Karnataka Lockdown: 2ನೇ ಅಲೆ ಸಿಕ್ಕಾಪಟ್ಟೆ ಡೇಂಜರಸ್: ಆರ್ಥಿಕ ಚಟುವಟಿಕೆಗೆ ಬ್ರೇಕ್ ಹಾಕದೇ ತಡೆಗಟ್ಟುವುದು ಅಸಾಧ್ಯ, ಲಾಕ್​ಡೌನ್​ ಮುನ್ಸೂಚನೆ?

Karnataka Lockdown Latest News: ಕೇವಲ ಇನ್ನು 10 ದಿನಗಳಲ್ಲೇ 30 ಸಾವಿರದವರೆಗೂ ಕೇಸ್ ಬರಬಹುದು. ಸರ್ಕಾರ ಐಸಿಯು ಬೆಡ್, ವೆಂಟಿಲೇಟರ್, ಆಕ್ಸಿಜನ್ ಸಿಲಿಂಡರ್ ಗಳನ್ನ ಹೆಚ್ಚಳ ಮಾಡಿಕೊಳ್ಳಬೇಕು. ಮೊದಲ ಅಲೆಗಿಂತಲೂ ಇದು ಭಾರೀ ಡೇಂಜರ್ ಅಂತಿದ್ದಾರೆ ತಜ್ಞರು.

Karnataka Lockdown: 2ನೇ ಅಲೆ ಸಿಕ್ಕಾಪಟ್ಟೆ ಡೇಂಜರಸ್: ಆರ್ಥಿಕ ಚಟುವಟಿಕೆಗೆ ಬ್ರೇಕ್ ಹಾಕದೇ ತಡೆಗಟ್ಟುವುದು ಅಸಾಧ್ಯ, ಲಾಕ್​ಡೌನ್​ ಮುನ್ಸೂಚನೆ?
ಪ್ರಾತಿನಿಧಿಕ ಚಿತ್ರ
Follow us
| Edited By: TV9 Digital Desk

Updated on:Apr 12, 2021 | 5:35 PM

ಬೆಂಗಳೂರು: ಕೊರೊನಾ ಮಹಾಮಾರು ಎರಡನೆಯ ಅಲೆ ಸಿಕ್ಕಾಪಟ್ಟೆ ಡೇಂಜರಸ್ ಆಗಿದೆ. ಆರ್ಥಿಕ ಚಟುವಟಿಕೆಗೆ ಬ್ರೇಕ್ ಹಾಕದೇ ತಡೆಗಟ್ಟುವುದು ಅಸಾಧ್ಯ. ಲಾಕ್ ಡೌನ್ ಮಾಡದೆಯೋ ಹೆಮ್ಮಾರಿಯನ್ನ ಕಟ್ಟಿಹಾಕೋದಕ್ಕೆ ಟಫ್ ರೂಲ್ಸ್ ಜಾರಿಯಾಗಲೇಬೇಕು. ಕನಿಷ್ಠ ಎರಡು ತಿಂಗಳು ಅತ್ಯೆಚ್ಚರಿಕೆಯಿಂದ ಇರಬೇಕು ಎಂದು ತಜ್ಞರು ಸ್ಪಷ್ಟವಾಗಿ ನುಡಿದಿದ್ದಾರೆ.

ಈಗಿನ ನೈಟ್ ಕರ್ಫ್ಯೂವನ್ನು ಮೇ ತಿಂಗಳವರೆಗಾದರೂ ಮುಂದುವರಿಸಲೇಬೇಕು. ಆರ್ಥಿಕ ಚಟುವಟಿಕೆಗಳಿಗೆ ಬ್ರೇಕ್ ಹಾಕದೇ ತಡೆಗಟ್ಟುವುದು ಸಾಹಸದ ಕೆಲಸ ಅಂತಿದ್ದಾರೆ ಎಕ್ಸ್​​ಪರ್ಟ್ಸ್. ಇದರ ಹೊರತಾಗಿಯೂ ಮತ್ತೊಮ್ಮೆ ಲಾಕ್ ಡೌನ್ ಮಾಡುವ ಬಗ್ಗೆ ಚರ್ಚೆ ಶುರುವಾಗಿದೆ. ಲಾಕ್ ಡೌನ್ ಮಾಡದೆಯೂ ಹೆಮ್ಮಾರಿಯನ್ನ ಕಟ್ಟಿಹಾಕೋದಕ್ಕೆ ಟಫ್ ರೂಲ್ಸ್ ಜಾರಿಯಾಗಲೇಬೇಕು. ಪ್ರಮುಖವಾಗಿ ಗುಂಪು ಸೇರೋದಕ್ಕೆ ಬ್ರೇಕ್ ಹಾಕಬೇಕು ಎಂದು ತಜ್ಙರು ಅಭಿಪ್ರಾಐಪಟ್ಟಿದ್ದಾರೆ.

ಇದನ್ನು ಓದಿ: ಪರಿಸ್ಥಿತಿ ಕೈಮೀರುತ್ತಿದೆ.. ಸರ್ವಪಕ್ಷ ಸಭೆ ಕರೆದು ಲಾಕ್​ಡೌನ್​ ಬಗ್ಗೆ ನಿರ್ಧಾರ: ಮುಖ್ಯಮಂತ್ರಿ ಯಡಿಯೂರಪ್ಪ

ಪ್ರತಿಭಟನೆ, ಧರಣಿಗಳನ್ನು ಈ ಸಮಯದಲ್ಲಿ ಮಾಡಲೇಬಾರದು. ಚುನಾವಣೆ ಪ್ರಚಾರ ಸಭೆಗಳಿಗೂ ಬ್ರೇಕ್ ಬೀಳಲೇಬೇಕು. ಜಾತ್ರೆ, ಉತ್ಸವ ಧಾರ್ಮಿಕ ಆಚರಣೆಗಳಿಗೆ ಕಡ್ಡಾಯ ನಿಷೇಧ ಹೇರಬೇಕು ಎಂಬುದು ಪರಿಣತರ ಸ್ಪಷ್ಟ ಸಂದೇಶ. ಇನ್ನು ಮದುವೆ ಸಮಾರಂಭ, ನಾಮಕರಣ, ಗೃಹ ಪ್ರವೇಶ, ಬರ್ಥ್ ಡೆ ಪಾರ್ಟಿಗಳನ್ನು ಕನಿಷ್ಠ ಎರಡು ತಿಂಗಳು ಮುಂದೂಡಬೇಕು ಎಂದು ಅವರು ಸೂಚಿಸಿದ್ದಾರೆ.

ಮಾಲ್, ಮಾರುಕಟ್ಟೆ, ಸಿನಿಮಾ ಥಿಯೇಟರ್ಸ್, ಅಂಗಡಿ ಮುಗ್ಗಟ್ಟಗಳ ಮುಂದೆ ಕಟ್ಟೆಚ್ಚರ ವಹಿಸಬೇಕು. ಪಾರ್ಕ್, ದೇವಾಸ್ಥಾನ, ಮಸೀದಿ, ಚರ್ಚ್ ಗಳಲ್ಲೂ ಹೆಚ್ಚು ಜನ ಸೇರಬಾರದು. ದಿನನಿತ್ಯದ ಅಗತ್ಯ ವಸ್ತುಗಳ ಪೂರೈಕೆಯನ್ನು ನೇರವಾಗಿ ಮನೆಗಳಿಗೇ ಮಾಡುವುದು ಸೂಕ್ತ ಎಂದಿರುವ ಪರಿಣರು ಕಂಪನಿ, ಕಾರ್ಖಾನೆ, ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೂ ಗುಂಪು ಸೇರದ ರೀತಿಯಲ್ಲಿ ಮಾರ್ಗಸೂಚಿ ನೀಡಬೇಕು. ಹೋಟೆಲ್, ಪಬ್, ರೆಸ್ಟೋರೆಂಟ್, ಬಾರ್ ಗಳಲ್ಲಿ ಹೆಚ್ಚು ಜನ ಸೇರದ ಹಾಗೇ ಮಾಲೀಕರೇ ನೋಡಿಕೊಳ್ಳಬೇಕು ಎಂದಿದ್ದಾರೆ.

ಇನ್ನು 10 ದಿನಗಳಲ್ಲೇ 30 ಸಾವಿರದವರೆಗೂ ಕೇಸ್

ಕನಿಷ್ಠ ಮೇ ತಿಂಗಳ ಅಂತ್ಯದವರಿಗಾದರೂ ಈ ನಿಯಮಗಳನ್ನ ಜಾರಿಗೊಳಿಸಲೇಬೇಕು. ಬೆಂಗಳೂರಿನಲ್ಲಿ ಕಡ್ಡಾಯವಾಗಿ 144 ಸಕ್ಷನ್ ಜಾರಿ ಮಾಡಬೇಕು. ಹೆಚ್ಚು ಆರೋಗ್ಯಯುತ ಯುವಕರು ಹೊರಗಡೆ ಬಂದು ಕೆಲಸ ಮಾಡಬೇಕು. ವಯಸ್ಸಾದವರು, ಮಕ್ಕಳು, ವೃದ್ಧರು, ಅನಾರೋಗ್ಯ ಪೀಡಿತರು ಮನೆಯಿಂದ ಆದಷ್ಟು ಹೊರ ಬರಬಾರದು. ಕೇವಲ ಇನ್ನು 10 ದಿನಗಳಲ್ಲೇ 30 ಸಾವಿರದವರೆಗೂ ಕೇಸ್ ಬರಬಹುದು. ಸರ್ಕಾರ ಐಸಿಯು ಬೆಡ್, ವೆಂಟಿಲೇಟರ್, ಆಕ್ಸಿಜನ್ ಸಿಲಿಂಡರ್ ಗಳನ್ನ ಹೆಚ್ಚಳ ಮಾಡಿಕೊಳ್ಳಬೇಕು. ಮೊದಲ ಅಲೆಗಿಂತಲೂ ಇದು ಭಾರೀ ಡೇಂಜರ್ ಅಂತಿದ್ದಾರೆ ತಜ್ಞರು.

Published On - 11:16 am, Mon, 12 April 21

ತಾಜಾ ಸುದ್ದಿ
ಡ್ಯೂಪ್ ಇಲ್ಲದೆ ಫೈಟ್ ಮಾಡಿದ ನಟಿ ಅದಿತಿ: ಮಾಲಾಶ್ರೀಯೇ ಸ್ಪೂರ್ತಿ
ಡ್ಯೂಪ್ ಇಲ್ಲದೆ ಫೈಟ್ ಮಾಡಿದ ನಟಿ ಅದಿತಿ: ಮಾಲಾಶ್ರೀಯೇ ಸ್ಪೂರ್ತಿ
ಕುಡಿದ ಮತ್ತಿನಲ್ಲಿ ಶಿವಾಜಿ ಮೂರ್ತಿಗೆ ಹಾನಿ ಮಾಡಿದ ವ್ಯಕ್ತಿ: ಬಂಧನ
ಕುಡಿದ ಮತ್ತಿನಲ್ಲಿ ಶಿವಾಜಿ ಮೂರ್ತಿಗೆ ಹಾನಿ ಮಾಡಿದ ವ್ಯಕ್ತಿ: ಬಂಧನ
ಕಾವೇರಿ ನದಿ ನೀರಿವ ಸಮಸ್ಯೆ ಚರ್ಚಿಸಲು ಕುಮಾರಸ್ವಾಮಿ ದೆಹಲಿಗೆ ಹೋಗಿದ್ದರೇ?
ಕಾವೇರಿ ನದಿ ನೀರಿವ ಸಮಸ್ಯೆ ಚರ್ಚಿಸಲು ಕುಮಾರಸ್ವಾಮಿ ದೆಹಲಿಗೆ ಹೋಗಿದ್ದರೇ?
ಶಿವಕುಮಾರ್ ಲೋಕಸಭಾ ಚುನಾವಣೆಗೆ ಹಣ ಹೊಂಚುವುದರಲ್ಲಿ ಮಗ್ನ: ಕುಮಾರಸ್ವಾಮಿ
ಶಿವಕುಮಾರ್ ಲೋಕಸಭಾ ಚುನಾವಣೆಗೆ ಹಣ ಹೊಂಚುವುದರಲ್ಲಿ ಮಗ್ನ: ಕುಮಾರಸ್ವಾಮಿ
ದಶಕಗಳಿಂದ ಹೋರಾಡುತ್ತಾ ಪಕ್ಷವನ್ನು ಅಧಿಕಾರದಲ್ಲಿ ಕೂರಿಸಿದ್ದೇನೆ: ಡಿಕೆಶಿ
ದಶಕಗಳಿಂದ ಹೋರಾಡುತ್ತಾ ಪಕ್ಷವನ್ನು ಅಧಿಕಾರದಲ್ಲಿ ಕೂರಿಸಿದ್ದೇನೆ: ಡಿಕೆಶಿ
ವಕೀಲರು ಅದ್ಭುತವಾಗಿ ಕಾವೇರಿ ನೀರಿಗಾಗಿ ವಾದಿಸುತ್ತಿದ್ದಾರೆ:ಡಿಕೆ ಶಿವಕುಮಾರ್
ವಕೀಲರು ಅದ್ಭುತವಾಗಿ ಕಾವೇರಿ ನೀರಿಗಾಗಿ ವಾದಿಸುತ್ತಿದ್ದಾರೆ:ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್ ಪುನಃ ಜೈಲಿಗೆ ಹೋಗೋದು ನಿಶ್ಚಿತ: ಕೆ ಎಸ್ ಈಶ್ವರಪ್ಪ
ಡಿಕೆ ಶಿವಕುಮಾರ್ ಪುನಃ ಜೈಲಿಗೆ ಹೋಗೋದು ನಿಶ್ಚಿತ: ಕೆ ಎಸ್ ಈಶ್ವರಪ್ಪ
‘ಯಾವ ಕೆಲಸ ಮಾಡೋಕೂ ನಾನು ರೆಡಿ’: ನಟಿ ಪ್ರಮೀಳಾ ಜೋಶಾಯ್​ ಸುದ್ದಿಗೋಷ್ಠಿ
‘ಯಾವ ಕೆಲಸ ಮಾಡೋಕೂ ನಾನು ರೆಡಿ’: ನಟಿ ಪ್ರಮೀಳಾ ಜೋಶಾಯ್​ ಸುದ್ದಿಗೋಷ್ಠಿ
ಹರಾಜಿನಲ್ಲಿ ಗಣೇಶನ ಲಡ್ಡು ರೇಟ್‌ ಕೇಳಿದ್ರೆ ನೀವು ದಂಗಾಗೋದು ಗ್ಯಾರೆಂಟಿ
ಹರಾಜಿನಲ್ಲಿ ಗಣೇಶನ ಲಡ್ಡು ರೇಟ್‌ ಕೇಳಿದ್ರೆ ನೀವು ದಂಗಾಗೋದು ಗ್ಯಾರೆಂಟಿ
ಕನಸು ಸಾಕಾರಗೊಳಿಸಿದ ಪ್ರಧಾನಿ  ಮೋದಿಯವರನ್ನು ಸತ್ಕರಿಸಿದ ಮಹಿಳೆಯರು!
ಕನಸು ಸಾಕಾರಗೊಳಿಸಿದ ಪ್ರಧಾನಿ  ಮೋದಿಯವರನ್ನು ಸತ್ಕರಿಸಿದ ಮಹಿಳೆಯರು!