Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Lockdown: 2ನೇ ಅಲೆ ಸಿಕ್ಕಾಪಟ್ಟೆ ಡೇಂಜರಸ್: ಆರ್ಥಿಕ ಚಟುವಟಿಕೆಗೆ ಬ್ರೇಕ್ ಹಾಕದೇ ತಡೆಗಟ್ಟುವುದು ಅಸಾಧ್ಯ, ಲಾಕ್​ಡೌನ್​ ಮುನ್ಸೂಚನೆ?

Karnataka Lockdown Latest News: ಕೇವಲ ಇನ್ನು 10 ದಿನಗಳಲ್ಲೇ 30 ಸಾವಿರದವರೆಗೂ ಕೇಸ್ ಬರಬಹುದು. ಸರ್ಕಾರ ಐಸಿಯು ಬೆಡ್, ವೆಂಟಿಲೇಟರ್, ಆಕ್ಸಿಜನ್ ಸಿಲಿಂಡರ್ ಗಳನ್ನ ಹೆಚ್ಚಳ ಮಾಡಿಕೊಳ್ಳಬೇಕು. ಮೊದಲ ಅಲೆಗಿಂತಲೂ ಇದು ಭಾರೀ ಡೇಂಜರ್ ಅಂತಿದ್ದಾರೆ ತಜ್ಞರು.

Karnataka Lockdown: 2ನೇ ಅಲೆ ಸಿಕ್ಕಾಪಟ್ಟೆ ಡೇಂಜರಸ್: ಆರ್ಥಿಕ ಚಟುವಟಿಕೆಗೆ ಬ್ರೇಕ್ ಹಾಕದೇ ತಡೆಗಟ್ಟುವುದು ಅಸಾಧ್ಯ, ಲಾಕ್​ಡೌನ್​ ಮುನ್ಸೂಚನೆ?
ಪ್ರಾತಿನಿಧಿಕ ಚಿತ್ರ
Follow us
ಸಾಧು ಶ್ರೀನಾಥ್​
| Updated By: Digi Tech Desk

Updated on:Apr 12, 2021 | 5:35 PM

ಬೆಂಗಳೂರು: ಕೊರೊನಾ ಮಹಾಮಾರು ಎರಡನೆಯ ಅಲೆ ಸಿಕ್ಕಾಪಟ್ಟೆ ಡೇಂಜರಸ್ ಆಗಿದೆ. ಆರ್ಥಿಕ ಚಟುವಟಿಕೆಗೆ ಬ್ರೇಕ್ ಹಾಕದೇ ತಡೆಗಟ್ಟುವುದು ಅಸಾಧ್ಯ. ಲಾಕ್ ಡೌನ್ ಮಾಡದೆಯೋ ಹೆಮ್ಮಾರಿಯನ್ನ ಕಟ್ಟಿಹಾಕೋದಕ್ಕೆ ಟಫ್ ರೂಲ್ಸ್ ಜಾರಿಯಾಗಲೇಬೇಕು. ಕನಿಷ್ಠ ಎರಡು ತಿಂಗಳು ಅತ್ಯೆಚ್ಚರಿಕೆಯಿಂದ ಇರಬೇಕು ಎಂದು ತಜ್ಞರು ಸ್ಪಷ್ಟವಾಗಿ ನುಡಿದಿದ್ದಾರೆ.

ಈಗಿನ ನೈಟ್ ಕರ್ಫ್ಯೂವನ್ನು ಮೇ ತಿಂಗಳವರೆಗಾದರೂ ಮುಂದುವರಿಸಲೇಬೇಕು. ಆರ್ಥಿಕ ಚಟುವಟಿಕೆಗಳಿಗೆ ಬ್ರೇಕ್ ಹಾಕದೇ ತಡೆಗಟ್ಟುವುದು ಸಾಹಸದ ಕೆಲಸ ಅಂತಿದ್ದಾರೆ ಎಕ್ಸ್​​ಪರ್ಟ್ಸ್. ಇದರ ಹೊರತಾಗಿಯೂ ಮತ್ತೊಮ್ಮೆ ಲಾಕ್ ಡೌನ್ ಮಾಡುವ ಬಗ್ಗೆ ಚರ್ಚೆ ಶುರುವಾಗಿದೆ. ಲಾಕ್ ಡೌನ್ ಮಾಡದೆಯೂ ಹೆಮ್ಮಾರಿಯನ್ನ ಕಟ್ಟಿಹಾಕೋದಕ್ಕೆ ಟಫ್ ರೂಲ್ಸ್ ಜಾರಿಯಾಗಲೇಬೇಕು. ಪ್ರಮುಖವಾಗಿ ಗುಂಪು ಸೇರೋದಕ್ಕೆ ಬ್ರೇಕ್ ಹಾಕಬೇಕು ಎಂದು ತಜ್ಙರು ಅಭಿಪ್ರಾಐಪಟ್ಟಿದ್ದಾರೆ.

ಇದನ್ನು ಓದಿ: ಪರಿಸ್ಥಿತಿ ಕೈಮೀರುತ್ತಿದೆ.. ಸರ್ವಪಕ್ಷ ಸಭೆ ಕರೆದು ಲಾಕ್​ಡೌನ್​ ಬಗ್ಗೆ ನಿರ್ಧಾರ: ಮುಖ್ಯಮಂತ್ರಿ ಯಡಿಯೂರಪ್ಪ

ಪ್ರತಿಭಟನೆ, ಧರಣಿಗಳನ್ನು ಈ ಸಮಯದಲ್ಲಿ ಮಾಡಲೇಬಾರದು. ಚುನಾವಣೆ ಪ್ರಚಾರ ಸಭೆಗಳಿಗೂ ಬ್ರೇಕ್ ಬೀಳಲೇಬೇಕು. ಜಾತ್ರೆ, ಉತ್ಸವ ಧಾರ್ಮಿಕ ಆಚರಣೆಗಳಿಗೆ ಕಡ್ಡಾಯ ನಿಷೇಧ ಹೇರಬೇಕು ಎಂಬುದು ಪರಿಣತರ ಸ್ಪಷ್ಟ ಸಂದೇಶ. ಇನ್ನು ಮದುವೆ ಸಮಾರಂಭ, ನಾಮಕರಣ, ಗೃಹ ಪ್ರವೇಶ, ಬರ್ಥ್ ಡೆ ಪಾರ್ಟಿಗಳನ್ನು ಕನಿಷ್ಠ ಎರಡು ತಿಂಗಳು ಮುಂದೂಡಬೇಕು ಎಂದು ಅವರು ಸೂಚಿಸಿದ್ದಾರೆ.

ಮಾಲ್, ಮಾರುಕಟ್ಟೆ, ಸಿನಿಮಾ ಥಿಯೇಟರ್ಸ್, ಅಂಗಡಿ ಮುಗ್ಗಟ್ಟಗಳ ಮುಂದೆ ಕಟ್ಟೆಚ್ಚರ ವಹಿಸಬೇಕು. ಪಾರ್ಕ್, ದೇವಾಸ್ಥಾನ, ಮಸೀದಿ, ಚರ್ಚ್ ಗಳಲ್ಲೂ ಹೆಚ್ಚು ಜನ ಸೇರಬಾರದು. ದಿನನಿತ್ಯದ ಅಗತ್ಯ ವಸ್ತುಗಳ ಪೂರೈಕೆಯನ್ನು ನೇರವಾಗಿ ಮನೆಗಳಿಗೇ ಮಾಡುವುದು ಸೂಕ್ತ ಎಂದಿರುವ ಪರಿಣರು ಕಂಪನಿ, ಕಾರ್ಖಾನೆ, ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೂ ಗುಂಪು ಸೇರದ ರೀತಿಯಲ್ಲಿ ಮಾರ್ಗಸೂಚಿ ನೀಡಬೇಕು. ಹೋಟೆಲ್, ಪಬ್, ರೆಸ್ಟೋರೆಂಟ್, ಬಾರ್ ಗಳಲ್ಲಿ ಹೆಚ್ಚು ಜನ ಸೇರದ ಹಾಗೇ ಮಾಲೀಕರೇ ನೋಡಿಕೊಳ್ಳಬೇಕು ಎಂದಿದ್ದಾರೆ.

ಇನ್ನು 10 ದಿನಗಳಲ್ಲೇ 30 ಸಾವಿರದವರೆಗೂ ಕೇಸ್

ಕನಿಷ್ಠ ಮೇ ತಿಂಗಳ ಅಂತ್ಯದವರಿಗಾದರೂ ಈ ನಿಯಮಗಳನ್ನ ಜಾರಿಗೊಳಿಸಲೇಬೇಕು. ಬೆಂಗಳೂರಿನಲ್ಲಿ ಕಡ್ಡಾಯವಾಗಿ 144 ಸಕ್ಷನ್ ಜಾರಿ ಮಾಡಬೇಕು. ಹೆಚ್ಚು ಆರೋಗ್ಯಯುತ ಯುವಕರು ಹೊರಗಡೆ ಬಂದು ಕೆಲಸ ಮಾಡಬೇಕು. ವಯಸ್ಸಾದವರು, ಮಕ್ಕಳು, ವೃದ್ಧರು, ಅನಾರೋಗ್ಯ ಪೀಡಿತರು ಮನೆಯಿಂದ ಆದಷ್ಟು ಹೊರ ಬರಬಾರದು. ಕೇವಲ ಇನ್ನು 10 ದಿನಗಳಲ್ಲೇ 30 ಸಾವಿರದವರೆಗೂ ಕೇಸ್ ಬರಬಹುದು. ಸರ್ಕಾರ ಐಸಿಯು ಬೆಡ್, ವೆಂಟಿಲೇಟರ್, ಆಕ್ಸಿಜನ್ ಸಿಲಿಂಡರ್ ಗಳನ್ನ ಹೆಚ್ಚಳ ಮಾಡಿಕೊಳ್ಳಬೇಕು. ಮೊದಲ ಅಲೆಗಿಂತಲೂ ಇದು ಭಾರೀ ಡೇಂಜರ್ ಅಂತಿದ್ದಾರೆ ತಜ್ಞರು.

Published On - 11:16 am, Mon, 12 April 21

ಬೆಂಗಳೂರಿನ ರೈಲಿನೊಳಗೆ ಯುವಕನಿಂದ ಮೂತ್ರ ವಿಸರ್ಜನೆ; ವಿಡಿಯೋ ವೈರಲ್
ಬೆಂಗಳೂರಿನ ರೈಲಿನೊಳಗೆ ಯುವಕನಿಂದ ಮೂತ್ರ ವಿಸರ್ಜನೆ; ವಿಡಿಯೋ ವೈರಲ್
ಪ್ರತಿದಿನ ಮಾಧ್ಯಮಗಳೊಂದಿಗೆ ಮಾತಾಡುವ ರೇಣುಕಾಚಾರ್ಯಗೆ ವಿಷಯಗಳು ಸಿಗುತ್ತಿಲ್ಲ
ಪ್ರತಿದಿನ ಮಾಧ್ಯಮಗಳೊಂದಿಗೆ ಮಾತಾಡುವ ರೇಣುಕಾಚಾರ್ಯಗೆ ವಿಷಯಗಳು ಸಿಗುತ್ತಿಲ್ಲ
ಮಟ ಮಟ ಮಧ್ಯಾಹ್ನ ಫುಲ್ ಟೈಟ್​ ಆಗಿ ಬಂದು ಬಸ್ ಕೆಳಗೆ ಮಲಗಿದ ಕುಡುಕ!
ಮಟ ಮಟ ಮಧ್ಯಾಹ್ನ ಫುಲ್ ಟೈಟ್​ ಆಗಿ ಬಂದು ಬಸ್ ಕೆಳಗೆ ಮಲಗಿದ ಕುಡುಕ!
ಪೊಲೀಸರಿಂದ ಸೂಕ್ತ ತನಿಖೆ ಆಗುತ್ತಿಲ್ಲವೆಂದು ಅರೋಪಿಸಿದ ಸಂಬಂಧಿಕರು
ಪೊಲೀಸರಿಂದ ಸೂಕ್ತ ತನಿಖೆ ಆಗುತ್ತಿಲ್ಲವೆಂದು ಅರೋಪಿಸಿದ ಸಂಬಂಧಿಕರು
ಪ್ರದೀಪ್ ಮಾತುಗಳಿಗೆ ಸಭಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದದರು: ಮೋಹನ್
ಪ್ರದೀಪ್ ಮಾತುಗಳಿಗೆ ಸಭಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದದರು: ಮೋಹನ್
ಬದುಕುಳಿದು ಬಂದು ಅಪಘಾತದ ಭೀಕರತೆ ಬಿಚ್ಚಿಟ್ಟ ಪರಸಪ್ಪ
ಬದುಕುಳಿದು ಬಂದು ಅಪಘಾತದ ಭೀಕರತೆ ಬಿಚ್ಚಿಟ್ಟ ಪರಸಪ್ಪ
VIDEO: ರಾಕಿ ಭಾಯ್ ಸ್ಟೈಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ಗೆ ಕನ್ನಡಿಗನ ಎಂಟ್
VIDEO: ರಾಕಿ ಭಾಯ್ ಸ್ಟೈಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ಗೆ ಕನ್ನಡಿಗನ ಎಂಟ್
ಹತ್ತಿರದ ಸಂಬಂಧಿಯೊಬ್ಬರ ಸಾವಿನ ಕಾರಣ ಪರಮೇಶ್ವರ್ ಭಾಗಿಯಾಗಿರಲಿಲ್ಲ: ಪಾಟೀಲ್
ಹತ್ತಿರದ ಸಂಬಂಧಿಯೊಬ್ಬರ ಸಾವಿನ ಕಾರಣ ಪರಮೇಶ್ವರ್ ಭಾಗಿಯಾಗಿರಲಿಲ್ಲ: ಪಾಟೀಲ್
ಕಾರಿನ ಮೇಲೆ ಬಿದ್ದ ಲಾರಿ: ಭಯಾನಕ ಅಪಘಾತ ಡ್ರೋನ್ ಕ್ಯಾಮರಾದಲ್ಲಿ ಕಂಡಿದ್ದು
ಕಾರಿನ ಮೇಲೆ ಬಿದ್ದ ಲಾರಿ: ಭಯಾನಕ ಅಪಘಾತ ಡ್ರೋನ್ ಕ್ಯಾಮರಾದಲ್ಲಿ ಕಂಡಿದ್ದು
ಕಳ್ಳತನ ಮಾಡಿದ ಬಳಿಕ ತಮ್ಮ ಕಾರನ್ನೇ ಬೆಂಕಿಹಚ್ಚಿ ಸುಟ್ಟುಬಿಡುವ ಖದೀಮರು
ಕಳ್ಳತನ ಮಾಡಿದ ಬಳಿಕ ತಮ್ಮ ಕಾರನ್ನೇ ಬೆಂಕಿಹಚ್ಚಿ ಸುಟ್ಟುಬಿಡುವ ಖದೀಮರು