ಕೊಪ್ಪಳ: ಗಡ್ಡೆಯಾಗುವ ಮೊದಲೇ ಹಾಳಾದ ಈರುಳ್ಳಿ, ಬೆಲೆ ಹೆಚ್ಚಾದರೂ ರೈತರಿಗಿಲ್ಲ ಪ್ರಯೋಜನ

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಕೋಮಲಾಪುರ ಗ್ರಾಮದಲ್ಲಿ ನೂರಾರು ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿ ಈರುಳ್ಳಿ ಬೆಳದಿದ್ದರು. ಆದ್ರೆ ಉತ್ತಮ ಬೆಳೆ ಬರುತ್ತೆ ಅಂತ ಕನಸು ಕಂಡಿದ್ದ ರೈತರಿಗೆ ಇದೀಗ ಶಾಕ್ ಆಗಿದೆ. ಇದಕ್ಕೆ ಕಾರಣ ಮಳೆ ಕೊರತೆ.

ಕೊಪ್ಪಳ: ಗಡ್ಡೆಯಾಗುವ ಮೊದಲೇ ಹಾಳಾದ ಈರುಳ್ಳಿ, ಬೆಲೆ ಹೆಚ್ಚಾದರೂ ರೈತರಿಗಿಲ್ಲ ಪ್ರಯೋಜನ
ಸಾಂದರ್ಭಿಕ ಚಿತ್ರ
Follow us
| Updated By: ಗಣಪತಿ ಶರ್ಮ

Updated on: Nov 01, 2023 | 4:30 PM

ಕೊಪ್ಪಳ, ನವೆಂಬರ್ 1: ರಾಜ್ಯದಲ್ಲಿ ಈರುಳ್ಳಿ ಬೆಲೆ ಹೆಚ್ಚಾಗಿದ್ದು (Onion Price Hike) ಗ್ರಾಹಕರ ಕಣ್ಣಲ್ಲಿ ಕಣ್ಣೀರು ಬರುವಂತೆ ಮಾಡಿದೆ. ಹಾಗೆಂದು ಈರುಳ್ಳಿ ಬೆಳೆಗಾರರು ಸಂತಸದಲ್ಲಿದ್ದಾರೆಯೇ ಎಂದು ಪ್ರಶ್ನಿಸಿದರೆ ಅದೂ ಇಲ್ಲ. ಹೌದು ಈರುಳ್ಳಿ ಬೆಳೆಗಾರರ ಕಣ್ಣಲ್ಲಿ ಕೂಡಾ ಈರುಳ್ಳಿ ಕಣ್ಣೀರು ತರಿಸುತ್ತಿದೆ. ಈರುಳ್ಳಿ ಬೆಲೆ ಏರಿಕೆ ರೈತರಿಗೆ ಖುಷಿ ತಂದಿತ್ತು. ಆದ್ರೆ ಈರುಳ್ಳಿ ಮಾರಾಟ ಮಾಡಿ ಸಾಲ ತೀರಿಸಬೇಕು ಅಂತ ಅಂದುಕೊಂಡಿದ್ದ ರೈತರಿಗೆ ಶಾಕ್ ಆಗಿದೆ. ಯಾಕಂದ್ರೆ ಗಡ್ಡೆಯಾಗುವ ಮೊದಲೇ ಮಳೆ ಕೊರತೆಯಿಂದ ಈರುಳ್ಳಿ ಬೆಳೆ ಬಾಡಿ ಹೋಗುತ್ತಿದೆ.

ಈರುಳ್ಳಿ ಬೆಲೆ ಏರಿಕೆಯಿಂದ ರೈತರಿಗೆ ಲಾಭವಾಗುತ್ತಿದೆಯಾ ಅಂದ್ರೆ ಅದು ಕೂಡಾ ಇಲ್ಲಾ. ಕೆಲವೇ ಕೆಲವು ರೈತರಿಗೆ ಮಾತ್ರ ಈರುಳ್ಳಿ ಬೆಲೆಯಿಂದ ಲಾಭವಾಗ್ತಿದೆ. ಬಹುತೇಕ ಈರುಳ್ಳಿ ರೈತರಿಗೆ ಬೆಲೆ ಏರಿಕೆಯ ಲಾಭ ಸಿಗದಂತಾಗಿದೆ.

ಬೆಲೆ ಏರಿಕೆಗೂ ಮಳೆ ಕೊರತೆಯೇ ಕಾರಣ

ಈರುಳ್ಳಿ ಬೆಲೆ ಹೆಚ್ಚಾಗಲು ಅಸಲಿ ಕಾರಣ, ಈ ಬಾರಿ ಉಂಟಾಗಿರೋ ಮಳೆ ಕೊರತೆ. ಹೌದು, ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಕೋಮಲಾಪುರ ಗ್ರಾಮದಲ್ಲಿ ನೂರಾರು ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿ ಈರುಳ್ಳಿ ಬೆಳದಿದ್ದರು. ಆದ್ರೆ ಉತ್ತಮ ಬೆಳೆ ಬರುತ್ತೆ ಅಂತ ಕನಸು ಕಂಡಿದ್ದ ರೈತರಿಗೆ ಇದೀಗ ಶಾಕ್ ಆಗಿದೆ. ಇದಕ್ಕೆ ಕಾರಣ ಮಳೆ ಕೊರತೆ. ಹೌದು ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದೆ. ಹಿಂಗಾರು ಮಳೆ ಕೂಡಾ ಬರ್ತಾಯಿಲ್ಲ. ಹೀಗಾಗಿ ಈರುಳ್ಳಿ ಗಡ್ಡೆಯಾಗೋ ಸಮಯದಲ್ಲಿಯೇ, ನೀರಿನ ಕೊರತೆಯಿಂದ ಹಾಳಾಗಿ ಹೋಗುತ್ತಿದೆ. ಮಳೆಯಾಗಿದ್ದರೆ ಗಡ್ಡೆಗಳು ಉತ್ತವಾಗಿ ಆಗ್ತಿದ್ದವು. ಆದ್ರೆ ಮಳೆಯಾಗದೇ ಇರೋದರಿಂದ ಸರಿಯಾಗಿ ಗಡ್ಡೆಗಳಾಗಿಲ್ಲ. ಗಡ್ಡೆಯಾಗದ ಈರುಳ್ಳಿ ಬಳಕೆಗೆ ಬಾರದೇ ಇರೋದರಿಂದ ರೈತರು, ಜಮೀನಿನಲ್ಲಿಯೇ ಹಾಗೆ ಬಿಟ್ಟಿದ್ದಾರೆ. ಇದೇ ಕಾರಣದಿಂದ ಮಾರ್ಕೇಟ್ ಗೆ ಈರುಳ್ಳಿ ಬರ್ತಾಯಿಲ್ಲ. ಹೀಗಾಗಿ ದಿನದಿಂದ ದಿನಕ್ಕೆ ಈರುಳ್ಳಿ ಬೆಲೆ ಹೆಚ್ಚಾಗುತ್ತಿದೆ.

ರೈತರಿಗಿಲ್ಲ ಈರುಳ್ಳಿ ಬೆಲೆ ಏರಿಕೆಯ ಪ್ರಯೋಜನ

ಮತ್ತೊಂದೆಡೆ ಈರುಳ್ಳಿ ಬೆಲೆ ಹೆಚ್ಚಾದ್ರು ಕೂಡಾ ರೈತರಿಗೆ ಮಾತ್ರ ಅದರ ಪ್ರಯೋಜನ ಸಿಗದಂತಾಗಿದೆ. ಹೌದು ಸದ್ಯ ಪ್ರತಿ ಕ್ವಿಂಟಲ್ ಈರುಳ್ಳಿ ಬೆಲೆ ಏಳು ಸಾವಿರ ರೂಪಾಯಿಗೂ ಹೆಚ್ಚಿದೆ. ಉತ್ತಮ ಫಸಲು ಬಂದಾಗ ಈ ಬೆಲೆ ಸಿಕ್ಕಿದ್ದರೆ ರೈತರಿಗೆ ಸಾವಿರಾರು ರೂಪಯಿ ಲಾಭವಾಗ್ತಿತ್ತು. ಆದ್ರೆ ಬೆಲೆ ಹೆಚ್ಚಾದ್ರು ಕೂಡಾ ರೈತರ ಬಳಿ ಈರುಳ್ಳಿ ಇಲ್ಲದೇ ಇರೋದರಿಂದ, ರೈತರಿಗೆ ಬೆಲೆ ಹೆಚ್ಚಾದ್ರು ಕೂಡಾ ಲಾಭ ಸಿಗದಂತಾಗಿದೆ.

ಇದನ್ನೂ ಓದಿ: ವೃದ್ದ ಹುಚ್ಚಮ್ಮಗೆ ಅರ್ಹ ರಾಜೋತ್ಸವ ಪ್ರಶಸ್ತಿ! ಕನ್ನಡ ನಾಡಿಗೆ ಇವರ ಕೊಡುಗೆ ಏನು ಗೊತ್ತಾ?

ಕಳೆದ ವರ್ಷ ಅಧಿಕ ಮಳೆಯಿಂದ ಈರುಳ್ಳಿ ಬೆಳೆ ಹಾಳಾಗಿತ್ತು. ಈ ಬಾರಿ, ಮಳೆ ಕೊರತೆಯಿಂದ ಈರುಳ್ಳಿ ಬೆಳೆ ಹಾಳಾಗಿದೆ. ಒಂದು ಎಕರೆ ಈರುಳ್ಳಿ ಬೆಳೆಯಲು ಇಪ್ಪತ್ತೈದು ಸಾವಿರ ಖರ್ಚು ಮಾಡಿದ್ದೇವೆ, ಇದೀಗ ಬೆಲೆ ಹೆಚ್ಚಾದ್ರು ಕೂಡಾ ಲಾಭ ಇಲ್ಲದಂತಾಗಿದೆ ಅಂತಿದ್ದಾರೆ ರೈತರು. ಉತ್ತಮ ಈಳುವರಿ ಬಂದಿದ್ರೆ ಪ್ರತಿ ಎಕರೆಗೆ ಐವತ್ತರಿಂದ ಎಂಬತ್ತು ಕ್ವಿಂಟಲ್ ಈರುಳ್ಳಿ ಬರ್ತಿತ್ತು.ಆದ್ರೆ ಇದೀಗ ಎಕರೆಗೆ ಐದರಿಂದ ಹತ್ತು ಕ್ವಿಂಟಲ್ ಕೂಡಾ ಬೆಳದಿಲ್ಲಾ. ಬೆಳೆ ಬೆಳೆಯಲು ಮಾಡಿದ ಖರ್ಚು ಕೂಡಾ ಬರೋದಿಲ್ಲಾ ಅಂತಿದ್ದಾರೆ ರೈತರು.

ಮಳೆ ಕೊರತೆಯಿಂದ ಈರುಳ್ಳಿ ಬೆಳೆ ಹಾಳಾಗಿದೆ. ಇದೇ ಕಾರಣಕ್ಕೆ ಮಾರ್ಕೇಟ್ ಗೆ ಈರುಳ್ಳಿ ಬರ್ತಾಯಿಲ್ಲಾ. ಹೀಗಾಗಿ ಬೆಲೆ ಹೆಚ್ಚಾಗುತ್ತಿದ್ದು, ಮುಂದಿನ ದಿನದಲ್ಲಿ ಇನ್ನು ಬೆಲೆ ಹೆಚ್ಚಾದ್ರು ಅಚ್ಚರಿಯಿಲ್ಲಾ ಅಂತಿದ್ದಾರೆ ರೈತರು. ಇನ್ನು ಬೆಲೆ ಹೆಚ್ಚಾದ್ರು ಕೂಡಾ ರೈತರಿಗೆ ನಿರೀಕ್ಷಿತ ಲಾಭ ಸಿಗದೇ ಇರೋದು ಮಾತ್ರ ದುರ್ದೈವದ ಸಂಗತಿಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ