AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Stock Clearance ಸೋಮವಾರದಿಂದ ಎಣ್ಣೆ ಅಂಗಡಿಗಳು ಓಪನ್, ಸಿದ್ಧತೆ ಹೇಗಿದೆ ನೋಡಿ!

ಬೆಂಗಳೂರು: ಕೊರೊನಾ ವೈರಸ್​ ಲಾಕ್​ಡೌನ್​ ಮಧ್ಯೆಯೇ ರಾಜ್ಯ ಸರ್ಕಾರ ಸೋಮವಾರದಿಂದ ಮದ್ಯ ಮಾರಾಟಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ನಾಳೆಯಿಂದ ಎಣ್ಣೆ ಸಿಗುತ್ತೆ ಅಂತ ಹೇಳಿದ್ದೇ ತಡ, ಈಗಿನಿಂದಲೇ ಕುಡುಕರು ಬಾರ್​ಗಳ ಮುಂದೆ ಸಾಲು ಸಾಲಾಗಿ ಶಿಸ್ತಿನಿಂದ ನಿಂತುಬಿಟ್ಟಿದ್ದಾರೆ. ಮಾಲೀಕರು ಸಹ MSIL ಮಳಿಗೆ, ವೈನ್ ಶಾಪ್‌ಗಳ ಬಳಿ ಭರದ ಸಿದ್ಧತೆ ನಡೆಸುತ್ತಿದ್ದಾರೆ. ಒಬ್ಬರಿಗೆ 2.3ಲೀಟರ್ ಮದ್ಯ ಖರೀದಿಗೆ ಅವಕಾಶ ಕೊಟ್ಟಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ಅಂಗಡಿಗೆ ಬರೋದು ಕಡ್ಡಾಯವಾಗಿದೆ. ಕೆಲವೆಡೆ ಮದ್ಯದಂಗಡಿಗಳ ಬಳಿ ಕಟ್ಟಿಗೆ […]

Stock Clearance ಸೋಮವಾರದಿಂದ ಎಣ್ಣೆ ಅಂಗಡಿಗಳು ಓಪನ್, ಸಿದ್ಧತೆ ಹೇಗಿದೆ ನೋಡಿ!
ಸಾಧು ಶ್ರೀನಾಥ್​
|

Updated on: May 03, 2020 | 5:26 PM

Share

ಬೆಂಗಳೂರು: ಕೊರೊನಾ ವೈರಸ್​ ಲಾಕ್​ಡೌನ್​ ಮಧ್ಯೆಯೇ ರಾಜ್ಯ ಸರ್ಕಾರ ಸೋಮವಾರದಿಂದ ಮದ್ಯ ಮಾರಾಟಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ನಾಳೆಯಿಂದ ಎಣ್ಣೆ ಸಿಗುತ್ತೆ ಅಂತ ಹೇಳಿದ್ದೇ ತಡ, ಈಗಿನಿಂದಲೇ ಕುಡುಕರು ಬಾರ್​ಗಳ ಮುಂದೆ ಸಾಲು ಸಾಲಾಗಿ ಶಿಸ್ತಿನಿಂದ ನಿಂತುಬಿಟ್ಟಿದ್ದಾರೆ.

ಮಾಲೀಕರು ಸಹ MSIL ಮಳಿಗೆ, ವೈನ್ ಶಾಪ್‌ಗಳ ಬಳಿ ಭರದ ಸಿದ್ಧತೆ ನಡೆಸುತ್ತಿದ್ದಾರೆ. ಒಬ್ಬರಿಗೆ 2.3ಲೀಟರ್ ಮದ್ಯ ಖರೀದಿಗೆ ಅವಕಾಶ ಕೊಟ್ಟಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ಅಂಗಡಿಗೆ ಬರೋದು ಕಡ್ಡಾಯವಾಗಿದೆ. ಕೆಲವೆಡೆ ಮದ್ಯದಂಗಡಿಗಳ ಬಳಿ ಕಟ್ಟಿಗೆ ಕಟ್ಟುತ್ತಿದ್ದರೆ, ಮತ್ತೆ ಕೆಲವೆಡೆ ಮಾರ್ಕಿಂಗ್ ಕಾರ್ಯ ಶುರುಮಾಡಿದ್ದಾರೆ. ಇನ್ನೂ ಕೆಲವೆಡೆ ಕುಡುಕರನ್ನು ಕಂಟ್ರೋಲ್ ಮಾಡಲು ಸೆಕ್ಯೂರಿಟಿ ಗಾರ್ಡ್ ನೇಮಿಸಲು ಚಿಂತನೆ ನಡೆಸಿದ್ರೆ, ಮತ್ತೆ ಕೆಲೆವೆಡೆ ಬ್ಯಾರಿಕೇಡ್ ಅಳವಡಿಸಲು ಮುಂದಾಗಿದ್ದಾರೆ.

ಅಂದಹಾಗೆ ಈ ಭರ್ಜರಿ ಎಣ್ಣೆ ಮಾರಾಟ ಗ್ರೀನ್ ಜೋನ್ ಮತ್ತು ಆರೆಂಜ್ ಜೋನ್​ನಲ್ಲಿ ಮಾತ್ರ. ಹಾಗಾಗಿ ರೆಡ್ ಜೋನ್​ನಲ್ಲಿರುವ ಎಣ್ಣೆ ಪ್ರಿಯರು ಶ್ಯಾನೆ ಬೇಜಾರಿನಲ್ಲಿದ್ದಾರೆ. ತಮ್ಮ ಏರಿಯಾದಲ್ಲಿ ಮದ್ಯ ಮಾರಾಟ ಇಲ್ಲ ಅಂತಾ ಅಲ್ಲ. ಆದ್ರೆ.. ತಮ್ಮ ಏರಿಯಾ ರೆಡ್ ಜೋನ್​ನಿಂದ ಮುಕ್ತಿ ಪಡೆದು ಎಣ್ಣೆ ಮಾರಾಟಕ್ಕೆ ಗ್ರೀನ್ ಸಿಗ್ನಲ್ ಪಡೆಯುವ ವೇಳೆಗೆ ಈಗಿರುವ ಗ್ರೀನ್ ಜೋನ್ ಎಣ್ಣೆಯಾಳುಗಳು ಎಲ್ಲಾ ಸ್ಟಾಕ್ ಕ್ಲಿಯರ್ ಮಾಡಿ, ತಮಗೆಲ್ಲಿ ತೊಟ್ಟು ಸಹ ಉಳಿಸಲ್ಲವೋ ಅಂತಾ ಶ್ಯಾನೆ ಪರೆಶಾನ್​ನಲ್ಲಿದ್ದಾರೆ.

First come first serve: ಬಲ್ಲ ಮೂಲಗಳ ಪ್ರಕಾರ ಲಾಕ್ ಡೌನ್-3 ಅವಧಿಯಲ್ಲಿ ಈ ಎಣ್ಣೆ ಮಾರಾಟ ಸ್ಟಾಕ್ ಇರುವರೆಗೆ ಮಾತ್ರ ಎನ್ನಲಾಗಿದೆ.

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!