AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನದಿ ನೀರಲ್ಲಿ ಕೊಚ್ಚಿ ಹೋದ ಕ್ಯಾಂಟರ್​ ಚಾಲಕ: ಸಿನಿಮೀಯ ಮಾದರಿ ರಕ್ಷಣೆ

ನದಿ ನೀರಲ್ಲಿ ಕೊಚ್ಚಿ ಹೋದ ಕ್ಯಾಂಟರ್​ ಚಾಲಕ: ಸಿನಿಮೀಯ ಮಾದರಿ ರಕ್ಷಣೆ

TV9 Web
| Updated By: ಪ್ರಸನ್ನ ಹೆಗಡೆ|

Updated on: Oct 24, 2025 | 12:06 PM

Share

ಕುಶಾವತಿ ನದಿ ನೀರಲ್ಲಿ ಕೊಚ್ಚಿ ಹೋಗುತ್ತಿದ್ದ ಕ್ಯಾಂಟರ್ ಚಾಲಕನನ್ನು ಚೇಳೂರು ತಾಲೂಕಿನ‌ ಹೊಸಹುಡ್ಯ ಗ್ರಾಮದ‌ ಬಳಿ ರಕ್ಷಿಸಲಾಗಿದೆ. ಕ್ಯಾಂಟರ್​ ಕೆಟ್ಟುನಿಂತ ಪರಿಣಾಮ, ಚೇಳೂರು ತಾಲ್ಲೂಕಿನ ಪೆದ್ದೂರು ಗುಂಡ್ಲಹಳ್ಳಿ ಗ್ರಾಮದ ವಿಜಯ್ ವಾಹನದಿಂದ ಇಳಿದಿದ್ದಾರೆ. ಈ ವೇಳೆ ನೀರಿನ ರಭಸಕ್ಕೆ ಅವರು ಕೊಚ್ಚಿಹೋಗಿದ್ದು, ಕೊಂಬೆಯೊಂದನ್ನು ಹಿಡಿದು ಜೀವ ಉಳಿಸಿಕೊಂಡಿದ್ದರು. ಇದನ್ನು ಗಮನಿಸಿರುವ ಸ್ಥಳೀಯರು ಚಾಲಕನನ್ನು ರಕ್ಷಿಸಿದ್ದಾರೆ.

ಚಿಕ್ಕಬಳ್ಳಾಪುರ, ಅಕ್ಟೋಬರ್​ 24: ಭಾರಿ ಮಳೆಯಿಂದ (Rain) ಮೈದುಂಬಿ ಹರಿಯುತ್ತಿರುವ ಕುಶಾವತಿ ನದಿ ನೀರಲ್ಲಿ ಕೊಚ್ಚಿ ಹೋಗುತ್ತಿದ್ದ ಕ್ಯಾಂಟರ್ ಚಾಲಕನನ್ನು ಚೇಳೂರು ತಾಲೂಕನ‌ ಹೊಸಹುಡ್ಯ ಗ್ರಾಮದ‌ ಬಳಿ ರಕ್ಷಿಸಲಾಗಿದೆ. ಹರಿಯುತ್ತಿರುವ ನೀರಿನ ಮಧ್ಯೆ ಕ್ಯಾಂಟರ್​ ಕೆಟ್ಟುನಿಂತ ಪರಿಣಾಮ, ಚೇಳೂರು ತಾಲ್ಲೂಕಿನ ಪೆದ್ದೂರು ಗುಂಡ್ಲಹಳ್ಳಿ ಗ್ರಾಮದ ವಿಜಯ್  ವಾಹನದಿಂದ ಇಳಿದಿದ್ದಾರೆ. ಈ ವೇಳೆ ನೀರಿನ ರಭಸಕ್ಕೆ ಅವರು ಕೊಚ್ಚಿಹೋಗಿದ್ದು, ಕೊಂಬೆಯೊಂದನ್ನು ಹಿಡಿದು ಜೀವ ಉಳಿಸಿಕೊಂಡಿದ್ದಾರೆ. ಇದನ್ನು ಗಮನಿಸಿರುವ ಹೊಸಹುಡ್ಯ ಗ್ರಾಮಸ್ಥರು, ಜೆಸಿಬಿ ಮೂಲಕ ಚಾಲಕನ ರಕ್ಷಣೆ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.