸರ್ಕಾರದ ಎರಡು ಎಕರೆ ಜಾಗ ಪಾಳು ಬಿದ್ದಿತ್ತು. ಜನ ಕಸ ಹಾಕಲು ಇದನ್ನ ಉಪಯೋಗ ಮಾಡ್ತಿದ್ರು. ಗ್ರಾಮದಲ್ಲಿ ಶವ ಸಂಸ್ಕಾರಕ್ಕೆ ಸಮಸ್ಯೆ ಇತ್ತು. ಇದನ್ನು ಅರಿತ ಅಧಿಕಾರಿಗಳು ಸ್ಮಶಾನ ನಿರ್ಮಾಣಕ್ಕೆ ಮುಂದಾಗಿದ್ರು. ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಆರು‌ ತಿಂಗಳಲ್ಲಿ ಕೆಲಸ ಮಾಡಿ, ಹೈಟೆಕ್ ಸ್ಮಶಾನ ನಿರ್ಮಿಸಿದ್ದಾರೆ.

Koppal Cemetery

ಸ್ಮಶಾನದ ಒಳಾಂಗಣ

ಈ ಹೈಟೆಕ್ ಸ್ಮಶಾನದಲ್ಲಿ ಕೋಲ್ಡ್ ಸ್ಟೋರೇಜ್ ರೂಮ್, ಹಿಂದುಗಳ ಶವ ಸಂಸ್ಕಾರಕ್ಕೆ ಪತ್ಯೇಕ ಜಾಗ, ಮುಸ್ಲಿಂ ಸಮುದಾಯಕ್ಕೆ ಪ್ರತ್ಯೇಕ ಜಾಗ ಮೀಸಲಿಡಾಗಿದೆ. ಅಲ್ದೆ ಸುತ್ತಲೂ ಒಂದು ಸಾವಿರ ಸಸಿ ನೆಡಲಾಗಿದೆ. ಯಾವ ಉದ್ಯಾನವನಕ್ಕೂ ಕಡಿಮೆ ಇಲ್ಲ ಎನ್ನುವಂತೆ ಅಧಿಕಾರಿಗಳು ಸ್ಮಶಾನ ನಿರ್ಮಿಸಿದ್ದಾರೆ. ಇದು ಮುಂದೆ ಒಂದು ದಿನ ಪ್ರವಾಸಿ ತಾಣವಾದರೂ ಅಚ್ಚರಿ ಇಲ್ಲ ಅನ್ಮೋದು ಅಧಿಕಾರಿಗಳ ಮಾತು.

ಕೋಟಯ್ಯ ಕ್ಯಾಂಪ್ ನಲ್ಲಿ ಸರ್ಕಾರದ ಎರಡು ಎಕರೆ ಜಮೀನು ಪಾಳು ಬಿದ್ದಿತ್ತು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹೈಟೆಕ್ ಸ್ಮಶಾನ ನಿರ್ಮಾಣ ಮಾಡಿದ್ದೇವೆ. ಸುಮಾರು 2 ಲಕ್ಷ ವೆಚ್ಚದಲ್ಲಿ ಸ್ಮಶಾನ ನಿರ್ಮಾಣವಾಗಿದೆ. ಇದು ಹಿಂದೂ ಮುಸ್ಲಿಂ ಭಾವೈಕ್ಯತೆಯ ಸ್ಮಶಾನ. ಇದು ಮುಂದೆ ಪ್ರವಾಸಿ ತಾಣವಾದರೂ ಅಚ್ಚರಿ ಇಲ್ಲ ಎಂದು ತಾಲೂಕು ಪಂಚಾಯಿತಿ ಅಧಿಕಾರಿ ಮೋಹನ ತಿಳಿಸಿದ್ದಾರೆ.

ಇದನ್ನೂ ಓದಿ: ‘ರಮ್ಯಾ ಕೇವಲ ವಿಶ್​ ಮಾಡೋದಲ್ಲ, ನಮ್ಮ ಜತೆ ಸಿನಿಮಾ ಮಾಡಬೇಕು’; ಮನದಾಳದ ಮಾತು ಹೇಳಿಕೊಂಡ ಧನಂಜಯ​

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್