AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಪ್ಪಳ: ಬಿಂದಿಗೆ ನೀರಿಗಾಗಿ ಜನರ ಪರದಾಟ; ಶಾಲೆ ಬಿಟ್ಟು ನೀರು ತುಂಬಿಸೋದನ್ನೇ ಕೆಲಸ ಮಾಡಿಕೊಂಡಿರುವ ಶಾಲಾ ಮಕ್ಕಳು

ಕೊಪ್ಪಳ ತಾಲೂಕಿನ ಇಂದಿರಾ ನಗರ ತಾಂಡಾದಲ್ಲಿ ಶಾಲಾ ಮಕ್ಕಳಿಗೆ ಇದೀಗ ಶಾಲೆಗೆ ಹೋಗುವುದಕ್ಕಿಂತ ಹೆಚ್ಚಾಗಿ, ಕರೆಂಟ್ ಯಾವಾಗ ಬರುತ್ತೋ, ಯಾರ ಬೋರವೆಲ್​ಗೆ ಹೋಗಿ ನೀರು ತರುವುದೋ ಎನ್ನುವುದೇ ದೊಡ್ಡ ಚಿಂತೆಯಾಗಿದೆ. ಹೆತ್ತವರು ಕೂಲಿ ಕೆಲಸಕ್ಕೆ ಹೋದರೆ, ಮಕ್ಕಳಿಗೆ ನೀರು ತರುವುದೆ ದೈನಂದಿನ ಕೆಲಸವಾಗಿದೆ. ಬೇಸಿಗೆ ಆರಂಭದಲ್ಲಿಯೇ ಕೊಪ್ಪಳ ಜಿಲ್ಲೆಯಲ್ಲಿ ನೀರಿಗೆ ತತ್ವಾರ ಆರಂಭವಾಗಿದ್ದು, ಗ್ರಾಮೀಣ ಬಾಗದ ಜನರು ಬಿಂದಿಗೆ ನೀರಿಗಾಗಿ ಅಲೆದಾಡುತ್ತಿದ್ದಾರೆ.

ಕೊಪ್ಪಳ: ಬಿಂದಿಗೆ ನೀರಿಗಾಗಿ ಜನರ ಪರದಾಟ; ಶಾಲೆ ಬಿಟ್ಟು ನೀರು ತುಂಬಿಸೋದನ್ನೇ ಕೆಲಸ ಮಾಡಿಕೊಂಡಿರುವ ಶಾಲಾ ಮಕ್ಕಳು
ನೀರಿಗಾಗಿ ಕೊಪ್ಪಳ ಜನರ ಪರದಾಟ
ಸಂಜಯ್ಯಾ ಚಿಕ್ಕಮಠ
| Edited By: |

Updated on: Feb 15, 2024 | 6:52 PM

Share

ಕೊಪ್ಪಳ, ಫೆ.15: ಬಿಸಿಲನಾಡು ಎಂದು ಕೆರಸಿಕೊಳ್ಳುವ ಕೊಪ್ಪಳ(Koppal)ದಲ್ಲಿ ಈಗಾಗಲೇ ಬೇಸಿಗೆಯ ಬಿಸಿಲಿನ ತಾಪ ಆರಂಭವಾಗಿದೆ. ಅದರ ಜೊತೆಗೆ ಕುಡಿಯುವ ನೀರಿಗೆ ಅನೇಕ ಕಡೆ ಹಾಹಾಕಾರ ಕೂಡ ಆರಂಭವಾಗಿದೆ. ಮುಂಗಾರು ಮಳೆ, ಹಿಂಗಾರು ಮಳೆ ಸರಿಯಾಗಿ ಆಗದೇ ಇರುವುದರಿಂದ ಕೊಳವೆ ಬಾವಿಗಳು ಬೇಸಿಗೆ ಆರಂಭದಲ್ಲಿಯೇ ಬತ್ತಿ ಹೋಗಿವೆ. ಇದು ಗ್ರಾಮೀಣ ಭಾಗದ ಜನರು ಕುಡಿಯುವ ನೀರಿಗಾಗಿ ಪರದಾಡುವಂತೆ ಮಾಡಿದೆ. ಇನ್ನು ಕೊಪ್ಪಳ ತಾಲೂಕಿನ ಇಂದಿರಾ ನಗರ ತಾಂಡಾದಲ್ಲಿ ಸಾವಿರಕ್ಕೂ ಹೆಚ್ಚು ಜನ ವಾಸವಾಗಿದ್ದಾರೆ. ತಾಂಡಾಕ್ಕೆ ನೀರು ಪೂರೈಕೆ ಮಾಡುತ್ತಿದ್ದ ನಾಲ್ಕು ಕೊಳವೆ ಬಾವಿಗಳು ಸಂಪೂರ್ಣವಾಗಿ ಬತ್ತಿ ಹೋಗಿವೆಯಂತೆ. ಹೀಗಾಗಿ ತಾಂಡಾದ ನಿವಾಸಿಗಳು, ಖಾಸಗಿ ವ್ಯಕ್ತಿಗಳ ಬಳಿ ಹೋಗಿ, ಗಂಟೆಗಟ್ಟಲೆ ಕಾದು ನಿಂತು, ನೀರು ತುಂಬಿಸಿಕೊಂಡು ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ.

ಶಾಲೆ ಬಿಟ್ಟು ನೀರು ತುಂಬಿಸೋದನ್ನೇ ಕೆಲಸ ಮಾಡಿಕೊಂಡಿರುವ ಶಾಲಾ ಮಕ್ಕಳು

ತಾಂಡಾದ ಬಹುತೇಕರು ಕೂಲಿ ಕೆಲಸ ಮಾಡುತ್ತಾರೆ. ದೊಡ್ಡವರು ಕೂಲಿ ಕೆಲಸಕ್ಕೆ ಹೋದ್ರೆ, ತಾಂಡಾದಲ್ಲಿರುವ ಶಾಲಾ ಮಕ್ಕಳು ಮತ್ತು ವೃದ್ದರು ಪ್ರತಿನಿತ್ಯ ಅಲ್ಲಲಿ ಅಡ್ಡಾಡಿ ನೀರು ತರುವ ಕೆಲಸ ಮಾಡುತ್ತಿದ್ದಾರೆ. ಬಹುತೇಕ ಮಕ್ಕಳಿಗೆ ಇದೀಗ ಪ್ರತಿನಿತ್ಯ ಎಲ್ಲೆಲ್ಲಿ ನೀರು ಸಿಗುತ್ತೋ ಅಲ್ಲಿಗೆ ಹೋಗಿ ನೀರು ತುಂಬಿಕೊಂಡು ಬರುವುದೇ ಪ್ರತಿನಿತ್ಯದ ಕೆಲಸವಾಗಿದೆ. ನಮಗೆ ಓದಲು ಆಗುತ್ತಿಲ್ಲ. ನೀರು ತುಂಬಿಸಿ ಶಾಲೆಗೆ ಹೋಗಬೇಕಾಗಿರುವುದರಿಂದ ಶಾಲೆಯಲ್ಲಿ ಶಿಕ್ಷಕರು ಯಾಕೆ ಶಾಲೆಗೆ ಲೇಟಾಗಿ ಬಂದಿದ್ದೀರಿ ಎಂದು ಹೊಡೆಯುತ್ತಾರೆ. ಶಾಲೆಯಲ್ಲಿ ಪಾಠ ಕೇಳಲು ಕೂಡ ನಮಗೆ ಸರಿಯಾಗಿ ಆಗುತ್ತಿಲ್ಲ ಎಂದು ಹತ್ತಾರು ವಿದ್ಯಾರ್ಥಿಗಳು ನೋವು ತೋಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:ಬಿಸಿಲಿನ ಬೇಗೆಯ ನಡುವೆಯೇ ಗದಗ ಜನರಿಗೆ ನೀರಿನ ಸಮಸ್ಯೆ; ಒಂದು ತಿಂಗಳಿಂದ ಹನಿ ನೀರಿಗಾಗಿ ಗಣೇಶ್ ನಗರ ಜನರ ಪರದಾಟ

ಇನ್ನು ಇಂದಿರಾ ನಗರ ತಾಂಡದ ಜನರಿಗೆ ನೀರು ಪೂರೈಕೆ ಮಾಡಲು ಜಲಜೀವನ್​ ಮಿಷನ್ ಅಡಿ, ಮನೆ ಮನೆಗೆ ಗಂಗೆ ಯೋಜನೆ ಜಾರಿಯಾಗಿದೆ. ಪ್ರತಿ ಮನೆಗೆ ನಳದ ಸಂಪರ್ಕ ಕೂಡ ಕಲ್ಪಿಸಲಾಗಿದೆ. ಆದ್ರೆ, ನಳ ಸಂಪರ್ಕ ಕಲ್ಪಿಸಿ ವರ್ಷವಾದರೂ ಕೂಡ ಹನಿ ನೀರು ನಲ್ಲಿಯಲ್ಲಿ ಬಂದಿಲ್ಲ. ಬೇರೆ ಬೋರೆವಲ್​ಗಳು ಬತ್ತಿರೋದರಿಂದ ಖಾಸಗಿ ವ್ಯಕ್ತಿಗಳ ಬೋರೆವಲ್​ಗಳಿಗೆ ಹೋಗಿ, ಅವರಿಗೆ ಮನವಿ ಮಾಡಿ ನೀರು ತುಂಬಿಕೊಂಡು ಬರ್ತಿದ್ದಾರೆ. ಇನ್ನು ಗ್ರಾಮಕ್ಕೆ ನೀರು ಪೂರೈಸಲು ಹೊಸದಾಗಿ ಮತ್ತೊಂದು ಬೋರೆವಲ್ ನನ್ನು ಕೆಲ ತಿಂಗಳ ಹಿಂದೆ ಕೊರೆಸಲಾಗಿದೆಯಂತೆ. ಆದ್ರೆ, ವಿದ್ಯುತ್ ಸಂಪರ್ಕ ಸೇರಿದಂತೆ ಕೆಲ ಕೆಲಸಗಳು ಬಾಕಿ ಇರೋದರಿಂದ ನೀರು ಪೂರೈಕೆಯಾಗ್ತಿಲ್ಲವಂತೆ.

ಪ್ರತಿವರ್ಷ ಬೇಸಿಗೆ ಬಂದಾಗ, ತಮಗೆ ಇದೇ ಸ್ಥಿತಿ ನಿರ್ಮಾಣವಾಗುತ್ತದೆ. ಕಾಟಾಚಾರಾದ ವ್ಯವಸ್ಥೆಯನ್ನು ಅಧಿಕಾರಿಗಳು ಮಾಡುತ್ತಾರೆ. ಆದ್ರೆ, ನಮಗೆ ಶಾಶ್ವತವಾಗಿ ಕುಡಿಯುವ ನೀರು ಸಿಗುವಂತಹ ವ್ಯವಸ್ಥೆಯನ್ನು ಮಾಡಬೇಕು ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ. ಇಂದಿರಾ ನಗರ ತಾಂಡಾಕ್ಕೆ ಎರಡ್ಮೂರು ದಿನದಲ್ಲಿ ಹೊಸ ಬೋರವೆಲ್​ನಿಂದ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳೋದಾಗಿ ಗ್ರಾಮ ಪಂಚಾಯತ್ ಅಧಿಕಾರಿಗಳು ಹೇಳುತ್ತಿದ್ದಾರೆ. ಆದ್ರೆ, ತಾತ್ಕಾಲಿಕ ವ್ಯವಸ್ಥೆಗಿಂತ ಶಾಶ್ವತವಾದ ನೀರಿನ ಮೂಲಗಳನ್ನು ಪತ್ತೆ ಮಾಡಿ, ತಾಂಡಾ ನಿವಾಸಿಗಳಿಗೆ ನೀರು ಪೂರೈಕೆ ಮಾಡೋ ಕೆಲಸವನ್ನು ಅಧಿಕಾರಿಗಳು ಮಾಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್