AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Stock Clearance ಸೋಮವಾರದಿಂದ ಎಣ್ಣೆ ಅಂಗಡಿಗಳು ಓಪನ್, ಸಿದ್ಧತೆ ಹೇಗಿದೆ ನೋಡಿ!

ಬೆಂಗಳೂರು: ಕೊರೊನಾ ವೈರಸ್​ ಲಾಕ್​ಡೌನ್​ ಮಧ್ಯೆಯೇ ರಾಜ್ಯ ಸರ್ಕಾರ ಸೋಮವಾರದಿಂದ ಮದ್ಯ ಮಾರಾಟಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ನಾಳೆಯಿಂದ ಎಣ್ಣೆ ಸಿಗುತ್ತೆ ಅಂತ ಹೇಳಿದ್ದೇ ತಡ, ಈಗಿನಿಂದಲೇ ಕುಡುಕರು ಬಾರ್​ಗಳ ಮುಂದೆ ಸಾಲು ಸಾಲಾಗಿ ಶಿಸ್ತಿನಿಂದ ನಿಂತುಬಿಟ್ಟಿದ್ದಾರೆ. ಮಾಲೀಕರು ಸಹ MSIL ಮಳಿಗೆ, ವೈನ್ ಶಾಪ್‌ಗಳ ಬಳಿ ಭರದ ಸಿದ್ಧತೆ ನಡೆಸುತ್ತಿದ್ದಾರೆ. ಒಬ್ಬರಿಗೆ 2.3ಲೀಟರ್ ಮದ್ಯ ಖರೀದಿಗೆ ಅವಕಾಶ ಕೊಟ್ಟಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ಅಂಗಡಿಗೆ ಬರೋದು ಕಡ್ಡಾಯವಾಗಿದೆ. ಕೆಲವೆಡೆ ಮದ್ಯದಂಗಡಿಗಳ ಬಳಿ ಕಟ್ಟಿಗೆ […]

Stock Clearance ಸೋಮವಾರದಿಂದ ಎಣ್ಣೆ ಅಂಗಡಿಗಳು ಓಪನ್, ಸಿದ್ಧತೆ ಹೇಗಿದೆ ನೋಡಿ!
ಸಾಧು ಶ್ರೀನಾಥ್​
|

Updated on: May 03, 2020 | 5:26 PM

Share

ಬೆಂಗಳೂರು: ಕೊರೊನಾ ವೈರಸ್​ ಲಾಕ್​ಡೌನ್​ ಮಧ್ಯೆಯೇ ರಾಜ್ಯ ಸರ್ಕಾರ ಸೋಮವಾರದಿಂದ ಮದ್ಯ ಮಾರಾಟಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ನಾಳೆಯಿಂದ ಎಣ್ಣೆ ಸಿಗುತ್ತೆ ಅಂತ ಹೇಳಿದ್ದೇ ತಡ, ಈಗಿನಿಂದಲೇ ಕುಡುಕರು ಬಾರ್​ಗಳ ಮುಂದೆ ಸಾಲು ಸಾಲಾಗಿ ಶಿಸ್ತಿನಿಂದ ನಿಂತುಬಿಟ್ಟಿದ್ದಾರೆ.

ಮಾಲೀಕರು ಸಹ MSIL ಮಳಿಗೆ, ವೈನ್ ಶಾಪ್‌ಗಳ ಬಳಿ ಭರದ ಸಿದ್ಧತೆ ನಡೆಸುತ್ತಿದ್ದಾರೆ. ಒಬ್ಬರಿಗೆ 2.3ಲೀಟರ್ ಮದ್ಯ ಖರೀದಿಗೆ ಅವಕಾಶ ಕೊಟ್ಟಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ಅಂಗಡಿಗೆ ಬರೋದು ಕಡ್ಡಾಯವಾಗಿದೆ. ಕೆಲವೆಡೆ ಮದ್ಯದಂಗಡಿಗಳ ಬಳಿ ಕಟ್ಟಿಗೆ ಕಟ್ಟುತ್ತಿದ್ದರೆ, ಮತ್ತೆ ಕೆಲವೆಡೆ ಮಾರ್ಕಿಂಗ್ ಕಾರ್ಯ ಶುರುಮಾಡಿದ್ದಾರೆ. ಇನ್ನೂ ಕೆಲವೆಡೆ ಕುಡುಕರನ್ನು ಕಂಟ್ರೋಲ್ ಮಾಡಲು ಸೆಕ್ಯೂರಿಟಿ ಗಾರ್ಡ್ ನೇಮಿಸಲು ಚಿಂತನೆ ನಡೆಸಿದ್ರೆ, ಮತ್ತೆ ಕೆಲೆವೆಡೆ ಬ್ಯಾರಿಕೇಡ್ ಅಳವಡಿಸಲು ಮುಂದಾಗಿದ್ದಾರೆ.

ಅಂದಹಾಗೆ ಈ ಭರ್ಜರಿ ಎಣ್ಣೆ ಮಾರಾಟ ಗ್ರೀನ್ ಜೋನ್ ಮತ್ತು ಆರೆಂಜ್ ಜೋನ್​ನಲ್ಲಿ ಮಾತ್ರ. ಹಾಗಾಗಿ ರೆಡ್ ಜೋನ್​ನಲ್ಲಿರುವ ಎಣ್ಣೆ ಪ್ರಿಯರು ಶ್ಯಾನೆ ಬೇಜಾರಿನಲ್ಲಿದ್ದಾರೆ. ತಮ್ಮ ಏರಿಯಾದಲ್ಲಿ ಮದ್ಯ ಮಾರಾಟ ಇಲ್ಲ ಅಂತಾ ಅಲ್ಲ. ಆದ್ರೆ.. ತಮ್ಮ ಏರಿಯಾ ರೆಡ್ ಜೋನ್​ನಿಂದ ಮುಕ್ತಿ ಪಡೆದು ಎಣ್ಣೆ ಮಾರಾಟಕ್ಕೆ ಗ್ರೀನ್ ಸಿಗ್ನಲ್ ಪಡೆಯುವ ವೇಳೆಗೆ ಈಗಿರುವ ಗ್ರೀನ್ ಜೋನ್ ಎಣ್ಣೆಯಾಳುಗಳು ಎಲ್ಲಾ ಸ್ಟಾಕ್ ಕ್ಲಿಯರ್ ಮಾಡಿ, ತಮಗೆಲ್ಲಿ ತೊಟ್ಟು ಸಹ ಉಳಿಸಲ್ಲವೋ ಅಂತಾ ಶ್ಯಾನೆ ಪರೆಶಾನ್​ನಲ್ಲಿದ್ದಾರೆ.

First come first serve: ಬಲ್ಲ ಮೂಲಗಳ ಪ್ರಕಾರ ಲಾಕ್ ಡೌನ್-3 ಅವಧಿಯಲ್ಲಿ ಈ ಎಣ್ಣೆ ಮಾರಾಟ ಸ್ಟಾಕ್ ಇರುವರೆಗೆ ಮಾತ್ರ ಎನ್ನಲಾಗಿದೆ.

ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್