Stock Clearance ಸೋಮವಾರದಿಂದ ಎಣ್ಣೆ ಅಂಗಡಿಗಳು ಓಪನ್, ಸಿದ್ಧತೆ ಹೇಗಿದೆ ನೋಡಿ!

ಬೆಂಗಳೂರು: ಕೊರೊನಾ ವೈರಸ್​ ಲಾಕ್​ಡೌನ್​ ಮಧ್ಯೆಯೇ ರಾಜ್ಯ ಸರ್ಕಾರ ಸೋಮವಾರದಿಂದ ಮದ್ಯ ಮಾರಾಟಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ನಾಳೆಯಿಂದ ಎಣ್ಣೆ ಸಿಗುತ್ತೆ ಅಂತ ಹೇಳಿದ್ದೇ ತಡ, ಈಗಿನಿಂದಲೇ ಕುಡುಕರು ಬಾರ್​ಗಳ ಮುಂದೆ ಸಾಲು ಸಾಲಾಗಿ ಶಿಸ್ತಿನಿಂದ ನಿಂತುಬಿಟ್ಟಿದ್ದಾರೆ. ಮಾಲೀಕರು ಸಹ MSIL ಮಳಿಗೆ, ವೈನ್ ಶಾಪ್‌ಗಳ ಬಳಿ ಭರದ ಸಿದ್ಧತೆ ನಡೆಸುತ್ತಿದ್ದಾರೆ. ಒಬ್ಬರಿಗೆ 2.3ಲೀಟರ್ ಮದ್ಯ ಖರೀದಿಗೆ ಅವಕಾಶ ಕೊಟ್ಟಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ಅಂಗಡಿಗೆ ಬರೋದು ಕಡ್ಡಾಯವಾಗಿದೆ. ಕೆಲವೆಡೆ ಮದ್ಯದಂಗಡಿಗಳ ಬಳಿ ಕಟ್ಟಿಗೆ […]

Stock Clearance ಸೋಮವಾರದಿಂದ ಎಣ್ಣೆ ಅಂಗಡಿಗಳು ಓಪನ್, ಸಿದ್ಧತೆ ಹೇಗಿದೆ ನೋಡಿ!
ಸಾಧು ಶ್ರೀನಾಥ್​

Updated on: May 03, 2020 | 5:26 PM

ಬೆಂಗಳೂರು: ಕೊರೊನಾ ವೈರಸ್​ ಲಾಕ್​ಡೌನ್​ ಮಧ್ಯೆಯೇ ರಾಜ್ಯ ಸರ್ಕಾರ ಸೋಮವಾರದಿಂದ ಮದ್ಯ ಮಾರಾಟಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ನಾಳೆಯಿಂದ ಎಣ್ಣೆ ಸಿಗುತ್ತೆ ಅಂತ ಹೇಳಿದ್ದೇ ತಡ, ಈಗಿನಿಂದಲೇ ಕುಡುಕರು ಬಾರ್​ಗಳ ಮುಂದೆ ಸಾಲು ಸಾಲಾಗಿ ಶಿಸ್ತಿನಿಂದ ನಿಂತುಬಿಟ್ಟಿದ್ದಾರೆ.

ಮಾಲೀಕರು ಸಹ MSIL ಮಳಿಗೆ, ವೈನ್ ಶಾಪ್‌ಗಳ ಬಳಿ ಭರದ ಸಿದ್ಧತೆ ನಡೆಸುತ್ತಿದ್ದಾರೆ. ಒಬ್ಬರಿಗೆ 2.3ಲೀಟರ್ ಮದ್ಯ ಖರೀದಿಗೆ ಅವಕಾಶ ಕೊಟ್ಟಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ಅಂಗಡಿಗೆ ಬರೋದು ಕಡ್ಡಾಯವಾಗಿದೆ. ಕೆಲವೆಡೆ ಮದ್ಯದಂಗಡಿಗಳ ಬಳಿ ಕಟ್ಟಿಗೆ ಕಟ್ಟುತ್ತಿದ್ದರೆ, ಮತ್ತೆ ಕೆಲವೆಡೆ ಮಾರ್ಕಿಂಗ್ ಕಾರ್ಯ ಶುರುಮಾಡಿದ್ದಾರೆ. ಇನ್ನೂ ಕೆಲವೆಡೆ ಕುಡುಕರನ್ನು ಕಂಟ್ರೋಲ್ ಮಾಡಲು ಸೆಕ್ಯೂರಿಟಿ ಗಾರ್ಡ್ ನೇಮಿಸಲು ಚಿಂತನೆ ನಡೆಸಿದ್ರೆ, ಮತ್ತೆ ಕೆಲೆವೆಡೆ ಬ್ಯಾರಿಕೇಡ್ ಅಳವಡಿಸಲು ಮುಂದಾಗಿದ್ದಾರೆ.

ಅಂದಹಾಗೆ ಈ ಭರ್ಜರಿ ಎಣ್ಣೆ ಮಾರಾಟ ಗ್ರೀನ್ ಜೋನ್ ಮತ್ತು ಆರೆಂಜ್ ಜೋನ್​ನಲ್ಲಿ ಮಾತ್ರ. ಹಾಗಾಗಿ ರೆಡ್ ಜೋನ್​ನಲ್ಲಿರುವ ಎಣ್ಣೆ ಪ್ರಿಯರು ಶ್ಯಾನೆ ಬೇಜಾರಿನಲ್ಲಿದ್ದಾರೆ. ತಮ್ಮ ಏರಿಯಾದಲ್ಲಿ ಮದ್ಯ ಮಾರಾಟ ಇಲ್ಲ ಅಂತಾ ಅಲ್ಲ. ಆದ್ರೆ.. ತಮ್ಮ ಏರಿಯಾ ರೆಡ್ ಜೋನ್​ನಿಂದ ಮುಕ್ತಿ ಪಡೆದು ಎಣ್ಣೆ ಮಾರಾಟಕ್ಕೆ ಗ್ರೀನ್ ಸಿಗ್ನಲ್ ಪಡೆಯುವ ವೇಳೆಗೆ ಈಗಿರುವ ಗ್ರೀನ್ ಜೋನ್ ಎಣ್ಣೆಯಾಳುಗಳು ಎಲ್ಲಾ ಸ್ಟಾಕ್ ಕ್ಲಿಯರ್ ಮಾಡಿ, ತಮಗೆಲ್ಲಿ ತೊಟ್ಟು ಸಹ ಉಳಿಸಲ್ಲವೋ ಅಂತಾ ಶ್ಯಾನೆ ಪರೆಶಾನ್​ನಲ್ಲಿದ್ದಾರೆ.

First come first serve: ಬಲ್ಲ ಮೂಲಗಳ ಪ್ರಕಾರ ಲಾಕ್ ಡೌನ್-3 ಅವಧಿಯಲ್ಲಿ ಈ ಎಣ್ಣೆ ಮಾರಾಟ ಸ್ಟಾಕ್ ಇರುವರೆಗೆ ಮಾತ್ರ ಎನ್ನಲಾಗಿದೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us