Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾರು ಬೆಕ್ಕನ್ನು ಬೇಟೆಯಾಡುವಾಗ ಮರದಿಂದ ಮರಕ್ಕೆ ಹಾರಿದ ಚಿರತೆ; ವಿದ್ಯುತ್ ತಂತಿ ತಗುಲಿ ಚಿರತೆ-ಬೆಕ್ಕು ಎರಡೂ ಸಾವು

ಗುಂದ ಪಶು ವೈದ್ಯಾಧಿಕಾರಿ ಅರ್ಚಾನ ಸಿನ್ಹಾ ಸ್ಥಳಕ್ಕೆ ಆಗಮಿಸಿದ್ದು, ನಂತರ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿಗಳು ಎಲ್ಲರೂ ಸೇರಿ ಚಿರತೆಯ ಅಂತ್ಯ ಸಂಸ್ಕಾರ ಮಾಡಿದ್ದಾರೆ.

ಹಾರು ಬೆಕ್ಕನ್ನು ಬೇಟೆಯಾಡುವಾಗ ಮರದಿಂದ ಮರಕ್ಕೆ ಹಾರಿದ ಚಿರತೆ; ವಿದ್ಯುತ್ ತಂತಿ ತಗುಲಿ ಚಿರತೆ-ಬೆಕ್ಕು ಎರಡೂ ಸಾವು
ಸಾವಿಗೀಡಾದ ಚಿರತೆಯ ಅಂತ್ಯಸಂಸ್ಕಾರದ ದೃಶ್ಯ
Follow us
preethi shettigar
| Updated By: ಸಾಧು ಶ್ರೀನಾಥ್​

Updated on: Mar 24, 2021 | 3:19 PM

ಉತ್ತರ ಕನ್ನಡ: ಚಿರತೆಯೊಂದು ಮರದ ಮೇಲೆ ಹಾರು ಬೆಕ್ಕೊಂದನ್ನು ಹಿಡಿಯಲು ಜಿಗಿದ ವೇಳೆ ವಿದ್ಯುತ್ ತಂತಿ ತಾಗಿ ಚಿರತೆ ಮತ್ತು ಹಾರುಬೆಕ್ಕು ಎರಡೂ ಪ್ರಾಣಿಗಳು ಸಾವಿಗೀಡಾದ ಘಟನೆ ಜಿಲ್ಲೆಯ ಜೋಯಿಡಾ ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯತ್​ಗೆ ಸೇರಿದ ಶೇವಾಳಿ ಬಳಿ ಸೋಮವಾರ ನಡೆದಿದೆ. ಗುಂದ ಅರಣ್ಯ ಇಲಾಖೆಯ ತಮ್ಮಣಗಿ ಶಾಖೆಯ ಶೇವಾಳಿಯಲ್ಲಿ ಹಾರು ಬೆಕ್ಕನ್ನು ಬೇಟೆಯಾಡುವಾಗ ಚಿರತೆ ಮರದಿಂದ ಮರಕ್ಕೆ ಹಾರಿದ್ದು, ವಿದ್ಯುತ್ ತಂತಿ ತಾಗಿ ಸಾವಿಗೀಡಾಗಿದೆ.

ಗುಂದ ಪಶು ವೈದ್ಯಾಧಿಕಾರಿ ಅರ್ಚಾನ ಸಿನ್ಹಾ ಸ್ಥಳಕ್ಕೆ ಆಗಮಿಸಿದ್ದು, ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿ ಎಲ್ಲರೂ ಸೇರಿ ಚಿರತೆಯ ಅಂತ್ಯ ಸಂಸ್ಕಾರ ಮಾಡಿದ್ದಾರೆ. ಈ ಸಂದರ್ಭದಲ್ಲಿ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಡಿಸಿಎಪ್ ಮಾರಿಯೋ ಕ್ರಿಸ್ತೊ ರಾಜಾ, ಎಸಿ‌‌ಎಪ್ ಕೆ.ಎಸ್ ಗೋರವರ್, ಗುಂದ ವಲಯ ಅರಣ್ಯ ಅಧಿಕಾರಿ ವಿನೋದ ಅಂಗಡಿ, ಪಣಸೋಲಿ ವಲಯ ಅರಣ್ಯಾಧಿಕಾರಿ ಸಂಗಮೇಶ ಪಾಟೀಲ್, ಗುಂದ ಅರಣ್ಯ ಇಲಾಕೆಯ ಫಾರೆಸ್ಟರ್ ಮಧು ಹೊನ್ನಳಿ, ಗುರುರಾಜ ಗೌಡ ಇತರರು ಉಪಸ್ಥಿತರಿದ್ದರು.

ನಂಜನಗೂಡಿನಲ್ಲಿ ಕಾಡು ಬೆಕ್ಕನ್ನು ಕಂಡು ಚಿರತೆ ಎಂದು ಗಾಬರಿಗೊಂಡ ಗ್ರಾಮಸ್ಥರು: ಮೈಸೂರಿನ ನಂಜನಗೂಡು ತಾಲೂಕಿನ ದೇವನೂರು ಗ್ರಾಮದಲ್ಲಿ ಕಾಡು ಬೆಕ್ಕನ್ನು ನೋಡಿ ಚಿರತೆ ಅಂದುಕೊಂಡು ಜನರೆಲ್ಲಾ ಕಂಗಾಲಾಗಿದ್ದಾರೆ. ಗ್ರಾಮದಲ್ಲಿ ಕಾಡು ಬೆಕ್ಕೊಂದು ಸದ್ದಿಲ್ಲದೇ ಓಡಾಡುತ್ತಿತ್ತು. ಅದನ್ನು ದೂರದಿಂದ ನೋಡಿದ ಜನರು ಚಿರತೆ ಎಂದುಕೊಂಡು ಗಾಬರಿಯಾಗಿದ್ದರು.

ತಕ್ಷಣವೇ ಜನರೆಲ್ಲ ಸೇರಿ ಕೈಯ್ಯಲ್ಲಿ ಕೋಲು ಹಿಡಿದು ಹುಡುಕಾಟ ಆರಂಭಿಸಿದರು. ನಂತರ ಗ್ರಾಮದಲ್ಲಿ ಅಡಗಿ ಕುಳಿತಿದ್ದ ಕಾಡು ಬೆಕ್ಕನ್ನು ಸೆರೆಹಿಡಿದಿದ್ದಾರೆ. ಸದ್ಯ ಚಿರತೆ ಎಂದು ತಿಳಿದಿದ್ದ ಜನರು ಕಾಡುಬೆಕ್ಕನ್ನು ನೋಡಿ ನಿಟ್ಟಿಸಿರು ಬಿಟ್ಟಿದ್ದಾರೆ. ಬಳಿಕ ಸೆರೆ ಹಿಡಿದ ಕಾಡು ಬೆಕ್ಕನ್ನು ಅರಣ್ಯ ಇಲಾಖೆ ವಶಕ್ಕೆ ನೀಡಲಾಗಿದೆ.

ಜಿಂಕೆಯ ಅಂತ್ಯಕ್ರಿಯೆ ಮಾಡಿದ ಅರಣ್ಯ ಇಲಾಖೆ: ಕಾಫಿನಾಡಿನಗೆ ಕಾಡಿನಿಂದ ಜಿಂಕೆಯೊಂದು ಆಗಮಿಸಿದ್ದು, ಇದನ್ನು ಕಂಡ ಪಿಟ್​ಬುಲ್ ತಳಿಯ ನಾಯಿ ಅಟ್ಟಿಸಿಕೊಂಡು ಹೋಗಿದೆ. ಹೀಗೆ ಜೆಂಕೆಯನ್ನು ಬೆನ್ನಟ್ಟಿ ಹೋದ ನಾಯಿ ಜಿಂಕೆಯ ಜೊತೆಗೆ ಸುಮಾರು 15 ನಿಮಿಷಗಳ ಕಾಲ ಕಾದಾಟ ನಡೆಸಿದೆ. ಇನ್ನು ಜಿಂಕೆ ತನ್ನೆಲ್ಲಾ ಶಕ್ತಿ ಪ್ರದರ್ಶನ ತೋರಿಸಿದರೂ ನಾಯಿಯ ಎದುರು ಸೋಲು ಒಪ್ಪಿಕೊಳ್ಳಬೇಕಾಯಿತು. ಬರೀ ಸೋಲಾಗಿದ್ದರೆ ಬಹುಶಃ ಅಷ್ಟು ಬೇಸರವಾಗುತ್ತಿರಲಿಲ್ಲ, ಆದರೆ ಪಿಟ್​ಬುಲ್ ತಳಿಯ ನಾಯಿಗೆ ಸಾಥ್ ನೀಡಿದ ಬೀದಿನಾಯಿಗಳು ಜಿಂಕೆಯನ್ನ ಬಲಿತೆಗೆದುಕೊಂಡಿದೆ.

ಈ ವೇಳೆ ಜಿಂಕೆಯ ಸಹಾಯಕ್ಕೆ ಸ್ಥಳೀಯರು ಸೇರಿದಂತೆ ಅರಣ್ಯ ಸಿಬ್ಬಂದಿ ದೌಡಾಯಿಸಿದ್ದರು ಆದರೆ ಜಿಂಕೆ ಬದುಕಿಸಲು ಮಾಡಿದ ಇನ್ನಿಲ್ಲದ ಪ್ರಯತ್ನ ಕೈಗೂಡಲೇ ಇಲ್ಲ. ಸಾವು ಬದುಕಿನ ಹೋರಾಟದಲ್ಲಿ 7 ವರ್ಷದ ಗಂಡು ಜಿಂಕೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಮೂಡಿಗೆರೆ ಸಮೀಪದ ಹಳೆಕೋಟೆ ಅರಣ್ಯ ಇಲಾಖೆಯ ಆವರಣದಲ್ಲಿ ಜಿಂಕೆಯ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಜಿಂಕೆಯ ಮರಣೋತ್ತರ ಪರೀಕ್ಷೆ ಬಳಿಕ ಅಲ್ಲೇ ಅಂತ್ಯಸಂಸ್ಕಾರವನ್ನ ಕೂಡ ಮಾಡಲಾಯಿತು. ಗಾಬರಿಯಿಂದ ಕಾದಾಟ ನಡೆಸಿದ್ದರಿಂದ ಜಿಂಕೆ ಹೃದಯಘಾತದಿಂದ ಸಾವನ್ನಪ್ಪಿರುವ ಸಾಧ್ಯತೆ ಜಾಸ್ತಿಯಿದೆ ಎಂದು ಪಶುವೈದ್ಯರು ಅಭಿಪ್ರಾಯಪಟ್ಟರು.

ಇದನ್ನೂ ಓದಿ:

ಕಾಡು ಬೆಕ್ಕನ್ನು ನೋಡಿ ಚಿರತೆ ಅಂದುಕೊಂಡು ಆತಂಕ ಗೊಂಡ ನಂಜನಗೂಡು ಜನ!

ಜಿಂಕೆ ಮೇಲೆ ನಾಯಿ ದಾಳಿ: ಹೋರಾಟದಲ್ಲಿ ಸಾವಿಗೀಡಾದ ಸಾಧು ಪ್ರಾಣಿ ಅಂತ್ಯಸಂಸ್ಕಾರದ ವೇಳೆ ಕಣ್ಣೀರಿಟ್ಟ ಸ್ಥಳೀಯರು

ಟಿವಿ9 ಎಕ್ಸ್​ಪೋನಲ್ಲಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?
ಟಿವಿ9 ಎಕ್ಸ್​ಪೋನಲ್ಲಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ
ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಆಗಮನದ ನಂತರ ಹೆಚ್ಚಿದ ಗಲಾಟೆ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಆಗಮನದ ನಂತರ ಹೆಚ್ಚಿದ ಗಲಾಟೆ
ಕಾಂಗ್ರೆಸ್ 2009ರಲ್ಲಿ ಸ್ಪೀಕರ್ ಜೊತೆ ನಡೆದುಕೊಂಡ ರೀತಿ ಗೊತ್ತಿದೆ: ಶಾಸಕ
ಕಾಂಗ್ರೆಸ್ 2009ರಲ್ಲಿ ಸ್ಪೀಕರ್ ಜೊತೆ ನಡೆದುಕೊಂಡ ರೀತಿ ಗೊತ್ತಿದೆ: ಶಾಸಕ