AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಟ್ಕಾ ಜಗಿಯಂಗಿಲ್ಲ, ಸಾರಾಯಿ ಸಿಗಲ್ಲ, ಎಣ್ಣೆ ಮತ್ತಲ್ಲಿ ಊರಿಗೆ ಬಂದ್ರೆ ಬೀಳುತ್ತೆ ದಂಡ

ಕೊಪ್ಪಳ: ಹಳ್ಳಿ ಅಂದ್ಮೇಲೆ ಕಿರಾಣಿ ಅಂಗ್ಡಿ ಮುಂದೆ ಕೂತು ಹರಟೆ ಹೊಡೆಯೋದು. ಬಾಯ್ತುಂಬ ಗುಟ್ಕಾ ತುಂಬ್ಕೊಂಡು ಪಿಚ ಪಿಚ ಉಗೀತಾ ಮಾತಾಡೋದು. ಎಣ್ಣೆ ಹೊಡ್ಕೊಂಡು ಸಿಕ್ಕ ಸಿಕ್ಕಲ್ಲಿ ಪಾಚ್​ಕೊಳ್ಳೋ ದೃಶ್ಯಗಳು ಕಾಮನ್ ಅನ್ಸುತ್ತೆ. ಆದ್ರೆ ಈ ಊರಲ್ಲಿ ಗುಟ್ಕಾನೂ ಇಲ್ಲ, ಎಣ್ಣೆಯೂ ಇಲ್ಲ. ಯಾರು ಕೂಡ ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತೇ ಇಲ್ಲ. ಕೊಪ್ಪಳ ತಾಲೂಕಿನ ಹನುಮಹಳ್ಳಿ ಸುಮಾರು ಎರಡು ಸಾವಿರ ಜನರಿರೋ ಗ್ರಾಮ. ಆದ್ರೆ ನೀವ್ ನಂಬ್ತೀರೋ ಇಲ್ವೋ ಗೊತ್ತಿಲ್ಲ ಈ ಊರಲ್ಲಿ ಇದುವರೆಗೆ ಒಂದೇ […]

ಗುಟ್ಕಾ ಜಗಿಯಂಗಿಲ್ಲ, ಸಾರಾಯಿ ಸಿಗಲ್ಲ, ಎಣ್ಣೆ ಮತ್ತಲ್ಲಿ ಊರಿಗೆ ಬಂದ್ರೆ ಬೀಳುತ್ತೆ ದಂಡ
ಸಾಧು ಶ್ರೀನಾಥ್​
|

Updated on: Jan 02, 2020 | 2:32 PM

Share

ಕೊಪ್ಪಳ: ಹಳ್ಳಿ ಅಂದ್ಮೇಲೆ ಕಿರಾಣಿ ಅಂಗ್ಡಿ ಮುಂದೆ ಕೂತು ಹರಟೆ ಹೊಡೆಯೋದು. ಬಾಯ್ತುಂಬ ಗುಟ್ಕಾ ತುಂಬ್ಕೊಂಡು ಪಿಚ ಪಿಚ ಉಗೀತಾ ಮಾತಾಡೋದು. ಎಣ್ಣೆ ಹೊಡ್ಕೊಂಡು ಸಿಕ್ಕ ಸಿಕ್ಕಲ್ಲಿ ಪಾಚ್​ಕೊಳ್ಳೋ ದೃಶ್ಯಗಳು ಕಾಮನ್ ಅನ್ಸುತ್ತೆ. ಆದ್ರೆ ಈ ಊರಲ್ಲಿ ಗುಟ್ಕಾನೂ ಇಲ್ಲ, ಎಣ್ಣೆಯೂ ಇಲ್ಲ. ಯಾರು ಕೂಡ ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತೇ ಇಲ್ಲ.

ಕೊಪ್ಪಳ ತಾಲೂಕಿನ ಹನುಮಹಳ್ಳಿ ಸುಮಾರು ಎರಡು ಸಾವಿರ ಜನರಿರೋ ಗ್ರಾಮ. ಆದ್ರೆ ನೀವ್ ನಂಬ್ತೀರೋ ಇಲ್ವೋ ಗೊತ್ತಿಲ್ಲ ಈ ಊರಲ್ಲಿ ಇದುವರೆಗೆ ಒಂದೇ ಒಂದು ಎಫ್​ಐಆರ್ ದಾಖಲಾಗಿಲ್ಲ. ಸಣ್ಣ ಪುಟ್ಟ ಜಗಳವಾದ್ರೂ ಗ್ರಾಮದ ಹಿರಿಯರೇ ಬಗೆಹರಿಸುತ್ತಾರೆ. ಹೀಗಾಗಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತುವ ಪ್ರಸಂಗವೇ ಬಂದಿಲ್ವಂತೆ. ಇನ್ನು ಊರಲ್ಲಿ ಒಂದೇ ಒಂದು ಹೋಟೆಲ್​ ಕೂಡ ಇಲ್ಲ. ಮದ್ಯ ಮತ್ತು ಗುಟ್ಕಾ ಮಾರಾಟವನ್ನ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ರಸ್ತೇಲಿ ಯುವಕ ಯುವತಿಯರು ಮೊಬೈಲ್​ನಲ್ಲಿ ಕಚ್ಕೊಂಡಿದ್ರೆ ಹಿರಿಯರೇ ಕಿವಿಹಿಂಡಿ ಬುದ್ಧಿ ಹೇಳ್ತಾರೆ.

ಮದ್ಯ ಮಾರಾಟ ನಿಷೇಧ ಮಾಡಿರೋದು ಒಂದ್ಕಡೆಯಾದ್ರೆ. ಗ್ರಾಮಕ್ಕೆ ಯಾರೂ ಕೂಡ ಮದ್ಯಪಾನ ಮಾಡಿ ಬರುವಂತೆಯೂ ಇಲ್ಲ ಅನ್ನೋ ನಿಯಮವಿದೆ. ಒಂದ್ವೇಳೆ ಎಣ್ಣೆ ಮತ್ತಲ್ಲಿ ಊರಿಗೆ ಬಂದ್ರೆ ಅಂಥವರಿಗೆ ದಂಡ ಹಾಕಲಾಗುತ್ತೆ. ಕೆಲವರು ಒಂದು ಸಾವಿರದಿಂದ ಎರಡು ಸಾವಿರದವರೆಗೆ ದಂಡ ಹಾಕಿಸಿಕೊಂಡ ಉದಾಹರಣೆಯೂ ಇದೆ.

ಒಟ್ನಲ್ಲಿ, ರಾಜ್ಯದಲ್ಲಿ ಗುಟ್ಕಾ ಮೇಲಾಗಲಿ, ಮದ್ಯ ಮಾರಾಟದ ಮೇಲಾಗಲಿ ನಿಷೇಧ ಇಲ್ಲ. ಆದ್ರೆ ಕೊಪ್ಪಳದ ಹನುಮಹಳ್ಳಿ ಜನ ತಾವೇ ಕೆಲವೊಂದು ನಿಯಮ ರೂಪಿಸಿಕೊಂಡು ಅವುಗಳಿಂದ ದೂರವಿದ್ದಾರೆ. ಆಧುನಿಕ ಯುಗದಲ್ಲೂ ಇಂಥಾದೊಂದು ಗ್ರಾಮ ಇದೆ ಅಂತ ನಂಬೋಕೆ ಕಷ್ಟವಾದ್ರೂ ಇದು ನಿಜ.

ಫಿಲಿಪೈನ್ಸ್​ನಲ್ಲಿ ಭೂಕುಸಿತ, ಬೃಹತ್ ಕಸದ ರಾಶಿ ಮೈಮೇಲೆ ಬಿದ್ದು ಓರ್ವ ಸಾವು
ಫಿಲಿಪೈನ್ಸ್​ನಲ್ಲಿ ಭೂಕುಸಿತ, ಬೃಹತ್ ಕಸದ ರಾಶಿ ಮೈಮೇಲೆ ಬಿದ್ದು ಓರ್ವ ಸಾವು
ಗಿಲ್ಲಿ ಕಂಡ್ರೆ ರಕ್ಷಿತಾಗೆ ಅದೆಷ್ಟು ಪ್ರೀತಿ ನೋಡಿ; ಈ ವಿಡಿಯೋನೆ ಸಾಕ್ಷಿ
ಗಿಲ್ಲಿ ಕಂಡ್ರೆ ರಕ್ಷಿತಾಗೆ ಅದೆಷ್ಟು ಪ್ರೀತಿ ನೋಡಿ; ಈ ವಿಡಿಯೋನೆ ಸಾಕ್ಷಿ
ರೈಲಿನ ಮೇಲೆ ಹತ್ತಿ ಪವರ್​ ಲೈನ್ ಕೆಳಗೆ ಕುಳಿತ ಯುವಕ
ರೈಲಿನ ಮೇಲೆ ಹತ್ತಿ ಪವರ್​ ಲೈನ್ ಕೆಳಗೆ ಕುಳಿತ ಯುವಕ
S ಅಕ್ಷರದಿಂದ ಶುರುವಾಗುವ ಹೆಸರುಗಳಿಗೆ ಈ ವರ್ಷ ಅದೃಷ್ಟವೋ ಅದೃಷ್ಟ
S ಅಕ್ಷರದಿಂದ ಶುರುವಾಗುವ ಹೆಸರುಗಳಿಗೆ ಈ ವರ್ಷ ಅದೃಷ್ಟವೋ ಅದೃಷ್ಟ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲ ಇರಲಿದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲ ಇರಲಿದೆ
ದಾರಿ ತಪ್ಪಿ ಊರೊಳಗೆ ಬಂದ ಜಿಂಕೆಯ ಬೆನ್ನಟ್ಟಿದ ನಾಯಿಗಳು; ಆಮೇಲೇನಾಯ್ತು?
ದಾರಿ ತಪ್ಪಿ ಊರೊಳಗೆ ಬಂದ ಜಿಂಕೆಯ ಬೆನ್ನಟ್ಟಿದ ನಾಯಿಗಳು; ಆಮೇಲೇನಾಯ್ತು?
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು