AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಟ್ಕಾ ಜಗಿಯಂಗಿಲ್ಲ, ಸಾರಾಯಿ ಸಿಗಲ್ಲ, ಎಣ್ಣೆ ಮತ್ತಲ್ಲಿ ಊರಿಗೆ ಬಂದ್ರೆ ಬೀಳುತ್ತೆ ದಂಡ

ಕೊಪ್ಪಳ: ಹಳ್ಳಿ ಅಂದ್ಮೇಲೆ ಕಿರಾಣಿ ಅಂಗ್ಡಿ ಮುಂದೆ ಕೂತು ಹರಟೆ ಹೊಡೆಯೋದು. ಬಾಯ್ತುಂಬ ಗುಟ್ಕಾ ತುಂಬ್ಕೊಂಡು ಪಿಚ ಪಿಚ ಉಗೀತಾ ಮಾತಾಡೋದು. ಎಣ್ಣೆ ಹೊಡ್ಕೊಂಡು ಸಿಕ್ಕ ಸಿಕ್ಕಲ್ಲಿ ಪಾಚ್​ಕೊಳ್ಳೋ ದೃಶ್ಯಗಳು ಕಾಮನ್ ಅನ್ಸುತ್ತೆ. ಆದ್ರೆ ಈ ಊರಲ್ಲಿ ಗುಟ್ಕಾನೂ ಇಲ್ಲ, ಎಣ್ಣೆಯೂ ಇಲ್ಲ. ಯಾರು ಕೂಡ ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತೇ ಇಲ್ಲ. ಕೊಪ್ಪಳ ತಾಲೂಕಿನ ಹನುಮಹಳ್ಳಿ ಸುಮಾರು ಎರಡು ಸಾವಿರ ಜನರಿರೋ ಗ್ರಾಮ. ಆದ್ರೆ ನೀವ್ ನಂಬ್ತೀರೋ ಇಲ್ವೋ ಗೊತ್ತಿಲ್ಲ ಈ ಊರಲ್ಲಿ ಇದುವರೆಗೆ ಒಂದೇ […]

ಗುಟ್ಕಾ ಜಗಿಯಂಗಿಲ್ಲ, ಸಾರಾಯಿ ಸಿಗಲ್ಲ, ಎಣ್ಣೆ ಮತ್ತಲ್ಲಿ ಊರಿಗೆ ಬಂದ್ರೆ ಬೀಳುತ್ತೆ ದಂಡ
ಸಾಧು ಶ್ರೀನಾಥ್​
|

Updated on: Jan 02, 2020 | 2:32 PM

Share

ಕೊಪ್ಪಳ: ಹಳ್ಳಿ ಅಂದ್ಮೇಲೆ ಕಿರಾಣಿ ಅಂಗ್ಡಿ ಮುಂದೆ ಕೂತು ಹರಟೆ ಹೊಡೆಯೋದು. ಬಾಯ್ತುಂಬ ಗುಟ್ಕಾ ತುಂಬ್ಕೊಂಡು ಪಿಚ ಪಿಚ ಉಗೀತಾ ಮಾತಾಡೋದು. ಎಣ್ಣೆ ಹೊಡ್ಕೊಂಡು ಸಿಕ್ಕ ಸಿಕ್ಕಲ್ಲಿ ಪಾಚ್​ಕೊಳ್ಳೋ ದೃಶ್ಯಗಳು ಕಾಮನ್ ಅನ್ಸುತ್ತೆ. ಆದ್ರೆ ಈ ಊರಲ್ಲಿ ಗುಟ್ಕಾನೂ ಇಲ್ಲ, ಎಣ್ಣೆಯೂ ಇಲ್ಲ. ಯಾರು ಕೂಡ ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತೇ ಇಲ್ಲ.

ಕೊಪ್ಪಳ ತಾಲೂಕಿನ ಹನುಮಹಳ್ಳಿ ಸುಮಾರು ಎರಡು ಸಾವಿರ ಜನರಿರೋ ಗ್ರಾಮ. ಆದ್ರೆ ನೀವ್ ನಂಬ್ತೀರೋ ಇಲ್ವೋ ಗೊತ್ತಿಲ್ಲ ಈ ಊರಲ್ಲಿ ಇದುವರೆಗೆ ಒಂದೇ ಒಂದು ಎಫ್​ಐಆರ್ ದಾಖಲಾಗಿಲ್ಲ. ಸಣ್ಣ ಪುಟ್ಟ ಜಗಳವಾದ್ರೂ ಗ್ರಾಮದ ಹಿರಿಯರೇ ಬಗೆಹರಿಸುತ್ತಾರೆ. ಹೀಗಾಗಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತುವ ಪ್ರಸಂಗವೇ ಬಂದಿಲ್ವಂತೆ. ಇನ್ನು ಊರಲ್ಲಿ ಒಂದೇ ಒಂದು ಹೋಟೆಲ್​ ಕೂಡ ಇಲ್ಲ. ಮದ್ಯ ಮತ್ತು ಗುಟ್ಕಾ ಮಾರಾಟವನ್ನ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ರಸ್ತೇಲಿ ಯುವಕ ಯುವತಿಯರು ಮೊಬೈಲ್​ನಲ್ಲಿ ಕಚ್ಕೊಂಡಿದ್ರೆ ಹಿರಿಯರೇ ಕಿವಿಹಿಂಡಿ ಬುದ್ಧಿ ಹೇಳ್ತಾರೆ.

ಮದ್ಯ ಮಾರಾಟ ನಿಷೇಧ ಮಾಡಿರೋದು ಒಂದ್ಕಡೆಯಾದ್ರೆ. ಗ್ರಾಮಕ್ಕೆ ಯಾರೂ ಕೂಡ ಮದ್ಯಪಾನ ಮಾಡಿ ಬರುವಂತೆಯೂ ಇಲ್ಲ ಅನ್ನೋ ನಿಯಮವಿದೆ. ಒಂದ್ವೇಳೆ ಎಣ್ಣೆ ಮತ್ತಲ್ಲಿ ಊರಿಗೆ ಬಂದ್ರೆ ಅಂಥವರಿಗೆ ದಂಡ ಹಾಕಲಾಗುತ್ತೆ. ಕೆಲವರು ಒಂದು ಸಾವಿರದಿಂದ ಎರಡು ಸಾವಿರದವರೆಗೆ ದಂಡ ಹಾಕಿಸಿಕೊಂಡ ಉದಾಹರಣೆಯೂ ಇದೆ.

ಒಟ್ನಲ್ಲಿ, ರಾಜ್ಯದಲ್ಲಿ ಗುಟ್ಕಾ ಮೇಲಾಗಲಿ, ಮದ್ಯ ಮಾರಾಟದ ಮೇಲಾಗಲಿ ನಿಷೇಧ ಇಲ್ಲ. ಆದ್ರೆ ಕೊಪ್ಪಳದ ಹನುಮಹಳ್ಳಿ ಜನ ತಾವೇ ಕೆಲವೊಂದು ನಿಯಮ ರೂಪಿಸಿಕೊಂಡು ಅವುಗಳಿಂದ ದೂರವಿದ್ದಾರೆ. ಆಧುನಿಕ ಯುಗದಲ್ಲೂ ಇಂಥಾದೊಂದು ಗ್ರಾಮ ಇದೆ ಅಂತ ನಂಬೋಕೆ ಕಷ್ಟವಾದ್ರೂ ಇದು ನಿಜ.

Follow Us
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!